2017ರ ಜೂನ್ನಲ್ಲಿ ನಟರಾಜನ್ ಅವರೊಂದಿಗೆ ಷೇರು ಒಪ್ಪಂದ ಮಾಡಿಕೊಂಡಿದ್ದ ಓಯೊ, ಬುಕ್ಕಿನಲ್ಲಿ ಬರುವ ಹಣದಶೇ 20 ರಷ್ಟು ತಾವು ಉಳಿಸಿಕೊಂಡು ಉಳಿದ ಶೇ. 80 ರಷ್ಟು ಹಣವನ್ನು ಪಾವತಿಸುವುದಾಗಿ ತಿಳಿಸಿತ್ತು. ಆದರೆ, ರಿತೇಶ್ ಅಗರ್ವಾಲ್ ಹಾಗೂ ಅವರ ಪ್ರತಿನಿಧಿಗಳಾದ ಆನಂದ್ ರೆಡ್ಡಿ, ಪ್ರತೀಕ್ ಸಿಂಗ್ ಶೇ. 80 ರಷ್ಟು ಹಣವನ್ನು ಪಡೆದಿದ್ದು, ತಮಗೆ ಕೇವಲ ಶೇ. 20 ರಷ್ಟು ಹಣವನ್ನು ನೀಡಿದ್ದಾರೆ. ಇದರಿಂದ ನನಗೆ ₹1 ಕೋಟಿ ನಷ್ಟವಾಗಿದೆ ಎಂದು ನಟರಾಜನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.