<p><strong>ನವದೆಹಲಿ: </strong>ಉದ್ಯಮಿ ಅನಿಲ್ ಅಗರ್ವಾಲ್ ಒಡೆತನದ ವೇದಾಂತ ಲಿಮಿಟೆಡ್ ಸಮೂಹವು ತನ್ನ ವಹಿವಾಟನ್ನು ಪುನರ್ರಚನೆ ಮಾಡುವುದಾಗಿ ಹೇಳಿದೆ. ಅದರ ಭಾಗವಾಗಿ ಅಲ್ಯುಮಿನಿಯಂ, ಕಬ್ಬಿಣ ಮತ್ತು ಉಕ್ಕು, ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಸಮೂಹದಿಂದ ಪ್ರತ್ಯೇಕಿಸಲಾಗುವುದು ಮತ್ತು ಷೇರುಪೇಟೆಯಲ್ಲಿ ಪ್ರತ್ಯೇಕವಾಗಿ ನೋಂದಾಯಿಸಲಾಗುವುದು ಎಂದು ಅದು ಹೇಳಿದೆ.</p>.<p>ವೇದಾಂತ ಲಿಮಿಟೆಡ್ ಮತ್ತು ಪ್ರತ್ಯೇಕ ಕಂಪನಿಗಳಾಗಲಿರುವ ಮೂರು ಕಂಪನಿಗಳು ಸಮಾನಾಂತರವಾಗಿ ಕಾರ್ಯಾಚರಿಸಲಿವೆ ಎಂದು ಸಮೂಹದ ಅಧ್ಯಕ್ಷ ಅಗರ್ವಾಲ್ ತಿಳಿಸಿದ್ದಾರೆ.</p>.<p>ಈ ಮೂರು ಉದ್ದಿಮೆಗಳು ಬೆಳವಣಿಗೆ ಸಾಧಿಸುವ ಉತ್ತಮ ಸಾಮರ್ಥ್ಯ ಹೊಂದಿವೆ. ಈ ಮಾದರಿಯು ಬೆಳವಣಿಗೆಗೆ ಸಹಜವಾದ ಮಾರ್ಗ ನೀಡುವ ಜೊತೆಗೆ ಷೇರುದಾರರ ಮೌಲ್ಯವನ್ನೂ ಹೆಚ್ಚಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.</p>.<p>ಸಮೂಹದ ಪುನರ್ ರಚನೆಗೆ ಇರುವ ಆಯ್ಕೆಗಳ ಪರಿಶೀಲನೆ ನಡೆಸಲು ಮತ್ತು ಆ ಕುರಿತು ಶಿಫಾರಸು ಮಾಡಲು ವೇದಾಂತ ಮಂಡಳಿಯು ನಿರ್ದೇಶಕರ ಸಮಿತಿಯೊಂದನ್ನು ರಚಿಸಿದೆ ಎಂದು ಅಗರ್ವಾಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಉದ್ಯಮಿ ಅನಿಲ್ ಅಗರ್ವಾಲ್ ಒಡೆತನದ ವೇದಾಂತ ಲಿಮಿಟೆಡ್ ಸಮೂಹವು ತನ್ನ ವಹಿವಾಟನ್ನು ಪುನರ್ರಚನೆ ಮಾಡುವುದಾಗಿ ಹೇಳಿದೆ. ಅದರ ಭಾಗವಾಗಿ ಅಲ್ಯುಮಿನಿಯಂ, ಕಬ್ಬಿಣ ಮತ್ತು ಉಕ್ಕು, ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದ ವಹಿವಾಟುಗಳನ್ನು ಸಮೂಹದಿಂದ ಪ್ರತ್ಯೇಕಿಸಲಾಗುವುದು ಮತ್ತು ಷೇರುಪೇಟೆಯಲ್ಲಿ ಪ್ರತ್ಯೇಕವಾಗಿ ನೋಂದಾಯಿಸಲಾಗುವುದು ಎಂದು ಅದು ಹೇಳಿದೆ.</p>.<p>ವೇದಾಂತ ಲಿಮಿಟೆಡ್ ಮತ್ತು ಪ್ರತ್ಯೇಕ ಕಂಪನಿಗಳಾಗಲಿರುವ ಮೂರು ಕಂಪನಿಗಳು ಸಮಾನಾಂತರವಾಗಿ ಕಾರ್ಯಾಚರಿಸಲಿವೆ ಎಂದು ಸಮೂಹದ ಅಧ್ಯಕ್ಷ ಅಗರ್ವಾಲ್ ತಿಳಿಸಿದ್ದಾರೆ.</p>.<p>ಈ ಮೂರು ಉದ್ದಿಮೆಗಳು ಬೆಳವಣಿಗೆ ಸಾಧಿಸುವ ಉತ್ತಮ ಸಾಮರ್ಥ್ಯ ಹೊಂದಿವೆ. ಈ ಮಾದರಿಯು ಬೆಳವಣಿಗೆಗೆ ಸಹಜವಾದ ಮಾರ್ಗ ನೀಡುವ ಜೊತೆಗೆ ಷೇರುದಾರರ ಮೌಲ್ಯವನ್ನೂ ಹೆಚ್ಚಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.</p>.<p>ಸಮೂಹದ ಪುನರ್ ರಚನೆಗೆ ಇರುವ ಆಯ್ಕೆಗಳ ಪರಿಶೀಲನೆ ನಡೆಸಲು ಮತ್ತು ಆ ಕುರಿತು ಶಿಫಾರಸು ಮಾಡಲು ವೇದಾಂತ ಮಂಡಳಿಯು ನಿರ್ದೇಶಕರ ಸಮಿತಿಯೊಂದನ್ನು ರಚಿಸಿದೆ ಎಂದು ಅಗರ್ವಾಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>