ರಾಯಚೂರು: ಸತತ ಬರದ ಮಧ್ಯೆಯೂ ಜಿಲ್ಲೆಯಲ್ಲಿ ಈ ವರ್ಷ ಹತ್ತಿ ಉತ್ಪಾದನೆ ಹೆಚ್ಚಿದ್ದು,ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಿಂದಿನ ಐದು ವರ್ಷಗಳಲ್ಲೇ ಗರಿಷ್ಠ ಪ್ರಮಾಣದ ಆವಕವಾಗಿದೆ.
ಪ್ರಸಕ್ತ ಹಂಗಾಮಿನಲ್ಲಿ ಈ ವರೆಗೆ ರಾಯಚೂರು ಎಪಿಎಂಸಿಗೆ 3,42,344 ಕ್ವಿಂಟಲ್ ಹತ್ತಿ ಆವಕವಾಗಿದೆ. ಒಂದು ಎಕರೆಗೆ 8 ರಿಂದ 10 ಕ್ವಿಂಟಲ್ ಇಳುವರಿ ರೈತರ ಕೈಸೇರಿದ್ದು, ಗರಿಷ್ಠ ದರ ₹6,500ರಷ್ಟಿದೆ.
ರಾಯಚೂರಿನಲ್ಲಿ ಹತ್ತಿಯಿಂದ ಕಾಳು ಬೇರ್ಪಡಿಸುವ ಜಿನ್ನಿಂಗ್ ಕಾರ್ಖಾನೆಗಳಿವೆ. ಜಿನ್ನಿಂಗ್ ಕಾರ್ಖಾನೆಗಳಿಂದ ಹತ್ತಿಯನ್ನು ತಮಿಳುನಾಡಿಗೆ ಹಾಗೂ ಹತ್ತಿಕಾಳನ್ನು ಗುಜರಾತ್, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಿಗೆ ಪೂರೈಸಲಾಗುತ್ತಿದೆ.