<p>ಗುಣಾಸ್ಸವರ್ತ್ರ ಪೂಜ್ಯಂತೇ ಪಿತೃವಂಶೋ ನಿರರ್ಥಕಃ ।</p>.<p>ವಾಸುದೇವಂ ನಮಸ್ಯಂತಿ ವಸುದೇವಂ ನ ಕಶ್ಚನ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಪೂಜ್ಯತೆಗೆ ಗುಣ ಮುಖ್ಯವೇ ಹೊರತು ತಂದೆಯ ವಂಶವಲ್ಲ. ವಾಸುದೇವನನ್ನು, ಎಂದರೆ ವಸುದೇವನ ಮಗನಾದ ಶ್ರೀಕೃಷ್ಣನನ್ನು ವಂದಿಸುತ್ತಾರೆಯೇ ವಿನಾ ಯಾರೂ ವಸುದೇವನನ್ನು ವಂದಿಸುವುದಿಲ್ಲ.’</p>.<p>ನಮ್ಮ ಸಮಾಜದಲ್ಲಿ ನಾವು ಪಡೆಯುವ ಗೌರವಕ್ಕೂ ನಮ್ಮ ಹುಟ್ಟಿಗೂ ನೇರ ಸಂಬಂಧವಿಲ್ಲ ಎನ್ನುತ್ತಿದೆ ಸುಭಾಷಿತ.</p>.<p>ನಾವು ಮಾಡುವ ಕೆಲಸದಿಂದ ಸಮಾಜ ನಮ್ಮನ್ನು ಗುರುತಿಸುತ್ತದೆಯೆ ವಿನಾ ನಮ್ಮ ಜಾತಿಯಿಂದಲೋ ವಂಶದಿಂದಲೋ ಅಲ್ಲ ಎಂಬುದನ್ನು ನಾವು ಮರೆಯಬಾರದು. ಹೀಗಾಗಿಯೇ ನಾವು ನಮ್ಮ ಜಾತಿಯ ಕಾರಣದಿಂದಲೋ ಅಂತಸ್ತಿನ ಕಾರಣದಿಂದಲೋ ಮೆರೆಯಲು ಹೋಗಬಾರದು; ಅದು ಅನಾಹುತಕ್ಕೂ ಅಪಹಾಸ್ಯಕ್ಕೂ ಕಾರಣವಾಗುತ್ತದೆ.</p>.<p>ನಾವು ವಾಸುದೇವನನ್ನು ಪೂಜಿಸುತ್ತೇವೆ. ವಾಸುದೇವ ಎಂದರೆ ವಸುದೇವನ ಮಗ, ಶ್ರೀಕೃಷ್ಣ. ವಾಸುದೇವನನ್ನು ಪೂಜಿಸುತ್ತೇವೆಯೇ ವಿನಾ ವಸುದೇವನನ್ನು ನಾವು ಯಾರೂ ಪೂಜಿಸುತ್ತಿಲ್ಲಷ್ಟೆ; ಮಗನನ್ನು ಪೂಜಿಸುತ್ತಿದ್ದೇವೆಯೇ ಹೊರತು ತಂದೆಯನ್ನಲ್ಲ. ಶ್ರೀಕೃಷ್ಣನಿಗೆ ಈ ಪೂಜೆ ಸಲ್ಲುತ್ತಿರುವುದಾದರೂ ಏಕೆ? ಅವನು ವಸುದೇವನ ಮಗ ಎಂಬ ಕಾರಣಕ್ಕೆ ಅಲ್ಲ; ಅವನು ಮಾಡಿದ ಲೋಕೊತ್ತರ ಕಾರ್ಯಗಳಿಂದ ಅವನಿಗೆ ಈ ಗೌರವ ದಕ್ಕಿದೆ.</p>.<p>ಹೀಗಾಗಿ ನಾವು ಕೂಡ, ನಮ್ಮ ಹುಟ್ಟನ್ನೋ ಆಸ್ತಿ–ಅಂತಸ್ತುಗಳನ್ನೋ ನೆಚ್ಚಿಕೊಂಡು ನಮ್ಮ ಭಾಗ್ಯವನ್ನು ನಿರ್ಧಾರಿಸಿಕೊಳ್ಳಬಾರದು. ನಮ್ಮ ಅದೃಷ್ಟವನ್ನು ನಿರ್ಣಯಿಸುವ ಅವಕಾಶವನ್ನು ಈ ಸಂಗತಿಗಳಿಗೆ ನಾವು ಕೊಡಬಾರದು. ನಮ್ಮ ಪರಿಶ್ರಮವೇ ನಮ್ಮ ಸಾಧನೆಯ ಮಾನದಂಡವಾಗಬೇಕು; ಇದೇ ನಮ್ಮ ಸಿದ್ಧಿಗೂ ಪ್ರಸಿದ್ಧಿಗೂ ಮೂಲ ಎಂಬುದನ್ನು ಮರೆಯಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಣಾಸ್ಸವರ್ತ್ರ ಪೂಜ್ಯಂತೇ ಪಿತೃವಂಶೋ ನಿರರ್ಥಕಃ ।</p>.<p>ವಾಸುದೇವಂ ನಮಸ್ಯಂತಿ ವಸುದೇವಂ ನ ಕಶ್ಚನ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಪೂಜ್ಯತೆಗೆ ಗುಣ ಮುಖ್ಯವೇ ಹೊರತು ತಂದೆಯ ವಂಶವಲ್ಲ. ವಾಸುದೇವನನ್ನು, ಎಂದರೆ ವಸುದೇವನ ಮಗನಾದ ಶ್ರೀಕೃಷ್ಣನನ್ನು ವಂದಿಸುತ್ತಾರೆಯೇ ವಿನಾ ಯಾರೂ ವಸುದೇವನನ್ನು ವಂದಿಸುವುದಿಲ್ಲ.’</p>.<p>ನಮ್ಮ ಸಮಾಜದಲ್ಲಿ ನಾವು ಪಡೆಯುವ ಗೌರವಕ್ಕೂ ನಮ್ಮ ಹುಟ್ಟಿಗೂ ನೇರ ಸಂಬಂಧವಿಲ್ಲ ಎನ್ನುತ್ತಿದೆ ಸುಭಾಷಿತ.</p>.<p>ನಾವು ಮಾಡುವ ಕೆಲಸದಿಂದ ಸಮಾಜ ನಮ್ಮನ್ನು ಗುರುತಿಸುತ್ತದೆಯೆ ವಿನಾ ನಮ್ಮ ಜಾತಿಯಿಂದಲೋ ವಂಶದಿಂದಲೋ ಅಲ್ಲ ಎಂಬುದನ್ನು ನಾವು ಮರೆಯಬಾರದು. ಹೀಗಾಗಿಯೇ ನಾವು ನಮ್ಮ ಜಾತಿಯ ಕಾರಣದಿಂದಲೋ ಅಂತಸ್ತಿನ ಕಾರಣದಿಂದಲೋ ಮೆರೆಯಲು ಹೋಗಬಾರದು; ಅದು ಅನಾಹುತಕ್ಕೂ ಅಪಹಾಸ್ಯಕ್ಕೂ ಕಾರಣವಾಗುತ್ತದೆ.</p>.<p>ನಾವು ವಾಸುದೇವನನ್ನು ಪೂಜಿಸುತ್ತೇವೆ. ವಾಸುದೇವ ಎಂದರೆ ವಸುದೇವನ ಮಗ, ಶ್ರೀಕೃಷ್ಣ. ವಾಸುದೇವನನ್ನು ಪೂಜಿಸುತ್ತೇವೆಯೇ ವಿನಾ ವಸುದೇವನನ್ನು ನಾವು ಯಾರೂ ಪೂಜಿಸುತ್ತಿಲ್ಲಷ್ಟೆ; ಮಗನನ್ನು ಪೂಜಿಸುತ್ತಿದ್ದೇವೆಯೇ ಹೊರತು ತಂದೆಯನ್ನಲ್ಲ. ಶ್ರೀಕೃಷ್ಣನಿಗೆ ಈ ಪೂಜೆ ಸಲ್ಲುತ್ತಿರುವುದಾದರೂ ಏಕೆ? ಅವನು ವಸುದೇವನ ಮಗ ಎಂಬ ಕಾರಣಕ್ಕೆ ಅಲ್ಲ; ಅವನು ಮಾಡಿದ ಲೋಕೊತ್ತರ ಕಾರ್ಯಗಳಿಂದ ಅವನಿಗೆ ಈ ಗೌರವ ದಕ್ಕಿದೆ.</p>.<p>ಹೀಗಾಗಿ ನಾವು ಕೂಡ, ನಮ್ಮ ಹುಟ್ಟನ್ನೋ ಆಸ್ತಿ–ಅಂತಸ್ತುಗಳನ್ನೋ ನೆಚ್ಚಿಕೊಂಡು ನಮ್ಮ ಭಾಗ್ಯವನ್ನು ನಿರ್ಧಾರಿಸಿಕೊಳ್ಳಬಾರದು. ನಮ್ಮ ಅದೃಷ್ಟವನ್ನು ನಿರ್ಣಯಿಸುವ ಅವಕಾಶವನ್ನು ಈ ಸಂಗತಿಗಳಿಗೆ ನಾವು ಕೊಡಬಾರದು. ನಮ್ಮ ಪರಿಶ್ರಮವೇ ನಮ್ಮ ಸಾಧನೆಯ ಮಾನದಂಡವಾಗಬೇಕು; ಇದೇ ನಮ್ಮ ಸಿದ್ಧಿಗೂ ಪ್ರಸಿದ್ಧಿಗೂ ಮೂಲ ಎಂಬುದನ್ನು ಮರೆಯಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>