ಉದ್ದೇಶಿತ ವ್ಯಾಪಾರ ಒಪ್ಪಂದದಲ್ಲಿ ಕೃಷಿ ಕ್ಷೇತ್ರವನ್ನು ಸೇರ್ಪಡೆ ಮಾಡದಿರಲು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಒಪ್ಪಂದದ ಕುರಿತು ಅಂತಿಮ ತೀರ್ಮಾನಕ್ಕೆ ಬರುವ ಮುಂಚೆ, ಉದ್ದೇಶಿತ ಒಪ್ಪಂದದ ಪೂರ್ಣ ಪಾಠವನ್ನು ಬಹಿರಂಗಪಡಿಸಬೇಕು. ಈ ಸಂಬಂಧ ಕೃಷಿಕರು, ರೈತ ಸಂಘಟನೆಗಳು, ರಾಜ್ಯ ಸರ್ಕಾರಗಳು ಮತ್ತು ಇತರ ಭಾಗಿದಾರರ ಜತೆ ಚರ್ಚೆ ನಡೆಸಬೇಕು ಎಂದು ದೇಶದಲ್ಲಿನ 250 ಕೃಷಿ ಸಂಘಟನೆಗಳ ಒಕ್ಕೂಟವಾಗಿರುವ ‘ಎಐಕೆಎಸ್ಸಿಸಿ’ಯ ಸಂಚಾಲಕ ವಿ. ಎಂ. ಸಿಂಗ್ ಹೇಳಿದ್ದಾರೆ.