<p>ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲಿ ಕುಳಿತು ಯಾವ ಅಂತರ್ಜಾಲ ತಾಣಕ್ಕೆ ಹೋದರೂ ಎರಡು ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಒಂದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ವಿಶಿಷ್ಟ ಗುರುತು ಪ್ರಾಧಿಕಾರ (ಆಧಾರ್) ಮುಖ್ಯಸ್ಥರಾಗಿದ್ದ ನಂದನ್ ನಿಲೇಕಣಿ ಅವರದ್ದು. ಮತ್ತೊಂದು ಬಿಜೆಪಿ ಸಂಸದ ಅನಂತಕುಮಾರ್ ಅವರದ್ದು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಇವುಗಳ ಪುನರಾವರ್ತನೆಯ ಪ್ರಮಾಣ ಕಡಿಮೆಯಾಗಿದೆ.<br /> <br /> ಒಂದೊಂದು ರಿಫ್ರೆಶ್ನಲ್ಲಿಯೂ ಎಲ್ಲಾ ವೆಬ್ಸೈಟ್ಗಳ, ವೆಬ್ಪುಟಗಳ ಓದುಗನ ಕಣ್ಣು ಬೀಳಲೇಬೇಕಾದ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜಾಹೀರಾತುಗಳು ಎರಡು ವಿಷಯಗಳನ್ನು ಹೇಳುತ್ತಿದ್ದವು. ಮೊದಲನೆಯದ್ದು 2014ರದ್ದು ನಿಜವಾದ ವೆಬ್ 2.0 ಚುನಾವಣೆ. ಎರಡನೆಯದ್ದು ನಂದನ್ ನಿಲೇಕಣಿ ಮತ್ತು ಅನಂತಕುಮಾರ್ ಇಬ್ಬರೂ ಗುರಿಯಿಟ್ಟ ಮತದಾರರ ವರ್ಗ ಒಂದೇ.<br /> <br /> ಭಾರತದ ರಾಜಕೀಯ ಸಂವಹನಕ್ಕೆ ಅದರಲ್ಲೂ ಮುಖ್ಯವಾಗಿ ಚುನಾವಣಾ ಪ್ರಚಾರಕ್ಕೆ ಇಂಟರ್ನೆಟ್ ಪ್ರವೇಶಿಸಿದ್ದು 2004ರಲ್ಲಿ. ಅದಕ್ಕೂ ಮೊದಲು ಕೆಲವು ಪಕ್ಷಗಳಿಗೆ ವೆಬ್ಸೈಟ್ಗಳು ಇದ್ದವಾದರೂ ಮತದಾರರನ್ನು ಸೆಳೆಯುವುದಕ್ಕೆ ಇದನ್ನೊಂದು ಮಾರ್ಗ ಅಂತ ಯಾರೂ ಪರಿಗಣಿಸಿದಂತಿರಲಿಲ್ಲ. 2004ರಲ್ಲಿ ಬಿಜೆಪಿ ತನ್ನ ‘ಭಾರತ ಪ್ರಕಾಶಿಸುತ್ತಿದೆ’ ಪ್ರಚಾರಾಂದೋಲನವನ್ನು ಇಂಟರ್ನೆಟ್ಗೂ ವಿಸ್ತರಿಸಿತು. ಆಗಲೂ ಇದು ಗಮನಸೆಳೆಯುವಂಥ ಪ್ರಮಾಣದಲ್ಲಿರಲಿಲ್ಲ.<br /> <br /> ಅದಕ್ಕೆ ನಮ್ಮ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಡಿಮೆ ಇದ್ದದ್ದೂ ಒಂದು ಕಾರಣವಾಗಿರಬಹುದು. 2009ರ ಲೋಕಸಭಾ ಚುನಾವಣೆಗೆ ವೆಬ್ 2.0 ತಂತ್ರಜ್ಞಾನ ಬ್ಲಾಗ್ ಮತ್ತು ವೆಬ್ಸೈಟ್ಗಳ ಬಳಕೆ ಹೆಚ್ಚುವುದರಲ್ಲಿ ಕಾಣಿಸಿಕೊಂಡಿತು. ಆಗ ಭಾವಿ ಪ್ರಧಾನಿ ಎಂದು ಬಿಂಬಿತವಾಗಿದ್ದ ಎಲ್.ಕೆ.ಅಡ್ವಾಣಿ ಬ್ಲಾಗಿಂಗ್ ಮೂಲಕ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದರು. ಬಹುಶಃ ಈಗಲೂ ನಿಯಮಿತವಾಗಿ ಬ್ಲಾಗ್ ಮಾಡುವ ಕೆಲವೇ ರಾಜಕಾರಣಿಗಳಲ್ಲಿ ಅವರೂ ಒಬ್ಬರು.</p>.<p>ಸಾಮಾಜಿಕ ಜಾಲ ತಾಣಗಳ ಕಟಕಿ ಪ್ರಯೋಗಕ್ಕೆ ಬಲಿಪಶುವಾದ ಮೊದಲ ರಾಜಕಾರಣಿಯೂ ಬಹುಶಃ ಅಡ್ವಾಣಿಯವರೇ ಇರಬಹುದೇನೋ. 2009ರಲ್ಲಿ ಎನ್ಡಿಎ ಸೋಲುಂಡ ಮೇಲೆ ಅವರನ್ನು Former future Prime Minister of India ಎಂದು ಕೆಲ ಬ್ಲಾಗಿಗರು ಸಂಬೋಧಿಸುತ್ತಿದ್ದರು. ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಈ ಕಟಕಿಯ ಖ್ಯಾತಿಯನ್ನು ಮೋದಿ, ರಾಹುಲ್ ಮತ್ತು ಕೇಜ್ರಿವಾಲ್ ಕ್ರಮವಾಗಿ ‘ಪೇಕು’, ‘ಪಪ್ಪು’ ಮತ್ತು ‘ಕ್ರೇಜಿವಾಲ್’ ಎಂಬ ಅಡ್ಡಹೆಸರುಗಳಲ್ಲಿ ಹಂಚಿಕೊಂಡಿದ್ದಾರೆ.<br /> <br /> ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿತು. 2004ರಲ್ಲಿ ಕೇವಲ ನಾಲ್ಕು ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಈಗ 20.5 ಕೋಟಿಗೆ ಏರಿದೆ ಎಂದು ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳುತ್ತಿದೆ. ಹಾಗೆಯೇ ಈ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ಮೊಬೈಲ್ನಲ್ಲಿ ಇಂಟರ್ ನೆಟ್ ಬಳಸುವವರ ಸಂಖ್ಯೆಯೇ 15.5 ಕೋಟಿಯಷ್ಟಿರುತ್ತದೆ ಎಂದು ಊಹಿಸಲಾಗುತ್ತಿದೆ.</p>.<p>ಕಳೆದ ವರ್ಷದ ಅಂತ್ಯದ ವೇಳೆಗೆ ಇದು 10.5 ಕೋಟಿಯಷ್ಟಿತ್ತು. ಇದರಲ್ಲಿ 8.5ಕೋಟಿ ಬಳಕೆದಾರರು ನಗರ ಪ್ರದೇಶಗಳಲ್ಲಿದ್ದರು. ಬಹುಶಃ ಈ ಅಂಕಿ–ಅಂಶಗಳೇ ಈ ಬಾರಿಯ ಚುನಾವಣೆಯಲ್ಲಿ ವೆಬ್ 2.0 ತಂತ್ರಜ್ಞಾನ ಭಾರೀ ಪ್ರಮಾಣದಲ್ಲಿ ರಾಜಕೀಯ ಸಂವಹನಕ್ಕೆ ಬಳಕೆಯಾಗುತ್ತಿರುವುದರ ಕಾರಣವನ್ನೂ ಹೇಳುತ್ತಿದೆ.<br /> <br /> ಕಳೆದ ಐದು ವರ್ಷಗಳ ಅವಧಿಯಲ್ಲಿ ಇಂಟರ್ನೆಟ್ ಒಂದು ರಾಜಕೀಯ ಸಂವಹನದ ಮಾಧ್ಯಮವಾಗಿ ಬದಲಾದುದಕ್ಕೆ ಹಲವು ಉದಾಹರಣೆಗಳಿವೆ. ಅಣ್ಣಾ ಹಜಾರೆ ನೇತೃತ್ವದ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ, ‘ನರೇಂದ್ರ ಮೋದಿ ಸಾಧಿತ ಗುಜರಾತ್ ಅಭಿವೃದ್ಧಿ ಕಥನ’ಗಳು ಸಾಮಾಜಿಕ ಜಾಲತಾಣಗಳಿಂದಾಗಿಯೇ ಹೆಚ್ಚು ಪ್ರಚಾರಕ್ಕೆ ಬಂದವು. ಹಾಗೆಯೇ ರಾಡಿಯಾ ಟೇಪ್ ಹಗರಣ ಹೊರಬರಲು ಕಾರಣವಾದದ್ದೂ ಇದೆ ಸಾಮಾಜಿಕ ಜಾಲತಾಣಗಳು.</p>.<p>ಇವು ಎಷ್ಟರ ಮಟ್ಟಿಗೆ ಶಕ್ತವಾಗಿದ್ದವೆಂದರೆ ಈಗ ‘ಪಾರಂಪರಿಕ ಮಾಧ್ಯಮ’ಗಳಾಗಿಬಿಟ್ಟಿರುವ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಸುದ್ದಿಗಾರಿಕೆಯ ವಿಧಾನದ ಮೇಲೂ ಪರಿಣಾಮ ಬೀರುತ್ತಿವೆ. ಈ ಎಲ್ಲಾ ಬದಲಾವಣೆಗಳಿಗೆ ಕಾರಣವಾಗಿರುವ ವರ್ಗ ಈಗ ಒಂದು ದೊಡ್ಡ ವೋಟ್ ಬ್ಯಾಂಕ್ ಕೂಡಾ ಹೌದು. ಅತ್ಯಂತ ಹೆಚ್ಚು ಇಂಟರ್ನೆಟ್ ಬಳಕೆದಾರ ನಗರವಾಗಿರುವ ಬೆಂಗಳೂರಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಯಾರೇ ಆದರೂ ಈ ವರ್ಗವನ್ನು ಆಕರ್ಷಿಸಲು ಪ್ರಯತ್ನಿಸುವುದು ಸಹಜ ಎಂದು ಭಾವಿಸಬಹುದೇ?<br /> <br /> ಈಗ ನಮ್ಮ ಕಣ್ಣ ಮುಂದಿರುವ ವಾತಾವರಣವನ್ನು ನೋಡಿದರೆ ಈ ಪ್ರಶ್ನೆಗೆ ನೇತ್ಯಾತ್ಮಕವಾಗಿಯಷ್ಟೇ ಉತ್ತರಿಸಲು ಸಾಧ್ಯ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಉಳಿದೆರಡು ಕ್ಷೇತ್ರಗಳಲ್ಲಾಗಲೀ ಹಾಗೆಯೇ ಇಂಟರ್ನೆಟ್ ಬಳಕೆಯ ಮಟ್ಟಿಗೆ ಬೆಂಗಳೂರು ದಕ್ಷಿಣದಂಥದ್ದೇ ವಾತಾವರಣವನ್ನು ಹೊಂದಿರುವ ಮೈಸೂರು ಮತ್ತು ಮಂಗಳೂರುಗಳಲ್ಲಿ ಇಂಥದ್ದೊಂದು ವೆಬ್ ಪ್ರಚಾರದ ಹುಮ್ಮಸ್ಸು ಕಾಣಿಸುತ್ತಿಲ್ಲ. ಇದಕ್ಕೆ ಟಿಕೆಟ್ ಹಂಚಿಕೆಯೂ ಒಂದು ಕಾರಣವಿರಬಹುದು. ಆದರೆ ಅದಕ್ಕಿಂತ ಮುಖ್ಯವಾದ ಸಾಮಾಜಿಕ–ರಾಜಕೀಯ ಕಾರಣಗಳಿವೆ.<br /> ಭಾರತದ ಮಟ್ಟಿಗೆ ನವ ಮಾಧ್ಯಮ ಒಂದು ರೀತಿಯಲ್ಲಿ ಸಂಕುಚಿತ ಬಲಪಂಥೀಯ ರಾಷ್ಟ್ರೀಯತೆಯ ಬಹುಮುಖ್ಯ ವಾಹಕ.</p>.<p>ಈ ಮಾಧ್ಯಮದ ಸಹಜ ಬೆಳವಣಿಗೆಯ ಹಾದಿಯಲ್ಲಿಯೇ ಇಂಥದ್ದೊಂದು ರಾಜಕೀಯ ಚಿಂತನೆ ಅದರೊಳಕ್ಕೆ ಸೇರಿಕೊಂಡುಬಿಟ್ಟಿದೆ. ಇದಕ್ಕೆ ಮುಖ್ಯಕಾರಣ ಈ ಮಾಧ್ಯಮ ಮೊದಲು ಬಳಕೆಗೆ ಬಂದ ಚಾರಿತ್ರಿಕ ಕಾಲಘಟ್ಟ. ಈ ಮಾಧ್ಯಮದ ಆರಂಭಿಕ ಬಳಕೆದಾರರೆಲ್ಲಾ ಆರ್ಥಿಕ ಉದಾರೀಕರಣದ ಫಲಾನುಭವಿಗಳು. ದೇಶಬಿಟ್ಟು ಹೊರಗಿದ್ದು ಒಂದು ಬಗೆಯ ಅನ್ಯತೆಯನ್ನು ಎದುರಿಸುತ್ತಿದ್ದ ಅನಿವಾಸಿ ಭಾರತೀಯರು. ಈ ವರ್ಗದಲ್ಲಿ ಜಾತಿ ಶ್ರೇಣಿಯ ಉನ್ನತ ಹಂತದಿಂದ ಬಂದವರೇ ಹೆಚ್ಚಿದ್ದರು.<br /> <br /> ಕಾಂಗ್ರೆಸ್ನ ‘ಸಾಮಾಜಿಕ ನ್ಯಾಯ’ದ ರಾಜಕಾರಣದಲ್ಲಿ ತಾವು ಕಳೆದುಕೊಂಡಿದ್ದೇವೆ ಅದನ್ನು ‘ಅರ್ಹರಲ್ಲದ’ ಜಾತಿ ಮತ್ತು ಧರ್ಮಗಳಿಗೆ ಸೇರಿದವರು ಪಡೆದುಕೊಂಡಿದ್ದಾರೆ ಎಂಬ ಮನೋಭಾವ ಇವರಿಗಿತ್ತು. ಆರ್ಥಿಕ ಉದಾರೀಕರಣದ ಮೂಲಕ ಸಮಾಜವಾದಿ ಆರ್ಥಿಕತೆ ಇಲ್ಲವಾದುದರಿಂದಲೇ ತಮಗೊಂದು ಉಜ್ವಲ ಭವಿಷ್ಯ ತೆರೆದುಕೊಂಡಿತು ಎಂದು ಈ ವರ್ಗ ಭಾವಿಸಿತ್ತು. ಸಹಜವಾಗಿಯೇ ಇವರ ಅಭದ್ರತೆಗಳು ಮತ್ತು ಮನೋಭಾವಗಳೇ ಅವರ ಕೈಗೆ ದೊರೆತ ಮಾಧ್ಯಮದಲ್ಲಿಯೂ ಪ್ರತಿಬಿಂಬಿಸಿತು. ಇದನ್ನೇ ತಮ್ಮ ರಾಜಕೀಯ ವಿಚಾರಧಾರೆಯಾಗಿ ಪ್ರತಿಪಾದಿಸುತ್ತಿದ್ದ ರಾಜಕೀಯ ಪಕ್ಷ ಮತ್ತು ಸಂಘಟನೆಗಳಿಗೆ ಈ ಮಾಧ್ಯಮ ಬಹುದೊಡ್ಡ ಪ್ರಚಾರದ ಸಾಧನವಾಯಿತು.<br /> <br /> ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬದಲಾಗಿದೆ. ಮೊದಲಿಗೆ ಇಲ್ಲಿ ಸಂಕುಚಿತ ಬಲಪಂಥೀಯ ರಾಷ್ಟ್ರೀಯತೆಯ ಪ್ರತಿಪಾದನೆಯೊಂದೇ ಸಾಕಾಗಿತ್ತು. ಅದನ್ನು ಪ್ರತಿಪಾದಿಸಿ ಅಧಿಕಾರಕ್ಕೆ ಬಂದವರು ಕ್ರಮೇಣ ‘ಉಳಿದ ಭ್ರಷ್ಟರ’ ಹಾದಿಯನ್ನೇ ತುಳಿದಾಗ ನವ ಮಾಧ್ಯಮ ಬೆಂಬಲಿಗರಲ್ಲೂ ಭ್ರಮನಿರಸನ ಉಂಟಾಯಿತು. ಉಗ್ರ ರಾಷ್ಟ್ರೀಯತೆಯ ಮಾತುಗಳೆಲ್ಲವೂ ಅಧಿಕಾರ ಸಿಕ್ಕಾಗ ಕರಗಿ ಹೋಗುತ್ತವೆ ಎಂದು ತಿಳಿದಾಗ ಸಹಜವಾಗಿಯೇ ಪರ್ಯಾಯಗಳ ಹುಡುಕಾಟ ಆರಂಭವಾಗುತ್ತದೆ. ಇದೇ ಹೊತ್ತಿಗೆ ಸರಿಯಾಗಿ ನವ ಮಾಧ್ಯಮವನ್ನು ಬಳಸುವವರ ಪ್ರಮಾಣ ಹೆಚ್ಚಿತು. ಭಿನ್ನ ಚಿಂತನಾ ವಿಧಾನಗಳೂ ಸ್ವಲ್ಪ ಮಟ್ಟಿಗೆ ಇದರೊಳಕ್ಕೆ ಪ್ರವೇಶ ಪಡೆದವು.<br /> <br /> ಈ ಪ್ರಕ್ರಿಯೆಯಲ್ಲಿ ಅದರೊಳಗಿದ್ದ ಪ್ರಭಾವೀ ರಾಜಕೀಯ ಚಿಂತನಾ ವಿಧಾನವೂ ಸ್ವಲ್ಪ ಮಟ್ಟಿಗೆ ಬಿರುಕುಬಿಟ್ಟಿತು. ಈ ಪ್ರಕ್ರಿಯೆಯ ಲಾಭವನ್ನು ಪಡೆದುಕೊಂಡದ್ದು ‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ. ಅದರ ಮುಂದುವರಿದ ಭಾಗವಾಗಿ ಆಮ್ ಆದ್ಮಿ ಪಾರ್ಟಿ. ಸುಮಾರಾಗಿ ಇದೇ ಹೊತ್ತಿಗೆ ‘ನಮೋ ಅಭಿವೃದ್ಧಿ ಕಥನ’ದ ಪ್ರಚಾರವೂ ಆರಂಭವಾಯಿತು. ಅದೂ ಕೂಡಾ ನವ ಮಾಧ್ಯಮದಲ್ಲಿ ಬಹಳ ಪ್ರಬಲ. ‘ನಮೋ’ ಪ್ರಯೋಗದಲ್ಲಿ ಸಂಕುಚಿತ ಬಲಪಂಥೀಯ ರಾಷ್ಟ್ರೀಯತೆಗೆ ‘ಪ್ರಬಲ ನಾಯಕ’ನನ್ನು ಕಸಿ ಮಾಡಲಾಗಿದೆ.</p>.<p>ಆದರೆ ಇಲ್ಲಿ ಒಂದು ರಾಜಕೀಯ ಚಿಂತನಾ ವಿಧಾನಕ್ಕಿಂತ ಹೆಚ್ಚಾಗಿ ವ್ಯಕ್ತಿಯೇ ಮುಖ್ಯವಾಗುವ ಚೋದ್ಯವಿದೆ. ನರೇಂದ್ರ ಮೋದಿ ಬೆಂಬಲಿಗರೆಲ್ಲಾ ಬಿಜೆಪಿಯನ್ನು ಬೆಂಬಲಿಸಬೇಕಾಗಿಲ್ಲ ಎಂಬುದು ಅನೇಕ ನರೇಂದ್ರ ಮೋದಿ ಅಭಿಮಾನಿಗಳ ಫೇಸ್ಬುಕ್ ಸ್ಟೇಟಸ್ಗಳು ಸೂಚಿಸುತ್ತಲೇ ಇರುತ್ತವೆ. ಇಲ್ಲಿ ‘ಬಲಿಷ್ಠ ಭಾರತಕ್ಕಾಗಿ ಮೋದಿ’ಯೇ ಹೊರತು ‘ಬಲಿಷ್ಠ ಭಾರತಕ್ಕಾಗಿ ಬಿಜೆಪಿ’ ಅಥವಾ ‘ಎನ್ಡಿಎ’ ಅಲ್ಲ.<br /> ಬಿಜೆಪಿಯ ಆನ್ಲೈನ್ ಪ್ರಚಾರ ತಂತ್ರಗಳಲ್ಲಿ ಕಾಣಿಸುವ ವೃತ್ತಿಪರತೆ ಕಾಂಗ್ರೆಸ್ ಅಥವಾ ಇತರ ಯಾವುದೇ ಪಕ್ಷಗಳ ಪ್ರಚಾರದಲ್ಲಿ ಕಾಣಿಸುವುದಿಲ್ಲ.</p>.<p>ಕಾಂಗ್ರೆಸ್ನಲ್ಲಿ ಇಂಥದ್ದೊಂದು ವೃತ್ತಿಪರತೆ ಕಾಣಿಸಿಕೊಂಡದ್ದು ನಂದನ್ ನಿಲೇಕಣಿಯವರ ವೆಬ್ ಪ್ರಚಾರದಲ್ಲಿ ಕಾಂಗ್ರೆಸ್ನಲ್ಲಿದ್ದಾರೆ ಎಂಬುದನ್ನು ಹೊರತು ಪಡಿಸಿದರೆ ನವ ಮಾಧ್ಯಮ ವರ್ಗವನ್ನು ಆಕರ್ಷಿಸಲು ಬೇಕಿರುವ ಎಲ್ಲಾ ಅರ್ಹತೆಗಳೂ ನಂದನ್ ನಿಲೇಕಣಿಯವರಿಗಿದೆ. ಇದನ್ನೇ ತಮ್ಮ ಬಲವನ್ನಾಗಿಸಿಕೊಂಡು ತಮ್ಮ ನವ ಮಾಧ್ಯಮ ಪ್ರಚಾರಾಂದೋಲನವನ್ನು ಆರಂಭಿಸಿದಂತೆ ಕಾಣಿಸುತ್ತದೆ.<br /> <br /> ಐ.ಟಿ. ಉದ್ಯಮಿಯಾಗಿ ಗಳಿಸಿದ ಯಶಸ್ಸು, ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ಗಾಗಿ ಮಾಡಿದ ಕೆಲಸ, ಆಧಾರ್ ಮುಖ್ಯಸ್ಥನಾಗಿ ಮಾಡಿದ ಕೆಲಸಗಳನ್ನೆಲ್ಲಾ ನಂದನ್ ನಿಲೇಕಣಿ ತಮ್ಮ ಸಾಧನೆಗಳೆಂದು ಹೇಳುತ್ತಿದ್ದಾರೆ. ಇವೆಲ್ಲವೂ ನವ ಮಾಧ್ಯಮದ ಮೂಲಕ ಪ್ರಭಾವಿಸಲು ಸಾಧ್ಯವಿರುವ ವರ್ಗಕ್ಕೆ ಇಷ್ಟವಾಗುವ ‘ಸಾಧನೆ’ಗಳೇ. ಬಹುಶಃ ಕರ್ನಾಟಕದ ಬೇರೆಲ್ಲೂ ಕಾಣದ ಬಿರುಸಿನ ವೆಬ್ ಪ್ರಚಾರ ತಂತ್ರ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಣಿಸುವುದಕ್ಕೂ ಇದೇ ಕಾರಣ.ಉಳಿದೆಡೆ ನವ ಮಾಧ್ಯಮ ನೀಡುವುದು ‘ಬಲಿಷ್ಠ ಭಾರತ’, ‘ಭಾರತ ನಿರ್ಮಾಣ’ ಮತ್ತು ‘ಭ್ರಷ್ಟಾಚಾರ ಮುಕ್ತ ಭಾರತ’ಗಳ ಆಯ್ಕೆಯನ್ನು ಮಾತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲಿ ಕುಳಿತು ಯಾವ ಅಂತರ್ಜಾಲ ತಾಣಕ್ಕೆ ಹೋದರೂ ಎರಡು ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಒಂದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ವಿಶಿಷ್ಟ ಗುರುತು ಪ್ರಾಧಿಕಾರ (ಆಧಾರ್) ಮುಖ್ಯಸ್ಥರಾಗಿದ್ದ ನಂದನ್ ನಿಲೇಕಣಿ ಅವರದ್ದು. ಮತ್ತೊಂದು ಬಿಜೆಪಿ ಸಂಸದ ಅನಂತಕುಮಾರ್ ಅವರದ್ದು. ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ಇವುಗಳ ಪುನರಾವರ್ತನೆಯ ಪ್ರಮಾಣ ಕಡಿಮೆಯಾಗಿದೆ.<br /> <br /> ಒಂದೊಂದು ರಿಫ್ರೆಶ್ನಲ್ಲಿಯೂ ಎಲ್ಲಾ ವೆಬ್ಸೈಟ್ಗಳ, ವೆಬ್ಪುಟಗಳ ಓದುಗನ ಕಣ್ಣು ಬೀಳಲೇಬೇಕಾದ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜಾಹೀರಾತುಗಳು ಎರಡು ವಿಷಯಗಳನ್ನು ಹೇಳುತ್ತಿದ್ದವು. ಮೊದಲನೆಯದ್ದು 2014ರದ್ದು ನಿಜವಾದ ವೆಬ್ 2.0 ಚುನಾವಣೆ. ಎರಡನೆಯದ್ದು ನಂದನ್ ನಿಲೇಕಣಿ ಮತ್ತು ಅನಂತಕುಮಾರ್ ಇಬ್ಬರೂ ಗುರಿಯಿಟ್ಟ ಮತದಾರರ ವರ್ಗ ಒಂದೇ.<br /> <br /> ಭಾರತದ ರಾಜಕೀಯ ಸಂವಹನಕ್ಕೆ ಅದರಲ್ಲೂ ಮುಖ್ಯವಾಗಿ ಚುನಾವಣಾ ಪ್ರಚಾರಕ್ಕೆ ಇಂಟರ್ನೆಟ್ ಪ್ರವೇಶಿಸಿದ್ದು 2004ರಲ್ಲಿ. ಅದಕ್ಕೂ ಮೊದಲು ಕೆಲವು ಪಕ್ಷಗಳಿಗೆ ವೆಬ್ಸೈಟ್ಗಳು ಇದ್ದವಾದರೂ ಮತದಾರರನ್ನು ಸೆಳೆಯುವುದಕ್ಕೆ ಇದನ್ನೊಂದು ಮಾರ್ಗ ಅಂತ ಯಾರೂ ಪರಿಗಣಿಸಿದಂತಿರಲಿಲ್ಲ. 2004ರಲ್ಲಿ ಬಿಜೆಪಿ ತನ್ನ ‘ಭಾರತ ಪ್ರಕಾಶಿಸುತ್ತಿದೆ’ ಪ್ರಚಾರಾಂದೋಲನವನ್ನು ಇಂಟರ್ನೆಟ್ಗೂ ವಿಸ್ತರಿಸಿತು. ಆಗಲೂ ಇದು ಗಮನಸೆಳೆಯುವಂಥ ಪ್ರಮಾಣದಲ್ಲಿರಲಿಲ್ಲ.<br /> <br /> ಅದಕ್ಕೆ ನಮ್ಮ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಡಿಮೆ ಇದ್ದದ್ದೂ ಒಂದು ಕಾರಣವಾಗಿರಬಹುದು. 2009ರ ಲೋಕಸಭಾ ಚುನಾವಣೆಗೆ ವೆಬ್ 2.0 ತಂತ್ರಜ್ಞಾನ ಬ್ಲಾಗ್ ಮತ್ತು ವೆಬ್ಸೈಟ್ಗಳ ಬಳಕೆ ಹೆಚ್ಚುವುದರಲ್ಲಿ ಕಾಣಿಸಿಕೊಂಡಿತು. ಆಗ ಭಾವಿ ಪ್ರಧಾನಿ ಎಂದು ಬಿಂಬಿತವಾಗಿದ್ದ ಎಲ್.ಕೆ.ಅಡ್ವಾಣಿ ಬ್ಲಾಗಿಂಗ್ ಮೂಲಕ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದರು. ಬಹುಶಃ ಈಗಲೂ ನಿಯಮಿತವಾಗಿ ಬ್ಲಾಗ್ ಮಾಡುವ ಕೆಲವೇ ರಾಜಕಾರಣಿಗಳಲ್ಲಿ ಅವರೂ ಒಬ್ಬರು.</p>.<p>ಸಾಮಾಜಿಕ ಜಾಲ ತಾಣಗಳ ಕಟಕಿ ಪ್ರಯೋಗಕ್ಕೆ ಬಲಿಪಶುವಾದ ಮೊದಲ ರಾಜಕಾರಣಿಯೂ ಬಹುಶಃ ಅಡ್ವಾಣಿಯವರೇ ಇರಬಹುದೇನೋ. 2009ರಲ್ಲಿ ಎನ್ಡಿಎ ಸೋಲುಂಡ ಮೇಲೆ ಅವರನ್ನು Former future Prime Minister of India ಎಂದು ಕೆಲ ಬ್ಲಾಗಿಗರು ಸಂಬೋಧಿಸುತ್ತಿದ್ದರು. ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಈ ಕಟಕಿಯ ಖ್ಯಾತಿಯನ್ನು ಮೋದಿ, ರಾಹುಲ್ ಮತ್ತು ಕೇಜ್ರಿವಾಲ್ ಕ್ರಮವಾಗಿ ‘ಪೇಕು’, ‘ಪಪ್ಪು’ ಮತ್ತು ‘ಕ್ರೇಜಿವಾಲ್’ ಎಂಬ ಅಡ್ಡಹೆಸರುಗಳಲ್ಲಿ ಹಂಚಿಕೊಂಡಿದ್ದಾರೆ.<br /> <br /> ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿತು. 2004ರಲ್ಲಿ ಕೇವಲ ನಾಲ್ಕು ಕೋಟಿ ಇದ್ದ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಈಗ 20.5 ಕೋಟಿಗೆ ಏರಿದೆ ಎಂದು ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳುತ್ತಿದೆ. ಹಾಗೆಯೇ ಈ ವರ್ಷದ ಮಾರ್ಚ್ ಅಂತ್ಯದ ಹೊತ್ತಿಗೆ ಮೊಬೈಲ್ನಲ್ಲಿ ಇಂಟರ್ ನೆಟ್ ಬಳಸುವವರ ಸಂಖ್ಯೆಯೇ 15.5 ಕೋಟಿಯಷ್ಟಿರುತ್ತದೆ ಎಂದು ಊಹಿಸಲಾಗುತ್ತಿದೆ.</p>.<p>ಕಳೆದ ವರ್ಷದ ಅಂತ್ಯದ ವೇಳೆಗೆ ಇದು 10.5 ಕೋಟಿಯಷ್ಟಿತ್ತು. ಇದರಲ್ಲಿ 8.5ಕೋಟಿ ಬಳಕೆದಾರರು ನಗರ ಪ್ರದೇಶಗಳಲ್ಲಿದ್ದರು. ಬಹುಶಃ ಈ ಅಂಕಿ–ಅಂಶಗಳೇ ಈ ಬಾರಿಯ ಚುನಾವಣೆಯಲ್ಲಿ ವೆಬ್ 2.0 ತಂತ್ರಜ್ಞಾನ ಭಾರೀ ಪ್ರಮಾಣದಲ್ಲಿ ರಾಜಕೀಯ ಸಂವಹನಕ್ಕೆ ಬಳಕೆಯಾಗುತ್ತಿರುವುದರ ಕಾರಣವನ್ನೂ ಹೇಳುತ್ತಿದೆ.<br /> <br /> ಕಳೆದ ಐದು ವರ್ಷಗಳ ಅವಧಿಯಲ್ಲಿ ಇಂಟರ್ನೆಟ್ ಒಂದು ರಾಜಕೀಯ ಸಂವಹನದ ಮಾಧ್ಯಮವಾಗಿ ಬದಲಾದುದಕ್ಕೆ ಹಲವು ಉದಾಹರಣೆಗಳಿವೆ. ಅಣ್ಣಾ ಹಜಾರೆ ನೇತೃತ್ವದ ‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ, ‘ನರೇಂದ್ರ ಮೋದಿ ಸಾಧಿತ ಗುಜರಾತ್ ಅಭಿವೃದ್ಧಿ ಕಥನ’ಗಳು ಸಾಮಾಜಿಕ ಜಾಲತಾಣಗಳಿಂದಾಗಿಯೇ ಹೆಚ್ಚು ಪ್ರಚಾರಕ್ಕೆ ಬಂದವು. ಹಾಗೆಯೇ ರಾಡಿಯಾ ಟೇಪ್ ಹಗರಣ ಹೊರಬರಲು ಕಾರಣವಾದದ್ದೂ ಇದೆ ಸಾಮಾಜಿಕ ಜಾಲತಾಣಗಳು.</p>.<p>ಇವು ಎಷ್ಟರ ಮಟ್ಟಿಗೆ ಶಕ್ತವಾಗಿದ್ದವೆಂದರೆ ಈಗ ‘ಪಾರಂಪರಿಕ ಮಾಧ್ಯಮ’ಗಳಾಗಿಬಿಟ್ಟಿರುವ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಸುದ್ದಿಗಾರಿಕೆಯ ವಿಧಾನದ ಮೇಲೂ ಪರಿಣಾಮ ಬೀರುತ್ತಿವೆ. ಈ ಎಲ್ಲಾ ಬದಲಾವಣೆಗಳಿಗೆ ಕಾರಣವಾಗಿರುವ ವರ್ಗ ಈಗ ಒಂದು ದೊಡ್ಡ ವೋಟ್ ಬ್ಯಾಂಕ್ ಕೂಡಾ ಹೌದು. ಅತ್ಯಂತ ಹೆಚ್ಚು ಇಂಟರ್ನೆಟ್ ಬಳಕೆದಾರ ನಗರವಾಗಿರುವ ಬೆಂಗಳೂರಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಯಾರೇ ಆದರೂ ಈ ವರ್ಗವನ್ನು ಆಕರ್ಷಿಸಲು ಪ್ರಯತ್ನಿಸುವುದು ಸಹಜ ಎಂದು ಭಾವಿಸಬಹುದೇ?<br /> <br /> ಈಗ ನಮ್ಮ ಕಣ್ಣ ಮುಂದಿರುವ ವಾತಾವರಣವನ್ನು ನೋಡಿದರೆ ಈ ಪ್ರಶ್ನೆಗೆ ನೇತ್ಯಾತ್ಮಕವಾಗಿಯಷ್ಟೇ ಉತ್ತರಿಸಲು ಸಾಧ್ಯ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಉಳಿದೆರಡು ಕ್ಷೇತ್ರಗಳಲ್ಲಾಗಲೀ ಹಾಗೆಯೇ ಇಂಟರ್ನೆಟ್ ಬಳಕೆಯ ಮಟ್ಟಿಗೆ ಬೆಂಗಳೂರು ದಕ್ಷಿಣದಂಥದ್ದೇ ವಾತಾವರಣವನ್ನು ಹೊಂದಿರುವ ಮೈಸೂರು ಮತ್ತು ಮಂಗಳೂರುಗಳಲ್ಲಿ ಇಂಥದ್ದೊಂದು ವೆಬ್ ಪ್ರಚಾರದ ಹುಮ್ಮಸ್ಸು ಕಾಣಿಸುತ್ತಿಲ್ಲ. ಇದಕ್ಕೆ ಟಿಕೆಟ್ ಹಂಚಿಕೆಯೂ ಒಂದು ಕಾರಣವಿರಬಹುದು. ಆದರೆ ಅದಕ್ಕಿಂತ ಮುಖ್ಯವಾದ ಸಾಮಾಜಿಕ–ರಾಜಕೀಯ ಕಾರಣಗಳಿವೆ.<br /> ಭಾರತದ ಮಟ್ಟಿಗೆ ನವ ಮಾಧ್ಯಮ ಒಂದು ರೀತಿಯಲ್ಲಿ ಸಂಕುಚಿತ ಬಲಪಂಥೀಯ ರಾಷ್ಟ್ರೀಯತೆಯ ಬಹುಮುಖ್ಯ ವಾಹಕ.</p>.<p>ಈ ಮಾಧ್ಯಮದ ಸಹಜ ಬೆಳವಣಿಗೆಯ ಹಾದಿಯಲ್ಲಿಯೇ ಇಂಥದ್ದೊಂದು ರಾಜಕೀಯ ಚಿಂತನೆ ಅದರೊಳಕ್ಕೆ ಸೇರಿಕೊಂಡುಬಿಟ್ಟಿದೆ. ಇದಕ್ಕೆ ಮುಖ್ಯಕಾರಣ ಈ ಮಾಧ್ಯಮ ಮೊದಲು ಬಳಕೆಗೆ ಬಂದ ಚಾರಿತ್ರಿಕ ಕಾಲಘಟ್ಟ. ಈ ಮಾಧ್ಯಮದ ಆರಂಭಿಕ ಬಳಕೆದಾರರೆಲ್ಲಾ ಆರ್ಥಿಕ ಉದಾರೀಕರಣದ ಫಲಾನುಭವಿಗಳು. ದೇಶಬಿಟ್ಟು ಹೊರಗಿದ್ದು ಒಂದು ಬಗೆಯ ಅನ್ಯತೆಯನ್ನು ಎದುರಿಸುತ್ತಿದ್ದ ಅನಿವಾಸಿ ಭಾರತೀಯರು. ಈ ವರ್ಗದಲ್ಲಿ ಜಾತಿ ಶ್ರೇಣಿಯ ಉನ್ನತ ಹಂತದಿಂದ ಬಂದವರೇ ಹೆಚ್ಚಿದ್ದರು.<br /> <br /> ಕಾಂಗ್ರೆಸ್ನ ‘ಸಾಮಾಜಿಕ ನ್ಯಾಯ’ದ ರಾಜಕಾರಣದಲ್ಲಿ ತಾವು ಕಳೆದುಕೊಂಡಿದ್ದೇವೆ ಅದನ್ನು ‘ಅರ್ಹರಲ್ಲದ’ ಜಾತಿ ಮತ್ತು ಧರ್ಮಗಳಿಗೆ ಸೇರಿದವರು ಪಡೆದುಕೊಂಡಿದ್ದಾರೆ ಎಂಬ ಮನೋಭಾವ ಇವರಿಗಿತ್ತು. ಆರ್ಥಿಕ ಉದಾರೀಕರಣದ ಮೂಲಕ ಸಮಾಜವಾದಿ ಆರ್ಥಿಕತೆ ಇಲ್ಲವಾದುದರಿಂದಲೇ ತಮಗೊಂದು ಉಜ್ವಲ ಭವಿಷ್ಯ ತೆರೆದುಕೊಂಡಿತು ಎಂದು ಈ ವರ್ಗ ಭಾವಿಸಿತ್ತು. ಸಹಜವಾಗಿಯೇ ಇವರ ಅಭದ್ರತೆಗಳು ಮತ್ತು ಮನೋಭಾವಗಳೇ ಅವರ ಕೈಗೆ ದೊರೆತ ಮಾಧ್ಯಮದಲ್ಲಿಯೂ ಪ್ರತಿಬಿಂಬಿಸಿತು. ಇದನ್ನೇ ತಮ್ಮ ರಾಜಕೀಯ ವಿಚಾರಧಾರೆಯಾಗಿ ಪ್ರತಿಪಾದಿಸುತ್ತಿದ್ದ ರಾಜಕೀಯ ಪಕ್ಷ ಮತ್ತು ಸಂಘಟನೆಗಳಿಗೆ ಈ ಮಾಧ್ಯಮ ಬಹುದೊಡ್ಡ ಪ್ರಚಾರದ ಸಾಧನವಾಯಿತು.<br /> <br /> ಕಳೆದ ಹತ್ತು ವರ್ಷಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬದಲಾಗಿದೆ. ಮೊದಲಿಗೆ ಇಲ್ಲಿ ಸಂಕುಚಿತ ಬಲಪಂಥೀಯ ರಾಷ್ಟ್ರೀಯತೆಯ ಪ್ರತಿಪಾದನೆಯೊಂದೇ ಸಾಕಾಗಿತ್ತು. ಅದನ್ನು ಪ್ರತಿಪಾದಿಸಿ ಅಧಿಕಾರಕ್ಕೆ ಬಂದವರು ಕ್ರಮೇಣ ‘ಉಳಿದ ಭ್ರಷ್ಟರ’ ಹಾದಿಯನ್ನೇ ತುಳಿದಾಗ ನವ ಮಾಧ್ಯಮ ಬೆಂಬಲಿಗರಲ್ಲೂ ಭ್ರಮನಿರಸನ ಉಂಟಾಯಿತು. ಉಗ್ರ ರಾಷ್ಟ್ರೀಯತೆಯ ಮಾತುಗಳೆಲ್ಲವೂ ಅಧಿಕಾರ ಸಿಕ್ಕಾಗ ಕರಗಿ ಹೋಗುತ್ತವೆ ಎಂದು ತಿಳಿದಾಗ ಸಹಜವಾಗಿಯೇ ಪರ್ಯಾಯಗಳ ಹುಡುಕಾಟ ಆರಂಭವಾಗುತ್ತದೆ. ಇದೇ ಹೊತ್ತಿಗೆ ಸರಿಯಾಗಿ ನವ ಮಾಧ್ಯಮವನ್ನು ಬಳಸುವವರ ಪ್ರಮಾಣ ಹೆಚ್ಚಿತು. ಭಿನ್ನ ಚಿಂತನಾ ವಿಧಾನಗಳೂ ಸ್ವಲ್ಪ ಮಟ್ಟಿಗೆ ಇದರೊಳಕ್ಕೆ ಪ್ರವೇಶ ಪಡೆದವು.<br /> <br /> ಈ ಪ್ರಕ್ರಿಯೆಯಲ್ಲಿ ಅದರೊಳಗಿದ್ದ ಪ್ರಭಾವೀ ರಾಜಕೀಯ ಚಿಂತನಾ ವಿಧಾನವೂ ಸ್ವಲ್ಪ ಮಟ್ಟಿಗೆ ಬಿರುಕುಬಿಟ್ಟಿತು. ಈ ಪ್ರಕ್ರಿಯೆಯ ಲಾಭವನ್ನು ಪಡೆದುಕೊಂಡದ್ದು ‘ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಲನ. ಅದರ ಮುಂದುವರಿದ ಭಾಗವಾಗಿ ಆಮ್ ಆದ್ಮಿ ಪಾರ್ಟಿ. ಸುಮಾರಾಗಿ ಇದೇ ಹೊತ್ತಿಗೆ ‘ನಮೋ ಅಭಿವೃದ್ಧಿ ಕಥನ’ದ ಪ್ರಚಾರವೂ ಆರಂಭವಾಯಿತು. ಅದೂ ಕೂಡಾ ನವ ಮಾಧ್ಯಮದಲ್ಲಿ ಬಹಳ ಪ್ರಬಲ. ‘ನಮೋ’ ಪ್ರಯೋಗದಲ್ಲಿ ಸಂಕುಚಿತ ಬಲಪಂಥೀಯ ರಾಷ್ಟ್ರೀಯತೆಗೆ ‘ಪ್ರಬಲ ನಾಯಕ’ನನ್ನು ಕಸಿ ಮಾಡಲಾಗಿದೆ.</p>.<p>ಆದರೆ ಇಲ್ಲಿ ಒಂದು ರಾಜಕೀಯ ಚಿಂತನಾ ವಿಧಾನಕ್ಕಿಂತ ಹೆಚ್ಚಾಗಿ ವ್ಯಕ್ತಿಯೇ ಮುಖ್ಯವಾಗುವ ಚೋದ್ಯವಿದೆ. ನರೇಂದ್ರ ಮೋದಿ ಬೆಂಬಲಿಗರೆಲ್ಲಾ ಬಿಜೆಪಿಯನ್ನು ಬೆಂಬಲಿಸಬೇಕಾಗಿಲ್ಲ ಎಂಬುದು ಅನೇಕ ನರೇಂದ್ರ ಮೋದಿ ಅಭಿಮಾನಿಗಳ ಫೇಸ್ಬುಕ್ ಸ್ಟೇಟಸ್ಗಳು ಸೂಚಿಸುತ್ತಲೇ ಇರುತ್ತವೆ. ಇಲ್ಲಿ ‘ಬಲಿಷ್ಠ ಭಾರತಕ್ಕಾಗಿ ಮೋದಿ’ಯೇ ಹೊರತು ‘ಬಲಿಷ್ಠ ಭಾರತಕ್ಕಾಗಿ ಬಿಜೆಪಿ’ ಅಥವಾ ‘ಎನ್ಡಿಎ’ ಅಲ್ಲ.<br /> ಬಿಜೆಪಿಯ ಆನ್ಲೈನ್ ಪ್ರಚಾರ ತಂತ್ರಗಳಲ್ಲಿ ಕಾಣಿಸುವ ವೃತ್ತಿಪರತೆ ಕಾಂಗ್ರೆಸ್ ಅಥವಾ ಇತರ ಯಾವುದೇ ಪಕ್ಷಗಳ ಪ್ರಚಾರದಲ್ಲಿ ಕಾಣಿಸುವುದಿಲ್ಲ.</p>.<p>ಕಾಂಗ್ರೆಸ್ನಲ್ಲಿ ಇಂಥದ್ದೊಂದು ವೃತ್ತಿಪರತೆ ಕಾಣಿಸಿಕೊಂಡದ್ದು ನಂದನ್ ನಿಲೇಕಣಿಯವರ ವೆಬ್ ಪ್ರಚಾರದಲ್ಲಿ ಕಾಂಗ್ರೆಸ್ನಲ್ಲಿದ್ದಾರೆ ಎಂಬುದನ್ನು ಹೊರತು ಪಡಿಸಿದರೆ ನವ ಮಾಧ್ಯಮ ವರ್ಗವನ್ನು ಆಕರ್ಷಿಸಲು ಬೇಕಿರುವ ಎಲ್ಲಾ ಅರ್ಹತೆಗಳೂ ನಂದನ್ ನಿಲೇಕಣಿಯವರಿಗಿದೆ. ಇದನ್ನೇ ತಮ್ಮ ಬಲವನ್ನಾಗಿಸಿಕೊಂಡು ತಮ್ಮ ನವ ಮಾಧ್ಯಮ ಪ್ರಚಾರಾಂದೋಲನವನ್ನು ಆರಂಭಿಸಿದಂತೆ ಕಾಣಿಸುತ್ತದೆ.<br /> <br /> ಐ.ಟಿ. ಉದ್ಯಮಿಯಾಗಿ ಗಳಿಸಿದ ಯಶಸ್ಸು, ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ಗಾಗಿ ಮಾಡಿದ ಕೆಲಸ, ಆಧಾರ್ ಮುಖ್ಯಸ್ಥನಾಗಿ ಮಾಡಿದ ಕೆಲಸಗಳನ್ನೆಲ್ಲಾ ನಂದನ್ ನಿಲೇಕಣಿ ತಮ್ಮ ಸಾಧನೆಗಳೆಂದು ಹೇಳುತ್ತಿದ್ದಾರೆ. ಇವೆಲ್ಲವೂ ನವ ಮಾಧ್ಯಮದ ಮೂಲಕ ಪ್ರಭಾವಿಸಲು ಸಾಧ್ಯವಿರುವ ವರ್ಗಕ್ಕೆ ಇಷ್ಟವಾಗುವ ‘ಸಾಧನೆ’ಗಳೇ. ಬಹುಶಃ ಕರ್ನಾಟಕದ ಬೇರೆಲ್ಲೂ ಕಾಣದ ಬಿರುಸಿನ ವೆಬ್ ಪ್ರಚಾರ ತಂತ್ರ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಣಿಸುವುದಕ್ಕೂ ಇದೇ ಕಾರಣ.ಉಳಿದೆಡೆ ನವ ಮಾಧ್ಯಮ ನೀಡುವುದು ‘ಬಲಿಷ್ಠ ಭಾರತ’, ‘ಭಾರತ ನಿರ್ಮಾಣ’ ಮತ್ತು ‘ಭ್ರಷ್ಟಾಚಾರ ಮುಕ್ತ ಭಾರತ’ಗಳ ಆಯ್ಕೆಯನ್ನು ಮಾತ್ರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>