<p><strong>ಪೂರ್ವೇ ವಯಸಿ ತತ್ ಕುರ್ಯಾತ್ ಯೇನ ವೃದ್ಧಃ ಸುಖಂ ವಸೇತ್ ।</strong></p>.<p><strong>ಯಾವಜ್ಜೀವೇನ ತತ್ ಕುರ್ಯಾತ್ ಯೇನ ಪ್ರೇತ್ಯ ಸುಖಂ ವಸೇತ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ವಯಸ್ಸಾದಮೇಲೆ ಸುಖವಾಗಿರಲು ಯಾವುದು ಬೇಕಾಗಿದೆಯೋ ಅದನ್ನು ತಾರುಣ್ಯದಲ್ಲಿಯೇ ಮಾಡಿ ಮುಗಿಸಬೇಕು. ಸತ್ತಮೇಲೆ ಜನ್ಮಾಂತರದಲ್ಲಿ ಯಾವುದರಿಂದ ಸುಖವಾಗುವುದೋ ಅದನ್ನು ಜನ್ಮಪೂರ್ತಿಯಾಗಿ ಮಾಡುತ್ತಿರಬೇಕು.‘</p>.<p>ನಮ್ಮ ಎಲ್ಲರ ಆಸೆಯೂ ಗುರಿಯೂ ಒಂದು: ವಯಸ್ಸಾದ ಮೇಲೆ ಸಂತೋಷವಾಗಿರಬೇಕು.</p>.<p>ನಾವು ಸಂಪಾದಿಸುವುದು, ಕೂಡಿಡುವುದು ನಾವು ವಯಸ್ಸಾದಮೇಲೆ ಕಷ್ಟವನ್ನು ಪಡದೆ ಸುಖವಾಗಿರಬೇಕು ಎಂಬ ಕಾರಣದಿಂದ. ಮಕ್ಕಳನ್ನು ಬೆಳೆಸುವುದು, ಅವರನ್ನು ಓದಿಸುವುದು – ಇವು ಕೂಡ ವಯಸ್ಸಾದ ಮೇಲೆ ಅವರು ನಮ್ಮನ್ನು ಕಾಪಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ. ಅಂದರೆ ನಾವು ವಯಸ್ಸಾದಮೇಲೆ ಸುಖವಾಗಿರಬೇಕು ಎಂದರೆ ತಾರುಣ್ಯದಲ್ಲಿಯೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸುಭಾಷಿತ ಹೇಳುತ್ತಿದೆ.</p>.<p>ಇದರ ತಾತ್ಪರ್ಯ: ನಾವು ಓದುವ ಸಮಯದಲ್ಲಿ ಚೆನ್ನಾಗಿ ಓದಬೇಕು; ಸಂಪಾದಿಸುವ ಸಮಯದಲ್ಲಿ ಚೆನ್ನಾಗಿ ಸಂಪಾದಿಸಬೇಕು; ಜೀವನದಲ್ಲಿ ಯಾವ ಸಮಯದಲ್ಲಿ ಯಾವ ಯಾವ ಹೊಣೆಗಾರಿಕೆಯನ್ನು ನಿರ್ವಹಿಸಬೇಕೋ ಆಯಾ ಸಮಯದಲ್ಲಿ ಅವನ್ನು ಚೆನ್ನಾಗಿ ನಿರ್ವಹಿಸಬೇಕು. ಮದುವೆ, ಮಕ್ಕಳ ಲಾಲನೆ–ಪೋಷಣೆಗಳು ಯುಕ್ತ ಕಾಲದಲ್ಲಿ ನಡೆಯಬೇಕು. ಆಗಷ್ಟೇ ವಯಸ್ಸಾದಮೇಲೆ ಸುಖವಾಗಿರಲು ಸಾಧ್ಯ.</p>.<p>ಸುಭಾಷಿತದ ಪೂರ್ವಾರ್ಧವನ್ನು ಇನ್ನೊಂದು ರೀತಿಯಲ್ಲೂ ಅರ್ಥೈಸಬಹುದು.</p>.<p>ಆಧ್ಯಾತ್ಮಿಕೆ ಎನ್ನುವುದು ಜೀವನಕ್ಕೆ ಒದಗುವ ಸಂತೋಷ ಎಂದು ತಿಳಿಯುವುದುಂಟು. ಆದರೆ ಅಧ್ಯಾತ್ಮದ ಜೀವನವನ್ನು ಬಯಸುವವರು ಹೆಚ್ಚಾಗಿ ವಯಸ್ಸಾದವರೇ ಆಗಿರುತ್ತಾರೆ. ಇಲ್ಲಿ ಸುಭಾಷಿತ ಹೇಳುತ್ತಿರುವುದು, ಅಧ್ಯಾತ್ಮ ಎನ್ನುವುದು ನೀವು ವಯಸ್ಸಾದ ಕೂಡಲೇ, ಶಕ್ತಿ ಕುಂದಿದಮೇಲೆ ಸಿದ್ಧಿಸುವಂಥದ್ದಲ್ಲ; ಅದಕ್ಕಾಗಿ ನೀವು ಜೀವನದುದ್ದಕ್ಕೂ, ಶಕ್ತಿ ಇರುವಾಗಲೇ ಸಾಧನಚತುಷ್ಟಯಗಳನ್ನು ಸಂಪಾದಿಸಿಕೊಂಡು, ಸಿದ್ಧವಾಗುತ್ತಲೇ ಇರಬೇಕಾಗುತ್ತದೆ. ಆಗ ಮಾತ್ರವೇ ಅದು ನಿಮ್ಮನ್ನು ಕೈಹಿಡಿಯುತ್ತದೆ.</p>.<p>ಇನ್ನು ಸುಭಾಷಿತದ ಉತ್ತರಾರ್ಧವನ್ನು ನೋಡೋಣ.</p>.<p>ಸತ್ತಮೇಲೆ ನಾವು ಏನಾಗುತ್ತೇವೆ? ನಮ್ಮ ಶಾಸ್ತ್ರಗಳ ನಂಬಿಕೆಯ ಪ್ರಕಾರ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತೇವೆ. ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಸ್ವರ್ಗ; ಕೆಟ್ಟ ಕೆಲಸಗಳನ್ನು ಮಾಡಿದ್ದರೆ ನರಕ. ಈ ಒಳ್ಳೆಯ ಕೆಲಸಗಳನ್ನೇ ಪುಣ್ಯ ಎಂದೂ, ಕೆಟ್ಟ ಕೆಲಸಗಳನ್ನೇ ಪಾಪ ಎಂದೂ ಕರೆಯುವುದು. ನಾವು ಯಾರೂ ನರಕವನ್ನು ಬಯಸುವುದಿಲ್ಲವಷ್ಟೆ! ಎಲ್ಲರಿಗೂ ಸ್ವರ್ಗವೇ ಬೇಕು.</p>.<p>ಹೀಗಾಗಿ ನಮಗೆ ಸ್ವರ್ಗ ಬೇಕು ಎಂದರೆ ಏನು ಮಾಡಬೇಕು? ಒಳ್ಳೆಯ ಕೆಲಸಗಳನ್ನು ಮಾಡಬೇಕು. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು. ಆದರೆ ಒಳ್ಳೆಯ ಕೆಲಸವನ್ನು ಸಾಯುವ ಸಮಯದಲ್ಲಿ ಮಾಡಿದರೆ ಪ್ರಯೋಜನ ಇರದು; ಅದನ್ನು ಜೀವನದುದ್ದಕ್ಕೂ ಮಾಡುತ್ತಲೇ ಇರಬೇಕು. ನಾಲ್ಕು ಜನರಿಗೆ ಪ್ರಯೋಜನವಾಗುವಂಥ ಒಳ್ಳೆಯ ಕೆಲಸಗಳನ್ನು ಮಾಡಿದರೆ ಸ್ವರ್ಗ ಸಿಗುತ್ತಿದೆಯೋ ಇಲ್ಲವೋ – ಅದು ಅನಂತರದ ಪ್ರಶ್ನೆ. ಆದರೆ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ನಮಗೆ ನೆಮ್ಮದಿ ಸಿಗುತ್ತದೆ; ನಮ್ಮ ಜೀವನವೂ ಸಾರ್ಥಕತೆಯನ್ನು ಪಡೆಯುತ್ತದೆ. ಇದು ಸತ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೂರ್ವೇ ವಯಸಿ ತತ್ ಕುರ್ಯಾತ್ ಯೇನ ವೃದ್ಧಃ ಸುಖಂ ವಸೇತ್ ।</strong></p>.<p><strong>ಯಾವಜ್ಜೀವೇನ ತತ್ ಕುರ್ಯಾತ್ ಯೇನ ಪ್ರೇತ್ಯ ಸುಖಂ ವಸೇತ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ವಯಸ್ಸಾದಮೇಲೆ ಸುಖವಾಗಿರಲು ಯಾವುದು ಬೇಕಾಗಿದೆಯೋ ಅದನ್ನು ತಾರುಣ್ಯದಲ್ಲಿಯೇ ಮಾಡಿ ಮುಗಿಸಬೇಕು. ಸತ್ತಮೇಲೆ ಜನ್ಮಾಂತರದಲ್ಲಿ ಯಾವುದರಿಂದ ಸುಖವಾಗುವುದೋ ಅದನ್ನು ಜನ್ಮಪೂರ್ತಿಯಾಗಿ ಮಾಡುತ್ತಿರಬೇಕು.‘</p>.<p>ನಮ್ಮ ಎಲ್ಲರ ಆಸೆಯೂ ಗುರಿಯೂ ಒಂದು: ವಯಸ್ಸಾದ ಮೇಲೆ ಸಂತೋಷವಾಗಿರಬೇಕು.</p>.<p>ನಾವು ಸಂಪಾದಿಸುವುದು, ಕೂಡಿಡುವುದು ನಾವು ವಯಸ್ಸಾದಮೇಲೆ ಕಷ್ಟವನ್ನು ಪಡದೆ ಸುಖವಾಗಿರಬೇಕು ಎಂಬ ಕಾರಣದಿಂದ. ಮಕ್ಕಳನ್ನು ಬೆಳೆಸುವುದು, ಅವರನ್ನು ಓದಿಸುವುದು – ಇವು ಕೂಡ ವಯಸ್ಸಾದ ಮೇಲೆ ಅವರು ನಮ್ಮನ್ನು ಕಾಪಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ. ಅಂದರೆ ನಾವು ವಯಸ್ಸಾದಮೇಲೆ ಸುಖವಾಗಿರಬೇಕು ಎಂದರೆ ತಾರುಣ್ಯದಲ್ಲಿಯೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸುಭಾಷಿತ ಹೇಳುತ್ತಿದೆ.</p>.<p>ಇದರ ತಾತ್ಪರ್ಯ: ನಾವು ಓದುವ ಸಮಯದಲ್ಲಿ ಚೆನ್ನಾಗಿ ಓದಬೇಕು; ಸಂಪಾದಿಸುವ ಸಮಯದಲ್ಲಿ ಚೆನ್ನಾಗಿ ಸಂಪಾದಿಸಬೇಕು; ಜೀವನದಲ್ಲಿ ಯಾವ ಸಮಯದಲ್ಲಿ ಯಾವ ಯಾವ ಹೊಣೆಗಾರಿಕೆಯನ್ನು ನಿರ್ವಹಿಸಬೇಕೋ ಆಯಾ ಸಮಯದಲ್ಲಿ ಅವನ್ನು ಚೆನ್ನಾಗಿ ನಿರ್ವಹಿಸಬೇಕು. ಮದುವೆ, ಮಕ್ಕಳ ಲಾಲನೆ–ಪೋಷಣೆಗಳು ಯುಕ್ತ ಕಾಲದಲ್ಲಿ ನಡೆಯಬೇಕು. ಆಗಷ್ಟೇ ವಯಸ್ಸಾದಮೇಲೆ ಸುಖವಾಗಿರಲು ಸಾಧ್ಯ.</p>.<p>ಸುಭಾಷಿತದ ಪೂರ್ವಾರ್ಧವನ್ನು ಇನ್ನೊಂದು ರೀತಿಯಲ್ಲೂ ಅರ್ಥೈಸಬಹುದು.</p>.<p>ಆಧ್ಯಾತ್ಮಿಕೆ ಎನ್ನುವುದು ಜೀವನಕ್ಕೆ ಒದಗುವ ಸಂತೋಷ ಎಂದು ತಿಳಿಯುವುದುಂಟು. ಆದರೆ ಅಧ್ಯಾತ್ಮದ ಜೀವನವನ್ನು ಬಯಸುವವರು ಹೆಚ್ಚಾಗಿ ವಯಸ್ಸಾದವರೇ ಆಗಿರುತ್ತಾರೆ. ಇಲ್ಲಿ ಸುಭಾಷಿತ ಹೇಳುತ್ತಿರುವುದು, ಅಧ್ಯಾತ್ಮ ಎನ್ನುವುದು ನೀವು ವಯಸ್ಸಾದ ಕೂಡಲೇ, ಶಕ್ತಿ ಕುಂದಿದಮೇಲೆ ಸಿದ್ಧಿಸುವಂಥದ್ದಲ್ಲ; ಅದಕ್ಕಾಗಿ ನೀವು ಜೀವನದುದ್ದಕ್ಕೂ, ಶಕ್ತಿ ಇರುವಾಗಲೇ ಸಾಧನಚತುಷ್ಟಯಗಳನ್ನು ಸಂಪಾದಿಸಿಕೊಂಡು, ಸಿದ್ಧವಾಗುತ್ತಲೇ ಇರಬೇಕಾಗುತ್ತದೆ. ಆಗ ಮಾತ್ರವೇ ಅದು ನಿಮ್ಮನ್ನು ಕೈಹಿಡಿಯುತ್ತದೆ.</p>.<p>ಇನ್ನು ಸುಭಾಷಿತದ ಉತ್ತರಾರ್ಧವನ್ನು ನೋಡೋಣ.</p>.<p>ಸತ್ತಮೇಲೆ ನಾವು ಏನಾಗುತ್ತೇವೆ? ನಮ್ಮ ಶಾಸ್ತ್ರಗಳ ನಂಬಿಕೆಯ ಪ್ರಕಾರ ಸ್ವರ್ಗಕ್ಕೋ ನರಕಕ್ಕೋ ಹೋಗುತ್ತೇವೆ. ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಸ್ವರ್ಗ; ಕೆಟ್ಟ ಕೆಲಸಗಳನ್ನು ಮಾಡಿದ್ದರೆ ನರಕ. ಈ ಒಳ್ಳೆಯ ಕೆಲಸಗಳನ್ನೇ ಪುಣ್ಯ ಎಂದೂ, ಕೆಟ್ಟ ಕೆಲಸಗಳನ್ನೇ ಪಾಪ ಎಂದೂ ಕರೆಯುವುದು. ನಾವು ಯಾರೂ ನರಕವನ್ನು ಬಯಸುವುದಿಲ್ಲವಷ್ಟೆ! ಎಲ್ಲರಿಗೂ ಸ್ವರ್ಗವೇ ಬೇಕು.</p>.<p>ಹೀಗಾಗಿ ನಮಗೆ ಸ್ವರ್ಗ ಬೇಕು ಎಂದರೆ ಏನು ಮಾಡಬೇಕು? ಒಳ್ಳೆಯ ಕೆಲಸಗಳನ್ನು ಮಾಡಬೇಕು. ಸುಭಾಷಿತ ಅದನ್ನೇ ಇಲ್ಲಿ ಹೇಳುತ್ತಿರುವುದು. ಆದರೆ ಒಳ್ಳೆಯ ಕೆಲಸವನ್ನು ಸಾಯುವ ಸಮಯದಲ್ಲಿ ಮಾಡಿದರೆ ಪ್ರಯೋಜನ ಇರದು; ಅದನ್ನು ಜೀವನದುದ್ದಕ್ಕೂ ಮಾಡುತ್ತಲೇ ಇರಬೇಕು. ನಾಲ್ಕು ಜನರಿಗೆ ಪ್ರಯೋಜನವಾಗುವಂಥ ಒಳ್ಳೆಯ ಕೆಲಸಗಳನ್ನು ಮಾಡಿದರೆ ಸ್ವರ್ಗ ಸಿಗುತ್ತಿದೆಯೋ ಇಲ್ಲವೋ – ಅದು ಅನಂತರದ ಪ್ರಶ್ನೆ. ಆದರೆ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ನಮಗೆ ನೆಮ್ಮದಿ ಸಿಗುತ್ತದೆ; ನಮ್ಮ ಜೀವನವೂ ಸಾರ್ಥಕತೆಯನ್ನು ಪಡೆಯುತ್ತದೆ. ಇದು ಸತ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>