<p><strong>ನವದೆಹಲಿ:</strong> ಹಣದುಬ್ಬರದಲ್ಲಿ ದಿಢೀರ್ ಏರಿಕೆ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಕೈಗೊಂಡಿದೆ.</p>.<p>ರೆಪೊದರ (ಶೇ 5.15) ಯಥಾಸ್ಥಿತಿಕಾಯ್ದುಕೊಂಡಿದ್ದರೂ, ಗೃಹ, ವಾಹನ ಮತ್ತು ಎಂಎಸ್ಎಂಇ ವಲಯಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಆರ್ಬಿಐ ಮಾಡಿದೆ.ರಿಟೇಲ್ ಸಾಲವು ಕಡಿಮೆ ಬಡ್ಡಿ ದರಕ್ಕೆ ಸಿಗುವಂತೆ ಮಾಡಲು ಬ್ಯಾಂಕ್ಗಳಿಗೆ ವಿಧಿಸಿರುವ ನಿಯಮಗಳನ್ನು ಸಡಿಲಿಸಿದೆ. ಜತೆಗೆ ದೀರ್ಘಾವಧಿಗೆ (1 ರಿಂದ 3 ವರ್ಷ) ಶೇ 5.15ರ ಬಡ್ಡಿದರದಲ್ಲಿ ₹ 1 ಲಕ್ಷ ಕೋಟಿಯವರೆಗೆ ನೆರವು ನೀಡುವುದಾಗಿ ಭರವಸೆ ನೀಡಿದೆ.</p>.<p>ಇದರಿಂದಾಗಿ ಹಣಕಾಸು ಸಂಸ್ಥೆಗಳಿಗೆ ಸಾಲದ ಬಡ್ಡಿದರಗಳಲ್ಲಿ ಇಳಿಕೆ ಮಾಡಲು ಅನುಕೂಲ ಆಗಲಿದ್ದು, ಗ್ರಾಹಕರಿಗೂ ‘ಇಎಂಐ’ ಹೊರೆ ಕಡಿಮೆಯಾಗಲಿದೆ.</p>.<p>ನಗದು ಮೀಸಲು ಅನುಪಾತದ (ಸಿಆರ್ಆರ್) ಅನ್ವಯ, ಠೇವಣಿ ₹ 100ರಂತೆ ಹೆಚ್ಚಾದಾಗ ಬ್ಯಾಂಕ್ಗಳು ₹ 4 ಅನ್ನು ಆರ್ಬಿಐನಲ್ಲಿ ಇಡಬೇಕು. ಇದೀಗ ಆರ್ಬಿಐ ಈ ನಿಯಮವನ್ನು ಸಡಿಲಿಸಿದ್ದು, ಗೃಹ ಮತ್ತು ಸಣ್ಣ ಉದ್ದಿಮೆಗಳಿಗೆ ನೀಡುವ ಸಾಲಕ್ಕೆ ಸಿಆರ್ಆರ್ ತೆಗೆದಿಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಈ ವರ್ಷದ ಜುಲೈ ವರೆಗೆ ವಿನಾಯಿತಿ ಸಿಗಲಿದೆ.</p>.<p class="Subhead"><strong>ಸಾಲ ಪುನರ್ ಹೊಂದಾಣಿಕೆ: </strong>ಎಂಎಸ್ಎಂಇ ವಲಯಕ್ಕೆ ಸಾಲ ಪುನರ್ ಹೊಂದಾಣಿಕೆ ಅವಕಾಶವನ್ನು ಒಂದು ವರ್ಷದವರೆಗೆ ವಿಸ್ತರಿಸುವಂತೆ ಆರ್ಬಿಐಗೆ ಸೂಚನೆ ನೀಡುವುದಾಗಿ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಅದರಂತೆ, 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.</p>.<p>ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡಲು ವಾಣಿಜ್ಯ ಉದ್ದೇಶದ ಸಾಲದ ಬಳಕೆಗೆ ಸಂಬಂಧಿಸಿದಂತೆ ನಿಯಮ ಸಡಿಲಿಸಿದೆ. ನಿರ್ಮಾಣಗಾರರ ನಿಯಂತ್ರಣದಲ್ಲಿ ಇಲ್ಲದ ಕಾರಣಗಳಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು ವಿಳಂಬವಾದ ಸಂದರ್ಭದಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಲು ಒಂದು ವರ್ಷದವರೆಗೆ ಕಾಲಾವಧಿ ವಿಸ್ತರಿಸಲಾಗಿದೆ. ಈ ಉದ್ದೇಶಕ್ಕೆ ಪಡೆದಿರುವ ಸಾಲವು ವಸೂಲಾಗದ ಸಾಲವಾಗಿ (ಎನ್ಪಿಎ) ಪರಿವರ್ತನೆ ಆಗುವುದಿಲ್ಲ.</p>.<p><strong>ಶೇ 6.5ಕ್ಕೆ ಏರಿಕೆ</strong></p>.<p>ಕಚ್ಚಾ ತೈಲ ದರದಲ್ಲಿನ ಏರಿಳಿತ ಹಾಗೂ ಹಾಲು ಮತ್ತು ಬೇಳೆಕಾಳುಗಳ ಬೆಲೆ ಏರಿಕೆಯಿಂದಾಗಿ ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಶೇ 6.5ರಷ್ಟಕ್ಕೆ ಏರಿಕೆಯಾಗಲಿದೆ ಎಂದು ಆರ್ಬಿಐ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹಣದುಬ್ಬರದಲ್ಲಿ ದಿಢೀರ್ ಏರಿಕೆ ಮತ್ತು ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಕೈಗೊಂಡಿದೆ.</p>.<p>ರೆಪೊದರ (ಶೇ 5.15) ಯಥಾಸ್ಥಿತಿಕಾಯ್ದುಕೊಂಡಿದ್ದರೂ, ಗೃಹ, ವಾಹನ ಮತ್ತು ಎಂಎಸ್ಎಂಇ ವಲಯಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಆರ್ಬಿಐ ಮಾಡಿದೆ.ರಿಟೇಲ್ ಸಾಲವು ಕಡಿಮೆ ಬಡ್ಡಿ ದರಕ್ಕೆ ಸಿಗುವಂತೆ ಮಾಡಲು ಬ್ಯಾಂಕ್ಗಳಿಗೆ ವಿಧಿಸಿರುವ ನಿಯಮಗಳನ್ನು ಸಡಿಲಿಸಿದೆ. ಜತೆಗೆ ದೀರ್ಘಾವಧಿಗೆ (1 ರಿಂದ 3 ವರ್ಷ) ಶೇ 5.15ರ ಬಡ್ಡಿದರದಲ್ಲಿ ₹ 1 ಲಕ್ಷ ಕೋಟಿಯವರೆಗೆ ನೆರವು ನೀಡುವುದಾಗಿ ಭರವಸೆ ನೀಡಿದೆ.</p>.<p>ಇದರಿಂದಾಗಿ ಹಣಕಾಸು ಸಂಸ್ಥೆಗಳಿಗೆ ಸಾಲದ ಬಡ್ಡಿದರಗಳಲ್ಲಿ ಇಳಿಕೆ ಮಾಡಲು ಅನುಕೂಲ ಆಗಲಿದ್ದು, ಗ್ರಾಹಕರಿಗೂ ‘ಇಎಂಐ’ ಹೊರೆ ಕಡಿಮೆಯಾಗಲಿದೆ.</p>.<p>ನಗದು ಮೀಸಲು ಅನುಪಾತದ (ಸಿಆರ್ಆರ್) ಅನ್ವಯ, ಠೇವಣಿ ₹ 100ರಂತೆ ಹೆಚ್ಚಾದಾಗ ಬ್ಯಾಂಕ್ಗಳು ₹ 4 ಅನ್ನು ಆರ್ಬಿಐನಲ್ಲಿ ಇಡಬೇಕು. ಇದೀಗ ಆರ್ಬಿಐ ಈ ನಿಯಮವನ್ನು ಸಡಿಲಿಸಿದ್ದು, ಗೃಹ ಮತ್ತು ಸಣ್ಣ ಉದ್ದಿಮೆಗಳಿಗೆ ನೀಡುವ ಸಾಲಕ್ಕೆ ಸಿಆರ್ಆರ್ ತೆಗೆದಿಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಈ ವರ್ಷದ ಜುಲೈ ವರೆಗೆ ವಿನಾಯಿತಿ ಸಿಗಲಿದೆ.</p>.<p class="Subhead"><strong>ಸಾಲ ಪುನರ್ ಹೊಂದಾಣಿಕೆ: </strong>ಎಂಎಸ್ಎಂಇ ವಲಯಕ್ಕೆ ಸಾಲ ಪುನರ್ ಹೊಂದಾಣಿಕೆ ಅವಕಾಶವನ್ನು ಒಂದು ವರ್ಷದವರೆಗೆ ವಿಸ್ತರಿಸುವಂತೆ ಆರ್ಬಿಐಗೆ ಸೂಚನೆ ನೀಡುವುದಾಗಿ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಅದರಂತೆ, 2021ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ.</p>.<p>ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡಲು ವಾಣಿಜ್ಯ ಉದ್ದೇಶದ ಸಾಲದ ಬಳಕೆಗೆ ಸಂಬಂಧಿಸಿದಂತೆ ನಿಯಮ ಸಡಿಲಿಸಿದೆ. ನಿರ್ಮಾಣಗಾರರ ನಿಯಂತ್ರಣದಲ್ಲಿ ಇಲ್ಲದ ಕಾರಣಗಳಿಂದ ನಿರ್ಮಾಣ ಕಾಮಗಾರಿ ಕೈಗೊಳ್ಳುವುದು ವಿಳಂಬವಾದ ಸಂದರ್ಭದಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಲು ಒಂದು ವರ್ಷದವರೆಗೆ ಕಾಲಾವಧಿ ವಿಸ್ತರಿಸಲಾಗಿದೆ. ಈ ಉದ್ದೇಶಕ್ಕೆ ಪಡೆದಿರುವ ಸಾಲವು ವಸೂಲಾಗದ ಸಾಲವಾಗಿ (ಎನ್ಪಿಎ) ಪರಿವರ್ತನೆ ಆಗುವುದಿಲ್ಲ.</p>.<p><strong>ಶೇ 6.5ಕ್ಕೆ ಏರಿಕೆ</strong></p>.<p>ಕಚ್ಚಾ ತೈಲ ದರದಲ್ಲಿನ ಏರಿಳಿತ ಹಾಗೂ ಹಾಲು ಮತ್ತು ಬೇಳೆಕಾಳುಗಳ ಬೆಲೆ ಏರಿಕೆಯಿಂದಾಗಿ ಜನವರಿ–ಮಾರ್ಚ್ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಶೇ 6.5ರಷ್ಟಕ್ಕೆ ಏರಿಕೆಯಾಗಲಿದೆ ಎಂದು ಆರ್ಬಿಐ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>