‘ದೇಶಿ ಕೈಗಾರಿಕೋದ್ಯಮಿಗಳ ಆತಂಕ ದೂರ ಮಾಡಿರುವ ಸಚಿವೆ ನಿರ್ಮಲಾ ಅವರು, ಉದ್ಯಮಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೊಡುಗೆ ಪ್ರಕಟಿಸಿದ್ದಾರೆ. ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯ ಚೇತರಿಕೆಗೆ ಈ ಕೊಡುಗೆಗಳು ಭರವಸೆದಾಯಕವಾಗಿವೆ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್ಕೆಸಿಸಿಐ) ಅಧ್ಯಕ್ಷ ಸಿ. ಆರ್. ಜನಾರ್ಧನ ಹೇಳಿದ್ದಾರೆ.