<p><strong>ಮುಂಬೈ/ಬೆಂಗಳೂರು:</strong> ಚೆಕ್ಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಎರಡನೆಯ ಹಂತದ ಅನುಷ್ಠಾನವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮುಂದೂಡಿದೆ. ತಮ್ಮ ಕಾರ್ಯಾಚರಣೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಬ್ಯಾಂಕ್ಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆರ್ಬಿಐ ಈ ಕ್ರಮ ಕೈಗೊಂಡಿದೆ.</p>.<p>ಎರಡನೆಯ ಹಂತವನ್ನು ಬ್ಯಾಂಕ್ಗಳು ಜನವರಿ 3ರಿಂದ ಅನುಷ್ಠಾನಕ್ಕೆ ತರಬೇಕಿತ್ತು. ಆದರೆ ಅಕ್ಟೋಬರ್ 4ರಿಂದ ಜಾರಿಗೆ ಬಂದ ಮೊದಲ ಹಂತದ ಅನುಷ್ಠಾನದಲ್ಲಿಯೇ ಕೆಲವು ಸಮಸ್ಯೆಗಳು ತಲೆದೋರಿದ್ದವು.</p>.<p>‘ಮುಂದಿನ ಸೂಚನೆ ಬರುವವರೆಗೆ ಎರಡನೆಯ ಹಂತದ ಅನುಷ್ಠಾನವನ್ನು ಮುಂದಕ್ಕೆ ಹಾಕಲಾಗಿದೆ. ಬ್ಯಾಂಕ್ಗಳಿಗೆ ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡಲು ಹೀಗೆ ಮಾಡಲಾಗಿದೆ’ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ.</p>.<p>ಮೊದಲ ಹಂತದ ಅನುಷ್ಠಾನ ಶುರುವಾಗಿ ತಿಂಗಳು ಕಳೆದ ನಂತರವೂ ಚೆಕ್ ತ್ವರಿತವಾಗಿ ವಿಲೇವಾರಿ ಆಗುವ ಸೌಲಭ್ಯ ಸರಿಯಾಗಿ ಲಭ್ಯವಾಗುತ್ತಿರಲಿಲ್ಲ. ವ್ಯವಸ್ಥೆಯಲ್ಲಿ ದೋಷಗಳು ನಿವಾರಣೆ ಆಗಿರಲಿಲ್ಲ.</p>.<p>‘ಚೆಕ್ ಸಲ್ಲಿಸಿ ಹಲವು ದಿನಗಳು ಕಳೆದರೂ ಹಣದ ವರ್ಗಾವಣೆ ಆಗದಿರುವ ನಿದರ್ಶನಗಳು ಇವೆ. ಈ ರೀತಿ ಆಗಿರುವುದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಬ್ಯಾಂಕಿಂಗ್ ವ್ಯವಸ್ಥೆಯ ಪ್ರತಿನಿಧಿಗಳು ಹೇಳುತ್ತಿದ್ದಾರೆ’ ಎಂಬ ದೂರುಗಳು ನವೆಂಬರ್ ಮೊದಲ ವಾರದಲ್ಲಿ ಇದ್ದವು.</p>.<p>‘ಅಂತರ್ಬ್ಯಾಂಕ್ ವಹಿವಾಟು ಅನುಮೋದನೆಯಲ್ಲಿ ಸಮಸ್ಯೆ ಆಗುತ್ತಿದೆ. ₹10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚೆಕ್ಗಳನ್ನು ಮಾನ್ಯ ಮಾಡುವಲ್ಲಿ ಸಮಸ್ಯೆ ಇದೆ. ಆದರೆ ಅದಕ್ಕಿಂತ ಕಡಿಮೆ ಮೊತ್ತದ ಚೆಕ್ಗಳನ್ನು ಮಾನ್ಯ ಮಾಡುವ ಕೆಲಸವು ಬೇಗನೆ ಆಗುತ್ತಿದೆ’ ಎಂದು ಆಗ ಸರ್ಕಾರಿ ಬ್ಯಾಂಕ್ ಒಂದರ ಅಧಿಕಾರಿಯೊಬ್ಬರು ಹೆಸರು<br>ಬಹಿರಂಗಪಡಿಸಬಾರದು ಎಂದು ಷರತ್ತಿನೊಂದಿಗೆ ‘ಪ್ರಜಾವಾಣಿ’ಗೆ ತಿಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ/ಬೆಂಗಳೂರು:</strong> ಚೆಕ್ಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಎರಡನೆಯ ಹಂತದ ಅನುಷ್ಠಾನವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮುಂದೂಡಿದೆ. ತಮ್ಮ ಕಾರ್ಯಾಚರಣೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಬ್ಯಾಂಕ್ಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆರ್ಬಿಐ ಈ ಕ್ರಮ ಕೈಗೊಂಡಿದೆ.</p>.<p>ಎರಡನೆಯ ಹಂತವನ್ನು ಬ್ಯಾಂಕ್ಗಳು ಜನವರಿ 3ರಿಂದ ಅನುಷ್ಠಾನಕ್ಕೆ ತರಬೇಕಿತ್ತು. ಆದರೆ ಅಕ್ಟೋಬರ್ 4ರಿಂದ ಜಾರಿಗೆ ಬಂದ ಮೊದಲ ಹಂತದ ಅನುಷ್ಠಾನದಲ್ಲಿಯೇ ಕೆಲವು ಸಮಸ್ಯೆಗಳು ತಲೆದೋರಿದ್ದವು.</p>.<p>‘ಮುಂದಿನ ಸೂಚನೆ ಬರುವವರೆಗೆ ಎರಡನೆಯ ಹಂತದ ಅನುಷ್ಠಾನವನ್ನು ಮುಂದಕ್ಕೆ ಹಾಕಲಾಗಿದೆ. ಬ್ಯಾಂಕ್ಗಳಿಗೆ ತಮ್ಮ ಕಾರ್ಯಾಚರಣೆಗಳನ್ನು ಸುಧಾರಿಸಿಕೊಳ್ಳಲು ಅವಕಾಶ ನೀಡಲು ಹೀಗೆ ಮಾಡಲಾಗಿದೆ’ ಎಂದು ಆರ್ಬಿಐ ಪ್ರಕಟಣೆ ತಿಳಿಸಿದೆ.</p>.<p>ಮೊದಲ ಹಂತದ ಅನುಷ್ಠಾನ ಶುರುವಾಗಿ ತಿಂಗಳು ಕಳೆದ ನಂತರವೂ ಚೆಕ್ ತ್ವರಿತವಾಗಿ ವಿಲೇವಾರಿ ಆಗುವ ಸೌಲಭ್ಯ ಸರಿಯಾಗಿ ಲಭ್ಯವಾಗುತ್ತಿರಲಿಲ್ಲ. ವ್ಯವಸ್ಥೆಯಲ್ಲಿ ದೋಷಗಳು ನಿವಾರಣೆ ಆಗಿರಲಿಲ್ಲ.</p>.<p>‘ಚೆಕ್ ಸಲ್ಲಿಸಿ ಹಲವು ದಿನಗಳು ಕಳೆದರೂ ಹಣದ ವರ್ಗಾವಣೆ ಆಗದಿರುವ ನಿದರ್ಶನಗಳು ಇವೆ. ಈ ರೀತಿ ಆಗಿರುವುದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಬ್ಯಾಂಕಿಂಗ್ ವ್ಯವಸ್ಥೆಯ ಪ್ರತಿನಿಧಿಗಳು ಹೇಳುತ್ತಿದ್ದಾರೆ’ ಎಂಬ ದೂರುಗಳು ನವೆಂಬರ್ ಮೊದಲ ವಾರದಲ್ಲಿ ಇದ್ದವು.</p>.<p>‘ಅಂತರ್ಬ್ಯಾಂಕ್ ವಹಿವಾಟು ಅನುಮೋದನೆಯಲ್ಲಿ ಸಮಸ್ಯೆ ಆಗುತ್ತಿದೆ. ₹10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚೆಕ್ಗಳನ್ನು ಮಾನ್ಯ ಮಾಡುವಲ್ಲಿ ಸಮಸ್ಯೆ ಇದೆ. ಆದರೆ ಅದಕ್ಕಿಂತ ಕಡಿಮೆ ಮೊತ್ತದ ಚೆಕ್ಗಳನ್ನು ಮಾನ್ಯ ಮಾಡುವ ಕೆಲಸವು ಬೇಗನೆ ಆಗುತ್ತಿದೆ’ ಎಂದು ಆಗ ಸರ್ಕಾರಿ ಬ್ಯಾಂಕ್ ಒಂದರ ಅಧಿಕಾರಿಯೊಬ್ಬರು ಹೆಸರು<br>ಬಹಿರಂಗಪಡಿಸಬಾರದು ಎಂದು ಷರತ್ತಿನೊಂದಿಗೆ ‘ಪ್ರಜಾವಾಣಿ’ಗೆ ತಿಳಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>