‘ನಾವು ಸಮಯದ ಅಗತ್ಯ ಏನಿತ್ತೋ ಅದನ್ನು ಮಾಡಿದ್ದೇವೆ. ನಾವು ಹಿಂದೆ ಬಿದ್ದಿದ್ದೆವು ಎಂಬ ಮಾತನ್ನು ಒಪ್ಪುವುದಿಲ್ಲ’ ಎಂದು ದಾಸ್ ಪ್ರತಿಪಾದಿಸಿದ್ದಾರೆ. ‘ಸಾಂಕ್ರಾಮಿಕದ ಸಂದರ್ಭದಲ್ಲಿ ಹಣಕಾಸಿನ ನೀತಿಯನ್ನು ಬಿಗಿಯಾಗಿ ಇರಿಸಿದ್ದಿದ್ದರೆ, ದೇಶದ ಅರ್ಥ ವ್ಯವಸ್ಥೆ ಹಾಗೂ ಹಣಕಾಸು ಮಾರುಕಟ್ಟೆಗಳ ಮೇಲೆ ಆಗಬಹುದಾಗಿದ್ದ ಹಾನಿಯು ಭಾರಿ ಪ್ರಮಾಣದ್ದಾಗಿರುತ್ತಿತ್ತು. ಸುಧಾರಿಸಿಕೊಳ್ಳಲು ಭಾರತಕ್ಕೆ ವರ್ಷಗಳೇ ಬೇಕಾಗುತ್ತಿತ್ತು’ ಎಂದೂ ಅವರು ವಿವರಿಸಿದ್ದಾರೆ.