ಹೊಸ ತೆರಿಗೆಯನ್ನು ಜಾರಿಗೆ ತಂದಿದ್ದರ ಬಗ್ಗೆ ಸಚಿವೆ ನಿರ್ಮಲಾ ಅವರು, ‘ತೈಲ ಸಂಸ್ಕರಣಾ ಕಂಪನಿಗಳು ರಫ್ತಿನ ಮೂಲಕ ಭಾರಿ ಲಾಭ ಗಳಿಸಿದ್ದವು. ಲಾಭ ಗಳಿಸುವವರ ಮೇಲೆ ನಮಗೆ ದ್ವೇಷವಿಲ್ಲ. ಆದರೆ, ಪೆಟ್ರೋಲ್ ಬಂಕ್ನಲ್ಲಿ ತೈಲ ಸಿಗದೆ, ಅವುಗಳನ್ನು ರಫ್ತು ಮಾಡಲಾಗುತ್ತಿದೆ ಎಂದಾದರೆ, ಅದರಲ್ಲಿ ಒಂದಿಷ್ಟು ಪಾಲು ನಮ್ಮ ಜನರಿಗೆ ಇರಿಸಬೇಕಾಗುತ್ತದೆ’ ಎಂದು ಹೇಳಿದ್ದರು.