<p>ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಶ್ರುತಮ್ ।</p>.<p>ತಯೋರ್ವಿವಾಹಃ ಸಖ್ಯಂ ಚ ನ ತು ಪುಷ್ಟವಿಪುಷ್ಟಯೋಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯಾರಿಗೆ ಹಣ ಮತ್ತು ವಿದ್ಯೆ ಸಮಾನವಾಗಿದೆಯೋ ಅಂಥವರ ನಡುವೆ ಮಾತ್ರ ಮದುವೆಯಾಗಲೀ ಸ್ನೇಹವಾಗಲೀ ಸರಿ; ಹೆಚ್ಚು ಕಡಿಮೆ ಇರತಕ್ಕವರಲ್ಲಿ ಇವೆರಡು ಪ್ರಶಸ್ತವಲ್ಲ.’</p>.<p>ಸ್ನೇಹ–ಸಂಬಂಧಗಳು ಯಾವಾಗ ಊರ್ಜಿತವಾಗಬಲ್ಲವು ಎಂಬ ಸೂಕ್ಷ್ಮವನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.</p>.<p>ಸ್ನೇಹ ಹೇಗೆ ಆರಂಭವಾಗುತ್ತದೆ – ಎಂದು ಹೇಳಲಾಗುವುದಿಲ್ಲ. ಆರಂಭದಲ್ಲಿ ಸ್ನೇಹ ಚೆನ್ನಾಗಿರುತ್ತದೆ. ಆದರೆ ಕ್ರಮೇಣ ಅದು ಕೆಡುವ ಸಂದರ್ಭಗಳು ಹೆಚ್ಚುತ್ತಹೋಗುತ್ತವೆ. ಎಲ್ಲ ಸ್ನೇಹಗಳೂ ಕೆಡುತ್ತವೆ ಎಂದೇನಲ್ಲ; ಆದರೆ ಹಲವು ಸ್ನೇಹಗಳಂತೂ ಕೆಡುವುದು ನಿಜ. ಸ್ನೇಹ ಕೆಡುವುದಕ್ಕೆ ಪ್ರಧಾನ ಕಾರಣಗಳನ್ನು ಸುಭಾಷಿತ ಗುರುತಿಸಿದೆ; ಅವೇ ಹಣ ಮತ್ತು ವಿದ್ಯೆ.</p>.<p>ಹಣ ಇದ್ದವನು ಮತ್ತು ಹಣ ಇಲ್ಲದವನು – ಇವರಿಬ್ಬರ ನಡುವೆ ಏರ್ಪಟ್ಟ ಸ್ನೇಹ ಹೆಚ್ಚು ದಿನ ಉಳಿಯಲಾರದು; ಹೀಗೆಯೇ ವಿದ್ಯಾವಂತ ಮತ್ತು ಅವಿದ್ಯಾವಂತ – ಇವರಿಬ್ಬರ ನಡುವೆಯೂ ಸ್ನೇಹ ಉಳಿಯಲಾರದು – ಎನ್ನುತ್ತಿದೆ ಸುಭಾಷಿತ. ಹೀಗಾಗಿ ಹಣ ಮತ್ತು ವಿದ್ಯೆಯಲ್ಲಿ ಸರಿಸಮಾನರೊಡನೆ ಮಾತ್ರ ಸ್ನೇಹವಾಗುವುದು ಹೆಚ್ಚು ಫಲಕಾರಿ ಎಂದು ಅದು ಅಭಿಪ್ರಾಯಿಸಿದೆ.</p>.<p>ಮದುವೆಯ ಬಗ್ಗೆಯೂ ಸುಭಾಷಿತ ಇದೇ ಮಾನದಂಡವನ್ನು ಅನುಸರಿಸಿ ಹೇಳಿದೆ; ಹಣ ಮತ್ತು ವಿದ್ಯೆಯಲ್ಲಿ ಸಮಾನರಾಗಿರುವ ನಡುವೆ ಮದುವೆ ನಡೆಯವುದು ಸೂಕ್ತ.</p>.<p>ಇಂದು ಹಲವು ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿರುವುದು ಸುಳ್ಳಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ಹಣ ಮತ್ತು ವಿದ್ಯೆಯೂ ಇದಕ್ಕೆ ಪ್ರಮುಖ ಕಾರಣಗಳು ಎಂಬುದೂ ಸುಳ್ಳಲ್ಲ.</p>.<p>ಈ ಶ್ಲೋಕ ಮಹಾಭಾರತದಲ್ಲಿರುವುದು. ಎಂದರೆ ಆ ಕಾಲದಲ್ಲಿಯೂ ಮದುವೆಗಳಲ್ಲಿ ಸಮಸ್ಯೆಗಳು ಇರುತ್ತಿದ್ದವು ಎಂದು ಇದರಿಂದ ಅರ್ಥಮಾಡಿಕೊಳ್ಳಬಹುದು. ಮದುವೆ ಕೂಡ ಸ್ನೇಹದ ಒಂದು ಸ್ವರೂಪವೇ ಹೌದು. ಹೀಗಾಗಿ ಸ್ನೇಹಕ್ಕೆ ತೊಂದರೆಗಳಾಗಬಹುದಾದಂಥವು ಮದುವೆಯ ಬಾಂಧವ್ಯದಲ್ಲೂ ಅಡ್ಡಿಗಳಾಗುವುದು ಸಹಜವೇ. ಸ್ನೇಹದಲ್ಲಾಗಲೀ ದಾಂಪತ್ಯದಲ್ಲಾಗಲೀ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ಮುಖ್ಯ; ಹೊಂದಾಣಿಕೆ ಮುಖ್ಯ. ಆದರೆ ಇಂಥ ಸೌಹಾರ್ದವನ್ನು ಹಣ ಮತ್ತು ವಿದ್ಯೆ ಕೆಡಿಸಬಲ್ಲದು ಎನ್ನುತ್ತಿದೆ ಸುಭಾಷಿತ.</p>.<p>ಹಣ ಇಬ್ಬರ ನಡುವೆ ಸಮಾನತೆಯನ್ನು ಕೆಡಿಸಬಲ್ಲದು; ವಿದ್ಯೆ ಇಬ್ಬರ ನಡುವೆ ಅಹಂಕಾರವನ್ನು ಹುಟ್ಟಿಸಬಹುದು. ಹೀಗಾಗಿ ಸ್ನೇಹದಲ್ಲಾಗಲೀ ದಾಂಪತ್ಯದಲ್ಲಾಗಲೀ ಇವೆರಡರ ಅನವಶ್ಯಕ ಪ್ರವೇಶ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ನೇಹ ಮತ್ತು ಮದುವೆ – ಎರಡೂ ಮುರಿದು ಬೀಳುವುದು ದಿಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಶ್ರುತಮ್ ।</p>.<p>ತಯೋರ್ವಿವಾಹಃ ಸಖ್ಯಂ ಚ ನ ತು ಪುಷ್ಟವಿಪುಷ್ಟಯೋಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯಾರಿಗೆ ಹಣ ಮತ್ತು ವಿದ್ಯೆ ಸಮಾನವಾಗಿದೆಯೋ ಅಂಥವರ ನಡುವೆ ಮಾತ್ರ ಮದುವೆಯಾಗಲೀ ಸ್ನೇಹವಾಗಲೀ ಸರಿ; ಹೆಚ್ಚು ಕಡಿಮೆ ಇರತಕ್ಕವರಲ್ಲಿ ಇವೆರಡು ಪ್ರಶಸ್ತವಲ್ಲ.’</p>.<p>ಸ್ನೇಹ–ಸಂಬಂಧಗಳು ಯಾವಾಗ ಊರ್ಜಿತವಾಗಬಲ್ಲವು ಎಂಬ ಸೂಕ್ಷ್ಮವನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.</p>.<p>ಸ್ನೇಹ ಹೇಗೆ ಆರಂಭವಾಗುತ್ತದೆ – ಎಂದು ಹೇಳಲಾಗುವುದಿಲ್ಲ. ಆರಂಭದಲ್ಲಿ ಸ್ನೇಹ ಚೆನ್ನಾಗಿರುತ್ತದೆ. ಆದರೆ ಕ್ರಮೇಣ ಅದು ಕೆಡುವ ಸಂದರ್ಭಗಳು ಹೆಚ್ಚುತ್ತಹೋಗುತ್ತವೆ. ಎಲ್ಲ ಸ್ನೇಹಗಳೂ ಕೆಡುತ್ತವೆ ಎಂದೇನಲ್ಲ; ಆದರೆ ಹಲವು ಸ್ನೇಹಗಳಂತೂ ಕೆಡುವುದು ನಿಜ. ಸ್ನೇಹ ಕೆಡುವುದಕ್ಕೆ ಪ್ರಧಾನ ಕಾರಣಗಳನ್ನು ಸುಭಾಷಿತ ಗುರುತಿಸಿದೆ; ಅವೇ ಹಣ ಮತ್ತು ವಿದ್ಯೆ.</p>.<p>ಹಣ ಇದ್ದವನು ಮತ್ತು ಹಣ ಇಲ್ಲದವನು – ಇವರಿಬ್ಬರ ನಡುವೆ ಏರ್ಪಟ್ಟ ಸ್ನೇಹ ಹೆಚ್ಚು ದಿನ ಉಳಿಯಲಾರದು; ಹೀಗೆಯೇ ವಿದ್ಯಾವಂತ ಮತ್ತು ಅವಿದ್ಯಾವಂತ – ಇವರಿಬ್ಬರ ನಡುವೆಯೂ ಸ್ನೇಹ ಉಳಿಯಲಾರದು – ಎನ್ನುತ್ತಿದೆ ಸುಭಾಷಿತ. ಹೀಗಾಗಿ ಹಣ ಮತ್ತು ವಿದ್ಯೆಯಲ್ಲಿ ಸರಿಸಮಾನರೊಡನೆ ಮಾತ್ರ ಸ್ನೇಹವಾಗುವುದು ಹೆಚ್ಚು ಫಲಕಾರಿ ಎಂದು ಅದು ಅಭಿಪ್ರಾಯಿಸಿದೆ.</p>.<p>ಮದುವೆಯ ಬಗ್ಗೆಯೂ ಸುಭಾಷಿತ ಇದೇ ಮಾನದಂಡವನ್ನು ಅನುಸರಿಸಿ ಹೇಳಿದೆ; ಹಣ ಮತ್ತು ವಿದ್ಯೆಯಲ್ಲಿ ಸಮಾನರಾಗಿರುವ ನಡುವೆ ಮದುವೆ ನಡೆಯವುದು ಸೂಕ್ತ.</p>.<p>ಇಂದು ಹಲವು ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿರುವುದು ಸುಳ್ಳಲ್ಲ. ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ಹಣ ಮತ್ತು ವಿದ್ಯೆಯೂ ಇದಕ್ಕೆ ಪ್ರಮುಖ ಕಾರಣಗಳು ಎಂಬುದೂ ಸುಳ್ಳಲ್ಲ.</p>.<p>ಈ ಶ್ಲೋಕ ಮಹಾಭಾರತದಲ್ಲಿರುವುದು. ಎಂದರೆ ಆ ಕಾಲದಲ್ಲಿಯೂ ಮದುವೆಗಳಲ್ಲಿ ಸಮಸ್ಯೆಗಳು ಇರುತ್ತಿದ್ದವು ಎಂದು ಇದರಿಂದ ಅರ್ಥಮಾಡಿಕೊಳ್ಳಬಹುದು. ಮದುವೆ ಕೂಡ ಸ್ನೇಹದ ಒಂದು ಸ್ವರೂಪವೇ ಹೌದು. ಹೀಗಾಗಿ ಸ್ನೇಹಕ್ಕೆ ತೊಂದರೆಗಳಾಗಬಹುದಾದಂಥವು ಮದುವೆಯ ಬಾಂಧವ್ಯದಲ್ಲೂ ಅಡ್ಡಿಗಳಾಗುವುದು ಸಹಜವೇ. ಸ್ನೇಹದಲ್ಲಾಗಲೀ ದಾಂಪತ್ಯದಲ್ಲಾಗಲೀ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ಮುಖ್ಯ; ಹೊಂದಾಣಿಕೆ ಮುಖ್ಯ. ಆದರೆ ಇಂಥ ಸೌಹಾರ್ದವನ್ನು ಹಣ ಮತ್ತು ವಿದ್ಯೆ ಕೆಡಿಸಬಲ್ಲದು ಎನ್ನುತ್ತಿದೆ ಸುಭಾಷಿತ.</p>.<p>ಹಣ ಇಬ್ಬರ ನಡುವೆ ಸಮಾನತೆಯನ್ನು ಕೆಡಿಸಬಲ್ಲದು; ವಿದ್ಯೆ ಇಬ್ಬರ ನಡುವೆ ಅಹಂಕಾರವನ್ನು ಹುಟ್ಟಿಸಬಹುದು. ಹೀಗಾಗಿ ಸ್ನೇಹದಲ್ಲಾಗಲೀ ದಾಂಪತ್ಯದಲ್ಲಾಗಲೀ ಇವೆರಡರ ಅನವಶ್ಯಕ ಪ್ರವೇಶ ಆಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಸ್ನೇಹ ಮತ್ತು ಮದುವೆ – ಎರಡೂ ಮುರಿದು ಬೀಳುವುದು ದಿಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>