<p>ಕಾಮಕ್ರೋಧಾವನಿರ್ಜಿತ್ಯ ಕಿಮರಣ್ಯೇ ಕರಿಷ್ಯತಿ ।</p>.<p>ಅಥವಾ ನಿರ್ಜಿತಾವೇತೌ ಕಿಮರಣ್ಯೇ ಕರಿಷ್ಯತಿ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>’ಕಾಮಕ್ರೋಧಗಳನ್ನು ಜಯಿಸದೆ ಕಾಡಿನಲ್ಲಿ ಏನನ್ನು ತಾನೇ ಮಾಡುತ್ತಾನೆ? ಅಥವಾ ಇವೆರಡನ್ನೂ ಗೆದ್ದಮೇಲೆ ಕಾಡಿನಲ್ಲಿ ಏನನ್ನು ತಾನೆ ಮಾಡುತ್ತಾನೆ?‘</p>.<p>ಸಾಧನೆಯ ದಿಟವಾದ ನೆಲೆ ಎಲ್ಲಿರುತ್ತದೆ – ಎನ್ನುವುದನ್ನು ಈ ಸುಭಾಷಿತ ಹೇಳುತ್ತಿದೆ.</p>.<p>ಅಧ್ಯಾತ್ಮಸಾಧನೆಗೆ ಏಕಾಂತ ಬೇಕು – ಎನ್ನುವುದು ರೂಢಿ. ಈ ಏಕಾಂತವನ್ನು ಅಪೇಕ್ಷಿಸುವುದಾದರೂ ಏಕೆ? ಜನರ ನಡುವೆಯೇ ಇದ್ದರೆ ನಮ್ಮ ರಾಗ–ದ್ವೇಷಗಳಿಂದ ಬಿಡುಗಡೆ ಸಿಗುವುದಿಲ್ಲ ಎಂದು. ಹೀಗೆ ನಮ್ಮ ಸಾಧನೆಗೆ ಜನರು ಅಡ್ಡಬಾರದಿರಲಿ ಎಂದು ಏಕಾಂತಸ್ಥಳಕ್ಕೆ ಧಾವಿಸುತ್ತೇವೆ. ಈ ಏಕಾಂತಸ್ಥಳ ಕಾಡು ಆಗಬಹುದು, ಹಿಮಾಲಯ ಆಗಬಹುದು, ಆಶ್ರಮ ಆಗಬಹುದು. ಆದರೆ ಅಲ್ಲಿಗೆ ಹೋದರೂ ನಮ್ಮ ಇದೇ ಮನಸ್ಸನ್ನೇ ತೆಗೆದುಕೊಂಡುಹೋಗಬೇಕಷ್ಟೆ! ಈ ಮನಸ್ಸು ಅಲ್ಲಿ ಬದಲಾವಣೆಯಾಗದೆ ನಮ್ಮ ಕಲ್ಮಶಗಳು ಹಾಗೇ ಉಳಿದರೆ ನಾವು ಕಾಡಿಗೆ ಹೋಗಿ ಧ್ಯಾನಮಾಡಿದ್ದರ ಫಲವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ.</p>.<p>ಹೀಗೆಯೇ ನಮ್ಮ ಮನಸ್ಸಿನ ಮೇಲೆ ನಮಗೆ ನಿಯಂತ್ರಣವಿದ್ದರೆ ನಾವು ಕಾಡಿಗೋ ಹಿಮಾಲಯಕ್ಕೋ ಏಕಾದರೂ ಹೋಗಬೇಕು? ಈಗಾಗಲೇ ನಮಗೆ ಏಕಾಂತದ ಫಲ, ಧ್ಯಾನದ ಫಲ ಸಿಕ್ಕಿರುವುದರಿಂದ ನಮಗೆ ಅಂಥ ಅನಿವಾರ್ಯತೆಯೇ ಬರುವುದಿಲ್ಲವಷ್ಟೆ!</p>.<p>ಇದರ ತಾತ್ಪರ್ಯ: ನಮ್ಮ ಸಾಧನೆಗೆ ಬೇಕಾಗಿರುವುದು ನಮ್ಮ ಮನಸ್ಸಿನ ಪಕ್ಚತೆಯೇ ಹೊರತು ಸ್ಥಳದ ಮಹಿಮೆಯಲ್ಲ. ಅಂತರಂಗ ಶುದ್ಧಿಯೇ ನಮ್ಮ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವಂಥದ್ದು. ಇದು ಹೇಗೆಂದರೆ:</p>.<p>ಕೇಶಾವಧಿ ನಖರಾಗ್ರಾದಿದಮಂತಃ ಪೂತಿಗಂಧಸಂಪೂರ್ಣಮ್ ।</p>.<p>ಬಹಿರಪಿ ಜಾನನ್ ಚಂದನಕರ್ಪೂರಾದ್ಯೈರ್ವಿಲೇಪಯತಿ ।।</p>.<p>ಇದರ ತಾತ್ಪರ್ಯ:</p>.<p>’ತಲೆಕೂದಲಿನಿಂದ ಉಗುರಿನವರೆಗೂ ದೇಹವು ಒಳಗಡೆ ದುರ್ಗಂಧದಿಂದ ತುಂಬಿದೆ. ಹೊರಗಡೆಯೂ ಅಷ್ಟೆ. ಇದು ಗೊತ್ತಿದ್ದರೂ ಶ್ರೀಗಂಧ–ಕರ್ಪೂರ ಮೊದಲಾದ ಸುಗಂಧಗಳಿಂದ ಹೊರಗಡೆ ಲೇಪನವನ್ನು ಮಾಡಿಕೊಳ್ಳುತ್ತೇವೆ.‘</p>.<p>ವಾಸ್ತವವನ್ನು ಮುಚ್ಚಿಡಲು ಏನೆಲ್ಲ ವೇಷಗಳನ್ನು ಧರಿಸಿದರೂ ಪ್ರಯೋಜವಿರದು; ಸತ್ಯ ಎನ್ನುವುದು ಹೊರಗೆ ಪ್ರಕಟವಾಗುವುದು ನಿಶ್ಚಯ.</p>.<p>ನಮ್ಮ ದೇಹದ ಒಳಗೂ ಹೊರಗೂ ದುರ್ಗಂಧ ಇರುವುದು ದೇಹವನ್ನೂ ಆ ದೇಹದಲ್ಲಿ ಸರಿಯಾಗಿ ಕೆಲಸ ಮಾಡುವ ಮೂಗು, ಎಂದರೆ ವಾಸನೆಯನ್ನು ಗ್ರಹಿಸಬಲ್ಲ ಮೂಗು ಇದ್ದವರ ಪ್ರತ್ಯಾಕ್ಷಾನುಭವಕ್ಕೆ ಬರುತ್ತಲೇ ಇರುತ್ತದೆಯಲ್ಲವೆ? ಈದುರ್ಗಂಧವನ್ನು ಹೋಗಲಾಡಿಸಿಕೊಳ್ಳಲು ಎಂಥ ಕೃತಕ ಸುಗಂಧದ್ರವ್ಯಗಳನ್ನು ಸುರಿದುಕೊಂಡರೂ ಪ್ರಯೋಜವಿರದು. ಈ ಕೃತಕ ಸುವಾಸನೆ ಒಣಗಿದ ಕೂಡಲೇ ದುರ್ಗಂಧ ಮೂಗಿಗೆ ಬಡಿಯಲು ಆರಂಭವಾಗುತ್ತದೆ. ಅಂತೆಯೇ ಮನಸ್ಸಿನಲ್ಲಿ ಕಾಮ–ಕ್ರೋಧ–ದ್ವೇಷಾದಿಗಳನ್ನು ತುಂಬಿಕೊಂಡು ಕಾಡಿಗೆ ಹೋದರೂ ಪ್ರಯೋಜನವಿರದು, ಹಿಮಾಲಯಕ್ಕೆ ಹೋದರೂ ಪ್ರಯೋಜನವಿರದು.</p>.<p>ಭ್ರಷ್ಟಾಚಾರವನ್ನೇ ಸ್ವಭಾವಮಾಡಿಕೊಂಡವರು ಪ್ರಾಮಾಣಿಕತೆಯ ಬಗ್ಗೆ ಉದ್ದುದ್ದ ಭಾಷಣ ಮಾಡಿದರೆ ಅದರಿಂದ ಪ್ರಯೋಜನವೇನು? ಅನಾರೋಗ್ಯದಲ್ಲಿ ನರಳುತ್ತಿರುವವನು ’ನಾನು ಆರೋಗ್ಯವಾಗಿದ್ದೇನೆ‘ ಎಂದು ಘೋಷಿಸಿಕೊಂಡರೆ ಅದರಿಂದ ಪ್ರಯೋಜನವೇನು?</p>.<p>ಹೀಗಾಗಿ ಇತರರಿಗೆ ಉಪದೇಶ ಕೋಡುವ ಮೊದಲು ಆ ತತ್ತ್ವಗಳನ್ನು ನಾವು ಎಷ್ಟು ಜೀರ್ಣಿಸಿಕೊಂಡಿದ್ದೇವೆ ಎನ್ನುವುದನ್ನು ಅವಲೋಕನ ಮಾಡಿಕೊಳ್ಳಬೇಕು. ನಾವು ಬಿಳಿಯ ಬಟ್ಟೆಗಳನ್ನು ಧರಿಸಿದ ಮಾತ್ರಕ್ಕೆ ಶಾಂತಿದೂತರು ಆಗುವುದಿಲ್ಲ; ಸಮಾನತೆಯ ಬಗ್ಗೆ ಭಾಷಣ ಮಾಡಿದ ಮಾತ್ರಕ್ಕೆ ಸಂತರೂ ಆಗುವುದಿಲ್ಲ. ದೇವಸ್ಥಾನಕ್ಕೆ ಹೋದಮಾತ್ರಕ್ಕೆ ಭಕ್ತರೂ ಆಗುವುದಿಲ್ಲ. ನಮ್ಮ ಅಂತರಂಗವೇ ನಮ್ಮ ನಡೆ–ನುಡಿಗಳಿಗೆ ಮಾನದಂಡ ಆಗಬೇಕು. ಈಜಲು ಬರುತ್ತದೆ – ಎಂಬ ಪ್ರಮಾಣಪತ್ರ ನೀರಿನಲ್ಲಿ ಮುಳುಗುತ್ತಿರುವವನ್ನು ರಕ್ಷಿಸದು; ಅವನನ್ನು ರಕ್ಷಿಸಬಲ್ಲದು ಅವನು ಕಲಿತಿರುವ ಈಜು ಮಾತ್ರವೇ. ಅವನು ಈಜನ್ನು ಕಲಿತಿದ್ದರೆ ಬದುಕುತ್ತಾನೆ; ಕಲಿಯದೆಯೇ ಖೋಟಾ ಸರ್ಟಿಫಿಕೇಟ್ ಮಾತ್ರವೇ ಇದ್ದವನು ಮುಳುಗುತ್ತಾನೆ, ಅಷ್ಟೇ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಮಕ್ರೋಧಾವನಿರ್ಜಿತ್ಯ ಕಿಮರಣ್ಯೇ ಕರಿಷ್ಯತಿ ।</p>.<p>ಅಥವಾ ನಿರ್ಜಿತಾವೇತೌ ಕಿಮರಣ್ಯೇ ಕರಿಷ್ಯತಿ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>’ಕಾಮಕ್ರೋಧಗಳನ್ನು ಜಯಿಸದೆ ಕಾಡಿನಲ್ಲಿ ಏನನ್ನು ತಾನೇ ಮಾಡುತ್ತಾನೆ? ಅಥವಾ ಇವೆರಡನ್ನೂ ಗೆದ್ದಮೇಲೆ ಕಾಡಿನಲ್ಲಿ ಏನನ್ನು ತಾನೆ ಮಾಡುತ್ತಾನೆ?‘</p>.<p>ಸಾಧನೆಯ ದಿಟವಾದ ನೆಲೆ ಎಲ್ಲಿರುತ್ತದೆ – ಎನ್ನುವುದನ್ನು ಈ ಸುಭಾಷಿತ ಹೇಳುತ್ತಿದೆ.</p>.<p>ಅಧ್ಯಾತ್ಮಸಾಧನೆಗೆ ಏಕಾಂತ ಬೇಕು – ಎನ್ನುವುದು ರೂಢಿ. ಈ ಏಕಾಂತವನ್ನು ಅಪೇಕ್ಷಿಸುವುದಾದರೂ ಏಕೆ? ಜನರ ನಡುವೆಯೇ ಇದ್ದರೆ ನಮ್ಮ ರಾಗ–ದ್ವೇಷಗಳಿಂದ ಬಿಡುಗಡೆ ಸಿಗುವುದಿಲ್ಲ ಎಂದು. ಹೀಗೆ ನಮ್ಮ ಸಾಧನೆಗೆ ಜನರು ಅಡ್ಡಬಾರದಿರಲಿ ಎಂದು ಏಕಾಂತಸ್ಥಳಕ್ಕೆ ಧಾವಿಸುತ್ತೇವೆ. ಈ ಏಕಾಂತಸ್ಥಳ ಕಾಡು ಆಗಬಹುದು, ಹಿಮಾಲಯ ಆಗಬಹುದು, ಆಶ್ರಮ ಆಗಬಹುದು. ಆದರೆ ಅಲ್ಲಿಗೆ ಹೋದರೂ ನಮ್ಮ ಇದೇ ಮನಸ್ಸನ್ನೇ ತೆಗೆದುಕೊಂಡುಹೋಗಬೇಕಷ್ಟೆ! ಈ ಮನಸ್ಸು ಅಲ್ಲಿ ಬದಲಾವಣೆಯಾಗದೆ ನಮ್ಮ ಕಲ್ಮಶಗಳು ಹಾಗೇ ಉಳಿದರೆ ನಾವು ಕಾಡಿಗೆ ಹೋಗಿ ಧ್ಯಾನಮಾಡಿದ್ದರ ಫಲವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ.</p>.<p>ಹೀಗೆಯೇ ನಮ್ಮ ಮನಸ್ಸಿನ ಮೇಲೆ ನಮಗೆ ನಿಯಂತ್ರಣವಿದ್ದರೆ ನಾವು ಕಾಡಿಗೋ ಹಿಮಾಲಯಕ್ಕೋ ಏಕಾದರೂ ಹೋಗಬೇಕು? ಈಗಾಗಲೇ ನಮಗೆ ಏಕಾಂತದ ಫಲ, ಧ್ಯಾನದ ಫಲ ಸಿಕ್ಕಿರುವುದರಿಂದ ನಮಗೆ ಅಂಥ ಅನಿವಾರ್ಯತೆಯೇ ಬರುವುದಿಲ್ಲವಷ್ಟೆ!</p>.<p>ಇದರ ತಾತ್ಪರ್ಯ: ನಮ್ಮ ಸಾಧನೆಗೆ ಬೇಕಾಗಿರುವುದು ನಮ್ಮ ಮನಸ್ಸಿನ ಪಕ್ಚತೆಯೇ ಹೊರತು ಸ್ಥಳದ ಮಹಿಮೆಯಲ್ಲ. ಅಂತರಂಗ ಶುದ್ಧಿಯೇ ನಮ್ಮ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವಂಥದ್ದು. ಇದು ಹೇಗೆಂದರೆ:</p>.<p>ಕೇಶಾವಧಿ ನಖರಾಗ್ರಾದಿದಮಂತಃ ಪೂತಿಗಂಧಸಂಪೂರ್ಣಮ್ ।</p>.<p>ಬಹಿರಪಿ ಜಾನನ್ ಚಂದನಕರ್ಪೂರಾದ್ಯೈರ್ವಿಲೇಪಯತಿ ।।</p>.<p>ಇದರ ತಾತ್ಪರ್ಯ:</p>.<p>’ತಲೆಕೂದಲಿನಿಂದ ಉಗುರಿನವರೆಗೂ ದೇಹವು ಒಳಗಡೆ ದುರ್ಗಂಧದಿಂದ ತುಂಬಿದೆ. ಹೊರಗಡೆಯೂ ಅಷ್ಟೆ. ಇದು ಗೊತ್ತಿದ್ದರೂ ಶ್ರೀಗಂಧ–ಕರ್ಪೂರ ಮೊದಲಾದ ಸುಗಂಧಗಳಿಂದ ಹೊರಗಡೆ ಲೇಪನವನ್ನು ಮಾಡಿಕೊಳ್ಳುತ್ತೇವೆ.‘</p>.<p>ವಾಸ್ತವವನ್ನು ಮುಚ್ಚಿಡಲು ಏನೆಲ್ಲ ವೇಷಗಳನ್ನು ಧರಿಸಿದರೂ ಪ್ರಯೋಜವಿರದು; ಸತ್ಯ ಎನ್ನುವುದು ಹೊರಗೆ ಪ್ರಕಟವಾಗುವುದು ನಿಶ್ಚಯ.</p>.<p>ನಮ್ಮ ದೇಹದ ಒಳಗೂ ಹೊರಗೂ ದುರ್ಗಂಧ ಇರುವುದು ದೇಹವನ್ನೂ ಆ ದೇಹದಲ್ಲಿ ಸರಿಯಾಗಿ ಕೆಲಸ ಮಾಡುವ ಮೂಗು, ಎಂದರೆ ವಾಸನೆಯನ್ನು ಗ್ರಹಿಸಬಲ್ಲ ಮೂಗು ಇದ್ದವರ ಪ್ರತ್ಯಾಕ್ಷಾನುಭವಕ್ಕೆ ಬರುತ್ತಲೇ ಇರುತ್ತದೆಯಲ್ಲವೆ? ಈದುರ್ಗಂಧವನ್ನು ಹೋಗಲಾಡಿಸಿಕೊಳ್ಳಲು ಎಂಥ ಕೃತಕ ಸುಗಂಧದ್ರವ್ಯಗಳನ್ನು ಸುರಿದುಕೊಂಡರೂ ಪ್ರಯೋಜವಿರದು. ಈ ಕೃತಕ ಸುವಾಸನೆ ಒಣಗಿದ ಕೂಡಲೇ ದುರ್ಗಂಧ ಮೂಗಿಗೆ ಬಡಿಯಲು ಆರಂಭವಾಗುತ್ತದೆ. ಅಂತೆಯೇ ಮನಸ್ಸಿನಲ್ಲಿ ಕಾಮ–ಕ್ರೋಧ–ದ್ವೇಷಾದಿಗಳನ್ನು ತುಂಬಿಕೊಂಡು ಕಾಡಿಗೆ ಹೋದರೂ ಪ್ರಯೋಜನವಿರದು, ಹಿಮಾಲಯಕ್ಕೆ ಹೋದರೂ ಪ್ರಯೋಜನವಿರದು.</p>.<p>ಭ್ರಷ್ಟಾಚಾರವನ್ನೇ ಸ್ವಭಾವಮಾಡಿಕೊಂಡವರು ಪ್ರಾಮಾಣಿಕತೆಯ ಬಗ್ಗೆ ಉದ್ದುದ್ದ ಭಾಷಣ ಮಾಡಿದರೆ ಅದರಿಂದ ಪ್ರಯೋಜನವೇನು? ಅನಾರೋಗ್ಯದಲ್ಲಿ ನರಳುತ್ತಿರುವವನು ’ನಾನು ಆರೋಗ್ಯವಾಗಿದ್ದೇನೆ‘ ಎಂದು ಘೋಷಿಸಿಕೊಂಡರೆ ಅದರಿಂದ ಪ್ರಯೋಜನವೇನು?</p>.<p>ಹೀಗಾಗಿ ಇತರರಿಗೆ ಉಪದೇಶ ಕೋಡುವ ಮೊದಲು ಆ ತತ್ತ್ವಗಳನ್ನು ನಾವು ಎಷ್ಟು ಜೀರ್ಣಿಸಿಕೊಂಡಿದ್ದೇವೆ ಎನ್ನುವುದನ್ನು ಅವಲೋಕನ ಮಾಡಿಕೊಳ್ಳಬೇಕು. ನಾವು ಬಿಳಿಯ ಬಟ್ಟೆಗಳನ್ನು ಧರಿಸಿದ ಮಾತ್ರಕ್ಕೆ ಶಾಂತಿದೂತರು ಆಗುವುದಿಲ್ಲ; ಸಮಾನತೆಯ ಬಗ್ಗೆ ಭಾಷಣ ಮಾಡಿದ ಮಾತ್ರಕ್ಕೆ ಸಂತರೂ ಆಗುವುದಿಲ್ಲ. ದೇವಸ್ಥಾನಕ್ಕೆ ಹೋದಮಾತ್ರಕ್ಕೆ ಭಕ್ತರೂ ಆಗುವುದಿಲ್ಲ. ನಮ್ಮ ಅಂತರಂಗವೇ ನಮ್ಮ ನಡೆ–ನುಡಿಗಳಿಗೆ ಮಾನದಂಡ ಆಗಬೇಕು. ಈಜಲು ಬರುತ್ತದೆ – ಎಂಬ ಪ್ರಮಾಣಪತ್ರ ನೀರಿನಲ್ಲಿ ಮುಳುಗುತ್ತಿರುವವನ್ನು ರಕ್ಷಿಸದು; ಅವನನ್ನು ರಕ್ಷಿಸಬಲ್ಲದು ಅವನು ಕಲಿತಿರುವ ಈಜು ಮಾತ್ರವೇ. ಅವನು ಈಜನ್ನು ಕಲಿತಿದ್ದರೆ ಬದುಕುತ್ತಾನೆ; ಕಲಿಯದೆಯೇ ಖೋಟಾ ಸರ್ಟಿಫಿಕೇಟ್ ಮಾತ್ರವೇ ಇದ್ದವನು ಮುಳುಗುತ್ತಾನೆ, ಅಷ್ಟೇ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>