‘ಬಹಳಷ್ಟು ಪರ್ಯಾಯ ನಿಧಿಗಳು ಈ ವಲಯದಲ್ಲಿ ಹಣ ಹೂಡಿಕೆ ಮಾಡಲು ಮುಂದೆ ಬಂದಿವೆ. ಈ ಸಂಬಂಧ ಅನೇಕ ನಿಧಿಗಳು ಸರ್ಕಾರವನ್ನು ಸಂಪರ್ಕಿಸಿವೆ. ಅವರಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ ಬೇಕಾಗಿದೆ. ನೋಟು ರದ್ದತಿ, ಜಿಎಸ್ಟಿ ಮತ್ತು ‘ರೇರಾ’ದಿಂದಾಗಿ ಈ ವಲಯವು ಬಹಳಷ್ಟು ಸಂಕಷ್ಟಕ್ಕೆ ಒಳಗಾಗಿದ್ದು ಇನ್ನೂ ಚೇತರಿಸಿಕೊಂಡಿಲ್ಲ. ಎನ್ಬಿಎಫ್ಸಿ ವಲಯದಲ್ಲಿನ ನಗದು ಬಿಕ್ಕಟ್ಟೂ ಸಹ ನಕಾರಾತ್ಮಕ ಪರಿಣಾಮ ಬೀರಿದೆ’ ಎಂದು ಅವರು ವಿವರಿಸಿದ್ದಾರೆ.