<p><strong>ನವದೆಹಲಿ:</strong> ದೇಶದ ಚಿಲ್ಲರೆ ಹಣದುಬ್ಬರವು ಜನವರಿ ತಿಂಗಳಿನಲ್ಲಿ ಐದು ತಿಂಗಳ ಕನಿಷ್ಠ ಮಟ್ಟವಾದ ಶೇ 4.31ಕ್ಕೆ ಇಳಿಕೆಯಾಗಿದೆ. ತರಕಾರಿ, ಮೊಟ್ಟೆ ಮತ್ತು ಬೇಳೆಕಾಳು ದರ ಕಡಿಮೆಯಾಗಿರುವುದೇ ಹಣದುಬ್ಬರದ ಇಳಿಕೆಗೆ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬುಧವಾರ ತಿಳಿಸಿದೆ.</p>.<p>ಕಳೆದ ವರ್ಷದ ಅಕ್ಟೋಬರ್ನಿಂದಲೂ ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರವು ಇಳಿಕೆಯ ಪಥದಲ್ಲಿಯೇ ಸಾಗಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ಶೇ 5.22ರಷ್ಟು ದಾಖಲಾಗಿತ್ತು. </p>.<p>ಜನವರಿಯಲ್ಲಿ ಆಹಾರದ ಹಣದುಬ್ಬರವು ಶೇ 6.02ರಷ್ಟು ದಾಖಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಕಡಿಮೆ ಮಟ್ಟ ಇದಾಗಿದೆ. ಇಂಧನ ಹಾಗೂ ಇತರೆ ಸರಕುಗಳ ಬೆಲೆಯಲ್ಲಿಯೂ ಗಣನೀಯ ಇಳಿಕೆಯಾಗಿದೆ.</p>.<p>ಕಳೆದ ವಾರ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ಸಭೆಯು (ಎಂಪಿಸಿ) ರೆಪೊ ದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿದೆ. ಹಣದುಬ್ಬರವು ಆರ್ಬಿಐನ ನಿರೀಕ್ಷಿತ ಮಟ್ಟದಲ್ಲಿಯೇ ಇರುವುದರಿಂದ ಈ ನಿರ್ಧಾರ ಕೈಗೊಂಡಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.</p>.<p>ಗ್ರಾಮೀಣ ಪ್ರದೇಶದಲ್ಲೂ ಹಣದುಬ್ಬರದ ಪ್ರಮಾಣ ಇಳಿಕೆಯಾಗಿದೆ. ಡಿಸೆಂಬರ್ನಲ್ಲಿ ಶೇ 5.76ರಷ್ಟು ಇದ್ದಿದ್ದು, ಜನವರಿಯಲ್ಲಿ ಶೇ 4.64ಕ್ಕೆ ತಗ್ಗಿದೆ. ಆಹಾರ ಪದಾರ್ಥಗಳ ಬೆಲೆಯು ಶೇ 8.65ರಿಂದ ಶೇ 6.31ಕ್ಕೆ ಇಳಿದಿದೆ.</p>.<p>ನಗರ ಪ್ರದೇಶದ ವ್ಯಾಪ್ತಿಯಲ್ಲೂ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ. ಡಿಸೆಂಬರ್ನಲ್ಲಿ ಶೇ 4.58ರಷ್ಟು ಇದ್ದಿದ್ದು, ಜನವರಿಯಲ್ಲಿ ಶೇ 3.87ಕ್ಕೆ ಇಳಿದಿದೆ. ಆಹಾರ ಪದಾರ್ಥಗಳ ಬೆಲೆಯು ಶೇ 7.9ರಿಂದ ಶೇ 5.53ಕ್ಕೆ ಇಳಿಕೆಯಾಗಿದೆ.</p>.<p>ಆದರೆ, ಮನೆಗಳ ಬೆಲೆಯಲ್ಲಿ ಶೇ 2.76ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.</p>.<p>ರಾಷ್ಟ್ರೀಯ ಸರಾಸರಿಗಿಂತಲೂ ಕೇರಳ (ಶೇ 6.76), ಒಡಿಶಾ (ಶೇ 6.05), ಛತ್ತೀಸಗಢ (ಶೇ 5.85), ಹರಿಯಾಣ (ಶೇ 5.1) ಹಾಗೂ ಬಿಹಾರದಲ್ಲಿ (ಶೇ 5.06) ಹಣದುಬ್ಬರವು ಹೆಚ್ಚು ದಾಖಲಾಗಿದೆ. ದೆಹಲಿಯಲ್ಲಿ ಶೇ 2.02ರಷ್ಟು ಅತಿ ಕಡಿಮೆ ದಾಖಲಾಗಿದೆ.</p>.<p>‘ಹಣದುಬ್ಬರ ಇಳಿಕೆಯು ರೆಪೊ ದರ ಕಡಿತವನ್ನು ಸಮರ್ಥಿಸುವಂತಿದೆ. ಏಪ್ರಿಲ್ ಅಥವಾ ಜೂನ್ನಲ್ಲಿ ಮತ್ತೆ ಆರ್ಬಿಐನಿಂದ ಶೇ 0.25ರಷ್ಟು ಬಡ್ಡಿದರ ಕಡಿತವಾಗುವ ಸಾಧ್ಯತೆಯಿದೆ’ ಎಂದು ಐಸಿಆರ್ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ತಿಳಿಸಿದ್ದಾರೆ.</p>.<h2>ಆಲೂಗೆಡ್ಡೆ ತೆಂಗಿನಕಾಯಿ ದುಬಾರಿ </h2>.<p>ತೆಂಗಿನ ಎಣ್ಣೆ ಶೇ 54.2 ಆಲೂಗೆಡ್ಡೆ ಶೇ 49.61 ತೆಂಗಿನಕಾಯಿ ಶೇ 38.71 ಬೆಳ್ಳುಳ್ಳಿ ಶೇ 30.65 ಹಾಗೂ ಬಟಾಣಿ ಬೆಲೆಯಲ್ಲಿ ಶೇ 30.17ರಷ್ಟು ಹೆಚ್ಚಳವಾಗಿದೆ. ಈ ಪದಾರ್ಥಗಳಿಗೆ ಹೋಲಿಸಿದರೆ ಜೀರಿಗೆ ಶೇ 32.25 ಶುಂಠಿ ಶೇ 30.92 ಒಣ ಮೆಣಸಿನಕಾಯಿ ಶೇ 11.27 ಬದನೆಕಾಯಿ ಶೇ 9.94 ಹಾಗೂ ಎಲ್ಪಿಜಿ (ನಿರ್ವಹಣೆ ವೆಚ್ಚ ಹೊರತುಪಡಿಸಿ) ದರದಲ್ಲಿ ಶೇ 9.29ರಷ್ಟು ಇಳಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದೇಶದ ಚಿಲ್ಲರೆ ಹಣದುಬ್ಬರವು ಜನವರಿ ತಿಂಗಳಿನಲ್ಲಿ ಐದು ತಿಂಗಳ ಕನಿಷ್ಠ ಮಟ್ಟವಾದ ಶೇ 4.31ಕ್ಕೆ ಇಳಿಕೆಯಾಗಿದೆ. ತರಕಾರಿ, ಮೊಟ್ಟೆ ಮತ್ತು ಬೇಳೆಕಾಳು ದರ ಕಡಿಮೆಯಾಗಿರುವುದೇ ಹಣದುಬ್ಬರದ ಇಳಿಕೆಗೆ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬುಧವಾರ ತಿಳಿಸಿದೆ.</p>.<p>ಕಳೆದ ವರ್ಷದ ಅಕ್ಟೋಬರ್ನಿಂದಲೂ ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರವು ಇಳಿಕೆಯ ಪಥದಲ್ಲಿಯೇ ಸಾಗಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ಶೇ 5.22ರಷ್ಟು ದಾಖಲಾಗಿತ್ತು. </p>.<p>ಜನವರಿಯಲ್ಲಿ ಆಹಾರದ ಹಣದುಬ್ಬರವು ಶೇ 6.02ರಷ್ಟು ದಾಖಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ದಾಖಲಾಗಿರುವ ಕಡಿಮೆ ಮಟ್ಟ ಇದಾಗಿದೆ. ಇಂಧನ ಹಾಗೂ ಇತರೆ ಸರಕುಗಳ ಬೆಲೆಯಲ್ಲಿಯೂ ಗಣನೀಯ ಇಳಿಕೆಯಾಗಿದೆ.</p>.<p>ಕಳೆದ ವಾರ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ಸಭೆಯು (ಎಂಪಿಸಿ) ರೆಪೊ ದರದಲ್ಲಿ ಶೇ 0.25ರಷ್ಟು ಕಡಿತಗೊಳಿಸಿದೆ. ಹಣದುಬ್ಬರವು ಆರ್ಬಿಐನ ನಿರೀಕ್ಷಿತ ಮಟ್ಟದಲ್ಲಿಯೇ ಇರುವುದರಿಂದ ಈ ನಿರ್ಧಾರ ಕೈಗೊಂಡಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.</p>.<p>ಗ್ರಾಮೀಣ ಪ್ರದೇಶದಲ್ಲೂ ಹಣದುಬ್ಬರದ ಪ್ರಮಾಣ ಇಳಿಕೆಯಾಗಿದೆ. ಡಿಸೆಂಬರ್ನಲ್ಲಿ ಶೇ 5.76ರಷ್ಟು ಇದ್ದಿದ್ದು, ಜನವರಿಯಲ್ಲಿ ಶೇ 4.64ಕ್ಕೆ ತಗ್ಗಿದೆ. ಆಹಾರ ಪದಾರ್ಥಗಳ ಬೆಲೆಯು ಶೇ 8.65ರಿಂದ ಶೇ 6.31ಕ್ಕೆ ಇಳಿದಿದೆ.</p>.<p>ನಗರ ಪ್ರದೇಶದ ವ್ಯಾಪ್ತಿಯಲ್ಲೂ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ. ಡಿಸೆಂಬರ್ನಲ್ಲಿ ಶೇ 4.58ರಷ್ಟು ಇದ್ದಿದ್ದು, ಜನವರಿಯಲ್ಲಿ ಶೇ 3.87ಕ್ಕೆ ಇಳಿದಿದೆ. ಆಹಾರ ಪದಾರ್ಥಗಳ ಬೆಲೆಯು ಶೇ 7.9ರಿಂದ ಶೇ 5.53ಕ್ಕೆ ಇಳಿಕೆಯಾಗಿದೆ.</p>.<p>ಆದರೆ, ಮನೆಗಳ ಬೆಲೆಯಲ್ಲಿ ಶೇ 2.76ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.</p>.<p>ರಾಷ್ಟ್ರೀಯ ಸರಾಸರಿಗಿಂತಲೂ ಕೇರಳ (ಶೇ 6.76), ಒಡಿಶಾ (ಶೇ 6.05), ಛತ್ತೀಸಗಢ (ಶೇ 5.85), ಹರಿಯಾಣ (ಶೇ 5.1) ಹಾಗೂ ಬಿಹಾರದಲ್ಲಿ (ಶೇ 5.06) ಹಣದುಬ್ಬರವು ಹೆಚ್ಚು ದಾಖಲಾಗಿದೆ. ದೆಹಲಿಯಲ್ಲಿ ಶೇ 2.02ರಷ್ಟು ಅತಿ ಕಡಿಮೆ ದಾಖಲಾಗಿದೆ.</p>.<p>‘ಹಣದುಬ್ಬರ ಇಳಿಕೆಯು ರೆಪೊ ದರ ಕಡಿತವನ್ನು ಸಮರ್ಥಿಸುವಂತಿದೆ. ಏಪ್ರಿಲ್ ಅಥವಾ ಜೂನ್ನಲ್ಲಿ ಮತ್ತೆ ಆರ್ಬಿಐನಿಂದ ಶೇ 0.25ರಷ್ಟು ಬಡ್ಡಿದರ ಕಡಿತವಾಗುವ ಸಾಧ್ಯತೆಯಿದೆ’ ಎಂದು ಐಸಿಆರ್ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ತಿಳಿಸಿದ್ದಾರೆ.</p>.<h2>ಆಲೂಗೆಡ್ಡೆ ತೆಂಗಿನಕಾಯಿ ದುಬಾರಿ </h2>.<p>ತೆಂಗಿನ ಎಣ್ಣೆ ಶೇ 54.2 ಆಲೂಗೆಡ್ಡೆ ಶೇ 49.61 ತೆಂಗಿನಕಾಯಿ ಶೇ 38.71 ಬೆಳ್ಳುಳ್ಳಿ ಶೇ 30.65 ಹಾಗೂ ಬಟಾಣಿ ಬೆಲೆಯಲ್ಲಿ ಶೇ 30.17ರಷ್ಟು ಹೆಚ್ಚಳವಾಗಿದೆ. ಈ ಪದಾರ್ಥಗಳಿಗೆ ಹೋಲಿಸಿದರೆ ಜೀರಿಗೆ ಶೇ 32.25 ಶುಂಠಿ ಶೇ 30.92 ಒಣ ಮೆಣಸಿನಕಾಯಿ ಶೇ 11.27 ಬದನೆಕಾಯಿ ಶೇ 9.94 ಹಾಗೂ ಎಲ್ಪಿಜಿ (ನಿರ್ವಹಣೆ ವೆಚ್ಚ ಹೊರತುಪಡಿಸಿ) ದರದಲ್ಲಿ ಶೇ 9.29ರಷ್ಟು ಇಳಿಕೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>