<p><strong><em>ಸಿಲಂ ಕಮನಲಂ ಭವೇದನಲಮೌದರಂ ಬಾಧಿತುಂ</em></strong><br /><strong><em>ಪಯಃ ಪ್ರಸೃತಿಪೂರಕಂ ಕಿಮುನ ಧಾರಕಂ ಸಾರಸಮ್ ।</em></strong><br /><strong><em>ಅಯತ್ನ ಮಲವಲ್ಲಿಕಂ ಪಥಿಪಟಚ್ಚರಂ ಕಚ್ಚರಂ</em></strong><br /><strong><em>ಭಜಂತಿ ವಿಬುಧಾ ಮುಧಾ ಹ್ಯಹಹ ಕುಕ್ಷಿತಃ ಕುಕ್ಷಿತಂ ।।</em></strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಹೊಟ್ಟೆಯ ಹಸಿವಿನ ಬೆಂಕಿಯನ್ನು ಆರಿಸಲು ಆರಿಸಿದ ಕಾಳುಗಳು ಸಾಲವೆ? ಸರೋವರದ ಬೊಗಸೆನೀರು ಶರೀರವನ್ನು ಕಾಪಾಡಲಾರದೆ? ದಾರಿಯಲ್ಲಿ ಸಿಕ್ಕುವ ಹರಿದ ಚಿಂದಿ ಬಟ್ಟೆಗಳು ಸುಲಭವಾಗಿ ಒದಗುವ ಕೌಪೀನವಾಗಲಾರವೆ? ಆದರೆ, ತಿಳಿವಳಿಕೆಯನ್ನುಳ್ಳವರು ಕೂಡ ಹೊಟ್ಟೆಗಾಗಿ ರಾಜರನ್ನು ವ್ಯರ್ಥವಾಗಿ ಆಶ್ರಯಿಸುತ್ತಾರಲ್ಲ, ಅಯ್ಯೋ!’</p>.<p>ರಾಜಕಾರಣಿಗಳ ಹಿಂದು ಮುಂದೆ ಹಲ್ಲುಗಿಂಜುತ್ತ ಸ್ವಾರ್ಥಕ್ಕಾಗಿ ಓಡಾಡುವ ಸ್ವಘೋಷಿತ ಬುದ್ಧಿಜೀವಿಗಳು, ಕಲಾವಿದರು, ಪತ್ರಕರ್ತರು ಮುಂತಾದವರಿಗೆ ಚೆನ್ನಾಗಿ ಅನ್ವಯವಾಗುವಂತಿದೆ ಈ ಸುಭಾಷಿತ.</p>.<p>ನಾವು ಬದುಕುವುದಕ್ಕೆ ಬೇಕಾದ ಅತ್ಯಂತ ಆವಶ್ಯಕ ವಸ್ತುಗಳು ಯಾವುವು? ಆಹಾರ, ನೀರು, ಬಟ್ಟೆ, ಇರಲು ಒಂದು ನೆಲೆ –ಇಷ್ಟಿದ್ದರೆ ಸಾಕಲ್ಲವೆ?</p>.<p>ಇವು ಕೂಡ ಯಾವ ಪ್ರಮಾಣದಲ್ಲಿ ಬೇಕಾಗುತ್ತವೆ?</p>.<p>ಆಹಾರ ನಮಗೆ ಬೇಕೆಂದು ಎಷ್ಟು ಮೂಟೆಗಳ ಅಕ್ಕಿಯನ್ನು ಸಂಗ್ರಹಿಸುವುದು? ನೀರು ಬೇಕೆಂದು ನಮಗಾಗಿಯೇ ಒಂದು ಅಣೆಕಟ್ಟನ್ನು ಕಟ್ಟಿಸಿಕೊಳ್ಳಬೇಕೆ? ಬಟ್ಟೆ ಬೇಕೆಂದು ಎಷ್ಟು ಜೊತೆ ಸೀರೆ ಪಂಚೆ ಪ್ಯಾಂಟುಗಳನ್ನು ಸಂಗ್ರಹಿಸುವುದು? ಇರಲು ಜಾಗ ಬೇಕು, ನಿಜ; ಆದರೆ ಎಷ್ಟು ಎಕರೆಯಲ್ಲಿ ಮನೆ ಕಟ್ಟಬೇಕು?</p>.<p>ನಮಗೆ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ಸಾಕು ಎಂಬ ಮಾನಸಿಕತೆ ನಮ್ಮದಾದರೆ ಆಗ ನಮ್ಮ ಜೀವನದ ಹಾದಿ ಸುಗಮವಾಗಿಯೇ ಸಾಗುತ್ತದೆ. ಕಷ್ಟಪಟ್ಟು ನಮಗೆ ಬೇಕಾದುದನ್ನು ನಾವೇ ಸಂಪಾದಿಸಿಕೊಳ್ಳಬಹುದು; ನಮ್ಮ ಸ್ವಾಭಿಮಾನವನ್ನೂ ಕಾಪಾಡಿಕೊಳ್ಳಬಹುದು. ಹೀಗಲ್ಲದೆ ಅತಿಯಾಸೆಯನ್ನು ಪಟ್ಟರೆ ಆಗ ಕಂಡವರ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ; ಅವರಿವರ ಮುಂದೆ ಹಲ್ಲುಗಿಂಜುತ್ತ ಕೈ ಮುಗಿಯಬೇಕಾಗುತ್ತದೆ; ಎಷ್ಟೋ ಜನರನ್ನು ಮೋಸದಿಂದ ವಂಚಿಸಲೂ ಬೇಕಾಗುತ್ತದೆ.</p>.<p>ನಮ್ಮದು ಕೇವಲ ಅನ್ನ–ಬಟ್ಟೆಗಳ ಹಸಿವು ಮಾತ್ರವೇ ಅಲ್ಲ; ನಮ್ಮ ಹಸಿವೆಗೆ ಕೊನೆಯೇ ಇಲ್ಲ. ಮಂಕುತಿಮ್ಮನ ಕಗ್ಗದ ಈ ಪದ್ಯ ನಮ್ಮ ಹಸಿವಿನ ಹಾಹಾಕಾರವನ್ನು ಸೊಗಸಾಗಿ ಅನಾವರಣ ಮಾಡಿದೆ:</p>.<p><em><strong>ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।<br />ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।<br />ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।<br />ತಿನ್ನುವುದದಾತ್ಮವನೆ – ಮಂಕುತಿಮ್ಮ ।।</strong></em></p>.<p>ನಮ್ಮದು ಕೇವಲ ಅನ್ನ–ನೀರು–ಬಟ್ಟೆಗಳ ಸಮಸ್ಯೆಯಾದರೆ ಅದನ್ನು ಬಹಳ ಸುಲಭವಾಗಿ ಪೂರೈಸಿಕೊಳ್ಳಬಹುದು ಎಂದು ಸುಭಾಷಿತ ಹೇಳಿದೆ: ’ಹೊಟ್ಟೆಯ ಹಸಿವಿನ ಬೆಂಕಿಯನ್ನು ಆರಿಸಲು ಆರಿಸಿದ ಕಾಳುಗಳು ಸಾಲವೆ? ಸರೋವರದ ಬೊಗಸೆನೀರು ಶರೀರವನ್ನು ಕಾಪಾಡಲಾರದೆ? ದಾರಿಯಲ್ಲಿ ಸಿಕ್ಕುವ ಹರಿದ ಚಿಂದಿ ಬಟ್ಟೆಗಳು ಸುಲಭವಾಗಿ ಒದಗುವ ಕೌಪೀನವಾಗಲಾರವೆ?‘</p>.<p>ಆದರೆ ನಮ್ಮ ಆಸೆಗಳಿಗೆ ಮಿತಿಯೇ ಇಲ್ಲ. ಹಣವನ್ನು ಲೂಟಿಮಾಡುವುದಕ್ಕಾಗಿಯೋ, ಪ್ರಶಸ್ತಿಗಳನ್ನು ದೋಚಿಕೊಳ್ಳುವುದಕ್ಕಾಗಿಯೋ, ಪದವಿಗಳನ್ನು ಕಬಳಿಸುವುದಕ್ಕಾಗಿಯೋ ರಾಜಕಾರಣಿಗಳ ಹಿಂದೆಮುಂದೆ ಓಡಾಡುವ ನಮ್ಮ ದೈನ್ಯವನ್ನು ಸುಭಾಷಿತ ಹಂಗಿಸುತ್ತಿದೆ; ಅದೂ ವಿದ್ಯಾವಂತರು ಹೀಗೆ ಮಾಡುತ್ತಿದ್ದಾರಲ್ಲ – ಎಂದು ಅದು ಕೊರಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><em>ಸಿಲಂ ಕಮನಲಂ ಭವೇದನಲಮೌದರಂ ಬಾಧಿತುಂ</em></strong><br /><strong><em>ಪಯಃ ಪ್ರಸೃತಿಪೂರಕಂ ಕಿಮುನ ಧಾರಕಂ ಸಾರಸಮ್ ।</em></strong><br /><strong><em>ಅಯತ್ನ ಮಲವಲ್ಲಿಕಂ ಪಥಿಪಟಚ್ಚರಂ ಕಚ್ಚರಂ</em></strong><br /><strong><em>ಭಜಂತಿ ವಿಬುಧಾ ಮುಧಾ ಹ್ಯಹಹ ಕುಕ್ಷಿತಃ ಕುಕ್ಷಿತಂ ।।</em></strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಹೊಟ್ಟೆಯ ಹಸಿವಿನ ಬೆಂಕಿಯನ್ನು ಆರಿಸಲು ಆರಿಸಿದ ಕಾಳುಗಳು ಸಾಲವೆ? ಸರೋವರದ ಬೊಗಸೆನೀರು ಶರೀರವನ್ನು ಕಾಪಾಡಲಾರದೆ? ದಾರಿಯಲ್ಲಿ ಸಿಕ್ಕುವ ಹರಿದ ಚಿಂದಿ ಬಟ್ಟೆಗಳು ಸುಲಭವಾಗಿ ಒದಗುವ ಕೌಪೀನವಾಗಲಾರವೆ? ಆದರೆ, ತಿಳಿವಳಿಕೆಯನ್ನುಳ್ಳವರು ಕೂಡ ಹೊಟ್ಟೆಗಾಗಿ ರಾಜರನ್ನು ವ್ಯರ್ಥವಾಗಿ ಆಶ್ರಯಿಸುತ್ತಾರಲ್ಲ, ಅಯ್ಯೋ!’</p>.<p>ರಾಜಕಾರಣಿಗಳ ಹಿಂದು ಮುಂದೆ ಹಲ್ಲುಗಿಂಜುತ್ತ ಸ್ವಾರ್ಥಕ್ಕಾಗಿ ಓಡಾಡುವ ಸ್ವಘೋಷಿತ ಬುದ್ಧಿಜೀವಿಗಳು, ಕಲಾವಿದರು, ಪತ್ರಕರ್ತರು ಮುಂತಾದವರಿಗೆ ಚೆನ್ನಾಗಿ ಅನ್ವಯವಾಗುವಂತಿದೆ ಈ ಸುಭಾಷಿತ.</p>.<p>ನಾವು ಬದುಕುವುದಕ್ಕೆ ಬೇಕಾದ ಅತ್ಯಂತ ಆವಶ್ಯಕ ವಸ್ತುಗಳು ಯಾವುವು? ಆಹಾರ, ನೀರು, ಬಟ್ಟೆ, ಇರಲು ಒಂದು ನೆಲೆ –ಇಷ್ಟಿದ್ದರೆ ಸಾಕಲ್ಲವೆ?</p>.<p>ಇವು ಕೂಡ ಯಾವ ಪ್ರಮಾಣದಲ್ಲಿ ಬೇಕಾಗುತ್ತವೆ?</p>.<p>ಆಹಾರ ನಮಗೆ ಬೇಕೆಂದು ಎಷ್ಟು ಮೂಟೆಗಳ ಅಕ್ಕಿಯನ್ನು ಸಂಗ್ರಹಿಸುವುದು? ನೀರು ಬೇಕೆಂದು ನಮಗಾಗಿಯೇ ಒಂದು ಅಣೆಕಟ್ಟನ್ನು ಕಟ್ಟಿಸಿಕೊಳ್ಳಬೇಕೆ? ಬಟ್ಟೆ ಬೇಕೆಂದು ಎಷ್ಟು ಜೊತೆ ಸೀರೆ ಪಂಚೆ ಪ್ಯಾಂಟುಗಳನ್ನು ಸಂಗ್ರಹಿಸುವುದು? ಇರಲು ಜಾಗ ಬೇಕು, ನಿಜ; ಆದರೆ ಎಷ್ಟು ಎಕರೆಯಲ್ಲಿ ಮನೆ ಕಟ್ಟಬೇಕು?</p>.<p>ನಮಗೆ ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ಸಾಕು ಎಂಬ ಮಾನಸಿಕತೆ ನಮ್ಮದಾದರೆ ಆಗ ನಮ್ಮ ಜೀವನದ ಹಾದಿ ಸುಗಮವಾಗಿಯೇ ಸಾಗುತ್ತದೆ. ಕಷ್ಟಪಟ್ಟು ನಮಗೆ ಬೇಕಾದುದನ್ನು ನಾವೇ ಸಂಪಾದಿಸಿಕೊಳ್ಳಬಹುದು; ನಮ್ಮ ಸ್ವಾಭಿಮಾನವನ್ನೂ ಕಾಪಾಡಿಕೊಳ್ಳಬಹುದು. ಹೀಗಲ್ಲದೆ ಅತಿಯಾಸೆಯನ್ನು ಪಟ್ಟರೆ ಆಗ ಕಂಡವರ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ; ಅವರಿವರ ಮುಂದೆ ಹಲ್ಲುಗಿಂಜುತ್ತ ಕೈ ಮುಗಿಯಬೇಕಾಗುತ್ತದೆ; ಎಷ್ಟೋ ಜನರನ್ನು ಮೋಸದಿಂದ ವಂಚಿಸಲೂ ಬೇಕಾಗುತ್ತದೆ.</p>.<p>ನಮ್ಮದು ಕೇವಲ ಅನ್ನ–ಬಟ್ಟೆಗಳ ಹಸಿವು ಮಾತ್ರವೇ ಅಲ್ಲ; ನಮ್ಮ ಹಸಿವೆಗೆ ಕೊನೆಯೇ ಇಲ್ಲ. ಮಂಕುತಿಮ್ಮನ ಕಗ್ಗದ ಈ ಪದ್ಯ ನಮ್ಮ ಹಸಿವಿನ ಹಾಹಾಕಾರವನ್ನು ಸೊಗಸಾಗಿ ಅನಾವರಣ ಮಾಡಿದೆ:</p>.<p><em><strong>ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।<br />ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।<br />ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।<br />ತಿನ್ನುವುದದಾತ್ಮವನೆ – ಮಂಕುತಿಮ್ಮ ।।</strong></em></p>.<p>ನಮ್ಮದು ಕೇವಲ ಅನ್ನ–ನೀರು–ಬಟ್ಟೆಗಳ ಸಮಸ್ಯೆಯಾದರೆ ಅದನ್ನು ಬಹಳ ಸುಲಭವಾಗಿ ಪೂರೈಸಿಕೊಳ್ಳಬಹುದು ಎಂದು ಸುಭಾಷಿತ ಹೇಳಿದೆ: ’ಹೊಟ್ಟೆಯ ಹಸಿವಿನ ಬೆಂಕಿಯನ್ನು ಆರಿಸಲು ಆರಿಸಿದ ಕಾಳುಗಳು ಸಾಲವೆ? ಸರೋವರದ ಬೊಗಸೆನೀರು ಶರೀರವನ್ನು ಕಾಪಾಡಲಾರದೆ? ದಾರಿಯಲ್ಲಿ ಸಿಕ್ಕುವ ಹರಿದ ಚಿಂದಿ ಬಟ್ಟೆಗಳು ಸುಲಭವಾಗಿ ಒದಗುವ ಕೌಪೀನವಾಗಲಾರವೆ?‘</p>.<p>ಆದರೆ ನಮ್ಮ ಆಸೆಗಳಿಗೆ ಮಿತಿಯೇ ಇಲ್ಲ. ಹಣವನ್ನು ಲೂಟಿಮಾಡುವುದಕ್ಕಾಗಿಯೋ, ಪ್ರಶಸ್ತಿಗಳನ್ನು ದೋಚಿಕೊಳ್ಳುವುದಕ್ಕಾಗಿಯೋ, ಪದವಿಗಳನ್ನು ಕಬಳಿಸುವುದಕ್ಕಾಗಿಯೋ ರಾಜಕಾರಣಿಗಳ ಹಿಂದೆಮುಂದೆ ಓಡಾಡುವ ನಮ್ಮ ದೈನ್ಯವನ್ನು ಸುಭಾಷಿತ ಹಂಗಿಸುತ್ತಿದೆ; ಅದೂ ವಿದ್ಯಾವಂತರು ಹೀಗೆ ಮಾಡುತ್ತಿದ್ದಾರಲ್ಲ – ಎಂದು ಅದು ಕೊರಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>