<p><strong>ಧಾರವಾಡ: </strong>ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಜಾನುವಾರು ಪ್ರದರ್ಶನಕ್ಕೆ ಬಂದ ಸಾರ್ವಜನಿಕರಿಗೆ `ಒಂಗೋಲ್~ ತಳಿಯ ಎತ್ತುಗಳು ಪ್ರಮುಖ ಆಕರ್ಷಣೆಯಾಗಿದ್ದವು.<br /> <br /> ರಜೆಯ ದಿನವಾದ ಭಾನುವಾರ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ದೈತ್ಯ ಎತ್ತುಗಳನ್ನು ಕಂಡು `ಹೋ~ ಎಂದು ಉದ್ಘರಿಸುತ್ತಾ ಅಚ್ಚರಿ ವ್ಯಕ್ತಪಡಿಸಿದರು. ಧಾರವಾಡದ ಹೆಬ್ಬಳ್ಳಿ ಅಗಸಿಯ ರೈತ ಆರ್.ಎಫ್.ನೀರಲಕಟ್ಟಿ ಅವರಿಗೆ ಸೇರಿದ 6 ವರ್ಷದ ಈ ಎತ್ತುಗಳು ತಲಾ 650 ಕೆ.ಜಿ ತೂಕ ಇದ್ದು, 1.8 ಮೀಟರ್ ಎತ್ತರ ಇವೆ. 1.5 ವರ್ಷದ ಹಿಂದೆ ಈ ಜೋಡಿಯನ್ನು ನೀರಲಕಟ್ಟಿ ಆಂಧ್ರಪ್ರದೇಶದ ಗುಂಟೂರಿನಿಂದ ರೂ.2.5ಲಕ್ಷ ನೀಡಿ ಖರೀದಿಸಿ ತಂದಿದ್ದಾರೆ.<br /> <br /> ಹೆಚ್ಚು ಜಮೀನು ಇರುವ ಕಾರಣ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನೀರಲಕಟ್ಟಿ ಶಕ್ತಿಶಾಲಿಯಾದ ಈ ಎತ್ತುಗಳನ್ನು ಖರೀದಿಸಿದ್ದಾರೆ. ಕೃಷಿ ಮೇಳದ ಸಂಘಟಕದ ಮನವಿಯ ಮೇರೆಗೆ ಮೇಳದ ಮೂರನೇ ದಿನ ಒಂಗೋಲ್ ತಳಿಯನ್ನು ತಂದು ಪ್ರದರ್ಶನಕ್ಕಿಟ್ಟಿದ್ದರು.<br /> <br /> `ಒಂಗೋಲ್ ಎತ್ತುಗಳು 35ಎಚ್ಪಿ ಸಾಮರ್ಥ್ಯದ ಸಜೀವ ಟ್ರ್ಯಾಕ್ಟರ್~ ಎಂದು ಬಣ್ಣಿಸುವ ಕೃಷಿ ವಿಶ್ವವಿದ್ಯಾಲಯದ ಪಶುವೈದ್ಯ ಡಾ.ಅನಿಲ ಪಾಟೀಲ, ಟ್ರಾಕ್ಟರ್ ಸಾಗಿಸುವಷ್ಟೇ ತೂಕದ ವಸ್ತುಗಳನ್ನುಒಂಗೋಲ್ ಎತ್ತುಗಳು ಸರಾಗವಾಗಿ ಹೊರುತ್ತವೆ ಎನ್ನುತ್ತಾರೆ.<br /> <br /> ಒಂಗೋಲ್ ಮೂಲತಃ ಆಂಧ್ರಪ್ರದೇಶದ ರಾಯಲಸೀಮೆ ಭಾಗದ ತಳಿಯಾಗಿದ್ದು, ಮೂರು ದಶಕಗಳ ಹಿಂದೆ ಬ್ರೆಜಿಲ್ನವರು ತಮ್ಮ ದೇಶಕ್ಕೆ ಕೊಂಡೊಯ್ದು ಅಲ್ಲಿನ ಸ್ಥಳೀಯ ತಳಿಯೊಂದಿಗೆ ಅಭಿವೃದ್ಧಿಪಡಿಸಿ `ಬ್ರಹ್ಮ~ ಹೆಸರಿನಲ್ಲಿ ಹೊಸ ತಳಿ ರೂಪಿಸಿದ್ದಾರೆ ಎನ್ನುವ ಅವರು, ಚನ್ನಾಗಿ ಸಾಕಿದರೆ ಒಂಗೋಲ್ ತಳಿ ಸುಮಾರು 32ರಿಂದ 36 ವರ್ಷ ಬದುಕುತ್ತವೆ. ಆಂಧ್ರದಲ್ಲಿ ಅಲ್ಲಿನ ದೊಡ್ಡ ಜಮೀನ್ದಾರರು ಹವ್ಯಾಸಕ್ಕಾಗಿಯೇ ಈ ಎತ್ತುಗಳನ್ನು ಸಾಕುತ್ತಾರೆ ಎಂದು ಹೇಳುತ್ತಾರೆ.<br /> <br /> ಗುಂಟೂರಿನಿಂದ ತರುವಾಗ ಲಾರಿ ಬಾಡಿಗೆಯಾಗಿ ರೂ.30 ಸಾವಿರ ವ್ಯಯಿಸಿರುವುದಾಗಿ ಹೇಳುವ ನೀರಲಕಟ್ಟಿ ಅವರ ಮಗ ಶಿವಯೋಗಿ, ಕುಂಟೆ-ನೇಗಿಲು ಯಾವುದೂ ಈ ಎತ್ತುಗಳಿಗೆ ಭಾರ ಎನಿಸುವುದಿಲ್ಲ. ಸರಾಗವಾಗಿ ಎಳೆದುಕೊಂಡು ಓಡಿಬಿಡುತ್ತವೆ. ಅವನ್ನು ಹಿಡಿಯಲು ಕೆಲಸಗಾರರು ಹೆದರುತ್ತಾರೆ. <br /> <br /> ಹೊಸದಾಗಿ ಕೊಂಡು ತಂದಾಗ ಆಂಧ್ರದಿಂದ ಬಂದ ಇಬ್ಬರು 15 ದಿನ ಇದ್ದು, ಅವುಗಳನ್ನು ನಿಭಾಯಿಸುವುದು ಹೇಳಿಕೊಟ್ಟಿದ್ದರು. ಇಲ್ಲಿಗೆ ಒಗ್ಗದ ಕಾರಣ ಈಗ ಹೆಚ್ಚಾಗಿ ಕೃಷಿ ಚಟುವಟಿಕೆಗೆ ಬಳಸುತ್ತಿಲ್ಲ. ಹಾಗೆಯೇ ಇಟ್ಟಿದ್ದೇವೆ. <br /> <br /> ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತೇವೆ ಎಂದು ಹೇಳುತ್ತಾರೆ.ನಿತ್ಯ ಹಿಂಡಿ, ಹಸಿ ಮೇವು, ಸೊಪ್ಪೆಯನ್ನು ಆಹಾರವಾಗಿ ನೀಡುತ್ತಿದ್ದು. ಮನೆಯ ಇತರೆ ದನಗಳು ಈ ದೈತ್ಯರ ಹತ್ತಿರ ಸುಳಿಯಲು ಹಿಂಜರಿಯುವುದರಿಂದ ಶಿವಯೋಗಿ ಅವುಗಳಿಗಾಗಿಯೇ ಪ್ರತ್ಯೇಕ ಕೊಟ್ಟಿಗೆ ನಿರ್ಮಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong>ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ಜಾನುವಾರು ಪ್ರದರ್ಶನಕ್ಕೆ ಬಂದ ಸಾರ್ವಜನಿಕರಿಗೆ `ಒಂಗೋಲ್~ ತಳಿಯ ಎತ್ತುಗಳು ಪ್ರಮುಖ ಆಕರ್ಷಣೆಯಾಗಿದ್ದವು.<br /> <br /> ರಜೆಯ ದಿನವಾದ ಭಾನುವಾರ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರು ಅಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ದೈತ್ಯ ಎತ್ತುಗಳನ್ನು ಕಂಡು `ಹೋ~ ಎಂದು ಉದ್ಘರಿಸುತ್ತಾ ಅಚ್ಚರಿ ವ್ಯಕ್ತಪಡಿಸಿದರು. ಧಾರವಾಡದ ಹೆಬ್ಬಳ್ಳಿ ಅಗಸಿಯ ರೈತ ಆರ್.ಎಫ್.ನೀರಲಕಟ್ಟಿ ಅವರಿಗೆ ಸೇರಿದ 6 ವರ್ಷದ ಈ ಎತ್ತುಗಳು ತಲಾ 650 ಕೆ.ಜಿ ತೂಕ ಇದ್ದು, 1.8 ಮೀಟರ್ ಎತ್ತರ ಇವೆ. 1.5 ವರ್ಷದ ಹಿಂದೆ ಈ ಜೋಡಿಯನ್ನು ನೀರಲಕಟ್ಟಿ ಆಂಧ್ರಪ್ರದೇಶದ ಗುಂಟೂರಿನಿಂದ ರೂ.2.5ಲಕ್ಷ ನೀಡಿ ಖರೀದಿಸಿ ತಂದಿದ್ದಾರೆ.<br /> <br /> ಹೆಚ್ಚು ಜಮೀನು ಇರುವ ಕಾರಣ ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನೀರಲಕಟ್ಟಿ ಶಕ್ತಿಶಾಲಿಯಾದ ಈ ಎತ್ತುಗಳನ್ನು ಖರೀದಿಸಿದ್ದಾರೆ. ಕೃಷಿ ಮೇಳದ ಸಂಘಟಕದ ಮನವಿಯ ಮೇರೆಗೆ ಮೇಳದ ಮೂರನೇ ದಿನ ಒಂಗೋಲ್ ತಳಿಯನ್ನು ತಂದು ಪ್ರದರ್ಶನಕ್ಕಿಟ್ಟಿದ್ದರು.<br /> <br /> `ಒಂಗೋಲ್ ಎತ್ತುಗಳು 35ಎಚ್ಪಿ ಸಾಮರ್ಥ್ಯದ ಸಜೀವ ಟ್ರ್ಯಾಕ್ಟರ್~ ಎಂದು ಬಣ್ಣಿಸುವ ಕೃಷಿ ವಿಶ್ವವಿದ್ಯಾಲಯದ ಪಶುವೈದ್ಯ ಡಾ.ಅನಿಲ ಪಾಟೀಲ, ಟ್ರಾಕ್ಟರ್ ಸಾಗಿಸುವಷ್ಟೇ ತೂಕದ ವಸ್ತುಗಳನ್ನುಒಂಗೋಲ್ ಎತ್ತುಗಳು ಸರಾಗವಾಗಿ ಹೊರುತ್ತವೆ ಎನ್ನುತ್ತಾರೆ.<br /> <br /> ಒಂಗೋಲ್ ಮೂಲತಃ ಆಂಧ್ರಪ್ರದೇಶದ ರಾಯಲಸೀಮೆ ಭಾಗದ ತಳಿಯಾಗಿದ್ದು, ಮೂರು ದಶಕಗಳ ಹಿಂದೆ ಬ್ರೆಜಿಲ್ನವರು ತಮ್ಮ ದೇಶಕ್ಕೆ ಕೊಂಡೊಯ್ದು ಅಲ್ಲಿನ ಸ್ಥಳೀಯ ತಳಿಯೊಂದಿಗೆ ಅಭಿವೃದ್ಧಿಪಡಿಸಿ `ಬ್ರಹ್ಮ~ ಹೆಸರಿನಲ್ಲಿ ಹೊಸ ತಳಿ ರೂಪಿಸಿದ್ದಾರೆ ಎನ್ನುವ ಅವರು, ಚನ್ನಾಗಿ ಸಾಕಿದರೆ ಒಂಗೋಲ್ ತಳಿ ಸುಮಾರು 32ರಿಂದ 36 ವರ್ಷ ಬದುಕುತ್ತವೆ. ಆಂಧ್ರದಲ್ಲಿ ಅಲ್ಲಿನ ದೊಡ್ಡ ಜಮೀನ್ದಾರರು ಹವ್ಯಾಸಕ್ಕಾಗಿಯೇ ಈ ಎತ್ತುಗಳನ್ನು ಸಾಕುತ್ತಾರೆ ಎಂದು ಹೇಳುತ್ತಾರೆ.<br /> <br /> ಗುಂಟೂರಿನಿಂದ ತರುವಾಗ ಲಾರಿ ಬಾಡಿಗೆಯಾಗಿ ರೂ.30 ಸಾವಿರ ವ್ಯಯಿಸಿರುವುದಾಗಿ ಹೇಳುವ ನೀರಲಕಟ್ಟಿ ಅವರ ಮಗ ಶಿವಯೋಗಿ, ಕುಂಟೆ-ನೇಗಿಲು ಯಾವುದೂ ಈ ಎತ್ತುಗಳಿಗೆ ಭಾರ ಎನಿಸುವುದಿಲ್ಲ. ಸರಾಗವಾಗಿ ಎಳೆದುಕೊಂಡು ಓಡಿಬಿಡುತ್ತವೆ. ಅವನ್ನು ಹಿಡಿಯಲು ಕೆಲಸಗಾರರು ಹೆದರುತ್ತಾರೆ. <br /> <br /> ಹೊಸದಾಗಿ ಕೊಂಡು ತಂದಾಗ ಆಂಧ್ರದಿಂದ ಬಂದ ಇಬ್ಬರು 15 ದಿನ ಇದ್ದು, ಅವುಗಳನ್ನು ನಿಭಾಯಿಸುವುದು ಹೇಳಿಕೊಟ್ಟಿದ್ದರು. ಇಲ್ಲಿಗೆ ಒಗ್ಗದ ಕಾರಣ ಈಗ ಹೆಚ್ಚಾಗಿ ಕೃಷಿ ಚಟುವಟಿಕೆಗೆ ಬಳಸುತ್ತಿಲ್ಲ. ಹಾಗೆಯೇ ಇಟ್ಟಿದ್ದೇವೆ. <br /> <br /> ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತೇವೆ ಎಂದು ಹೇಳುತ್ತಾರೆ.ನಿತ್ಯ ಹಿಂಡಿ, ಹಸಿ ಮೇವು, ಸೊಪ್ಪೆಯನ್ನು ಆಹಾರವಾಗಿ ನೀಡುತ್ತಿದ್ದು. ಮನೆಯ ಇತರೆ ದನಗಳು ಈ ದೈತ್ಯರ ಹತ್ತಿರ ಸುಳಿಯಲು ಹಿಂಜರಿಯುವುದರಿಂದ ಶಿವಯೋಗಿ ಅವುಗಳಿಗಾಗಿಯೇ ಪ್ರತ್ಯೇಕ ಕೊಟ್ಟಿಗೆ ನಿರ್ಮಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>