<p><strong>ಮಾರುತಿ: 500 ಕಾರ್ಮಿಕರಿಗೆ ನೋಟಿಸ್-ನೌಕರಿ ನಷ್ಟ ಸಂಭವ<br /> </strong><strong>ನವದೆಹಲಿ(ಪಿಟಿಐ):</strong> ಕಾರ್ಮಿಕರ ಗಲಭೆ ಕಾರಣದಿಂದಾಗಿ ನಾಲ್ಕು ವಾರಗಳಿಂದ ಬೀಗಮುದ್ರೆಗೊಳಗಾಗಿದ್ದ ಮಾರುತಿ ಸುಜುಕಿ ಇಂಡಿಯ (ಎಂಎಸ್ಐ)ದ ಮಾನೇಸರ್ ಘಟಕ, ಇದೇ 21ರಿಂದ ಕಾರು ತಯಾರಿಕೆಯನ್ನು ಪುನಃ ಆರಂಭಿಸಲಿದೆ. <br /> <br /> `ಆಗಸ್ಟ್ 21ರಂದು ಬೀಗಮುದ್ರೆ ತೆಗೆದು ಕಾರು ತಯಾರಿಕೆ ಆರಂಭಿಸಲಾಗುವುದು~ ಎಂದು ಎಂಎಸ್ಐ ಅಧ್ಯಕ್ಷ ಆರ್.ಸಿ.ಭಾರ್ಗವ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.<br /> <br /> ಗಲಭೆಗೆ ಸಂಬಂಧಿಸಿ ಕಾರ್ಮಿಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತಿದ್ದು, 500 ಕಾರ್ಮಿಕರಿಗೆ ನೋಟಿಸ್ ನೀಡಲಾಗಿದೆ ಎಂದರು.<br /> <br /> ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರ ಹತ್ಯೆ ಮತ್ತು 100 ಮಂದಿ ಗಾಯಗೊಳ್ಳಲು ಕಾರಣವಾದ ಜುಲೈ 18ರ ಕಾರ್ಮಿಕ ಗಲಭೆ ಸಂಬಂಧ 500 ಮಂದಿ ಕಾಯಂ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಸಂಬಂಧ ನೋಟಿಸ್ ನೀಡಲಾಗಿದೆ.<br /> <br /> ಇನ್ನೊಂದೆಡೆ ಹರ್ಯಾಣ ಪೊಲೀಸರು, ಗಲಭೆಗೆ ಸಂಬಂಧಿಸಿ ಕಾರ್ಮಿಕ ಸಂಘದ ಹತ್ತು ಮುಖಂಡರು ಸೇರಿದಂತೆ ಈವರೆಗೆ 114 ಮಂದಿಯನ್ನು ಬಂಧಿಸಿದ್ದಾರೆ.<br /> <br /> <strong>ಮಾನೇಸರ್ ಘಟಕ:</strong> ಇಲ್ಲಿ ಬಹಳ ಜನಪ್ರಿಯ ಮಾದರಿಗಳಾದ ಸ್ವಿಫ್ಟ್, ಡಿಜೈರ್ ಮತ್ತು ಎಸ್ಎಕ್ಸ್4 ಹಾಗೂ ಎ-ಸ್ಟಾರ್ ಸೇರಿದಂತೆ ವಾರ್ಷಿಕ 5.5 ಲಕ್ಷ ಕಾರುಗಳನ್ನು ತಯಾರಿಸಲಾಗುತ್ತದೆ. ಈ ಘಟಕದಲ್ಲಿ 1600 ಮಂದಿ ಕಾಯಂ ಸಿಬ್ಬಂದಿ ಸೇರಿದಂತೆ ಒಟ್ಟು 3000ಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಜತೆಗೆ ಆಡಳಿತ ವಿಭಾಗದಲ್ಲಿ 700 ನೌಕರರೂ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾರುತಿ: 500 ಕಾರ್ಮಿಕರಿಗೆ ನೋಟಿಸ್-ನೌಕರಿ ನಷ್ಟ ಸಂಭವ<br /> </strong><strong>ನವದೆಹಲಿ(ಪಿಟಿಐ):</strong> ಕಾರ್ಮಿಕರ ಗಲಭೆ ಕಾರಣದಿಂದಾಗಿ ನಾಲ್ಕು ವಾರಗಳಿಂದ ಬೀಗಮುದ್ರೆಗೊಳಗಾಗಿದ್ದ ಮಾರುತಿ ಸುಜುಕಿ ಇಂಡಿಯ (ಎಂಎಸ್ಐ)ದ ಮಾನೇಸರ್ ಘಟಕ, ಇದೇ 21ರಿಂದ ಕಾರು ತಯಾರಿಕೆಯನ್ನು ಪುನಃ ಆರಂಭಿಸಲಿದೆ. <br /> <br /> `ಆಗಸ್ಟ್ 21ರಂದು ಬೀಗಮುದ್ರೆ ತೆಗೆದು ಕಾರು ತಯಾರಿಕೆ ಆರಂಭಿಸಲಾಗುವುದು~ ಎಂದು ಎಂಎಸ್ಐ ಅಧ್ಯಕ್ಷ ಆರ್.ಸಿ.ಭಾರ್ಗವ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.<br /> <br /> ಗಲಭೆಗೆ ಸಂಬಂಧಿಸಿ ಕಾರ್ಮಿಕರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತಿದ್ದು, 500 ಕಾರ್ಮಿಕರಿಗೆ ನೋಟಿಸ್ ನೀಡಲಾಗಿದೆ ಎಂದರು.<br /> <br /> ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರ ಹತ್ಯೆ ಮತ್ತು 100 ಮಂದಿ ಗಾಯಗೊಳ್ಳಲು ಕಾರಣವಾದ ಜುಲೈ 18ರ ಕಾರ್ಮಿಕ ಗಲಭೆ ಸಂಬಂಧ 500 ಮಂದಿ ಕಾಯಂ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಸಂಬಂಧ ನೋಟಿಸ್ ನೀಡಲಾಗಿದೆ.<br /> <br /> ಇನ್ನೊಂದೆಡೆ ಹರ್ಯಾಣ ಪೊಲೀಸರು, ಗಲಭೆಗೆ ಸಂಬಂಧಿಸಿ ಕಾರ್ಮಿಕ ಸಂಘದ ಹತ್ತು ಮುಖಂಡರು ಸೇರಿದಂತೆ ಈವರೆಗೆ 114 ಮಂದಿಯನ್ನು ಬಂಧಿಸಿದ್ದಾರೆ.<br /> <br /> <strong>ಮಾನೇಸರ್ ಘಟಕ:</strong> ಇಲ್ಲಿ ಬಹಳ ಜನಪ್ರಿಯ ಮಾದರಿಗಳಾದ ಸ್ವಿಫ್ಟ್, ಡಿಜೈರ್ ಮತ್ತು ಎಸ್ಎಕ್ಸ್4 ಹಾಗೂ ಎ-ಸ್ಟಾರ್ ಸೇರಿದಂತೆ ವಾರ್ಷಿಕ 5.5 ಲಕ್ಷ ಕಾರುಗಳನ್ನು ತಯಾರಿಸಲಾಗುತ್ತದೆ. ಈ ಘಟಕದಲ್ಲಿ 1600 ಮಂದಿ ಕಾಯಂ ಸಿಬ್ಬಂದಿ ಸೇರಿದಂತೆ ಒಟ್ಟು 3000ಕ್ಕೂ ಅಧಿಕ ಕಾರ್ಮಿಕರಿದ್ದಾರೆ. ಜತೆಗೆ ಆಡಳಿತ ವಿಭಾಗದಲ್ಲಿ 700 ನೌಕರರೂ ಇದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>