<p>ಮಂಗಳೂರು: ಕರ್ಣಾಟಕ ಬ್ಯಾಂಕ್ ಗ್ರಾಹಕರ ಮನೆಬಾಗಿಲಿಗೆ ಹೋಗಿ ಚಿನ್ನದ ಸಾಲ ನೀಡುವ ‘ಕೆಬಿಎಲ್- ಸ್ವರ್ಣ ಬಂಧು’ ಯೋಜನೆ ಜಾರಿಗೊಳಿಸಿದೆ.</p>.<p>ಮಣಿಪಾಲ ಗ್ರೂಪ್ ಬೆಂಬಲಿತ ‘ಸಹಿಬಂಧು’ ಎನ್ನುವ ಚಿನ್ನದ ಸಾಲ ವ್ಯವಹಾರ ಸಂಬಂಧಿತ ಸಂಸ್ಥೆಯ ಸಹಭಾಗಿತ್ವದಲ್ಲಿ ರೂಪಿಸಿರುವ ಈ ಯೋಜನೆಯನ್ನು ‘ಆಕರ್ಷಕ ಬಡ್ಡಿದರ ಹಾಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯೊಂದಿಗೆ’ ಎಂಬ ಟ್ಯಾಗ್ಲೈನ್ನೊಂದಿಗೆ ಜಾರಿಗೊಳಿಸಲಾಗಿದೆ.</p>.<p>‘ಪ್ರಸಕ್ತ ಈ ಸೌಲಭ್ಯವು ಆಯ್ದ ಶಾಖೆಗಳಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳಿಗೆ ವಿಸ್ತರಿಸಲಾಗುವುದು’ ಎಂದು ಬ್ಯಾಂಕಿನ ಎಂ.ಡಿ ಹಾಗೂ ಸಿಇಒ ಶ್ರಿಕೃಷ್ಣನ್ ಎಚ್. ತಿಳಿಸಿದ್ದಾರೆ.</p>.<p>ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ‘ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಫಿನ್ಟೆಕ್ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಲಾಗಿದೆ. ಕೆಬಿಎಲ್- ಸ್ವರ್ಣ ಬಂಧು ಯೋಜನೆಯೂ ಅಂತಹ ಉಪಕ್ರಮಗಳಲ್ಲಿ ಒಂದು’ ಎಂದಿದ್ದಾರೆ.</p>.<p>ಸಹಿಬಂಧು ಸಂಸ್ಥೆಯ ಸಹಸಂಸ್ಥಾಪಕ ರಾಜೇಶ್ ಶೇಟ್, ‘ಕರ್ಣಾಟಕ ಬ್ಯಾಂಕಿನೊಂದಿಗೆ ಈ ಸಹಭಾಗಿತ್ವವು ಸಂತಸ ತಂದಿದೆ. ಚಿನ್ನದ ಸಾಲ ಸೌಲಭ್ಯವನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವಲ್ಲಿ ಇದು ಸಹಕಾರಿಯಾಗಿದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ಕರ್ಣಾಟಕ ಬ್ಯಾಂಕ್ ಗ್ರಾಹಕರ ಮನೆಬಾಗಿಲಿಗೆ ಹೋಗಿ ಚಿನ್ನದ ಸಾಲ ನೀಡುವ ‘ಕೆಬಿಎಲ್- ಸ್ವರ್ಣ ಬಂಧು’ ಯೋಜನೆ ಜಾರಿಗೊಳಿಸಿದೆ.</p>.<p>ಮಣಿಪಾಲ ಗ್ರೂಪ್ ಬೆಂಬಲಿತ ‘ಸಹಿಬಂಧು’ ಎನ್ನುವ ಚಿನ್ನದ ಸಾಲ ವ್ಯವಹಾರ ಸಂಬಂಧಿತ ಸಂಸ್ಥೆಯ ಸಹಭಾಗಿತ್ವದಲ್ಲಿ ರೂಪಿಸಿರುವ ಈ ಯೋಜನೆಯನ್ನು ‘ಆಕರ್ಷಕ ಬಡ್ಡಿದರ ಹಾಗೂ ಸಂಪೂರ್ಣ ಡಿಜಿಟಲ್ ವ್ಯವಸ್ಥೆಯೊಂದಿಗೆ’ ಎಂಬ ಟ್ಯಾಗ್ಲೈನ್ನೊಂದಿಗೆ ಜಾರಿಗೊಳಿಸಲಾಗಿದೆ.</p>.<p>‘ಪ್ರಸಕ್ತ ಈ ಸೌಲಭ್ಯವು ಆಯ್ದ ಶಾಖೆಗಳಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಶಾಖೆಗಳಿಗೆ ವಿಸ್ತರಿಸಲಾಗುವುದು’ ಎಂದು ಬ್ಯಾಂಕಿನ ಎಂ.ಡಿ ಹಾಗೂ ಸಿಇಒ ಶ್ರಿಕೃಷ್ಣನ್ ಎಚ್. ತಿಳಿಸಿದ್ದಾರೆ.</p>.<p>ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್, ‘ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಫಿನ್ಟೆಕ್ ಕಂಪನಿಗಳೊಂದಿಗೆ ಸಹಭಾಗಿತ್ವ ಹೊಂದಲಾಗಿದೆ. ಕೆಬಿಎಲ್- ಸ್ವರ್ಣ ಬಂಧು ಯೋಜನೆಯೂ ಅಂತಹ ಉಪಕ್ರಮಗಳಲ್ಲಿ ಒಂದು’ ಎಂದಿದ್ದಾರೆ.</p>.<p>ಸಹಿಬಂಧು ಸಂಸ್ಥೆಯ ಸಹಸಂಸ್ಥಾಪಕ ರಾಜೇಶ್ ಶೇಟ್, ‘ಕರ್ಣಾಟಕ ಬ್ಯಾಂಕಿನೊಂದಿಗೆ ಈ ಸಹಭಾಗಿತ್ವವು ಸಂತಸ ತಂದಿದೆ. ಚಿನ್ನದ ಸಾಲ ಸೌಲಭ್ಯವನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸುವಲ್ಲಿ ಇದು ಸಹಕಾರಿಯಾಗಿದೆ’ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>