ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಅವರು, ‘₹1.15 ಲಕ್ಷ ಕೋಟಿ ಬಾಕಿ ಮೊತ್ತದ ಪೈಕಿ ₹1.14 ಲಕ್ಷ ಕೋಟಿಯನ್ನು ಪಾವತಿಸಲಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಉತ್ಪಾದನಾ ಸಾಮರ್ಥ್ಯವೂ ಹೆಚ್ಚಿದೆ. ಸಹಕಾರ ವಲಯದಲ್ಲಿರುವ ಕಾರ್ಖಾನೆಗಳು ಲಾಭದಲ್ಲಿದ್ದು, ಅಲ್ಲಿನ ನೌಕರರಿಗೆ ಉದ್ಯೋಗದ ಭದ್ರತೆ ಸಿಕ್ಕಿದೆ’ ಎಂದು ಹೇಳಿದರು.