ಹಣಕಾಸು ಸೇವೆಗಳಿಗೆ ಸಂಬಂಧಿಸಿದಂತೆ ಬಜೆಟ್ನಲ್ಲಿ ಮಾಡಲಾದ ಘೋಷಣೆಗಳ ಕುರಿತ ವೆಬಿನಾರ್ನಲ್ಲಿ ಮಾತನಾಡಿದ ಮೋದಿ ಅವರು, ‘ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್ಎಂಇ) ಉದ್ದಿಮೆಗಳು ಹಾಗೂ ನವೋದ್ಯಮಗಳಿಗೆ ಸಾಲ ವಿತರಣೆ ವಿಸ್ತರಿಸುವುದು ಅಗತ್ಯ. ಸರ್ಕಾರವು ಸುಧಾರಣೆಗಳನ್ನು ತರುತ್ತಿದೆ; ಕೃಷಿ, ಕಲ್ಲಿದ್ದಲು ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳನ್ನು ಮುಕ್ತಗೊಳಿಸಿದೆ. ಈಗ ಹಣಕಾಸು ವಲಯವು ಗ್ರಾಮೀಣ ಹಾಗೂ ಸಣ್ಣ ನಗರ ಪ್ರದೇಶಗಳ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು, ಆ ಪ್ರದೇಶಗಳು ಆತ್ಮನಿರ್ಭರ ಭಾರತದ ಪಾಲಿಗೆ ಶಕ್ತಿಯಾಗುವಂತೆ ಮಾಡಬೇಕಿದೆ’ ಎಂದರು.