ಸಂಕೀರ್ಣ ಸ್ವರೂಪದ ಸಮಸ್ಯೆಗೆ ಪರಿಹಾರದ ಮಂತ್ರದಂಡವನ್ನೇನೂ ಈ ಕೊಡುಗೆಗಳು ಒಳಗೊಂಡಿಲ್ಲ. ಸರ್ಕಾರ ಕೈಗೊಂಡಿರುವ ಹತ್ತಾರು ಸುಧಾರಣಾ ಕ್ರಮಗಳು ಆರ್ಥಿಕತೆಯನ್ನು ಮೇಲೆತ್ತಲು ಕೆಲ ಸಮಯ ಹಿಡಿಯುತ್ತದೆ. ಜೂನ್ ತ್ರೈಮಾಸಿಕದಲ್ಲಿ ವೃದ್ಧಿ ದರವು ಗಮನಾರ್ಹ ಕುಸಿತ ಕಾಣಲಿದೆ. ಹಣ ವೆಚ್ಚ ಮಾಡಲು ಸರ್ಕಾರ ಹೆಚ್ಚು ಜಾಗರೂಕತೆ ವಹಿಸಿದೆ. ಸೂಕ್ಷ್ಮ ವಿಷಯವಾದ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಈ ಬಿಕ್ಕಟ್ಟಿನ ಸಂದರ್ಭವನ್ನು ಬಳಸಿಕೊಳ್ಳಲಾಗಿದೆ. ಪ್ರವಾಸ, ಹೋಟೆಲ್ನಂತಹ ಕೆಲ ಪ್ರಮುಖ ವಲಯಗಳ ಸಂಕಷ್ಟಗಳನ್ನು ಬಗೆಹರಿಸಲು ಸರ್ಕಾರ ಗಮನ ಹರಿಸಿಲ್ಲ. ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಹೆಚ್ಚು ಹಣ ನೀಡುವುದರಿಂದ ವಲಸಿಗರು ಗ್ರಾಮಗಳಲ್ಲೇ ಉಳಿಯಲಿದ್ದಾರೆ. ಇದರಿಂದ ನಗರಗಳಲ್ಲಿ ಕಾರ್ಮಿಕರ ಲಭ್ಯತೆ ಕಡಿಮೆಯಾಗಲಿದೆ ಎಂದೂ ನೊಮುರಾ ಅಂದಾಜಿಸಿದೆ.