ಮನಸ್ಸು ಮಾಗಿದರೆ ಇದೇ ಸುಸ್ವರ, ಅನುಭವ ತಳೆವ ಶರೀರ – ಈ ಮಾತು ತುಂಬ ಅರ್ಥಗರ್ಭಿತ. ಜೀವನವನ್ನು ಹತ್ತಿರದಿಂದ ಕಂಡು, ಒಳಿತು–ಕೆಡಕುಗಳನ್ನು ಪರಾಮರ್ಶಿಸಿ ಪ್ರಬುದ್ಧತೆಯನ್ನೂ ವಿವೇಕವನ್ನೂ ಸಂಪಾದಿಸಿಕೊಳ್ಳಬೇಕು. ಮನಸ್ಸು ಮಾಗುವುದು ಎಂದರೆ ಇದೇ. ಹೀಗೆ ಮಾಗಿದ ಮನಸ್ಸು ನುಡಿಯುವ ಮಾತೆಲ್ಲವೂ ಸುಸ್ವರವಾಗಿರುತ್ತದೆ. ಭಾಷೆಯೊಂದು ಸಂಸ್ಕೃತಿ ಆಗುವುದು ಎಂದರೆ ಇದೇ. ತಾಯ್ತನ ಎಂದರೂ ಇದೇ. ಕಾಪಾಡುವುದು, ರಕ್ಷಿಸುವುದು, ಬೆಳೆಸುವುದು. ಈ ಕೆಲಸವನ್ನು ನಾವು ನಮ್ಮ ನುಡಿಯಿಂದಲೂ ಮಾಡಬೇಕು. ನಮ್ಮ ನುಡಿಯನ್ನು ರಕ್ಷಿಸುವ, ಕಾಪಾಡುವ, ಬೆಳೆಸುವ ಕೆಲಸವನ್ನೂ ಮಾಡಬೇಕು.