<p>ಮೇ 12ರ ಮಧ್ಯಾಹ್ನ 3 ಗಂಟೆ. ವಾರಾಣಸಿಯಲ್ಲಿ ಮತದಾನ ಮುಗಿಯಲು ಇನ್ನೂ ಎರಡು ಗಂಟೆ ಉಳಿದಿತ್ತು. ಕಾಶಿಯಿಂದ ದೆಹಲಿಗೆ ಹೊರಟಿದ್ದ ‘ಕಾಶಿ ವಿಶ್ವನಾಥ ಎಕ್ಸ್ಪ್ರೆಸ್’ ರೈಲಿನ ಬೋಗಿಯೊಂದರಲ್ಲಿ ಬಿರುಸಿನ ಚರ್ಚೆ ನಡೆದಿತ್ತು. ಅಲ್ಲೇ ಮಧ್ಯ ವಯಸ್ಸಿನ ಮುಸ್ಲಿಂ ದಂಪತಿ ಕುಳಿತಿದ್ದರು. ಪತ್ನಿ ಕಣ್ಣಲ್ಲಿ ನೀರು ಹನಿಯುತ್ತಿತ್ತು. ಪತಿ ಅವರನ್ನು ಸಂತೈಸುತ್ತಿದ್ದರು. ‘ಯಕೃತ್ ಕ್ಯಾನ್ಸರ್’ನಿಂದ ನರಳುತ್ತಿರುವ ಅವರು ಎದೆಗುಂದಿದ್ದರು.<br /> <br /> ಎದುರಿನ ಸೀಟಿನಲ್ಲೇ ಮತ್ತೊಬ್ಬ ಮಹಿಳೆ ಇದ್ದರು. ವಾರಾಣಸಿ ಶಾಲೆಯೊಂದರಲ್ಲಿ ಅವರು ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಧರ್ಮ ಮತ್ತು ರಾಜಕಾರಣ ಕುರಿತು ಶಿಕ್ಷಕಿ ಸಹ ಪ್ರಯಾಣಿಕರ ಜತೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ‘ನೋಡಿ ಅವರು ಎಷ್ಟು ಬೇಕಾದರೂ ಮದುವೆ ಆಗಬಹುದು. ಎಷ್ಟಾದರೂ ಮಕ್ಕಳನ್ನು ಮಾಡಿಕೊಳ್ಳಬಹುದು’ ಎಂದು ಮುಸ್ಲಿಂ ದಂಪತಿಯನ್ನು ತೋರಿಸಿ ಹೇಳುತ್ತಿದ್ದರು.<br /> <br /> ‘ಇವೆಲ್ಲವೂ ಕಾಂಗ್ರೆಸ್ ಮೊದಲಿಂದಲೂ ಮಾಡಿಕೊಂಡು ಬಂದಿರುವ ರಾಜಕಾರಣ’ ಎಂದೂ ಆಡಿಕೊಳ್ಳುತ್ತಿದ್ದರು.<br /> ‘ವೋಟಿಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಇದು ಕೊನೆಗೊಳ್ಳಬೇಕು. ಎಲ್ಲರಿಗೂ ಒಂದೇ ಕಾನೂನು ಇರಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಕಾನೂನಾದರೆ ಹೇಗೆ?’ ಎಂದೆಲ್ಲ ಪ್ರಶ್ನಿಸುತ್ತಿದ್ದರು. ‘ನರೇಂದ್ರ ಮೋದಿ ಪ್ರಧಾನಿಯಾದರೆ ‘ಸಮಾನ ನಾಗರಿಕ ಸಂಹಿತೆ’ ಜಾರಿಯಾಗಬಹುದು. ಅದೇ ಉದ್ದೇಶಕ್ಕಾಗಿ ನಾನು ಬೆಳಿಗ್ಗೆ 6 ಗಂಟೆಗೆ ಹೋಗಿ ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದೆ’ ಎಂದರು.<br /> <br /> ಉಳಿದ ಪ್ರಯಾಣಿಕರು ಅವರ ಮಾತಿಗೆ ತಾಳ ಹಾಕುತ್ತಿದ್ದರು. ಮುಸ್ಲಿಂ ದಂಪತಿ ಯಾರ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅವರದೇ ಸಮಸ್ಯೆಯಲ್ಲಿ ಸಿಕ್ಕಿ ಹಣ್ಣಾಗಿದ್ದರು. ದೆಹಲಿಗೆ ಹೋಗಿ ಚಿಕಿತ್ಸೆ ಪಡೆಯುವುದಷ್ಟೇ ಅವರ ಮುಂದಿನ ದಾರಿಯಾಗಿತ್ತು. ಹೀಗಾಗಿ ಅವರಿಗೆ ಹಿಂದೂ–ಮುಸ್ಲಿಂ ಅಥವಾ ಕಾಂಗ್ರೆಸ್– ಮೋದಿ ಯಾವುದೂ ಮುಖ್ಯವಾಗಿರಲಿಲ್ಲ.<br /> <br /> ಅಂದಿನ ಪ್ರಸಂಗವನ್ನು ನೆನಪು ಮಾಡಿಕೊಳ್ಳಲು ಕಾರಣವಿದೆ. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅಭೂತಪೂರ್ವ ಗೆಲುವನ್ನು ನಾನಾ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ‘ಇದು ಅಭಿವೃದ್ಧಿ ಪರ ಜನಮತ’ ಎಂದು ಬಹುತೇಕರು ಹೇಳುತ್ತಿದ್ದಾರೆ. ‘ಮೋದಿ ಅವರ ಬಲಿಷ್ಠ ನಾಯಕತ್ವಕ್ಕೆ ಸಿಕ್ಕ ಮನ್ನಣೆ’ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ.<br /> <br /> ಬಿಜೆಪಿ ಯಶಸ್ಸಿಗೆ ಇವೆರಡೇ ಕಾರಣಗಳಲ್ಲ. ಇನ್ನೂ ಪ್ರಬಲವಾದ ಕಾರಣಗಳಿವೆ. ಇದೇ ಮೊದಲ ಸಲ ಹಿಂದುತ್ವದ ಹೆಸರಿನಲ್ಲಿ ಎಲ್ಲ ಹಿಂದೂಗಳನ್ನು ಒಗ್ಗೂಡಿಸಲಾಗಿದೆ. ಉತ್ತರ ಪ್ರದೇಶದ ಇಂಗ್ಲಿಷ್ ಶಿಕ್ಷಕಿ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸತ್ಯ ಅರಿವಾಗುತ್ತದೆ. ಆ ರಾಜ್ಯದಲ್ಲಿ ಬಿಜೆಪಿ ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಹತ್ತು ಸ್ಥಾನಗಳನ್ನು ಮಾತ್ರ ಪಡೆದಿದೆ. ಈ ಚುನಾವಣೆಯಲ್ಲಿ ಅದರ ಸಾಮರ್ಥ್ಯ ಏಳು ಪಟ್ಟು ಹೆಚ್ಚಾಗಿದೆ. ಹಿಂದೂ ಜಾತಿಗಳು ಅದರಲ್ಲೂ ದಲಿತರು, ಹಿಂದುಳಿದವರು ಕೈ ಹಿಡಿಯದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.<br /> <br /> ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ. ಮೂರು ದಶಕದಿಂದ ದಲಿತರನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿರುವ ಬಹುಜನ ಸಮಾಜ ಪಕ್ಷ ನೆಲ ಕಚ್ಚಿದೆ. ಮಾಯಾವತಿ ಅವರ ದಲಿತರು– ಬ್ರಾಹ್ಮಣರು ಮತ್ತು ಮುಸ್ಲಿಮರ ಸಮೀಕರಣ ಪ್ರಯೋಗ ಸೋತಿದೆ. ಈ ಪ್ರಯೋಗ ಮಾಡಿ ಹದಿನೈದನೇ ಲೋಕಸಭೆಯಲ್ಲಿ ಬಿಎಸ್ಪಿ 20 ಸ್ಥಾನ ಪಡೆದಿತ್ತು.<br /> <br /> ಅಷ್ಟೇ ಅಲ್ಲ, ಹೋದ ಸಲ 23 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದ ಸಮಾಜವಾದಿ ಪಕ್ಷ ಐದು ಸ್ಥಾನಗಳಿಗೆ ಕುಸಿದಿದೆ. ಯಾದವರು ಮುಲಾಯಂ ಸಿಂಗ್ ಅವರನ್ನು ಕೈಬಿಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಜಾತಿ ರಾಜಕಾರಣ ನಡೆಯದಿದ್ದರೂ, ಧರ್ಮ ರಾಜಕಾರಣ ಮೆರೆದಿದೆ.<br /> ಗುಜರಾತ್ ಅಭಿವೃದ್ಧಿ ನೋಡಿ ಮೋದಿ ಅವರನ್ನು ಜನ ಬೆಂಬಲಿಸಿದ್ದರೆ, ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವನ್ನು ಸೋಲಿಸಲು ಯಾವುದೇ ಕಾರಣಗಳಿಲ್ಲ.<br /> <br /> ಒಂಬತ್ತು ವರ್ಷದಲ್ಲಿ ನಿತೀಶ್ ಕುಮಾರ್ ಬೇಕಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದ ಜನ ಅವರನ್ನು ‘ಅಭಿವೃದ್ಧಿ ಪುರುಷ’ ಎಂದೇ ಪರಿಗಣಿಸಿದ್ದಾರೆ. ಜೆಡಿಯು ಸರ್ಕಾರ ಬಂದ ಮೇಲೆ ವಿದ್ಯುತ್ ಪರಿಸ್ಥಿತಿ ಸುಧಾರಿಸಿದೆ. ಹದಗೆಟ್ಟ ರಸ್ತೆಗಳಿಗೆ ಕಾಯಕಲ್ಪ ಮಾಡಲಾಗಿದೆ. ಅಪರಾಧಗಳಿಗೆ ಅಂತ್ಯ ಹಾಡಿ ಜನ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಸಲಾಗಿದೆ. ಕಾನೂನು– ಸುವ್ಯವಸ್ಥೆ ಪಾಲನೆಗೆ ನಿತೀಶ್ ಆದ್ಯತೆ ನೀಡಿದ್ದಾರೆ.<br /> <br /> ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬೈಸಿಕಲ್ಗಳನ್ನು ವಿತರಿಸಿದ್ದಾರೆ. ಬಂಡವಾಳ ಹೂಡಿಕೆ ಗಮನದಲ್ಲಿಟ್ಟುಕೊಂಡೇ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂದು ಕೇಂದ್ರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದು ಸಾಧ್ಯವಾದರೆ ಬಂಡವಾಳ ಹರಿದು ಬರುತ್ತದೆ. ಒಂಬತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಇಷ್ಟೊಂದು ಬದಲಾವಣೆ ತಂದ ಮೇಲೂ ಜನ ಅವರ ಕೈ ಬಿಡುತ್ತಾರೆಂದರೆ ಏನರ್ಥ! ಇದರ ಹಿಂದಿನ ರಾಜಕಾರಣವೇನು?<br /> <br /> ಬಿಹಾರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಮೋಡಿ ಮಾಡಿದ ಮೋದಿ, ಒಡಿಶಾದಲ್ಲಿ ಏಕೆ ಸಫಲವಾಗಲಿಲ್ಲ. ಎಐಎಡಿಎಂಕೆ, ಡಿಎಂಕೆ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡರೂ ತಮಿಳುನಾಡಿನಲ್ಲಿ ಹಿನ್ನಡೆಯಾಗಲು ಕಾರಣವೇನು? ಪಶ್ಚಿಮ ಬಂಗಾಳದ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಎರಡು ಸ್ಥಾನ ಮಾತ್ರ ಪಡೆಯಲು ಸಾಧ್ಯವಾಗಿದ್ದು ಹೇಗೆ?<br /> <br /> ಸೀಮಾಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಜತೆ ಹೊಂದಾಣಿಕೆ ಮಾಡಿಕೊಂಡು 13 ಕ್ಷೇತ್ರ ಪಡೆದರೂ, ಗೆಲುವು ಪಡೆದಿದ್ದು ನಾಲ್ಕರಲ್ಲಿ ಮಾತ್ರ. ಈ ರಾಜ್ಯಗಳಲ್ಲಿ ಏಕೆ ಬಿಜೆಪಿ ಚಮತ್ಕಾರ ಮಾಡಲು ಆಗಲಿಲ್ಲ. ಕರ್ನಾಟಕದಲ್ಲಿ ಕಳೆದ ಸಲಕ್ಕಿಂತ ಎರಡು ಸ್ಥಾನ ಏಕೆ ಕಡಿಮೆ ಆಯಿತು ಎನ್ನುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು?<br /> <br /> ಸರಿಯಾಗಿ ಮೂವತ್ತು ವರ್ಷಗಳ ಹಿಂದೆ ಲೋಕಸಭೆಯಲ್ಲಿ ಬಿಜೆಪಿ ಎರಡೇ ಎರಡು ಸ್ಥಾನ ಪಡೆದಿತ್ತು. ಈಗ 284 ಸ್ಥಾನಗಳನ್ನು ಗೆದ್ದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಮಂದಿರ– ಮಸೀದಿ ವಿವಾದ ಭುಗಿಲೆದ್ದ ಸಮಯದಲ್ಲೂ ಅದಕ್ಕೆ ಇಷ್ಟೊಂದು ಸ್ಥಾನಗಳನ್ನು ಗೆಲ್ಲಲು ಆಗಿರಲಿಲ್ಲ. ಈ ಸಾಧನೆ ಹಿಂದೆ ಖಂಡಿತವಾಗಿಯೂ ಮೋದಿ ಅವರ ಪರಿಶ್ರಮವಿದೆ. ಆ ಬಗ್ಗೆ ಅನುಮಾನ ಬೇಡ. ಆದರೆ, ‘ಇದರಲ್ಲಿ ಮೋದಿ ಪಾತ್ರವೇನು? ಆರ್ಎಸ್ಎಸ್ ಕೊಡುಗೆ ಎಷ್ಟಿದೆ? ಎಂಬ ಬಗ್ಗೆ ವಿಶ್ಲೇಷಣೆ ಆಗಬೇಕಿದೆ’ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರೇ ಹೇಳಿದ್ದಾರೆ.<br /> <br /> ‘ಇದು ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ವಂಶಾಡಳಿತದ ವಿರುದ್ಧ ಜನರು ಕೊಟ್ಟಿರುವ ತೀರ್ಪು’ ಎಂದು ಅಡ್ವಾಣಿ ಸರಿಯಾಗಿಯೇ ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್ ನಾಯಕರು ಒಂದು ವರ್ಷ ಮೊದಲು ಎಚ್ಚೆತ್ತುಕೊಂಡಿದ್ದರೂ ಹೀನಾಯ ಸೋಲಿನಿಂದ ಪಾರಾಗಬಹುದಿತ್ತು. ಸೋನಿಯಾ ಗಾಂಧಿ, ಅವರ ಮಗ ರಾಹುಲ್ ಗಾಂಧಿ ಸ್ವಲ್ಪವೂ ತಲೆ ಕೆಡಿಸಿಕೊಳ್ಳಲಿಲ್ಲ.<br /> <br /> ಸಮರ್ಥ ನಾಯಕತ್ವವಿಲ್ಲದೆ ಕಾಂಗ್ರೆಸ್ ಅನಾಥವಾಯಿತು. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರಂಥ ಪ್ರಬಲ ನಾಯಕರನ್ನು ಕಂಡಿದ್ದ ಈ ಪಕ್ಷ ನೈತಿಕವಾಗಿ ಕುಸಿಯಿತು. ‘ರಾಜಕೀಯ ಸಮರಕ್ಕೆ ಮೊದಲೇ ಅನೇಕರು ಶಸ್ತ್ರತ್ಯಾಗ’ ಮಾಡಿದರು. ಯಾವುದೇ ರಾಜಕೀಯ ಪಕ್ಷಕ್ಕೂ ಇಂಥ ಹೀನಾಯ ಸ್ಥಿತಿ ಬರಬಾರದು. ಬಂದರೆ ಏನಾಗುತ್ತದೆ ಎನ್ನುವುದಕ್ಕೆ 2014ರ ಚುನಾವಣೆ ಸಾಕ್ಷಿಯಾಯಿತು.<br /> <br /> ಮೋದಿ, ಕಾಂಗ್ರೆಸ್ ದೌರ್ಬಲ್ಯಗಳನ್ನು ಸಮರ್ಥವಾಗಿ ಬಳಸಿಕೊಂಡರು. ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಅವರ ದೌರ್ಬಲ್ಯಗಳನ್ನು ತಮ್ಮದೇ ಶೈಲಿಯಲ್ಲಿ ಜನರ ಮುಂದೆ ಮಂಡಿಸಿದರು. ಮೋದಿ ಅವರನ್ನು ಯಾವುದೇ ರೀತಿಯಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಯುವರಾಜ, ಭಾವಿ ಪ್ರಧಾನಿಗೆ ಸಮಾನವಾಗಿ ನಿಲ್ಲಲಿಲ್ಲ. ದೇಶದ ಬಹುತೇಕ ಜನರು ಕಂಡರಿಯದ ಗುಜರಾತ್ ಅಭಿವೃದ್ಧಿ ಕುರಿತು ಬೊಬ್ಬೆ ಹಾಕಿದರು. ದೇಶದ ಜನರನ್ನು ನಂಬಿಸಿದರು.<br /> <br /> ಸೋನಿಯಾ ಹಾಗೂ ರಾಹುಲ್ ಈಗಾಗಲೇ ಸೋಲಿನ ನೈತಿಕ ಹೊಣೆ ಹೊತ್ತಿದ್ದಾರೆ. ಸೋಲು– ಗೆಲುವಿನ ಪರಾಮರ್ಶೆಗೆ ಸೋಮವಾರ ಕಾಂಗ್ರೆಸ್ ಕಾರ್ಯಕಾರಿಣಿ ಸೇರುತ್ತಿದೆ. ಆ ಸಭೆಯಲ್ಲಿ ಸೋನಿಯಾ ರಾಜೀನಾಮೆ ಪ್ರಸ್ತಾವವನ್ನು ಮುಂದಿಡಬಹುದು. ಅದು ಬೇರೆ ವಿಷಯ. ಈಗ ಕಾಂಗ್ರೆಸ್ ನಾಯಕರ ಮುಂದಿರುವುದು, ಹೇಗೆ ಪಕ್ಷವನ್ನು ಮತ್ತೆ ಕಟ್ಟುವುದು ಎಂಬ ಪ್ರಶ್ನೆ.<br /> <br /> ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆಯದೆ ಇರಬಹುದು. ಆದರೆ, ಮತದಾರರ ಬೆಂಬಲವನ್ನು ಸಂಪೂರ್ಣವಾಗಿ ಕಳೆದುಕೊಂಡಿಲ್ಲ. ಬಿಜೆಪಿ ಶೇಕಡ 31ರಷ್ಟು ಮತದಾರರ ಬೆಂಬಲ ಪಡೆದಿದೆ. ಸೋನಿಯಾ ಬಳಗಕ್ಕೆ ಶೇ 19.3ರಷ್ಟು ಮತಗಳು ಬಿದ್ದಿವೆ. ಇದೊಂದೇ ಕಾಂಗ್ರೆಸ್ ಹೈಕಮಾಂಡ್ಗೆ ಸಮಾಧಾನದ ವಿಷಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೇ 12ರ ಮಧ್ಯಾಹ್ನ 3 ಗಂಟೆ. ವಾರಾಣಸಿಯಲ್ಲಿ ಮತದಾನ ಮುಗಿಯಲು ಇನ್ನೂ ಎರಡು ಗಂಟೆ ಉಳಿದಿತ್ತು. ಕಾಶಿಯಿಂದ ದೆಹಲಿಗೆ ಹೊರಟಿದ್ದ ‘ಕಾಶಿ ವಿಶ್ವನಾಥ ಎಕ್ಸ್ಪ್ರೆಸ್’ ರೈಲಿನ ಬೋಗಿಯೊಂದರಲ್ಲಿ ಬಿರುಸಿನ ಚರ್ಚೆ ನಡೆದಿತ್ತು. ಅಲ್ಲೇ ಮಧ್ಯ ವಯಸ್ಸಿನ ಮುಸ್ಲಿಂ ದಂಪತಿ ಕುಳಿತಿದ್ದರು. ಪತ್ನಿ ಕಣ್ಣಲ್ಲಿ ನೀರು ಹನಿಯುತ್ತಿತ್ತು. ಪತಿ ಅವರನ್ನು ಸಂತೈಸುತ್ತಿದ್ದರು. ‘ಯಕೃತ್ ಕ್ಯಾನ್ಸರ್’ನಿಂದ ನರಳುತ್ತಿರುವ ಅವರು ಎದೆಗುಂದಿದ್ದರು.<br /> <br /> ಎದುರಿನ ಸೀಟಿನಲ್ಲೇ ಮತ್ತೊಬ್ಬ ಮಹಿಳೆ ಇದ್ದರು. ವಾರಾಣಸಿ ಶಾಲೆಯೊಂದರಲ್ಲಿ ಅವರು ಇಂಗ್ಲಿಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಧರ್ಮ ಮತ್ತು ರಾಜಕಾರಣ ಕುರಿತು ಶಿಕ್ಷಕಿ ಸಹ ಪ್ರಯಾಣಿಕರ ಜತೆ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ‘ನೋಡಿ ಅವರು ಎಷ್ಟು ಬೇಕಾದರೂ ಮದುವೆ ಆಗಬಹುದು. ಎಷ್ಟಾದರೂ ಮಕ್ಕಳನ್ನು ಮಾಡಿಕೊಳ್ಳಬಹುದು’ ಎಂದು ಮುಸ್ಲಿಂ ದಂಪತಿಯನ್ನು ತೋರಿಸಿ ಹೇಳುತ್ತಿದ್ದರು.<br /> <br /> ‘ಇವೆಲ್ಲವೂ ಕಾಂಗ್ರೆಸ್ ಮೊದಲಿಂದಲೂ ಮಾಡಿಕೊಂಡು ಬಂದಿರುವ ರಾಜಕಾರಣ’ ಎಂದೂ ಆಡಿಕೊಳ್ಳುತ್ತಿದ್ದರು.<br /> ‘ವೋಟಿಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆ. ಇದು ಕೊನೆಗೊಳ್ಳಬೇಕು. ಎಲ್ಲರಿಗೂ ಒಂದೇ ಕಾನೂನು ಇರಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಕಾನೂನಾದರೆ ಹೇಗೆ?’ ಎಂದೆಲ್ಲ ಪ್ರಶ್ನಿಸುತ್ತಿದ್ದರು. ‘ನರೇಂದ್ರ ಮೋದಿ ಪ್ರಧಾನಿಯಾದರೆ ‘ಸಮಾನ ನಾಗರಿಕ ಸಂಹಿತೆ’ ಜಾರಿಯಾಗಬಹುದು. ಅದೇ ಉದ್ದೇಶಕ್ಕಾಗಿ ನಾನು ಬೆಳಿಗ್ಗೆ 6 ಗಂಟೆಗೆ ಹೋಗಿ ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದೆ’ ಎಂದರು.<br /> <br /> ಉಳಿದ ಪ್ರಯಾಣಿಕರು ಅವರ ಮಾತಿಗೆ ತಾಳ ಹಾಕುತ್ತಿದ್ದರು. ಮುಸ್ಲಿಂ ದಂಪತಿ ಯಾರ ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅವರದೇ ಸಮಸ್ಯೆಯಲ್ಲಿ ಸಿಕ್ಕಿ ಹಣ್ಣಾಗಿದ್ದರು. ದೆಹಲಿಗೆ ಹೋಗಿ ಚಿಕಿತ್ಸೆ ಪಡೆಯುವುದಷ್ಟೇ ಅವರ ಮುಂದಿನ ದಾರಿಯಾಗಿತ್ತು. ಹೀಗಾಗಿ ಅವರಿಗೆ ಹಿಂದೂ–ಮುಸ್ಲಿಂ ಅಥವಾ ಕಾಂಗ್ರೆಸ್– ಮೋದಿ ಯಾವುದೂ ಮುಖ್ಯವಾಗಿರಲಿಲ್ಲ.<br /> <br /> ಅಂದಿನ ಪ್ರಸಂಗವನ್ನು ನೆನಪು ಮಾಡಿಕೊಳ್ಳಲು ಕಾರಣವಿದೆ. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅಭೂತಪೂರ್ವ ಗೆಲುವನ್ನು ನಾನಾ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ‘ಇದು ಅಭಿವೃದ್ಧಿ ಪರ ಜನಮತ’ ಎಂದು ಬಹುತೇಕರು ಹೇಳುತ್ತಿದ್ದಾರೆ. ‘ಮೋದಿ ಅವರ ಬಲಿಷ್ಠ ನಾಯಕತ್ವಕ್ಕೆ ಸಿಕ್ಕ ಮನ್ನಣೆ’ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ.<br /> <br /> ಬಿಜೆಪಿ ಯಶಸ್ಸಿಗೆ ಇವೆರಡೇ ಕಾರಣಗಳಲ್ಲ. ಇನ್ನೂ ಪ್ರಬಲವಾದ ಕಾರಣಗಳಿವೆ. ಇದೇ ಮೊದಲ ಸಲ ಹಿಂದುತ್ವದ ಹೆಸರಿನಲ್ಲಿ ಎಲ್ಲ ಹಿಂದೂಗಳನ್ನು ಒಗ್ಗೂಡಿಸಲಾಗಿದೆ. ಉತ್ತರ ಪ್ರದೇಶದ ಇಂಗ್ಲಿಷ್ ಶಿಕ್ಷಕಿ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸತ್ಯ ಅರಿವಾಗುತ್ತದೆ. ಆ ರಾಜ್ಯದಲ್ಲಿ ಬಿಜೆಪಿ ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಹತ್ತು ಸ್ಥಾನಗಳನ್ನು ಮಾತ್ರ ಪಡೆದಿದೆ. ಈ ಚುನಾವಣೆಯಲ್ಲಿ ಅದರ ಸಾಮರ್ಥ್ಯ ಏಳು ಪಟ್ಟು ಹೆಚ್ಚಾಗಿದೆ. ಹಿಂದೂ ಜಾತಿಗಳು ಅದರಲ್ಲೂ ದಲಿತರು, ಹಿಂದುಳಿದವರು ಕೈ ಹಿಡಿಯದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.<br /> <br /> ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ. ಮೂರು ದಶಕದಿಂದ ದಲಿತರನ್ನು ನಂಬಿಕೊಂಡು ರಾಜಕಾರಣ ಮಾಡುತ್ತಿರುವ ಬಹುಜನ ಸಮಾಜ ಪಕ್ಷ ನೆಲ ಕಚ್ಚಿದೆ. ಮಾಯಾವತಿ ಅವರ ದಲಿತರು– ಬ್ರಾಹ್ಮಣರು ಮತ್ತು ಮುಸ್ಲಿಮರ ಸಮೀಕರಣ ಪ್ರಯೋಗ ಸೋತಿದೆ. ಈ ಪ್ರಯೋಗ ಮಾಡಿ ಹದಿನೈದನೇ ಲೋಕಸಭೆಯಲ್ಲಿ ಬಿಎಸ್ಪಿ 20 ಸ್ಥಾನ ಪಡೆದಿತ್ತು.<br /> <br /> ಅಷ್ಟೇ ಅಲ್ಲ, ಹೋದ ಸಲ 23 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದ ಸಮಾಜವಾದಿ ಪಕ್ಷ ಐದು ಸ್ಥಾನಗಳಿಗೆ ಕುಸಿದಿದೆ. ಯಾದವರು ಮುಲಾಯಂ ಸಿಂಗ್ ಅವರನ್ನು ಕೈಬಿಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಜಾತಿ ರಾಜಕಾರಣ ನಡೆಯದಿದ್ದರೂ, ಧರ್ಮ ರಾಜಕಾರಣ ಮೆರೆದಿದೆ.<br /> ಗುಜರಾತ್ ಅಭಿವೃದ್ಧಿ ನೋಡಿ ಮೋದಿ ಅವರನ್ನು ಜನ ಬೆಂಬಲಿಸಿದ್ದರೆ, ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವನ್ನು ಸೋಲಿಸಲು ಯಾವುದೇ ಕಾರಣಗಳಿಲ್ಲ.<br /> <br /> ಒಂಬತ್ತು ವರ್ಷದಲ್ಲಿ ನಿತೀಶ್ ಕುಮಾರ್ ಬೇಕಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಜ್ಯದ ಜನ ಅವರನ್ನು ‘ಅಭಿವೃದ್ಧಿ ಪುರುಷ’ ಎಂದೇ ಪರಿಗಣಿಸಿದ್ದಾರೆ. ಜೆಡಿಯು ಸರ್ಕಾರ ಬಂದ ಮೇಲೆ ವಿದ್ಯುತ್ ಪರಿಸ್ಥಿತಿ ಸುಧಾರಿಸಿದೆ. ಹದಗೆಟ್ಟ ರಸ್ತೆಗಳಿಗೆ ಕಾಯಕಲ್ಪ ಮಾಡಲಾಗಿದೆ. ಅಪರಾಧಗಳಿಗೆ ಅಂತ್ಯ ಹಾಡಿ ಜನ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಸಲಾಗಿದೆ. ಕಾನೂನು– ಸುವ್ಯವಸ್ಥೆ ಪಾಲನೆಗೆ ನಿತೀಶ್ ಆದ್ಯತೆ ನೀಡಿದ್ದಾರೆ.<br /> <br /> ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದಾರೆ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬೈಸಿಕಲ್ಗಳನ್ನು ವಿತರಿಸಿದ್ದಾರೆ. ಬಂಡವಾಳ ಹೂಡಿಕೆ ಗಮನದಲ್ಲಿಟ್ಟುಕೊಂಡೇ ಅವರು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಕೊಡಬೇಕೆಂದು ಕೇಂದ್ರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇದು ಸಾಧ್ಯವಾದರೆ ಬಂಡವಾಳ ಹರಿದು ಬರುತ್ತದೆ. ಒಂಬತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಇಷ್ಟೊಂದು ಬದಲಾವಣೆ ತಂದ ಮೇಲೂ ಜನ ಅವರ ಕೈ ಬಿಡುತ್ತಾರೆಂದರೆ ಏನರ್ಥ! ಇದರ ಹಿಂದಿನ ರಾಜಕಾರಣವೇನು?<br /> <br /> ಬಿಹಾರ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಮೋಡಿ ಮಾಡಿದ ಮೋದಿ, ಒಡಿಶಾದಲ್ಲಿ ಏಕೆ ಸಫಲವಾಗಲಿಲ್ಲ. ಎಐಎಡಿಎಂಕೆ, ಡಿಎಂಕೆ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡರೂ ತಮಿಳುನಾಡಿನಲ್ಲಿ ಹಿನ್ನಡೆಯಾಗಲು ಕಾರಣವೇನು? ಪಶ್ಚಿಮ ಬಂಗಾಳದ 41 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಎರಡು ಸ್ಥಾನ ಮಾತ್ರ ಪಡೆಯಲು ಸಾಧ್ಯವಾಗಿದ್ದು ಹೇಗೆ?<br /> <br /> ಸೀಮಾಂಧ್ರ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಜತೆ ಹೊಂದಾಣಿಕೆ ಮಾಡಿಕೊಂಡು 13 ಕ್ಷೇತ್ರ ಪಡೆದರೂ, ಗೆಲುವು ಪಡೆದಿದ್ದು ನಾಲ್ಕರಲ್ಲಿ ಮಾತ್ರ. ಈ ರಾಜ್ಯಗಳಲ್ಲಿ ಏಕೆ ಬಿಜೆಪಿ ಚಮತ್ಕಾರ ಮಾಡಲು ಆಗಲಿಲ್ಲ. ಕರ್ನಾಟಕದಲ್ಲಿ ಕಳೆದ ಸಲಕ್ಕಿಂತ ಎರಡು ಸ್ಥಾನ ಏಕೆ ಕಡಿಮೆ ಆಯಿತು ಎನ್ನುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು?<br /> <br /> ಸರಿಯಾಗಿ ಮೂವತ್ತು ವರ್ಷಗಳ ಹಿಂದೆ ಲೋಕಸಭೆಯಲ್ಲಿ ಬಿಜೆಪಿ ಎರಡೇ ಎರಡು ಸ್ಥಾನ ಪಡೆದಿತ್ತು. ಈಗ 284 ಸ್ಥಾನಗಳನ್ನು ಗೆದ್ದು ಸ್ವಂತ ಶಕ್ತಿ ಮೇಲೆ ಸರ್ಕಾರ ರಚನೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಮಂದಿರ– ಮಸೀದಿ ವಿವಾದ ಭುಗಿಲೆದ್ದ ಸಮಯದಲ್ಲೂ ಅದಕ್ಕೆ ಇಷ್ಟೊಂದು ಸ್ಥಾನಗಳನ್ನು ಗೆಲ್ಲಲು ಆಗಿರಲಿಲ್ಲ. ಈ ಸಾಧನೆ ಹಿಂದೆ ಖಂಡಿತವಾಗಿಯೂ ಮೋದಿ ಅವರ ಪರಿಶ್ರಮವಿದೆ. ಆ ಬಗ್ಗೆ ಅನುಮಾನ ಬೇಡ. ಆದರೆ, ‘ಇದರಲ್ಲಿ ಮೋದಿ ಪಾತ್ರವೇನು? ಆರ್ಎಸ್ಎಸ್ ಕೊಡುಗೆ ಎಷ್ಟಿದೆ? ಎಂಬ ಬಗ್ಗೆ ವಿಶ್ಲೇಷಣೆ ಆಗಬೇಕಿದೆ’ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರೇ ಹೇಳಿದ್ದಾರೆ.<br /> <br /> ‘ಇದು ಕಾಂಗ್ರೆಸ್ ದುರಾಡಳಿತ, ಭ್ರಷ್ಟಾಚಾರ, ವಂಶಾಡಳಿತದ ವಿರುದ್ಧ ಜನರು ಕೊಟ್ಟಿರುವ ತೀರ್ಪು’ ಎಂದು ಅಡ್ವಾಣಿ ಸರಿಯಾಗಿಯೇ ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್ ನಾಯಕರು ಒಂದು ವರ್ಷ ಮೊದಲು ಎಚ್ಚೆತ್ತುಕೊಂಡಿದ್ದರೂ ಹೀನಾಯ ಸೋಲಿನಿಂದ ಪಾರಾಗಬಹುದಿತ್ತು. ಸೋನಿಯಾ ಗಾಂಧಿ, ಅವರ ಮಗ ರಾಹುಲ್ ಗಾಂಧಿ ಸ್ವಲ್ಪವೂ ತಲೆ ಕೆಡಿಸಿಕೊಳ್ಳಲಿಲ್ಲ.<br /> <br /> ಸಮರ್ಥ ನಾಯಕತ್ವವಿಲ್ಲದೆ ಕಾಂಗ್ರೆಸ್ ಅನಾಥವಾಯಿತು. ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಅವರಂಥ ಪ್ರಬಲ ನಾಯಕರನ್ನು ಕಂಡಿದ್ದ ಈ ಪಕ್ಷ ನೈತಿಕವಾಗಿ ಕುಸಿಯಿತು. ‘ರಾಜಕೀಯ ಸಮರಕ್ಕೆ ಮೊದಲೇ ಅನೇಕರು ಶಸ್ತ್ರತ್ಯಾಗ’ ಮಾಡಿದರು. ಯಾವುದೇ ರಾಜಕೀಯ ಪಕ್ಷಕ್ಕೂ ಇಂಥ ಹೀನಾಯ ಸ್ಥಿತಿ ಬರಬಾರದು. ಬಂದರೆ ಏನಾಗುತ್ತದೆ ಎನ್ನುವುದಕ್ಕೆ 2014ರ ಚುನಾವಣೆ ಸಾಕ್ಷಿಯಾಯಿತು.<br /> <br /> ಮೋದಿ, ಕಾಂಗ್ರೆಸ್ ದೌರ್ಬಲ್ಯಗಳನ್ನು ಸಮರ್ಥವಾಗಿ ಬಳಸಿಕೊಂಡರು. ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಅವರ ದೌರ್ಬಲ್ಯಗಳನ್ನು ತಮ್ಮದೇ ಶೈಲಿಯಲ್ಲಿ ಜನರ ಮುಂದೆ ಮಂಡಿಸಿದರು. ಮೋದಿ ಅವರನ್ನು ಯಾವುದೇ ರೀತಿಯಲ್ಲಿ ಕಟ್ಟಿ ಹಾಕಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಯುವರಾಜ, ಭಾವಿ ಪ್ರಧಾನಿಗೆ ಸಮಾನವಾಗಿ ನಿಲ್ಲಲಿಲ್ಲ. ದೇಶದ ಬಹುತೇಕ ಜನರು ಕಂಡರಿಯದ ಗುಜರಾತ್ ಅಭಿವೃದ್ಧಿ ಕುರಿತು ಬೊಬ್ಬೆ ಹಾಕಿದರು. ದೇಶದ ಜನರನ್ನು ನಂಬಿಸಿದರು.<br /> <br /> ಸೋನಿಯಾ ಹಾಗೂ ರಾಹುಲ್ ಈಗಾಗಲೇ ಸೋಲಿನ ನೈತಿಕ ಹೊಣೆ ಹೊತ್ತಿದ್ದಾರೆ. ಸೋಲು– ಗೆಲುವಿನ ಪರಾಮರ್ಶೆಗೆ ಸೋಮವಾರ ಕಾಂಗ್ರೆಸ್ ಕಾರ್ಯಕಾರಿಣಿ ಸೇರುತ್ತಿದೆ. ಆ ಸಭೆಯಲ್ಲಿ ಸೋನಿಯಾ ರಾಜೀನಾಮೆ ಪ್ರಸ್ತಾವವನ್ನು ಮುಂದಿಡಬಹುದು. ಅದು ಬೇರೆ ವಿಷಯ. ಈಗ ಕಾಂಗ್ರೆಸ್ ನಾಯಕರ ಮುಂದಿರುವುದು, ಹೇಗೆ ಪಕ್ಷವನ್ನು ಮತ್ತೆ ಕಟ್ಟುವುದು ಎಂಬ ಪ್ರಶ್ನೆ.<br /> <br /> ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆಯದೆ ಇರಬಹುದು. ಆದರೆ, ಮತದಾರರ ಬೆಂಬಲವನ್ನು ಸಂಪೂರ್ಣವಾಗಿ ಕಳೆದುಕೊಂಡಿಲ್ಲ. ಬಿಜೆಪಿ ಶೇಕಡ 31ರಷ್ಟು ಮತದಾರರ ಬೆಂಬಲ ಪಡೆದಿದೆ. ಸೋನಿಯಾ ಬಳಗಕ್ಕೆ ಶೇ 19.3ರಷ್ಟು ಮತಗಳು ಬಿದ್ದಿವೆ. ಇದೊಂದೇ ಕಾಂಗ್ರೆಸ್ ಹೈಕಮಾಂಡ್ಗೆ ಸಮಾಧಾನದ ವಿಷಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>