ಕೃಷಿ ಉತ್ಪಾದನೆ ಹೆಚ್ಚಳ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ, ಅಗ್ಗದ ತರಕಾರಿ, ಹಣ್ಣುಗಳು ಆಹಾರ ಹಣದುಬ್ಬರವನ್ನು ನಿಯಂತ್ರಣ ಮಟ್ಟದಲ್ಲಿ ಇರಿಸಿವೆ. ಸರ್ಕಾರದ ಖರೀದಿ ನೀತಿಯ ಫಲವಾಗಿ ಕೃಷಿ ಉತ್ಪಾದನೆ ಹೆಚ್ಚಳಗೊಳ್ಳಲಿದೆ.
ಈ ಎಲ್ಲ ಕಾರಣಗಳಿಗೆ ಕೇಂದ್ರೀಯ ಬ್ಯಾಂಕ್ ಬಡ್ಡಿ ದರಗಳನ್ನು ಬದಲಿಸುವ ಸಾಧ್ಯತೆ ಇಲ್ಲ ಎಂದು ಡನ್ ಆ್ಯಂಡ್ ಬ್ರಾಡ್ಸ್ಟ್ರೀಟ್ (ಡಿಆ್ಯಂಡ್ಬಿ) ಸಂಸ್ಥೆ ಅಭಿಪ್ರಾಯಪಟ್ಟಿದೆ.