<p><strong>ನೈರ್ಗುಣ್ಯಮೇವ ಸಾಧೀಯೋ ಧಿಗಸ್ತು ಗುಣಗೌರವಮ್ ।<br />ಶಾಖಿನೋsನ್ಯೇ ವಿರಾಜಂತೇ ಖಂಡ್ಯಂತೇ ಚಂದನದ್ರುಮಾಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಒಳ್ಳೆಯ ಗುಣಗಳಿಲ್ಲದಿರುವುದೇ ಮೇಲು. ಒಳ್ಳೆಯ ಗುಣಗಳಿಂದ ದಕ್ಕುವ ಗೌರವವೂ ಬೇಡ. ಬೇರೆ ಮರಗಳು ರೆಂಬೆಕೊಂಬೆಗಳಿಂದ ಮೆರೆಯುತ್ತಿರುವಾಗ ಶ್ರೀಗಂಧದ ಮರಗಳು ಕತ್ತರಿಸಲ್ಪಡುತ್ತಿವೆಯಲ್ಲ!’</p>.<p>ನಮ್ಮ ಒಳ್ಳೆಯತನ, ಸೌಜನ್ಯಗಳೇ ನಮಗೆ ಮಾರಕವಾಗುವ ಸಾಧ್ಯತೆಗಳುಂಟು. ಅಂಥ ಸಂದರ್ಭದಲ್ಲಿ ನಾವು ಹತಾಶರಾಗುವುದೂ ಉಂಟು. ಅಂಥ ಸಂದರ್ಭದಲ್ಲಿ ನಮ್ಮಿಂದ ಹೊರಡಬಹುದಾದ ಉದ್ಗಾರಕ್ಕೆ ಸಮನಾಗಿದೆ ಈ ಸುಭಾಷಿತದ ಉದ್ಗಾರ.</p>.<p>ಒಳ್ಳೆಯತನ ಒಳ್ಳೆಯದೇ! ಆದರೆ ಅದರ ಮೂಲಕ ಜೀವನವನ್ನು ರೂಪಿಸಿಕೊಳ್ಳುವುದು ಸುಲಭವಲ್ಲ. ಏಕೆಂದರೆ ಒಳ್ಳೆಯತನ ಎಂಬುದು ಸದಾ ದಾಳಿಗೆ ಒಳಗಾಗಬಲ್ಲದು, ಮೋಸಕ್ಕೆ ತುತ್ತಾಗಬಹುದು.</p>.<p>ಒಂದು ಉದಾಹರಣೆಯನ್ನು ನೋಡೋಣ. ಒಬ್ಬ ವ್ಯಕ್ತಿಗೆ ಸಹಾಯ ಮಾಡುವ ಗುಣ ಇದೆ; ಕಷ್ಟದಲ್ಲಿರುವವರಿಗೆ ಹಣವನ್ನು ಸಹಾಯಮಾಡುವ ಬುದ್ಧಿಯೂ ಇದೆ. ಪಾಪ! ಕ್ರಮೇಣ ಅವನ ಪರಿಸ್ಥಿತಿ ಯಾವ ಹಂತವನ್ನು ತಲಪುತ್ತದೆ? ಜನರಿಂದ ನಡೆಯವ ಅವನ ಈ ಒಳ್ಳೆಯ ಗುಣದ ದುರುಪಯೋಗದಿಂದ ಬೇಸತ್ತು ಅವನು ’ಈ ಜನರ ಸಹವಾಸವೇ ಸಾಕಪ್ಪ‘ ಎಂಬ ಸ್ಥಿತಿಯನ್ನು ಮುಟ್ಟುತ್ತಾನಲ್ಲವೆ?</p>.<p>ಎಲ್ಲ ಒಳ್ಳೆಯವರ ಪಾಡು ಹೆಚ್ಚು ಕಡಿಮೆ ಹೀಗೆ ಆಗುತ್ತದೆ. ಕಬ್ಬಿನ ಜಲ್ಲೆಯನ್ನು ಹಿಂಡುವಂತೆ ಜನರು ಅವರನ್ನು ಹಿಂಸಿಸುತ್ತಾರೆ. ಇದು ಹೇಗೆಂದರೆ ರಸ್ತೆಯ ನಿಯಮಗಳನ್ನು ಪಾಲಿಸುವವನಿಗೇ ಹೆಚ್ಚು ದಂಡ ಕಟ್ಟುವ ಸನ್ನಿವೇಶ ಉಂಟಾಗುವಂತೆ!</p>.<p>ಸುಭಾಷಿತ ಇಲ್ಲಿ ಹೇಳಿರುವ ಉದಾಹರಣೆಯೂ ಚೆನ್ನಾಗಿದೆ.</p>.<p>ಕಾಡಿನಲ್ಲಿ ಹಲವು ಜಾತಿಯ ಮರಗಳು ಬೆಳೆಯುತ್ತಿರುತ್ತವೆ. ಅವುಗಳ ಜೊತೆಗೆ ಶ್ರೀಗಂಧದ ಮರಗಳೂ ಬೆಳೆಯುತ್ತಿರುತ್ತವೆ. ಈ ಮರಗಳಲ್ಲಿ ಹೆಚ್ಚಿನ ಅಪಾಯ ಯಾವುದಕ್ಕೆ? ಶ್ರೀಗಂಧದ ಮರಗಳಿಗೆ ತಾನೆ? ಈ ಅಪಾಯವಾದರೂ ಏಕೆ? ಅವುಗಳ ಒಳ್ಳೆಯತನ, ಎಂದರೆ ಸುಗಂಧವನ್ನು ನೀಡಬಲ್ಲ ಗುಣ. ಸುಭಾಷಿತ ಈ ಸುಗಂಧವನ್ನೇ ಒಳ್ಳೆಯತನಕ್ಕೆ ಹೋಲಿಸಿದೆ.</p>.<p>ಹೌದು, ಒಳ್ಳೆಯತನಕ್ಕೆ ಗೌರವ ಸಿಗುತ್ತದೆ. ಆದರೆ ಅದಕ್ಕೆ ತೆರಬೇಕಾದ ಬೆಲೆಯೂ ಅಧಿಕವೇ ಆಗಿರುತ್ತದೆ. ಹೀಗಾಗಿ ಒಳ್ಳೆಯತನವೂ ಬೇಡ, ಅದರಿಂದ ಸಿಗುವ ಗೌರವವೂ ಬೇಡ; ಈ ಒಳ್ಳೆಯತನ, ಗೌರವಗಳೇ ಕೊನೆಗೆ ಮುಳುವಾಗುತ್ತದೆ ಎಂದು ಹತಾಶೆಯಿಂದ ನುಡಿಯುತ್ತಿದೆ ಸುಭಾಷಿತ. ಒಳ್ಳೆಯವರನ್ನು ಜನರು ಕೆಣಕುತ್ತಾರೆ; ದುಷ್ಟರನ್ನು ಕಂಡು ಹೆದರಿ ದೂರ ಓಡುತ್ತಾರೆ.</p>.<p>ಭಾರತೀಯರ ಒಳ್ಳೆಯತನದ ಕಾರಣದಿಂದಲೇ ಈ ದೇಶ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಿರುವುದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದು. ಈಗಲೂ ಈ ಕಷ್ಟಪರಂಪರೆ ಮುಂದುವರೆದಿರುವುದು ಸುಳ್ಳಲ್ಲ.</p>.<p>ಒಳ್ಳೆಯತನ ಕೆಟ್ಟದ್ದಲ್ಲ; ಆದರೆ ಅದು ನಮ್ಮ ನಾಶಕ್ಕೆ ಮೂಲವಾಗಬಾರದು ಎಂಬ ಎಚ್ಚರಿಕೆಯೂ ಒಳ್ಳೆಯತನದ ಜೊತೆಗೆ ಇರಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೈರ್ಗುಣ್ಯಮೇವ ಸಾಧೀಯೋ ಧಿಗಸ್ತು ಗುಣಗೌರವಮ್ ।<br />ಶಾಖಿನೋsನ್ಯೇ ವಿರಾಜಂತೇ ಖಂಡ್ಯಂತೇ ಚಂದನದ್ರುಮಾಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಒಳ್ಳೆಯ ಗುಣಗಳಿಲ್ಲದಿರುವುದೇ ಮೇಲು. ಒಳ್ಳೆಯ ಗುಣಗಳಿಂದ ದಕ್ಕುವ ಗೌರವವೂ ಬೇಡ. ಬೇರೆ ಮರಗಳು ರೆಂಬೆಕೊಂಬೆಗಳಿಂದ ಮೆರೆಯುತ್ತಿರುವಾಗ ಶ್ರೀಗಂಧದ ಮರಗಳು ಕತ್ತರಿಸಲ್ಪಡುತ್ತಿವೆಯಲ್ಲ!’</p>.<p>ನಮ್ಮ ಒಳ್ಳೆಯತನ, ಸೌಜನ್ಯಗಳೇ ನಮಗೆ ಮಾರಕವಾಗುವ ಸಾಧ್ಯತೆಗಳುಂಟು. ಅಂಥ ಸಂದರ್ಭದಲ್ಲಿ ನಾವು ಹತಾಶರಾಗುವುದೂ ಉಂಟು. ಅಂಥ ಸಂದರ್ಭದಲ್ಲಿ ನಮ್ಮಿಂದ ಹೊರಡಬಹುದಾದ ಉದ್ಗಾರಕ್ಕೆ ಸಮನಾಗಿದೆ ಈ ಸುಭಾಷಿತದ ಉದ್ಗಾರ.</p>.<p>ಒಳ್ಳೆಯತನ ಒಳ್ಳೆಯದೇ! ಆದರೆ ಅದರ ಮೂಲಕ ಜೀವನವನ್ನು ರೂಪಿಸಿಕೊಳ್ಳುವುದು ಸುಲಭವಲ್ಲ. ಏಕೆಂದರೆ ಒಳ್ಳೆಯತನ ಎಂಬುದು ಸದಾ ದಾಳಿಗೆ ಒಳಗಾಗಬಲ್ಲದು, ಮೋಸಕ್ಕೆ ತುತ್ತಾಗಬಹುದು.</p>.<p>ಒಂದು ಉದಾಹರಣೆಯನ್ನು ನೋಡೋಣ. ಒಬ್ಬ ವ್ಯಕ್ತಿಗೆ ಸಹಾಯ ಮಾಡುವ ಗುಣ ಇದೆ; ಕಷ್ಟದಲ್ಲಿರುವವರಿಗೆ ಹಣವನ್ನು ಸಹಾಯಮಾಡುವ ಬುದ್ಧಿಯೂ ಇದೆ. ಪಾಪ! ಕ್ರಮೇಣ ಅವನ ಪರಿಸ್ಥಿತಿ ಯಾವ ಹಂತವನ್ನು ತಲಪುತ್ತದೆ? ಜನರಿಂದ ನಡೆಯವ ಅವನ ಈ ಒಳ್ಳೆಯ ಗುಣದ ದುರುಪಯೋಗದಿಂದ ಬೇಸತ್ತು ಅವನು ’ಈ ಜನರ ಸಹವಾಸವೇ ಸಾಕಪ್ಪ‘ ಎಂಬ ಸ್ಥಿತಿಯನ್ನು ಮುಟ್ಟುತ್ತಾನಲ್ಲವೆ?</p>.<p>ಎಲ್ಲ ಒಳ್ಳೆಯವರ ಪಾಡು ಹೆಚ್ಚು ಕಡಿಮೆ ಹೀಗೆ ಆಗುತ್ತದೆ. ಕಬ್ಬಿನ ಜಲ್ಲೆಯನ್ನು ಹಿಂಡುವಂತೆ ಜನರು ಅವರನ್ನು ಹಿಂಸಿಸುತ್ತಾರೆ. ಇದು ಹೇಗೆಂದರೆ ರಸ್ತೆಯ ನಿಯಮಗಳನ್ನು ಪಾಲಿಸುವವನಿಗೇ ಹೆಚ್ಚು ದಂಡ ಕಟ್ಟುವ ಸನ್ನಿವೇಶ ಉಂಟಾಗುವಂತೆ!</p>.<p>ಸುಭಾಷಿತ ಇಲ್ಲಿ ಹೇಳಿರುವ ಉದಾಹರಣೆಯೂ ಚೆನ್ನಾಗಿದೆ.</p>.<p>ಕಾಡಿನಲ್ಲಿ ಹಲವು ಜಾತಿಯ ಮರಗಳು ಬೆಳೆಯುತ್ತಿರುತ್ತವೆ. ಅವುಗಳ ಜೊತೆಗೆ ಶ್ರೀಗಂಧದ ಮರಗಳೂ ಬೆಳೆಯುತ್ತಿರುತ್ತವೆ. ಈ ಮರಗಳಲ್ಲಿ ಹೆಚ್ಚಿನ ಅಪಾಯ ಯಾವುದಕ್ಕೆ? ಶ್ರೀಗಂಧದ ಮರಗಳಿಗೆ ತಾನೆ? ಈ ಅಪಾಯವಾದರೂ ಏಕೆ? ಅವುಗಳ ಒಳ್ಳೆಯತನ, ಎಂದರೆ ಸುಗಂಧವನ್ನು ನೀಡಬಲ್ಲ ಗುಣ. ಸುಭಾಷಿತ ಈ ಸುಗಂಧವನ್ನೇ ಒಳ್ಳೆಯತನಕ್ಕೆ ಹೋಲಿಸಿದೆ.</p>.<p>ಹೌದು, ಒಳ್ಳೆಯತನಕ್ಕೆ ಗೌರವ ಸಿಗುತ್ತದೆ. ಆದರೆ ಅದಕ್ಕೆ ತೆರಬೇಕಾದ ಬೆಲೆಯೂ ಅಧಿಕವೇ ಆಗಿರುತ್ತದೆ. ಹೀಗಾಗಿ ಒಳ್ಳೆಯತನವೂ ಬೇಡ, ಅದರಿಂದ ಸಿಗುವ ಗೌರವವೂ ಬೇಡ; ಈ ಒಳ್ಳೆಯತನ, ಗೌರವಗಳೇ ಕೊನೆಗೆ ಮುಳುವಾಗುತ್ತದೆ ಎಂದು ಹತಾಶೆಯಿಂದ ನುಡಿಯುತ್ತಿದೆ ಸುಭಾಷಿತ. ಒಳ್ಳೆಯವರನ್ನು ಜನರು ಕೆಣಕುತ್ತಾರೆ; ದುಷ್ಟರನ್ನು ಕಂಡು ಹೆದರಿ ದೂರ ಓಡುತ್ತಾರೆ.</p>.<p>ಭಾರತೀಯರ ಒಳ್ಳೆಯತನದ ಕಾರಣದಿಂದಲೇ ಈ ದೇಶ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಿರುವುದನ್ನು ನಾವು ಇತಿಹಾಸದಲ್ಲಿ ಗಮನಿಸಬಹುದು. ಈಗಲೂ ಈ ಕಷ್ಟಪರಂಪರೆ ಮುಂದುವರೆದಿರುವುದು ಸುಳ್ಳಲ್ಲ.</p>.<p>ಒಳ್ಳೆಯತನ ಕೆಟ್ಟದ್ದಲ್ಲ; ಆದರೆ ಅದು ನಮ್ಮ ನಾಶಕ್ಕೆ ಮೂಲವಾಗಬಾರದು ಎಂಬ ಎಚ್ಚರಿಕೆಯೂ ಒಳ್ಳೆಯತನದ ಜೊತೆಗೆ ಇರಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>