<p><em>ಅಲಸಸ್ಯ ಕಥಂ ವಿದ್ಯಾ</em></p>.<p><em>ಕಥಮಂಧಸ್ಯ ಸುಂದರೀ ।</em></p>.<p><em>ಬಧಿರಸ್ಯ ಕಥಂ ವೀಣಾ</em></p>.<p><em>ಕಥಂ ಮಾಲಾ ಶವಸ್ಯ ಚ ।।</em></p>.<p>ಇದರ ಅನುವಾದವನ್ನು ಪಾವೆಂ ಆಚಾರ್ಯ ಅವರು ಪದ್ಯರೂಪದಲ್ಲಿಯೇ ಮಾಡಿದ್ದಾರೆ:</p>.<p><em>’ಕುರುಡಗೇತಕೆ ಚೆನ್ನೆ?</em></p>.<p><em>ಕಿವುಡಗೇಕೆ ವೀಣೆ?</em></p>.<p><em>ಹೆಣಕ್ಕೇಕೆ ಮಾಲ್ಯ?</em></p>.<p><em>ಸೋಮಾರಿಗೆ ವಿದ್ಯ?’</em></p>.<p>ಪದ್ಯದ ಸಾಲುಗಳು ಅನುವಾದದಲ್ಲಿ ಅನುಕ್ರಮವಾಗಿ ಬಂದಿಲ್ಲ; ಆದರೆ ಯಾವ ಸಾಲೂ ಬಿಟ್ಟಿಲ್ಲ; ಮಾತ್ರವಲ್ಲ, ಹೀಗೆ ಕ್ರಮವನ್ನು ತಪ್ಪಿಸಿದ್ದರಿಂದ ಅರ್ಥಕ್ಕೆ ಏನೂ ವ್ಯತ್ಯಾಸವಾಗಿಲ್ಲವೆನ್ನಿ!</p>.<p>ಸೋಮಾರಿಯಾದವನಿಗೆ ವಿದ್ಯೆ ದಕ್ಕದು. ನಿರಂತರವಾದ ಅಧ್ಯಯನಶೀಲತೆಯಿಂದಲೇ ವಿದ್ಯೆಯನ್ನು ಸಂಪಾದಿಸಲು ಸಾಧ್ಯ. ಆಲಸ್ಯವಿರದಂತೆ ನಿರಂತರ ಪರಿಶ್ರಮವೇ ವಿದ್ಯೆಯನ್ನು ಗಳಿಸಲು ಇರುವ ಏಕೈಕ ಮಾರ್ಗ. ಹೀಗಾಗಿಯೇ ಸುಭಾಷಿತ ಕೇಳುತ್ತಿರುವುದು: ’ಸೋಮಾರಿಗೆ ವಿದ್ಯೆ ಏಕೆ?‘ ಎಂದರೆ ಸೋಮಾರಿಯೂ ಆಗಿರುತ್ತೇನೆ, ವಿದ್ಯೆಯನ್ನೂ ಸಂಪಾದಿಸುತ್ತೇನೆ – ಎಂದರೆ ಆಗದು ಎಂದು ಎಚ್ಚರಿಸುತ್ತಿದೆ.</p>.<p>ಸೋಮಾರಿಯಾದವನು ವಿದ್ಯೆಯನ್ನು ಬಯಸುವುದು ಎಂದರೆ ಏನು ಗೊತ್ತೆ – ಎನ್ನುತ್ತಿದೆ ಸುಭಾಷಿತ.</p>.<p>ಸುಂದರಿಯಾದ ತರುಣಿ ನಮ್ಮ ಕಣ್ಣ ಮುಂದೆಯೇ ಇರಬಹುದು. ಆದರೆ ಅವಳ ಲಾವಣ್ಯವನ್ನು ಸವಿಯಲು ನಮಗೆ ಇರಬೇಕಾದ ಮೊದಲ ಅರ್ಹತೆ ಎಂದರೆ ಕಣ್ಣು. ಹೌದು, ಕಣ್ಣಿಗೆ ನೋಡುವ ಶಕ್ತಿ ಇರಬೇಕು. ಆಗ ಮಾತ್ರವೇ ನಾವು ಸೌಂದರ್ಯವನ್ನು ಸವಿಯಲು ಸಾಧ್ಯ.</p>.<p>ಹೀಗೆಯೇ ಸಂಗೀತವನ್ನು ಕೇಳಲು ಕಿವಿ ಇರಬೇಕು; ಎಂದರೆ ಶ್ರವಣಶಕ್ತಿ ಇರಬೇಕು. ಕೇಳಬಲ್ಲ ಸಾಮರ್ಥ್ಯವೇ ಇಲ್ಲದಿದ್ದಾಗ ನಮಗೆ ವೀಣೆಯ ನಾದವೂ ಒಂದೇ, ಪ್ರಾಣಿಗಳ ಅರಚಾಟವೂ ಒಂದೇ, ವಾಹನಗಳ ಸದ್ದೂ ಒಂದೇ; ಏನೂ ಕೇಳದು. ಏನೂ ಕೇಳದಿದ್ದವನಿಗೆ ಸಂಗೀತದ ಸಹವಾಸವಾದರೂ ಏಕೆ?</p>.<p>ಹೆಣಕ್ಕೆ ಎಷ್ಟು ಸಿಂಗಾರ ಮಾಡಿದರೆ ಏನು ಪ್ರಯೋಜನ? ಅದೇನು ಮೆಚ್ಚುತ್ತದೆಯೇ? ಸಂಭ್ರಮಿಸುತ್ತದೆಯೇ? ಹೀಗಾಗಿ ಹೆಣಕ್ಕೆ ಮಾಡುವ ಅಲಂಕಾರ ಎಲ್ಲವೂ ವ್ಯರ್ಥವಷ್ಟೆ!</p>.<p>ಎಂದರೆ ಎಲ್ಲ ಕೆಲಸಗಳಿಗೂ ಫಲಗಳಿಗೂ ಒಂದೊಂದು ನಿಖರವಾದ ಉದ್ದೇಶ, ಸಲಕರಣೆ, ಅರ್ಹತೆ ಇರುತ್ತದೆ ಎಂದಾಯಿತು. ಅಂತೆಯೇ ವಿದ್ಯೆಯನ್ನು ಸಂಪಾದಿಸಲು ಇರಬೇಕಾದ ಸಲಕರಣೆ, ಅರ್ಹತೆ ಎಂದರೆ ಅದು ಕ್ರಿಯಾಶೀಲತೆ; ಕಷ್ಟಪಡಬಲ್ಲ ವ್ಯಕ್ತಿತ್ವ; ಏಕಾಗ್ರತೆಯನ್ನು ಸಾಧಿಸಬಲ್ಲ ಮನಸ್ಸು; ಹಗಲು–ರಾತ್ರಿ ಶ್ರಮಪಡುವ, ಭೋಗದ ಬಯಕೆಯನ್ನು ತ್ಯಾಗಮಾಡಿದ ಬುದ್ಧಿ. ಹೀಗಲ್ಲದ ಅಲಸಿಗೆ, ಎಂದರೆ ಸೋಮಾರಿಗೆ ವಿದ್ಯೆ ಒಲಿಯುತ್ತದೆಯೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಅಲಸಸ್ಯ ಕಥಂ ವಿದ್ಯಾ</em></p>.<p><em>ಕಥಮಂಧಸ್ಯ ಸುಂದರೀ ।</em></p>.<p><em>ಬಧಿರಸ್ಯ ಕಥಂ ವೀಣಾ</em></p>.<p><em>ಕಥಂ ಮಾಲಾ ಶವಸ್ಯ ಚ ।।</em></p>.<p>ಇದರ ಅನುವಾದವನ್ನು ಪಾವೆಂ ಆಚಾರ್ಯ ಅವರು ಪದ್ಯರೂಪದಲ್ಲಿಯೇ ಮಾಡಿದ್ದಾರೆ:</p>.<p><em>’ಕುರುಡಗೇತಕೆ ಚೆನ್ನೆ?</em></p>.<p><em>ಕಿವುಡಗೇಕೆ ವೀಣೆ?</em></p>.<p><em>ಹೆಣಕ್ಕೇಕೆ ಮಾಲ್ಯ?</em></p>.<p><em>ಸೋಮಾರಿಗೆ ವಿದ್ಯ?’</em></p>.<p>ಪದ್ಯದ ಸಾಲುಗಳು ಅನುವಾದದಲ್ಲಿ ಅನುಕ್ರಮವಾಗಿ ಬಂದಿಲ್ಲ; ಆದರೆ ಯಾವ ಸಾಲೂ ಬಿಟ್ಟಿಲ್ಲ; ಮಾತ್ರವಲ್ಲ, ಹೀಗೆ ಕ್ರಮವನ್ನು ತಪ್ಪಿಸಿದ್ದರಿಂದ ಅರ್ಥಕ್ಕೆ ಏನೂ ವ್ಯತ್ಯಾಸವಾಗಿಲ್ಲವೆನ್ನಿ!</p>.<p>ಸೋಮಾರಿಯಾದವನಿಗೆ ವಿದ್ಯೆ ದಕ್ಕದು. ನಿರಂತರವಾದ ಅಧ್ಯಯನಶೀಲತೆಯಿಂದಲೇ ವಿದ್ಯೆಯನ್ನು ಸಂಪಾದಿಸಲು ಸಾಧ್ಯ. ಆಲಸ್ಯವಿರದಂತೆ ನಿರಂತರ ಪರಿಶ್ರಮವೇ ವಿದ್ಯೆಯನ್ನು ಗಳಿಸಲು ಇರುವ ಏಕೈಕ ಮಾರ್ಗ. ಹೀಗಾಗಿಯೇ ಸುಭಾಷಿತ ಕೇಳುತ್ತಿರುವುದು: ’ಸೋಮಾರಿಗೆ ವಿದ್ಯೆ ಏಕೆ?‘ ಎಂದರೆ ಸೋಮಾರಿಯೂ ಆಗಿರುತ್ತೇನೆ, ವಿದ್ಯೆಯನ್ನೂ ಸಂಪಾದಿಸುತ್ತೇನೆ – ಎಂದರೆ ಆಗದು ಎಂದು ಎಚ್ಚರಿಸುತ್ತಿದೆ.</p>.<p>ಸೋಮಾರಿಯಾದವನು ವಿದ್ಯೆಯನ್ನು ಬಯಸುವುದು ಎಂದರೆ ಏನು ಗೊತ್ತೆ – ಎನ್ನುತ್ತಿದೆ ಸುಭಾಷಿತ.</p>.<p>ಸುಂದರಿಯಾದ ತರುಣಿ ನಮ್ಮ ಕಣ್ಣ ಮುಂದೆಯೇ ಇರಬಹುದು. ಆದರೆ ಅವಳ ಲಾವಣ್ಯವನ್ನು ಸವಿಯಲು ನಮಗೆ ಇರಬೇಕಾದ ಮೊದಲ ಅರ್ಹತೆ ಎಂದರೆ ಕಣ್ಣು. ಹೌದು, ಕಣ್ಣಿಗೆ ನೋಡುವ ಶಕ್ತಿ ಇರಬೇಕು. ಆಗ ಮಾತ್ರವೇ ನಾವು ಸೌಂದರ್ಯವನ್ನು ಸವಿಯಲು ಸಾಧ್ಯ.</p>.<p>ಹೀಗೆಯೇ ಸಂಗೀತವನ್ನು ಕೇಳಲು ಕಿವಿ ಇರಬೇಕು; ಎಂದರೆ ಶ್ರವಣಶಕ್ತಿ ಇರಬೇಕು. ಕೇಳಬಲ್ಲ ಸಾಮರ್ಥ್ಯವೇ ಇಲ್ಲದಿದ್ದಾಗ ನಮಗೆ ವೀಣೆಯ ನಾದವೂ ಒಂದೇ, ಪ್ರಾಣಿಗಳ ಅರಚಾಟವೂ ಒಂದೇ, ವಾಹನಗಳ ಸದ್ದೂ ಒಂದೇ; ಏನೂ ಕೇಳದು. ಏನೂ ಕೇಳದಿದ್ದವನಿಗೆ ಸಂಗೀತದ ಸಹವಾಸವಾದರೂ ಏಕೆ?</p>.<p>ಹೆಣಕ್ಕೆ ಎಷ್ಟು ಸಿಂಗಾರ ಮಾಡಿದರೆ ಏನು ಪ್ರಯೋಜನ? ಅದೇನು ಮೆಚ್ಚುತ್ತದೆಯೇ? ಸಂಭ್ರಮಿಸುತ್ತದೆಯೇ? ಹೀಗಾಗಿ ಹೆಣಕ್ಕೆ ಮಾಡುವ ಅಲಂಕಾರ ಎಲ್ಲವೂ ವ್ಯರ್ಥವಷ್ಟೆ!</p>.<p>ಎಂದರೆ ಎಲ್ಲ ಕೆಲಸಗಳಿಗೂ ಫಲಗಳಿಗೂ ಒಂದೊಂದು ನಿಖರವಾದ ಉದ್ದೇಶ, ಸಲಕರಣೆ, ಅರ್ಹತೆ ಇರುತ್ತದೆ ಎಂದಾಯಿತು. ಅಂತೆಯೇ ವಿದ್ಯೆಯನ್ನು ಸಂಪಾದಿಸಲು ಇರಬೇಕಾದ ಸಲಕರಣೆ, ಅರ್ಹತೆ ಎಂದರೆ ಅದು ಕ್ರಿಯಾಶೀಲತೆ; ಕಷ್ಟಪಡಬಲ್ಲ ವ್ಯಕ್ತಿತ್ವ; ಏಕಾಗ್ರತೆಯನ್ನು ಸಾಧಿಸಬಲ್ಲ ಮನಸ್ಸು; ಹಗಲು–ರಾತ್ರಿ ಶ್ರಮಪಡುವ, ಭೋಗದ ಬಯಕೆಯನ್ನು ತ್ಯಾಗಮಾಡಿದ ಬುದ್ಧಿ. ಹೀಗಲ್ಲದ ಅಲಸಿಗೆ, ಎಂದರೆ ಸೋಮಾರಿಗೆ ವಿದ್ಯೆ ಒಲಿಯುತ್ತದೆಯೆ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>