ನವದೆಹಲಿ: ಉದ್ಯಮಿ ಅನಿಲ್ ಅಗರ್ವಾಲ್ ಒಡೆತನದ ವೇದಾಂತ ಲಿಮಿಟೆಡ್ ಸಮೂಹವು ತನ್ನ ವಹಿವಾಟನ್ನು ಪುನರ್ರಚನೆ ಮಾಡುವುದಾಗಿ ಹೇಳಿದೆ. ಅದರ ಭಾಗವಾಗಿ ಅಲ್ಯುಮಿನಿಯಂ, ಕಬ್ಬಿಣ ಮತ್ತು ಉಕ್ಕು, ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಸಮೂಹದಿಂದ ಪ್ರತ್ಯೇಕಿಸಲಾಗುವುದು ಮತ್ತು ಷೇರುಪೇಟೆಯಲ್ಲಿ ಪ್ರತ್ಯೇಕವಾಗಿ ನೋಂದಾಯಿಸಲಾಗುವುದು ಎಂದು ಅದು ಹೇಳಿದೆ.