<p><strong>ಉತ್ಸಾಹಸಂಪನ್ನಮದೀರ್ಘಸೂತ್ರಂ<br />ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್ ।<br />ಶೂರಂ ಕೃತಜ್ಞಂ ದೃಢಸೌಹೃದಂ ಚ<br />ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಉತ್ಸಾಹದಿಂದ ಕೂಡಿದವನೂ ಸೋಮಾರಿಯಲ್ಲದವನೂ ಕೆಲಸಮಾಡುವ ರೀತಿಯನ್ನು ಅರಿತವನೂ ಕೆಟ್ಟ ಅಭ್ಯಾಸಗಳಲ್ಲಿ ಆಸಕ್ತಿ ಇಲ್ಲದವನೂ ಶೂರನೂ ಕೃತಜ್ಞನೂ ಸ್ಥಿರವಾದ ಸೌಹಾರ್ದವುಳ್ಳವನೂ ಆದವನಲ್ಲಿ ನೆಲಸಲು ಲಕ್ಷ್ಮಿ ತಾನಾಗಿಯೇ ಬರುತ್ತಾಳೆ.‘</p>.<p>ಎಲ್ಲರೂ ಸುಖದಿಂದ ಬಾಳಬೇಕು ಎಂದು ಬಯಸುವುದು ಸಹಜ. ಸುಖದಿಂದ ಇರಲು ನಮಗೆ ಅರ್ಥದ ಬೆಂಬಲ ಬೇಕು ಎಂಬುದೂ ನಿಜ. ಅರ್ಥಸಂಪಾದನೆ ಎಂದರೆ ಕಷ್ಟಪಡಬೇಕು. ಅದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಅರ್ಥಸಂಪಾದನೆ ಎಂದರೆ ಕೇವಲ ಹಣ ಮಾತ್ರವೇ ಅಲ್ಲ; ನಮ್ಮ ಕಾರ್ಯಸಿದ್ಧಿಗೆ ಬೇಕಾದ ಎಲ್ಲ ಸಲಕರಣೆಗಳೂ ‘ಅರ್ಥ’ವೇ ಹೌದು. ಈ ಅರ್ಥಕ್ಕೆಲ್ಲ ಒಡತಿ ಶ್ರೀಲಕ್ಷ್ಮಿ. ಅವಳು ಎಲ್ಲಿರುವಳೋ ಅಲ್ಲಿ ಬಡತನವಿರುವುದಿಲ್ಲ, ಕಷ್ಟಕಾರ್ಪಣ್ಯಗಳೂ ಇರುವುದಿಲ್ಲ. ಆದುದರಿಂದಲೇ ಎಲ್ಲರೂ ಲಕ್ಷ್ಮಿ ನಮ್ಮಲ್ಲಿ ನೆಲಸಲಿ ಎಂದು ಪ್ರಾರ್ಥಿಸುವುದು.</p>.<p>ಆದರೆ ಲಕ್ಷ್ಮಿ ಎಲ್ಲರ ಸನಿಹದಲ್ಲಿ ಸುಲಭಕ್ಕೆ ಬಂದು ನೆಲಸುವುದಿಲ್ಲ. ಅವಳಿಗೆ ಕೆಟ್ಟ ಗುಣಗಳನ್ನು ಕಂಡರೆ ಆಗದು; ಅಂಥ ಗುಣಗಳನ್ನು ರೂಢಿಸಿಕೊಂಡವರ ಹತ್ತಿರವೂ ಅವಳು ಸುಳಿಯವುದಿಲ್ಲ. ಇಷ್ಟಕ್ಕೂ ಆ ದುರ್ಗುಣಗಳಾದರೂ ಯಾವುವು?</p>.<p>ಸದಾ ಜಡವಾಗಿ ಬೇಸರದಲ್ಲಿಯೇ ಮುಳುಗಿರುವುದು; ಸೋಮಾರಿಯಾಗಿ ಮೈಗಳ್ಳನಾಗಿರುವುದು; ಕೆಲಸಮಾಡಿದರೂ ಸರಿಯಾದ ರೀತಿಯಲ್ಲಿ ಅದರಲ್ಲಿ ತೊಡಗದಿರುವುದು; ಕೆಟ್ಟ ಚಟಗಳನ್ನು ಮೈಗೂಡಿಸಿಕೊಂಡವನು; ಹೇಡಿಯಾಗಿ ಪ್ರತಿಯೊಂದಕ್ಕೂ ಹೆದರುವವನು; ಉಪಕಾರಮಾಡಿದವರನ್ನು ಮರೆತು ಅವರಿಗೇ ಅಪಕಾರಮಾಡಲೂ ಹಿಂಜರಿಯದವನು; ಜಗಳಗಂಟ, ಯಾರೊಂದಿಗೂ ಸ್ನೇಹದಿಂದ ನಡೆದುಕೊಳ್ಳದವನು – ಇಂಥವನ ಹತ್ತಿರವೂ ಲಕ್ಷ್ಮಿ ಸುಳಿಯುವುದಿಲ್ಲ.</p>.<p>ಎಂದರೆ ಮೇಲಣ ದುರ್ಗುಣಗಳು ಯಾರಲ್ಲಿ ಇಲ್ಲವೋ ಅವರಲ್ಲಿ ಲಕ್ಷ್ಮಿ ನೆಲಸುತ್ತಾಳೆ ಎಂಬುದು ಸುಭಾಷಿತದ ಭಾವ.</p>.<p>ನಮ್ಮಲ್ಲಿ ಎಂಥ ಗುಣಗಳು ನೆಲಸಿವೆ ಎಂಬದೇ ನಮ್ಮ ಸುಖ–ಸಂಪತ್ತುಗಳಿಗೆ ಮಾನದಂಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉತ್ಸಾಹಸಂಪನ್ನಮದೀರ್ಘಸೂತ್ರಂ<br />ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್ ।<br />ಶೂರಂ ಕೃತಜ್ಞಂ ದೃಢಸೌಹೃದಂ ಚ<br />ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಉತ್ಸಾಹದಿಂದ ಕೂಡಿದವನೂ ಸೋಮಾರಿಯಲ್ಲದವನೂ ಕೆಲಸಮಾಡುವ ರೀತಿಯನ್ನು ಅರಿತವನೂ ಕೆಟ್ಟ ಅಭ್ಯಾಸಗಳಲ್ಲಿ ಆಸಕ್ತಿ ಇಲ್ಲದವನೂ ಶೂರನೂ ಕೃತಜ್ಞನೂ ಸ್ಥಿರವಾದ ಸೌಹಾರ್ದವುಳ್ಳವನೂ ಆದವನಲ್ಲಿ ನೆಲಸಲು ಲಕ್ಷ್ಮಿ ತಾನಾಗಿಯೇ ಬರುತ್ತಾಳೆ.‘</p>.<p>ಎಲ್ಲರೂ ಸುಖದಿಂದ ಬಾಳಬೇಕು ಎಂದು ಬಯಸುವುದು ಸಹಜ. ಸುಖದಿಂದ ಇರಲು ನಮಗೆ ಅರ್ಥದ ಬೆಂಬಲ ಬೇಕು ಎಂಬುದೂ ನಿಜ. ಅರ್ಥಸಂಪಾದನೆ ಎಂದರೆ ಕಷ್ಟಪಡಬೇಕು. ಅದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಅರ್ಥಸಂಪಾದನೆ ಎಂದರೆ ಕೇವಲ ಹಣ ಮಾತ್ರವೇ ಅಲ್ಲ; ನಮ್ಮ ಕಾರ್ಯಸಿದ್ಧಿಗೆ ಬೇಕಾದ ಎಲ್ಲ ಸಲಕರಣೆಗಳೂ ‘ಅರ್ಥ’ವೇ ಹೌದು. ಈ ಅರ್ಥಕ್ಕೆಲ್ಲ ಒಡತಿ ಶ್ರೀಲಕ್ಷ್ಮಿ. ಅವಳು ಎಲ್ಲಿರುವಳೋ ಅಲ್ಲಿ ಬಡತನವಿರುವುದಿಲ್ಲ, ಕಷ್ಟಕಾರ್ಪಣ್ಯಗಳೂ ಇರುವುದಿಲ್ಲ. ಆದುದರಿಂದಲೇ ಎಲ್ಲರೂ ಲಕ್ಷ್ಮಿ ನಮ್ಮಲ್ಲಿ ನೆಲಸಲಿ ಎಂದು ಪ್ರಾರ್ಥಿಸುವುದು.</p>.<p>ಆದರೆ ಲಕ್ಷ್ಮಿ ಎಲ್ಲರ ಸನಿಹದಲ್ಲಿ ಸುಲಭಕ್ಕೆ ಬಂದು ನೆಲಸುವುದಿಲ್ಲ. ಅವಳಿಗೆ ಕೆಟ್ಟ ಗುಣಗಳನ್ನು ಕಂಡರೆ ಆಗದು; ಅಂಥ ಗುಣಗಳನ್ನು ರೂಢಿಸಿಕೊಂಡವರ ಹತ್ತಿರವೂ ಅವಳು ಸುಳಿಯವುದಿಲ್ಲ. ಇಷ್ಟಕ್ಕೂ ಆ ದುರ್ಗುಣಗಳಾದರೂ ಯಾವುವು?</p>.<p>ಸದಾ ಜಡವಾಗಿ ಬೇಸರದಲ್ಲಿಯೇ ಮುಳುಗಿರುವುದು; ಸೋಮಾರಿಯಾಗಿ ಮೈಗಳ್ಳನಾಗಿರುವುದು; ಕೆಲಸಮಾಡಿದರೂ ಸರಿಯಾದ ರೀತಿಯಲ್ಲಿ ಅದರಲ್ಲಿ ತೊಡಗದಿರುವುದು; ಕೆಟ್ಟ ಚಟಗಳನ್ನು ಮೈಗೂಡಿಸಿಕೊಂಡವನು; ಹೇಡಿಯಾಗಿ ಪ್ರತಿಯೊಂದಕ್ಕೂ ಹೆದರುವವನು; ಉಪಕಾರಮಾಡಿದವರನ್ನು ಮರೆತು ಅವರಿಗೇ ಅಪಕಾರಮಾಡಲೂ ಹಿಂಜರಿಯದವನು; ಜಗಳಗಂಟ, ಯಾರೊಂದಿಗೂ ಸ್ನೇಹದಿಂದ ನಡೆದುಕೊಳ್ಳದವನು – ಇಂಥವನ ಹತ್ತಿರವೂ ಲಕ್ಷ್ಮಿ ಸುಳಿಯುವುದಿಲ್ಲ.</p>.<p>ಎಂದರೆ ಮೇಲಣ ದುರ್ಗುಣಗಳು ಯಾರಲ್ಲಿ ಇಲ್ಲವೋ ಅವರಲ್ಲಿ ಲಕ್ಷ್ಮಿ ನೆಲಸುತ್ತಾಳೆ ಎಂಬುದು ಸುಭಾಷಿತದ ಭಾವ.</p>.<p>ನಮ್ಮಲ್ಲಿ ಎಂಥ ಗುಣಗಳು ನೆಲಸಿವೆ ಎಂಬದೇ ನಮ್ಮ ಸುಖ–ಸಂಪತ್ತುಗಳಿಗೆ ಮಾನದಂಡ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>