<p>ವಿವೇಕಃ ಸಹ ಸಂಪತ್ತ್ಯಾ ವಿನಯೋ ವಿದ್ಯಯಾ ಸಹ ।</p>.<p>ಪ್ರಭುತ್ವಂ ಪ್ರಶ್ರಯೋಪೇತಂ ಚಿಹ್ನಮೇತನ್ಮಹಾತ್ಮನಾಮ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ವಿವೇಕದಿಂದ ಕೂಡಿದ ಸಂಪತ್ತು, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ – ಇವು ಮಹಾತ್ಮರ ಲಕ್ಷಣ.’</p>.<p>ಮಹಾತ್ಮರ ಲಕ್ಷಣವನ್ನು ಸುಭಾಷಿತ ಹೇಳುತ್ತಿದೆ.</p>.<p>ನಮ್ಮಂಥ ಸಾಮಾನ್ಯರ ಎಣಿಕೆ ಹೇಗಿರುತ್ತದೆ ಎಂದರೆ ನಮ್ಮ ಗುರಿಯನ್ನು ಮುಟ್ಟಿದರೆ ಆಯಿತು; ಅದೇ ನಮ್ಮ ಬದುಕಿನ ಸಾರ್ಥಕತೆ, ಅದೇ ನಿಜವಾದ ಸಾಧನೆ ಎಂದುಕೊಳ್ಳುತ್ತೇವೆ. ಆದರೆ ಮಹಾತ್ಮರ ಎಣಿಕೆ ಬೇರೆಯೇ ರೀತಿಯಲ್ಲಿರುತ್ತದೆ; ಗುರಿಯನ್ನು ಮುಟ್ಟುವುದೇ ಮುಖ್ಯವಾಗುವುದಿಲ್ಲ. ಅದನ್ನು ಹೇಗೆ ಸಾಧಿಸಿದ್ದೇವೆ ಎಂಬುದೂ ಮುಖ್ಯವಾಗುತ್ತದೆ; ಸಾಧಿಸಿದ ಮೇಲೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಇದು ಮಹಾತ್ಮರ ಮನೋಧರ್ಮ.</p>.<p>ಸುಭಾಷಿತ ಇಲ್ಲಿ ಕೆಲವೊಂದು ಉದಾಹರಣೆಗಳ ಮೂಲಕ ಮಹಾತ್ಮರ ಲಕ್ಷಣವನ್ನು ನಿರೂಪಿಸಿದೆ.</p>.<p>ಸಂಪತ್ತನ್ನು ಗಳಿಸುವುದೇ ವಿಶೇಷವಲ್ಲ; ಅದರ ಜೊತೆಗೆ ವಿವೇಕವೂ ಇರಬೇಕು. ವಿದ್ಯಾವಂತರಾದರಷ್ಟೆ ಸಾಲದು; ಅದರ ಜೊತೆಗೆ ವಿನಯವೂ ಇರಬೇಕು. ಅಧಿಕಾರವನ್ನು ದಕ್ಕಿಸಿಕೊಳ್ಳುವುದೇ ಸಾಧನೆಯಲ್ಲ; ಅದರ ಜೊತೆಗೆ ಸರಳತೆಯೂ ಇರಬೇಕು. ಹೀಗೆ ಸಂಪತ್ತಿನ ಜೊತೆ ವಿವೇಕವನ್ನೂ, ವಿದ್ಯೆಯ ಜೊತೆಗೆ ವಿನಯವನ್ನೂ, ಅಧಿಕಾರದ ಜೊತೆಗೆ ಸರಳತೆಯನ್ನೂ ಹೊಂದಿರುವವರೇ ಮಹಾತ್ಮರು ಎನ್ನುತ್ತಿದೆ ಸುಭಾಷಿತ.</p>.<p>ಸಂಪತ್ತನ್ನು ಸಂಪಾದಿಸುವುದೇನೂ ಕಷ್ಟವಲ್ಲ; ಮೋಸದ ಸಹಾಯದಿಂದ ತುಂಬ ಸುಲಭವಾಗಿಯೇ ಸಂಪಾದಿಸಿಬಿಡಬಹುದು. ಸುಭಾಷಿತ ಹೀಗಾಗಿಯೇ ಹೇಳುತ್ತಿರುವುದು: ಸಂಪತ್ತನ್ನು ಗಳಿಸುವುದೇ ದೊಡ್ಡಲ್ಲ; ಅದರ ಜೊತೆಗೆ ವಿವೇಕವನ್ನೂ ಸಂಪಾದಿಸಿಕೊಳ್ಳಬೇಕು. ಸಂಪತ್ತು ಸೇರಿದಾಗ ಅದನ್ನು ಹೇಗೆ ನಿಭಾಯಿಸಬೇಕು, ವಿನಿಯೋಗಿಸಬೇಕು ಎಂಬ ವಿವೇಕ ತುಂಬ ಮುಖ್ಯ; ಇಲ್ಲವಾದಲ್ಲಿ ಅನರ್ಥವೇ ಉಂಟಾಗುತ್ತದೆ. ವಿದ್ಯೆ ಹೆಚ್ಚಿದಷ್ಟೂ ಅಹಂಕಾರವೂ ಬೆಳೆಯುವುದು ಸಹಜ; ಆದರೆ ಮಹಾತ್ಮರಲ್ಲಿ ಮಾತ್ರ ವಿದ್ಯೆ ಹೆಚ್ಚಿದಷ್ಟೂ ವಿನಯವೂ ಹೆಚ್ಚುತ್ತಿರುತ್ತದೆ.</p>.<p>ಇನ್ನು ಸುಭಾಷಿತ ಹೇಳಿರುವ ಕೊನೆಯ ಉದಾಹರಣೆ: ಸರಳತೆಯಿಂದ ಕೂಡಿದ ಅಧಿಕಾರ; ಇದು ಮಹಾತ್ಮರ ಲಕ್ಷಣವಾಗಿರುತ್ತದೆ.</p>.<p>ನಮ್ಮ ಸುತ್ತಮುತ್ತಲಿನ ಅಧಿಕಾರಿಗಳನ್ನೂ ಜನನಾಯಕರನ್ನೂ ನೋಡಿದಾಗ ಈ ಮಾತಿನ ಮರ್ಮ ತಿಳಿಯುತ್ತದೆ. ಹಲವರಿಗೆ ಅಧಿಕಾರ ಸಿಕ್ಕ ಕೂಡಲೇ ಪಿತ್ತ ನೆತ್ತಿಗೆ ಏರುತ್ತದೆ. ನಾವೇ ರಾಜರು, ಚಕ್ರವರ್ತಿಗಳು; ಎಂದೆಂದಿಗೂ ಈ ಕುರ್ಚಿ ನನ್ನದೇ – ಎಂಬಂತೆ ವರ್ತಿಸುತ್ತಿರುತ್ತಾರೆ. ಸುಭಾಷಿತ ಅಂಥವರನ್ನು ಇಲ್ಲಿ ತಿರಸ್ಕರಿಸಿದೆ. ಅಧಿಕಾರದ ಜೊತೆಗೆ ಸರಳತೆ ಇದ್ದರೆ ಮಾತ್ರ ಆ ಪದವಿಗೆ ಭೂಷಣ ಎಂದು ಅದು ಧ್ವನಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿವೇಕಃ ಸಹ ಸಂಪತ್ತ್ಯಾ ವಿನಯೋ ವಿದ್ಯಯಾ ಸಹ ।</p>.<p>ಪ್ರಭುತ್ವಂ ಪ್ರಶ್ರಯೋಪೇತಂ ಚಿಹ್ನಮೇತನ್ಮಹಾತ್ಮನಾಮ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ವಿವೇಕದಿಂದ ಕೂಡಿದ ಸಂಪತ್ತು, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ – ಇವು ಮಹಾತ್ಮರ ಲಕ್ಷಣ.’</p>.<p>ಮಹಾತ್ಮರ ಲಕ್ಷಣವನ್ನು ಸುಭಾಷಿತ ಹೇಳುತ್ತಿದೆ.</p>.<p>ನಮ್ಮಂಥ ಸಾಮಾನ್ಯರ ಎಣಿಕೆ ಹೇಗಿರುತ್ತದೆ ಎಂದರೆ ನಮ್ಮ ಗುರಿಯನ್ನು ಮುಟ್ಟಿದರೆ ಆಯಿತು; ಅದೇ ನಮ್ಮ ಬದುಕಿನ ಸಾರ್ಥಕತೆ, ಅದೇ ನಿಜವಾದ ಸಾಧನೆ ಎಂದುಕೊಳ್ಳುತ್ತೇವೆ. ಆದರೆ ಮಹಾತ್ಮರ ಎಣಿಕೆ ಬೇರೆಯೇ ರೀತಿಯಲ್ಲಿರುತ್ತದೆ; ಗುರಿಯನ್ನು ಮುಟ್ಟುವುದೇ ಮುಖ್ಯವಾಗುವುದಿಲ್ಲ. ಅದನ್ನು ಹೇಗೆ ಸಾಧಿಸಿದ್ದೇವೆ ಎಂಬುದೂ ಮುಖ್ಯವಾಗುತ್ತದೆ; ಸಾಧಿಸಿದ ಮೇಲೆ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಇದು ಮಹಾತ್ಮರ ಮನೋಧರ್ಮ.</p>.<p>ಸುಭಾಷಿತ ಇಲ್ಲಿ ಕೆಲವೊಂದು ಉದಾಹರಣೆಗಳ ಮೂಲಕ ಮಹಾತ್ಮರ ಲಕ್ಷಣವನ್ನು ನಿರೂಪಿಸಿದೆ.</p>.<p>ಸಂಪತ್ತನ್ನು ಗಳಿಸುವುದೇ ವಿಶೇಷವಲ್ಲ; ಅದರ ಜೊತೆಗೆ ವಿವೇಕವೂ ಇರಬೇಕು. ವಿದ್ಯಾವಂತರಾದರಷ್ಟೆ ಸಾಲದು; ಅದರ ಜೊತೆಗೆ ವಿನಯವೂ ಇರಬೇಕು. ಅಧಿಕಾರವನ್ನು ದಕ್ಕಿಸಿಕೊಳ್ಳುವುದೇ ಸಾಧನೆಯಲ್ಲ; ಅದರ ಜೊತೆಗೆ ಸರಳತೆಯೂ ಇರಬೇಕು. ಹೀಗೆ ಸಂಪತ್ತಿನ ಜೊತೆ ವಿವೇಕವನ್ನೂ, ವಿದ್ಯೆಯ ಜೊತೆಗೆ ವಿನಯವನ್ನೂ, ಅಧಿಕಾರದ ಜೊತೆಗೆ ಸರಳತೆಯನ್ನೂ ಹೊಂದಿರುವವರೇ ಮಹಾತ್ಮರು ಎನ್ನುತ್ತಿದೆ ಸುಭಾಷಿತ.</p>.<p>ಸಂಪತ್ತನ್ನು ಸಂಪಾದಿಸುವುದೇನೂ ಕಷ್ಟವಲ್ಲ; ಮೋಸದ ಸಹಾಯದಿಂದ ತುಂಬ ಸುಲಭವಾಗಿಯೇ ಸಂಪಾದಿಸಿಬಿಡಬಹುದು. ಸುಭಾಷಿತ ಹೀಗಾಗಿಯೇ ಹೇಳುತ್ತಿರುವುದು: ಸಂಪತ್ತನ್ನು ಗಳಿಸುವುದೇ ದೊಡ್ಡಲ್ಲ; ಅದರ ಜೊತೆಗೆ ವಿವೇಕವನ್ನೂ ಸಂಪಾದಿಸಿಕೊಳ್ಳಬೇಕು. ಸಂಪತ್ತು ಸೇರಿದಾಗ ಅದನ್ನು ಹೇಗೆ ನಿಭಾಯಿಸಬೇಕು, ವಿನಿಯೋಗಿಸಬೇಕು ಎಂಬ ವಿವೇಕ ತುಂಬ ಮುಖ್ಯ; ಇಲ್ಲವಾದಲ್ಲಿ ಅನರ್ಥವೇ ಉಂಟಾಗುತ್ತದೆ. ವಿದ್ಯೆ ಹೆಚ್ಚಿದಷ್ಟೂ ಅಹಂಕಾರವೂ ಬೆಳೆಯುವುದು ಸಹಜ; ಆದರೆ ಮಹಾತ್ಮರಲ್ಲಿ ಮಾತ್ರ ವಿದ್ಯೆ ಹೆಚ್ಚಿದಷ್ಟೂ ವಿನಯವೂ ಹೆಚ್ಚುತ್ತಿರುತ್ತದೆ.</p>.<p>ಇನ್ನು ಸುಭಾಷಿತ ಹೇಳಿರುವ ಕೊನೆಯ ಉದಾಹರಣೆ: ಸರಳತೆಯಿಂದ ಕೂಡಿದ ಅಧಿಕಾರ; ಇದು ಮಹಾತ್ಮರ ಲಕ್ಷಣವಾಗಿರುತ್ತದೆ.</p>.<p>ನಮ್ಮ ಸುತ್ತಮುತ್ತಲಿನ ಅಧಿಕಾರಿಗಳನ್ನೂ ಜನನಾಯಕರನ್ನೂ ನೋಡಿದಾಗ ಈ ಮಾತಿನ ಮರ್ಮ ತಿಳಿಯುತ್ತದೆ. ಹಲವರಿಗೆ ಅಧಿಕಾರ ಸಿಕ್ಕ ಕೂಡಲೇ ಪಿತ್ತ ನೆತ್ತಿಗೆ ಏರುತ್ತದೆ. ನಾವೇ ರಾಜರು, ಚಕ್ರವರ್ತಿಗಳು; ಎಂದೆಂದಿಗೂ ಈ ಕುರ್ಚಿ ನನ್ನದೇ – ಎಂಬಂತೆ ವರ್ತಿಸುತ್ತಿರುತ್ತಾರೆ. ಸುಭಾಷಿತ ಅಂಥವರನ್ನು ಇಲ್ಲಿ ತಿರಸ್ಕರಿಸಿದೆ. ಅಧಿಕಾರದ ಜೊತೆಗೆ ಸರಳತೆ ಇದ್ದರೆ ಮಾತ್ರ ಆ ಪದವಿಗೆ ಭೂಷಣ ಎಂದು ಅದು ಧ್ವನಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>