<p>ನಾವು ಈಗ ಭ್ರಷ್ಟಾಚಾರದ ಬಗ್ಗೆ ಬಹಳಷ್ಟು ಮಾತು ಬರುತ್ತಿರುವುದನ್ನು ಕೇಳುತ್ತೇವೆ. ಎಲ್ಲಿ ನೋಡಿದಲ್ಲಿ ಅದರದೇ ಚರ್ಚೆ. ಹಿಂದೆಯೂ ಭ್ರಷ್ಟಾಚಾರವಿತ್ತೇ ಎಂದು ಕೇಳಿದರೆ ಇತ್ತು ಎಂದೇ ಹೇಳಬೇಕಾಗುತ್ತದೆ. ರಾಮಾಯಣ ಕಾಲದಲ್ಲಿ ಒಬ್ಬ ಭ್ರಷ್ಟಾಚಾರಿಯ ಬಗ್ಗೆ ಒಂದು ನಾಯಿ ಕೂಡ ಫಿರ್ಯಾದು ನೀಡುತ್ತದೆ. <br /> <br /> ಮಹಾಭಾರತದ ಶಾಂತಿಪರ್ವದಲ್ಲಿ ಒಂದು ಪುಟ್ಟ ಕಥೆ ಬರುತ್ತದೆ. ಕೋಸಲ ದೇಶದ ರಾಜ ಕ್ಷೇಮದರ್ಶಿ. ಆತ ಒಳ್ಳೆಯವನು. ಆದರೆ ಸುತ್ತಲಿದ್ದ ಜನ ಅವನ ಒಳ್ಳೆಯತನದ ದುರುಪಯೋಗ ಪಡೆದು ಅನಾಚಾರಿಗಳಾಗಿದ್ದರು. ಅವನಿಗೆ ವಸ್ತುಸ್ಥಿತಿ ತಿಳಿಯದ ಹಾಗೆ ನೋಡಿಕೊಳ್ಳುತ್ತಿದ್ದರು.<br /> <br /> ಅವರು ಹೇಳಿದ್ದೇ ಸತ್ಯವೆಂದು ತಿಳಿದು ಆತ ನಿಶ್ಚಿಂತನಾಗಿದ್ದ.<br /> ಕ್ಷೇಮದರ್ಶಿಯ ಮಾರ್ಗದರ್ಶಕನೊಬ್ಬನಿದ್ದ. ಅವನ ಹೆಸರು ಕಾಲಕವೃಕ್ಷೀಯ. ಅವನೊಬ್ಬ ಋಷಿ. ಆತ ಸದಾ ಸಂಚಾರಿ. ದೇವೇಂದ್ರನ ಆಸ್ಥಾನದಲ್ಲೂ ಇದ್ದನಂತೆ. <br /> <br /> ಅವನು ಕ್ಷೇಮದರ್ಶಿಯನ್ನು ಕಂಡ. ದೇಶವನ್ನು ಸುತ್ತಿದ. ಅಲ್ಲಿದ್ದ ಅವ್ಯವಸ್ಥೆ ಕಣ್ಣಿಗೆ ಬಿತ್ತು. ರಾಜನಿಗೆ ಯಾವುದೂ ತಿಳಿಯದು. ಇದನ್ನು ಸರಿಮಾಡಲು ಕಾಲಕವೃಕ್ಷೀಯ ಒಂದು ಹಾದಿ ಹುಡುಕಿದ.<br /> <br /> ಒಂದು ಕಾಗೆಯನ್ನು ಹಿಡಿದು ತರಿಸಿ ಬಂಗಾರದ ಪಂಜರದಲ್ಲಿಟ್ಟ. ಅದಕ್ಕೆ ಚೆನ್ನಾಗಿ ಅಲಂಕಾರ ಮಾಡಿಸಿದ. ಅದನ್ನು ತಾನೇ ಕೈಯಲ್ಲಿ ಹಿಡಿದುಕೊಂಡು ತಿರುಗಾಡಿದ. ಜನಕ್ಕೆ, ಅಧಿಕಾರಿ ವರ್ಗದವರಿಗೆ ಆಶ್ಚರ್ಯ. ಜ್ಞಾನಿಗಳಾದ ಋಷಿಗಳು ಕಾಗೆಯನ್ನೇಕೆ ಪಂಜರದೊಳಿಟ್ಟು ಕಾಪಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿಯಲಿಲ್ಲ. <br /> <br /> ಮರುದಿನ ಒಂದು ಸುದ್ದಿ ಹಬ್ಬಿತು. ಆ ಕಾಗೆ ಇಂದ್ರ ಲೋಕದ ಕಾಗೆ. ಅದಕ್ಕೊಂದು ವಿಶೇಷ ಜ್ಞಾನವಿದೆ. ಅದು ಹಿಂದೆ ಆದದ್ದನ್ನು, ಈಗ ಆಗುತ್ತಿರುವುದನ್ನು, ಮುಂದೆ ಆಗುವುದನ್ನು ಸ್ಪಷ್ಟವಾಗಿ ತಿಳಿದು ಹೇಳಬಲ್ಲದು. ರಾಜ್ಯದಲ್ಲಿ ನಡೆಯುವುದೆಲ್ಲವನ್ನೂ ಅರಮನೆಯಲ್ಲಿದ್ದೇ ತಿಳಿಯಬಲ್ಲದು. ಈ ವಿಷಯ ಬಾಯಿಯಿಂದ ಬಾಯಿಗೆ ಬಲುವೇಗದಿಂದ ಹರಿಯಿತು. <br /> <br /> ಈ ಸುದ್ದಿಯನ್ನು ಹರಡಿದ್ದೇ ಕಾಲಕವೃಕ್ಷೀಯ. ರಾಜ್ಯದ ಹಿರಿಯ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಭಯವಾಗತೊಡಗಿತು. ಈ ಕಾಗೆ ತಾವು ಮಾಡುತ್ತಿರುವ ಭ್ರಷ್ಟಾಚಾರವನ್ನು ರಾಜನಿಗೆ ಹೇಳಿದರೆ ಏನು ಗತಿ?<br /> ಕಾಲಕವೃಕ್ಷೀಯ, ರಾಜನನ್ನು ಕರೆದು ಮುಂದೆ ಕುಳ್ಳಿರಿಸಿಕೊಂಡ.<br /> <br /> ತಾನು ರಾಜ್ಯದಲ್ಲೆಲ್ಲ ಅಡ್ಡಾಡಿ ಬಂದಾಗ ಕಂಡ ಅವ್ಯವಸ್ಥೆಯನ್ನು ವಿವರಿಸಿದ. ಮಂತ್ರಿಗಳು, ಅಧಿಕಾರಿಗಳು ಶಾಮೀಲಾಗಿ ಮಾಡುತ್ತಿರುವ ಭ್ರಷ್ಟಾಚಾರಗಳನ್ನು ಉದಾಹರಣೆಗಳ ಸಹಿತ ಹೇಳಿದ. ಪ್ರತಿದಿನವೂ ಒಂದು ವಿಷಯವನ್ನು ತೆಗೆದುಕೊಂಡು, ಖಚಿತವಾದ ದಾಖಲೆಗಳನ್ನು ಸಂಗ್ರಹಿಸಿ ರಾಜನ ಮುಂದಿಡುತ್ತಿದ್ದ. <br /> <br /> ರಾಜ ಆ ಅಧಿಕಾರಿಗಳನ್ನು, ಮಂತ್ರಿಗಳನ್ನು ಕರೆದು ತನಿಖೆ ಮಾಡಿದಾಗ ಸತ್ಯಸಂಗತಿ ಹೊರಬೀಳುತ್ತಿತ್ತು. ಅವರನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕಿ ಜೈಲಿಗೆ ಸೇರಿಸುತ್ತಿದ್ದರು. ಹೀಗೆಯೇ ಮುಂದುವರೆದರೆ ತಮಗೆ ಉಳಿಗಾಲವಿಲ್ಲವೆಂದು ಉಳಿದ ಮಂತ್ರಿಗಳು, ಅಧಿಕಾರಿಗಳು ಚಿಂತಿಸಿದರು.<br /> <br /> ಮರುದಿನ ಸಂಜೆ ಅವರೆಲ್ಲ ಸೇರಿ ರಾಜನಿಲ್ಲದಾಗ ಆ ಕಾಗೆಯನ್ನು ಕೊಂದು ಹಾಕಿದರು. ಆಗ ಕಾಲಕವೃಕ್ಷೀಯ ಋಷಿ ರಾಜನಿಗೆ ಎಚ್ಚರಿಕೆ ಕೊಡುತ್ತಾನೆ, ಈ ಭ್ರಷ್ಟರು ಮುಂದೆ ಅರಮನೆಯ ಕೆಲಸದವರನ್ನೆಲ್ಲ ಸೇರಿಸಿಕೊಂಡು ನಿನಗೂ ದ್ರೋಹ ಮಾಡುತ್ತಾರೆ . ರಾಜ ಎಚ್ಚೆತ್ತುಕೊಂಡು ಆಡಳಿತವನ್ನು ಬಿಗಿ ಮಾಡಿ, ಭ್ರಷ್ಟರನ್ನು ಶಿಕ್ಷಿಸಿ ವ್ಯವಸ್ಥೆಯನ್ನು ಸರಿಮಾಡಿದ.<br /> <br /> ಇದನ್ನು ನೋಡಿದಾಗ ನಮ್ಮಲ್ಲೂ ಒಬ್ಬರಲ್ಲ, ನೂರಾರು ಕಾಲಕವೃಕ್ಷೀಯ ಋಷಿಗಳು ಬೇಕಿತ್ತು ಎನ್ನಿಸುವುದಿಲ್ಲವೇ? ಅಥವಾ ನಾವೇ ಸಾವಿರಾರು ಜನ ಕಾಲಕವೃಕ್ಷೀಯರಂತಾಗಿ ಭ್ರಷ್ಟರನ್ನು ಬಯಲು ಮಾಡಿ ರಾಷ್ಟ್ರ ರಕ್ಷಣೆ ಮಾಡಬೇಕು ಎನ್ನಿಸುವುದಿಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾವು ಈಗ ಭ್ರಷ್ಟಾಚಾರದ ಬಗ್ಗೆ ಬಹಳಷ್ಟು ಮಾತು ಬರುತ್ತಿರುವುದನ್ನು ಕೇಳುತ್ತೇವೆ. ಎಲ್ಲಿ ನೋಡಿದಲ್ಲಿ ಅದರದೇ ಚರ್ಚೆ. ಹಿಂದೆಯೂ ಭ್ರಷ್ಟಾಚಾರವಿತ್ತೇ ಎಂದು ಕೇಳಿದರೆ ಇತ್ತು ಎಂದೇ ಹೇಳಬೇಕಾಗುತ್ತದೆ. ರಾಮಾಯಣ ಕಾಲದಲ್ಲಿ ಒಬ್ಬ ಭ್ರಷ್ಟಾಚಾರಿಯ ಬಗ್ಗೆ ಒಂದು ನಾಯಿ ಕೂಡ ಫಿರ್ಯಾದು ನೀಡುತ್ತದೆ. <br /> <br /> ಮಹಾಭಾರತದ ಶಾಂತಿಪರ್ವದಲ್ಲಿ ಒಂದು ಪುಟ್ಟ ಕಥೆ ಬರುತ್ತದೆ. ಕೋಸಲ ದೇಶದ ರಾಜ ಕ್ಷೇಮದರ್ಶಿ. ಆತ ಒಳ್ಳೆಯವನು. ಆದರೆ ಸುತ್ತಲಿದ್ದ ಜನ ಅವನ ಒಳ್ಳೆಯತನದ ದುರುಪಯೋಗ ಪಡೆದು ಅನಾಚಾರಿಗಳಾಗಿದ್ದರು. ಅವನಿಗೆ ವಸ್ತುಸ್ಥಿತಿ ತಿಳಿಯದ ಹಾಗೆ ನೋಡಿಕೊಳ್ಳುತ್ತಿದ್ದರು.<br /> <br /> ಅವರು ಹೇಳಿದ್ದೇ ಸತ್ಯವೆಂದು ತಿಳಿದು ಆತ ನಿಶ್ಚಿಂತನಾಗಿದ್ದ.<br /> ಕ್ಷೇಮದರ್ಶಿಯ ಮಾರ್ಗದರ್ಶಕನೊಬ್ಬನಿದ್ದ. ಅವನ ಹೆಸರು ಕಾಲಕವೃಕ್ಷೀಯ. ಅವನೊಬ್ಬ ಋಷಿ. ಆತ ಸದಾ ಸಂಚಾರಿ. ದೇವೇಂದ್ರನ ಆಸ್ಥಾನದಲ್ಲೂ ಇದ್ದನಂತೆ. <br /> <br /> ಅವನು ಕ್ಷೇಮದರ್ಶಿಯನ್ನು ಕಂಡ. ದೇಶವನ್ನು ಸುತ್ತಿದ. ಅಲ್ಲಿದ್ದ ಅವ್ಯವಸ್ಥೆ ಕಣ್ಣಿಗೆ ಬಿತ್ತು. ರಾಜನಿಗೆ ಯಾವುದೂ ತಿಳಿಯದು. ಇದನ್ನು ಸರಿಮಾಡಲು ಕಾಲಕವೃಕ್ಷೀಯ ಒಂದು ಹಾದಿ ಹುಡುಕಿದ.<br /> <br /> ಒಂದು ಕಾಗೆಯನ್ನು ಹಿಡಿದು ತರಿಸಿ ಬಂಗಾರದ ಪಂಜರದಲ್ಲಿಟ್ಟ. ಅದಕ್ಕೆ ಚೆನ್ನಾಗಿ ಅಲಂಕಾರ ಮಾಡಿಸಿದ. ಅದನ್ನು ತಾನೇ ಕೈಯಲ್ಲಿ ಹಿಡಿದುಕೊಂಡು ತಿರುಗಾಡಿದ. ಜನಕ್ಕೆ, ಅಧಿಕಾರಿ ವರ್ಗದವರಿಗೆ ಆಶ್ಚರ್ಯ. ಜ್ಞಾನಿಗಳಾದ ಋಷಿಗಳು ಕಾಗೆಯನ್ನೇಕೆ ಪಂಜರದೊಳಿಟ್ಟು ಕಾಪಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿಯಲಿಲ್ಲ. <br /> <br /> ಮರುದಿನ ಒಂದು ಸುದ್ದಿ ಹಬ್ಬಿತು. ಆ ಕಾಗೆ ಇಂದ್ರ ಲೋಕದ ಕಾಗೆ. ಅದಕ್ಕೊಂದು ವಿಶೇಷ ಜ್ಞಾನವಿದೆ. ಅದು ಹಿಂದೆ ಆದದ್ದನ್ನು, ಈಗ ಆಗುತ್ತಿರುವುದನ್ನು, ಮುಂದೆ ಆಗುವುದನ್ನು ಸ್ಪಷ್ಟವಾಗಿ ತಿಳಿದು ಹೇಳಬಲ್ಲದು. ರಾಜ್ಯದಲ್ಲಿ ನಡೆಯುವುದೆಲ್ಲವನ್ನೂ ಅರಮನೆಯಲ್ಲಿದ್ದೇ ತಿಳಿಯಬಲ್ಲದು. ಈ ವಿಷಯ ಬಾಯಿಯಿಂದ ಬಾಯಿಗೆ ಬಲುವೇಗದಿಂದ ಹರಿಯಿತು. <br /> <br /> ಈ ಸುದ್ದಿಯನ್ನು ಹರಡಿದ್ದೇ ಕಾಲಕವೃಕ್ಷೀಯ. ರಾಜ್ಯದ ಹಿರಿಯ ಮಂತ್ರಿಗಳಿಗೆ, ಅಧಿಕಾರಿಗಳಿಗೆ ಭಯವಾಗತೊಡಗಿತು. ಈ ಕಾಗೆ ತಾವು ಮಾಡುತ್ತಿರುವ ಭ್ರಷ್ಟಾಚಾರವನ್ನು ರಾಜನಿಗೆ ಹೇಳಿದರೆ ಏನು ಗತಿ?<br /> ಕಾಲಕವೃಕ್ಷೀಯ, ರಾಜನನ್ನು ಕರೆದು ಮುಂದೆ ಕುಳ್ಳಿರಿಸಿಕೊಂಡ.<br /> <br /> ತಾನು ರಾಜ್ಯದಲ್ಲೆಲ್ಲ ಅಡ್ಡಾಡಿ ಬಂದಾಗ ಕಂಡ ಅವ್ಯವಸ್ಥೆಯನ್ನು ವಿವರಿಸಿದ. ಮಂತ್ರಿಗಳು, ಅಧಿಕಾರಿಗಳು ಶಾಮೀಲಾಗಿ ಮಾಡುತ್ತಿರುವ ಭ್ರಷ್ಟಾಚಾರಗಳನ್ನು ಉದಾಹರಣೆಗಳ ಸಹಿತ ಹೇಳಿದ. ಪ್ರತಿದಿನವೂ ಒಂದು ವಿಷಯವನ್ನು ತೆಗೆದುಕೊಂಡು, ಖಚಿತವಾದ ದಾಖಲೆಗಳನ್ನು ಸಂಗ್ರಹಿಸಿ ರಾಜನ ಮುಂದಿಡುತ್ತಿದ್ದ. <br /> <br /> ರಾಜ ಆ ಅಧಿಕಾರಿಗಳನ್ನು, ಮಂತ್ರಿಗಳನ್ನು ಕರೆದು ತನಿಖೆ ಮಾಡಿದಾಗ ಸತ್ಯಸಂಗತಿ ಹೊರಬೀಳುತ್ತಿತ್ತು. ಅವರನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕಿ ಜೈಲಿಗೆ ಸೇರಿಸುತ್ತಿದ್ದರು. ಹೀಗೆಯೇ ಮುಂದುವರೆದರೆ ತಮಗೆ ಉಳಿಗಾಲವಿಲ್ಲವೆಂದು ಉಳಿದ ಮಂತ್ರಿಗಳು, ಅಧಿಕಾರಿಗಳು ಚಿಂತಿಸಿದರು.<br /> <br /> ಮರುದಿನ ಸಂಜೆ ಅವರೆಲ್ಲ ಸೇರಿ ರಾಜನಿಲ್ಲದಾಗ ಆ ಕಾಗೆಯನ್ನು ಕೊಂದು ಹಾಕಿದರು. ಆಗ ಕಾಲಕವೃಕ್ಷೀಯ ಋಷಿ ರಾಜನಿಗೆ ಎಚ್ಚರಿಕೆ ಕೊಡುತ್ತಾನೆ, ಈ ಭ್ರಷ್ಟರು ಮುಂದೆ ಅರಮನೆಯ ಕೆಲಸದವರನ್ನೆಲ್ಲ ಸೇರಿಸಿಕೊಂಡು ನಿನಗೂ ದ್ರೋಹ ಮಾಡುತ್ತಾರೆ . ರಾಜ ಎಚ್ಚೆತ್ತುಕೊಂಡು ಆಡಳಿತವನ್ನು ಬಿಗಿ ಮಾಡಿ, ಭ್ರಷ್ಟರನ್ನು ಶಿಕ್ಷಿಸಿ ವ್ಯವಸ್ಥೆಯನ್ನು ಸರಿಮಾಡಿದ.<br /> <br /> ಇದನ್ನು ನೋಡಿದಾಗ ನಮ್ಮಲ್ಲೂ ಒಬ್ಬರಲ್ಲ, ನೂರಾರು ಕಾಲಕವೃಕ್ಷೀಯ ಋಷಿಗಳು ಬೇಕಿತ್ತು ಎನ್ನಿಸುವುದಿಲ್ಲವೇ? ಅಥವಾ ನಾವೇ ಸಾವಿರಾರು ಜನ ಕಾಲಕವೃಕ್ಷೀಯರಂತಾಗಿ ಭ್ರಷ್ಟರನ್ನು ಬಯಲು ಮಾಡಿ ರಾಷ್ಟ್ರ ರಕ್ಷಣೆ ಮಾಡಬೇಕು ಎನ್ನಿಸುವುದಿಲ್ಲವೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>