<p><strong>ನವದೆಹಲಿ(ಪಿಟಿಐ):</strong> ಕಿರುತೆರೆ ಮತ್ತು ರಂಗಭೂಮಿ ಕಲಾವಿದರೂ ಸೇವಾ ತೆರಿಗೆ ವ್ಯಾಪ್ತಿಗೆ ಬಂದಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಶೇ 12ರಷ್ಟು ತೆರಿಗೆ ಪಾವತಿಸಬೇಕಿದೆ.<br /> <br /> ಕೇಂದ್ರ ಸರ್ಕಾರ `ಸೇವೆ~ ಎಂಬ ಪದವನ್ನು ಬಹಳ ವಿಸ್ತಾರ ಹಾಗೂ ವಿಭಿನ್ನವಾಗಿ ವ್ಯಾಖ್ಯಾನಿಸಿರುವುದರ ಪರಿಣಾಮವಾಗಿಯೇ ಈವರೆಗೆ `ಕಲೆಯ ಕ್ಷೇತ್ರ~ ಎಂದು ಪರಿಗಣಿಸಲಾಗಿದ್ದ ರಂಗಭೂಮಿ ಮತ್ತು ಕಿರುತೆರೆಯೂ ಈಗ `ಸೇವಾ ತೆರಿಗೆ~ ವ್ಯಾಪ್ತಿಗೆ ಸೇರುವಂತಾಗಿದೆ.<br /> <br /> ಅಂಚೆ ಕಚೇರಿ `ಸೇವೆ~:ಕೇಂದ್ರ ಸರ್ಕಾರ ಪ್ರಕಟಿಸಿರುವ ಸೇವಾ ತೆರಿಗೆ ವ್ಯಾಪ್ತಿಯ ಹೊಸ ಸೇವೆಗಳ ಸಾಲಿನಲ್ಲಿ ಅಂಚೆ ಕಚೇರಿಯ ಸ್ಪೀಡ್ ಪೋಸ್ಟ್ ಮತ್ತು ಎಕ್ಸ್ಪ್ರೆಸ್ ಪಾರ್ಸಲ್ ಸರ್ವಿಸ್ ಸಹ ಇದೆ. ಇನ್ನು ಅಂಚೆ ಕಚೇರಿಯ ಈ ಎರಡೂ ಸೇವೆಗಳು ಸ್ವಲ್ಪ ದುಬಾರಿಯೂ ಆಗಬಹುದು.38 ವಿವಿಧ ಸೇವೆಗಳನ್ನು ಸೇವಾ ತೆರಿಗೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವ ಕೇಂದ್ರ ಸರ್ಕಾರ, 119 ಬಗೆಯ ಸೇವೆಗಳನ್ನು ಈ ತೆರಿಗೆ ಕಾಯ್ದೆಯಡಿ ತಂದಿದೆ. ಇಷ್ಟೂ ಸೇವೆಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಇನ್ನು ಶೇ 12ರಷ್ಟು ತೆರಿಗೆ ಪಾವತಿಸುವುದು ಅನಿವಾರ್ಯ.ಆನ್ಲೈನ್ ಮೂಲಕ ವಿಮಾನ ಪ್ರಯಾಣದ ಟಿಕೆಟ್ ವಿತರಣೆ, ಸಾಗರೋತ್ತರ ಹಾಲಿಡೆ ಪ್ರವಾಸ ಆಯೋಜಿಸುವವರೂ ಇನ್ನು ಸೇವಾ ತೆರಿಗೆ ಪಾವತಿಸಬೇಕಿದೆ.<br /> <br /> ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ `ಜಿಎಂಎಟಿ~ ಮತ್ತು `ಜಿಆರ್ಇ~ ಪರೀಕ್ಷೆಗಳೂ ಇನ್ನು ಕೊಂಚ ದುಬಾರಿಯಾಗಲಿವೆ. ಏಕೆಂದರೆ ಈ ಪರೀಕ್ಷೆ ನಡೆಸುವ ಸಂಸ್ಥೆಗಳು ಸಹ ಈಗ ಸೇವಾ ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ.ಆದರೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಐಎಂ) ಸಂಸ್ಥೆಗಳಿಗೆ ಈ ಸೇವಾ ತೆರಿಗೆಯ ಹೊರೆ ಇರುವುದಿಲ್ಲ.<br /> <br /> ಖಾಸಗಿಯಾಗಿ ಪಾಠ ಹೇಳುವ (ಟ್ಯೂಷನ್) ಸಂಸ್ಥೆಗಳೂ ವಾರ್ಷಿಕ 10 ಲಕ್ಷ ರೂಪಾಯಿ ವಹಿವಾಟು ನಡೆಸುವಂತಹವಾಗಿದ್ದರೆ ಆ ಸಂಸ್ಥೆಗಳೂ ಶೇ 12ರಷ್ಟು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ. <br /> <br /> ವಕೀಲರೊಬ್ಬರು ಸಹೋದ್ಯೋಗಿ ಮಿತ್ರರಿಗೆ ಕಾನೂನು ನೆರವು ಒದಗಿಸಿದರೆ ಅದನ್ನು ಸೇವಾ ತೆರಿಗೆ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 10 ಲಕ್ಷದವರೆಗೆ ವಹಿವಾಟು ನಡೆಸುವ ವಾಣಿಜ್ಯ ಸಂಸ್ಥೆಗಳೂ ಈಗ ಸೇವಾ ತೆರಿಗೆ ಮಿತಿಯಿಂದ ಹೊರಗುಳಿದಿವೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.</p>.<p><strong> `ಕರಾಳ ಕಾನೂನು~</strong></p>.<p>`ಸರ್ಕಾರ ನಟ-ನಟಿಯರ ಗ್ಲ್ಯಾಮರ್ ನೋಡಿ ಅವರೆಲ್ಲ ಶ್ರೀಮಂತ ವರ್ಗ ಎಂದು ಭಾವಿಸಿದಂತಿದೆ. ಆದರೆ ಬಣ್ಣದ ಬದುಕಿನ ತೆರೆಯ ಹಿಂದೆ ಬದುಕಿಗಾಗಿ ಒದ್ದಾಡುತ್ತಿರುವ ಲಕ್ಷಾಂತರ ಕಲಾವಿದರಿದ್ದಾರೆ. <br /> <br /> ಅವರ್ಯಾರೂ ಈ ತೆರಿಗೆ ಹೇರುವವರ ಕಣ್ಣಿಗೆ ಕಾಣುತ್ತಿಲ್ಲ. ರೈತ ಹೇಗೆ ಬಹಳ ಸಂಕಷ್ಟದಲ್ಲಿದ್ದಾನೆಯೋ ಕಲಾವಿದರೂ ಅದೇ ಪರಿಸ್ಥಿತಿಯಲ್ಲಿದ್ದಾರೆ. ನಾಡಿನ ಶೇ 80ರಷ್ಟು ಸಹ ಕಲಾವಿದರು ಬಡತನದಲ್ಲಿಯೇ ದಿನದೂಡುತ್ತಿದ್ದಾರೆ. ಇಂಥ ಕಲಾವಿದರ ಪಾಲಿಗೆ ಇದೊಂದು ಕರಾಳ ಕಾನೂನು.<br /> <br /> ಈಗಾಗಲೇ ನಮ್ಮ ಭಾಷೆ, ಬದುಕಿಗೆ ಬೆಲೆ ಇಲ್ಲಂದಂತಾಗಿದೆ. ಮುಂದೆ ಇನ್ನೇನು ಪರಿಣಾಮ ಬೀರಲಿದೆಯೋ ಊಹಿಸಲೂ ಸಾಧ್ಯವಿಲ್ಲ~.<br /> <strong>- ಅಶೋಕ್, ಹಿರಿಯ ಕಲಾವಿದ-ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ</strong></p>.<p><strong>ಸರ್ಕಾರದ ಲೆಕ್ಕದಲ್ಲಿ ಕಲೆಯೂ `ಸರ್ವಿಸ್~!</strong><br /> `ಕಲಾ ಸೇವೆ ಎನ್ನುವುದನ್ನೂ ಸರ್ಕಾರ ಸರ್ವಿಸ್ ಎಂದು ಪರಿಗಣಿಸಿದಂತಿದೆ. ಇದು ನೋವಿನ ಸಂಗತಿ. ಉದ್ಯಮವೇ ಆಗಿರುವ ಚಿತ್ರರಂಗದಲ್ಲಿ ರೂ. 3-4 ಕೋಟಿ ಸಂಭಾವನೆ ಪಡೆಯುವ ನಟ-ನಟಿಯರಿಗೆ ಇಂಥ ತೆರಿಗೆ ವಿಧಿಸುವುದೇನೋ ಸರಿ. ಆದರೆ ಅಸ್ಥಿತ್ವಕ್ಕಾಗಿಯೇ ಹೆಣಗಾಡುತ್ತಿರುವ ರಂಗಭೂಮಿ ಕಲಾವಿದರಿಗೆ ಇದು ಮಾರಕವಾಗಲಿದೆ. <br /> <br /> ಸಂಸ್ಕೃತಿವಾಹಕರಲ್ಲದೇ ಇರುವವರು ಅಧಿಕಾರದಲ್ಲಿದ್ದರೆ ಎಂಥ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಈ ಕಾನೂನೇ ಒಂದು ಉದಾಹರಣೆ. ವಸ್ತುಗಳ ಬೆಲೆ ಏರಿಕೆಯನ್ನೇನೋ ಸಹಿಸಿಕೊಳ್ಳಬಹುದು. ಆದರೆ ಭಾವನೆಗಳ ಮೇಲೆಯೇ ನಿರ್ಮಾಣವಾಗುವ ಕಲೆಯ ಮೇಲೆಯೂ ಸವಾರಿ ಮಾಡುವುದು ಸರಿ ಅಲ್ಲ. ಮುಂದಿನ ದಿನಗಳಲ್ಲಿ ರಂಗಭೂಮಿ ಕಲಾವಿದರ ಪಾಡು ಮತ್ತಷ್ಟು ಭೀಕರವಾಗಲಿದೆ.<br /> <strong>- ಮಂಡ್ಯ ರಮೇಶ್, ರಂಗಭೂಮಿ-ಕಿರುತೆರೆ-ಸಿನಿಮಾ ಕಲಾವಿದ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ):</strong> ಕಿರುತೆರೆ ಮತ್ತು ರಂಗಭೂಮಿ ಕಲಾವಿದರೂ ಸೇವಾ ತೆರಿಗೆ ವ್ಯಾಪ್ತಿಗೆ ಬಂದಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಶೇ 12ರಷ್ಟು ತೆರಿಗೆ ಪಾವತಿಸಬೇಕಿದೆ.<br /> <br /> ಕೇಂದ್ರ ಸರ್ಕಾರ `ಸೇವೆ~ ಎಂಬ ಪದವನ್ನು ಬಹಳ ವಿಸ್ತಾರ ಹಾಗೂ ವಿಭಿನ್ನವಾಗಿ ವ್ಯಾಖ್ಯಾನಿಸಿರುವುದರ ಪರಿಣಾಮವಾಗಿಯೇ ಈವರೆಗೆ `ಕಲೆಯ ಕ್ಷೇತ್ರ~ ಎಂದು ಪರಿಗಣಿಸಲಾಗಿದ್ದ ರಂಗಭೂಮಿ ಮತ್ತು ಕಿರುತೆರೆಯೂ ಈಗ `ಸೇವಾ ತೆರಿಗೆ~ ವ್ಯಾಪ್ತಿಗೆ ಸೇರುವಂತಾಗಿದೆ.<br /> <br /> ಅಂಚೆ ಕಚೇರಿ `ಸೇವೆ~:ಕೇಂದ್ರ ಸರ್ಕಾರ ಪ್ರಕಟಿಸಿರುವ ಸೇವಾ ತೆರಿಗೆ ವ್ಯಾಪ್ತಿಯ ಹೊಸ ಸೇವೆಗಳ ಸಾಲಿನಲ್ಲಿ ಅಂಚೆ ಕಚೇರಿಯ ಸ್ಪೀಡ್ ಪೋಸ್ಟ್ ಮತ್ತು ಎಕ್ಸ್ಪ್ರೆಸ್ ಪಾರ್ಸಲ್ ಸರ್ವಿಸ್ ಸಹ ಇದೆ. ಇನ್ನು ಅಂಚೆ ಕಚೇರಿಯ ಈ ಎರಡೂ ಸೇವೆಗಳು ಸ್ವಲ್ಪ ದುಬಾರಿಯೂ ಆಗಬಹುದು.38 ವಿವಿಧ ಸೇವೆಗಳನ್ನು ಸೇವಾ ತೆರಿಗೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವ ಕೇಂದ್ರ ಸರ್ಕಾರ, 119 ಬಗೆಯ ಸೇವೆಗಳನ್ನು ಈ ತೆರಿಗೆ ಕಾಯ್ದೆಯಡಿ ತಂದಿದೆ. ಇಷ್ಟೂ ಸೇವೆಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಇನ್ನು ಶೇ 12ರಷ್ಟು ತೆರಿಗೆ ಪಾವತಿಸುವುದು ಅನಿವಾರ್ಯ.ಆನ್ಲೈನ್ ಮೂಲಕ ವಿಮಾನ ಪ್ರಯಾಣದ ಟಿಕೆಟ್ ವಿತರಣೆ, ಸಾಗರೋತ್ತರ ಹಾಲಿಡೆ ಪ್ರವಾಸ ಆಯೋಜಿಸುವವರೂ ಇನ್ನು ಸೇವಾ ತೆರಿಗೆ ಪಾವತಿಸಬೇಕಿದೆ.<br /> <br /> ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ `ಜಿಎಂಎಟಿ~ ಮತ್ತು `ಜಿಆರ್ಇ~ ಪರೀಕ್ಷೆಗಳೂ ಇನ್ನು ಕೊಂಚ ದುಬಾರಿಯಾಗಲಿವೆ. ಏಕೆಂದರೆ ಈ ಪರೀಕ್ಷೆ ನಡೆಸುವ ಸಂಸ್ಥೆಗಳು ಸಹ ಈಗ ಸೇವಾ ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ.ಆದರೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್(ಐಐಎಂ) ಸಂಸ್ಥೆಗಳಿಗೆ ಈ ಸೇವಾ ತೆರಿಗೆಯ ಹೊರೆ ಇರುವುದಿಲ್ಲ.<br /> <br /> ಖಾಸಗಿಯಾಗಿ ಪಾಠ ಹೇಳುವ (ಟ್ಯೂಷನ್) ಸಂಸ್ಥೆಗಳೂ ವಾರ್ಷಿಕ 10 ಲಕ್ಷ ರೂಪಾಯಿ ವಹಿವಾಟು ನಡೆಸುವಂತಹವಾಗಿದ್ದರೆ ಆ ಸಂಸ್ಥೆಗಳೂ ಶೇ 12ರಷ್ಟು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ. <br /> <br /> ವಕೀಲರೊಬ್ಬರು ಸಹೋದ್ಯೋಗಿ ಮಿತ್ರರಿಗೆ ಕಾನೂನು ನೆರವು ಒದಗಿಸಿದರೆ ಅದನ್ನು ಸೇವಾ ತೆರಿಗೆ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 10 ಲಕ್ಷದವರೆಗೆ ವಹಿವಾಟು ನಡೆಸುವ ವಾಣಿಜ್ಯ ಸಂಸ್ಥೆಗಳೂ ಈಗ ಸೇವಾ ತೆರಿಗೆ ಮಿತಿಯಿಂದ ಹೊರಗುಳಿದಿವೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.</p>.<p><strong> `ಕರಾಳ ಕಾನೂನು~</strong></p>.<p>`ಸರ್ಕಾರ ನಟ-ನಟಿಯರ ಗ್ಲ್ಯಾಮರ್ ನೋಡಿ ಅವರೆಲ್ಲ ಶ್ರೀಮಂತ ವರ್ಗ ಎಂದು ಭಾವಿಸಿದಂತಿದೆ. ಆದರೆ ಬಣ್ಣದ ಬದುಕಿನ ತೆರೆಯ ಹಿಂದೆ ಬದುಕಿಗಾಗಿ ಒದ್ದಾಡುತ್ತಿರುವ ಲಕ್ಷಾಂತರ ಕಲಾವಿದರಿದ್ದಾರೆ. <br /> <br /> ಅವರ್ಯಾರೂ ಈ ತೆರಿಗೆ ಹೇರುವವರ ಕಣ್ಣಿಗೆ ಕಾಣುತ್ತಿಲ್ಲ. ರೈತ ಹೇಗೆ ಬಹಳ ಸಂಕಷ್ಟದಲ್ಲಿದ್ದಾನೆಯೋ ಕಲಾವಿದರೂ ಅದೇ ಪರಿಸ್ಥಿತಿಯಲ್ಲಿದ್ದಾರೆ. ನಾಡಿನ ಶೇ 80ರಷ್ಟು ಸಹ ಕಲಾವಿದರು ಬಡತನದಲ್ಲಿಯೇ ದಿನದೂಡುತ್ತಿದ್ದಾರೆ. ಇಂಥ ಕಲಾವಿದರ ಪಾಲಿಗೆ ಇದೊಂದು ಕರಾಳ ಕಾನೂನು.<br /> <br /> ಈಗಾಗಲೇ ನಮ್ಮ ಭಾಷೆ, ಬದುಕಿಗೆ ಬೆಲೆ ಇಲ್ಲಂದಂತಾಗಿದೆ. ಮುಂದೆ ಇನ್ನೇನು ಪರಿಣಾಮ ಬೀರಲಿದೆಯೋ ಊಹಿಸಲೂ ಸಾಧ್ಯವಿಲ್ಲ~.<br /> <strong>- ಅಶೋಕ್, ಹಿರಿಯ ಕಲಾವಿದ-ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ</strong></p>.<p><strong>ಸರ್ಕಾರದ ಲೆಕ್ಕದಲ್ಲಿ ಕಲೆಯೂ `ಸರ್ವಿಸ್~!</strong><br /> `ಕಲಾ ಸೇವೆ ಎನ್ನುವುದನ್ನೂ ಸರ್ಕಾರ ಸರ್ವಿಸ್ ಎಂದು ಪರಿಗಣಿಸಿದಂತಿದೆ. ಇದು ನೋವಿನ ಸಂಗತಿ. ಉದ್ಯಮವೇ ಆಗಿರುವ ಚಿತ್ರರಂಗದಲ್ಲಿ ರೂ. 3-4 ಕೋಟಿ ಸಂಭಾವನೆ ಪಡೆಯುವ ನಟ-ನಟಿಯರಿಗೆ ಇಂಥ ತೆರಿಗೆ ವಿಧಿಸುವುದೇನೋ ಸರಿ. ಆದರೆ ಅಸ್ಥಿತ್ವಕ್ಕಾಗಿಯೇ ಹೆಣಗಾಡುತ್ತಿರುವ ರಂಗಭೂಮಿ ಕಲಾವಿದರಿಗೆ ಇದು ಮಾರಕವಾಗಲಿದೆ. <br /> <br /> ಸಂಸ್ಕೃತಿವಾಹಕರಲ್ಲದೇ ಇರುವವರು ಅಧಿಕಾರದಲ್ಲಿದ್ದರೆ ಎಂಥ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಈ ಕಾನೂನೇ ಒಂದು ಉದಾಹರಣೆ. ವಸ್ತುಗಳ ಬೆಲೆ ಏರಿಕೆಯನ್ನೇನೋ ಸಹಿಸಿಕೊಳ್ಳಬಹುದು. ಆದರೆ ಭಾವನೆಗಳ ಮೇಲೆಯೇ ನಿರ್ಮಾಣವಾಗುವ ಕಲೆಯ ಮೇಲೆಯೂ ಸವಾರಿ ಮಾಡುವುದು ಸರಿ ಅಲ್ಲ. ಮುಂದಿನ ದಿನಗಳಲ್ಲಿ ರಂಗಭೂಮಿ ಕಲಾವಿದರ ಪಾಡು ಮತ್ತಷ್ಟು ಭೀಕರವಾಗಲಿದೆ.<br /> <strong>- ಮಂಡ್ಯ ರಮೇಶ್, ರಂಗಭೂಮಿ-ಕಿರುತೆರೆ-ಸಿನಿಮಾ ಕಲಾವಿದ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>