ರೈತರು, ಮಧ್ಯಮ ವರ್ಗದವರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಂಬಂಧಿಸಿದ ಉದಾರ ಕೊಡುಗೆಗಳು ಸ್ವಾಗತಾರ್ಹವಾಗಿವೆ. ಇವುಗಳು ಆರ್ಥಿಕತೆಯನ್ನು ಸಂಕಷ್ಟದ ಅಪಾಯಕ್ಕೆ ದೂಡುವುದಿಲ್ಲ ಎಂದು ಪ್ರಮುಖ ಉದ್ಯಮಿಗಳಾದ ಗೌತಮ್ ಅದಾನಿ, ಆನಂದ ಮಹೀಂದ್ರಾ, ‘ಐಟಿಸಿ’ಯ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಮತ್ತು ವಾಲ್ಮಾರ್ಟ್ ಇಂಡಿಯಾದ ಸಿಇಒ ಕೆ. ಅಯ್ಯರ್ ಪ್ರತಿಕ್ರಿಯಿಸಿದ್ದಾರೆ.