ಸಾಂಕ್ರಾಮಿಕದಿಂದಾಗಿ ಹಾನಿಗೆ ಒಳಗಾಗಿರುವ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು, ಉದ್ಯೋಗ ನಷ್ಟ ತಪ್ಪಿಸಲು ಕೇಂದ್ರ ಸರ್ಕಾರವು ಹೆಚ್ಚು ನೋಟು ಮುದ್ರಿಸಿ ಚಲಾವಣೆಗೆ ಬಿಡಬೇಕು ಎಂದು ಹಲವು ಮಂದಿ ಅರ್ಥಶಾಸ್ತ್ರಜ್ಞರು ಸಲಹೆ ಮಾಡಿದ್ದಾರೆ. ‘ದೇಶದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) 2020–21ರಲ್ಲಿ ಶೇಕಡ (–)7.3ರಷ್ಟು ಕುಸಿತ ಕಂಡಿರುವ ಅಂದಾಜು ಇದೆ’ ಎಂದು ನಿರ್ಮಲಾ ಅವರು ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದ್ದಾರೆ.