<p><strong>ಸದ್ಭಿಸ್ತು ಲೀಲಯಾ ಪ್ರೋಕ್ತಂ ಶಿಲಾಲಿಖಿತಮಕ್ಷರಮ್ ।</strong></p>.<p><strong>ಅಸದ್ಭಿಃ ಶಪಥೇನೋಕ್ತಂ ಜಲೇ ಲಿಖಿತಮಕ್ಷರಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸಜ್ಜನರು ಸುಮ್ಮನೆ ಹೇಳಿದ ಮಾತು ಕೂಡ ಅದು ಕಲ್ಲಿನಲ್ಲಿ ಕೆತ್ತಿದ ಶಾಸನದಂತೆ; ಅದೇ ನೀಚರು ಮಾಡಿದ ಪ್ರತಿಜ್ಞೆಗಳು ಕೂಡ ಅವು ನೀರಿನಲ್ಲಿ ಬರೆದ ಬರಹಗಳಂತೆ.’</p>.<p>ಸಜ್ಜನರ ಮತ್ತು ದುರ್ಜನರ ಗುಣಗಳಲ್ಲಿ ಇರುವ ವ್ಯತ್ಯಾಸವನ್ನು ಸುಭಾಷಿತ ಹೇಳುತ್ತಿದೆ. ಇದಕ್ಕಾಗಿ ಅದು ಬಳಸಿಕೊಂಡಿರುವ ವಿಷಯ ‘ಮಾತು’.</p>.<p>ಮಾತಿನ ಶಕ್ತಿಯ ಬಗ್ಗೆ ಈ ಹಿಂದೆ ಹಲವು ಸಲ ನಾವು ಮಾತನಾಡಿದ್ದೇವೆ. ಮಾತು ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ; ನಮ್ಮ ಸಂಸ್ಕೃತಿ ಎಂಥದು ಎಂಬುದನ್ನು ತೋರಿಸುತ್ತದೆ. ನಮ್ಮ ಜೀವನದ ಎಲ್ಲ ಅಗುಹೋಗುಗಳಲ್ಲೂ ಮಾತಿನ ಪ್ರಭಾವ ಇದ್ದೇ ಇರುತ್ತದೆ. ಹೀಗೆ ನಮ್ಮ ಜೀವನಕ್ಕೇ ಬೆಳಕಾಗಿರುವ ಮಾತನ್ನು ಸಜ್ಜನ ಮತ್ತು ದುರ್ಜನ ಹೇಗೆ ನೋಡುತ್ತಾರೆ?</p>.<p>ಮಾತನ್ನು ಸಂವಹನಕ್ಕೆ ಬಳಸುತ್ತೇವೆ ಅಲ್ಲವೆ? ಎಂದರೆ ನಮ್ಮ ಭಾವನೆಗಳನ್ನು ಪ್ರಕಟಿಸಲು, ನಮ್ಮ ಬೇಕು–ಬೇಡಗಳನ್ನು ತಿಳಿಸಲು, ನಮ್ಮ ಮಾಹಿತಿ–ವಿದ್ಯೆಯನ್ನು ಹಂಚಿಕೊಳ್ಳಲು – ಹೀಗೆ ನಮ್ಮ ನಿತ್ಯದ ಬಹುಪಾಲು ಚಟುವಟಿಕೆಗಳು ಮಾತಿನಿಂದಲೇ ಕೂಡಿರುತ್ತವೆ. ಇದರ ಜೊತೆಗೆ ‘ಮಾತನ್ನು ಕೊಡುವುದು‘ ಎಂಬುದೊಂದಿದೆ. ಎಂದರೆ ಪ್ರತಿಜ್ಞೆಯನ್ನು ಮಾಡುವುದು, ವಾಗ್ದಾನವನ್ನು ನೀಡುವುದು, ಹೀಗೆ ಮಾಡಿಯೇ ತೀರುತ್ತೇನೆ – ಎಂದು ಪ್ರಮಾಣ ಮಾಡುವುದು, ಆಣೆಯನ್ನು ಮಾಡುವುದು. ಈ ವಿಷಯದಲ್ಲಿ ಸಜ್ಜನರ ಮತ್ತು ದುರ್ಜನರ ನಡೆವಳಿಕೆ ಹೇಗಿರುತ್ತದೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<p>ದುರ್ಜನ ಮಾತನ್ನು ಕೊಡುತ್ತಾನೆ; ಎಂದರೆ ಪ್ರಮಾಣಗಳನ್ನು ಮಾಡುತ್ತಾನೆ. ಸಹಾಯ ಮಾಡುತ್ತೇನೆ ಎಂದೋ, ಇಂಥ ಸಮಯಕ್ಕೆ ಬರುತ್ತೇನೆ ಎಂದೋ, ಸತ್ಯವನ್ನೇ ಹೇಳುತ್ತೇನೆ ಎಂದೋ, ಒಳ್ಳೆಯವನಾಗಿರುತ್ತೇನೆ ಎಂದೋ, ಮೋಸ ಮಾಡುವುದಿಲ್ಲ ಎಂದೋ – ಹೀಗೆ ಏನೇನೋ ವಿಷಯಗಳ ಬಗ್ಗೆ ಅವನು ಮಾತು ಕೊಡಬಹುದು; ಒಂದಲ್ಲ, ಹತ್ತಲ್ಲ, ನೂರು ಸಲ ಅವನು ಪ್ರಮಾಣ ಮಾಡಬಹುದು. ಆದರೆ ಅವನಿಗೆ ಮಾತಿನ ಬಗ್ಗೆ ಗೌರವ ಇರುವುದಿಲ್ಲ; ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಸಂಸ್ಕಾರವೂ ಇರುವುದಿಲ್ಲ. ಏಕೆಂದರೆ ಅವನ ಮಾತುಗಳು ನೀರಿನ ಮೇಲೆ ಬರೆದ ಬರಹಗಳಂತೆ, ಅಷ್ಟೆ!</p>.<p>ಆದರೆ ಸಜ್ಜನನಾದವನು ಹೀಗೆ ಪ್ರಮಾಣ ಮಾಡುವುದಿಲ್ಲ. ಅವನು ಸಾಧಾರಣವಾಗಿ ಆಡಿದ ಮಾತೇ ವೇದವಾಕ್ಯದಂತೆ ಗಟ್ಟಿಯಾಗಿರುತ್ತದೆ. ಅದು ಕಲ್ಲಿನಲ್ಲಿ ಕೆತ್ತಿದಂತೆ ಸ್ಥಿರವಾಗಿರುತ್ತದೆ. ಸಜ್ಜನ ತನ್ನ ಮಾತುಗಳನ್ನು ಎಂದೂ ಮರೆಯುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸದ್ಭಿಸ್ತು ಲೀಲಯಾ ಪ್ರೋಕ್ತಂ ಶಿಲಾಲಿಖಿತಮಕ್ಷರಮ್ ।</strong></p>.<p><strong>ಅಸದ್ಭಿಃ ಶಪಥೇನೋಕ್ತಂ ಜಲೇ ಲಿಖಿತಮಕ್ಷರಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸಜ್ಜನರು ಸುಮ್ಮನೆ ಹೇಳಿದ ಮಾತು ಕೂಡ ಅದು ಕಲ್ಲಿನಲ್ಲಿ ಕೆತ್ತಿದ ಶಾಸನದಂತೆ; ಅದೇ ನೀಚರು ಮಾಡಿದ ಪ್ರತಿಜ್ಞೆಗಳು ಕೂಡ ಅವು ನೀರಿನಲ್ಲಿ ಬರೆದ ಬರಹಗಳಂತೆ.’</p>.<p>ಸಜ್ಜನರ ಮತ್ತು ದುರ್ಜನರ ಗುಣಗಳಲ್ಲಿ ಇರುವ ವ್ಯತ್ಯಾಸವನ್ನು ಸುಭಾಷಿತ ಹೇಳುತ್ತಿದೆ. ಇದಕ್ಕಾಗಿ ಅದು ಬಳಸಿಕೊಂಡಿರುವ ವಿಷಯ ‘ಮಾತು’.</p>.<p>ಮಾತಿನ ಶಕ್ತಿಯ ಬಗ್ಗೆ ಈ ಹಿಂದೆ ಹಲವು ಸಲ ನಾವು ಮಾತನಾಡಿದ್ದೇವೆ. ಮಾತು ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ; ನಮ್ಮ ಸಂಸ್ಕೃತಿ ಎಂಥದು ಎಂಬುದನ್ನು ತೋರಿಸುತ್ತದೆ. ನಮ್ಮ ಜೀವನದ ಎಲ್ಲ ಅಗುಹೋಗುಗಳಲ್ಲೂ ಮಾತಿನ ಪ್ರಭಾವ ಇದ್ದೇ ಇರುತ್ತದೆ. ಹೀಗೆ ನಮ್ಮ ಜೀವನಕ್ಕೇ ಬೆಳಕಾಗಿರುವ ಮಾತನ್ನು ಸಜ್ಜನ ಮತ್ತು ದುರ್ಜನ ಹೇಗೆ ನೋಡುತ್ತಾರೆ?</p>.<p>ಮಾತನ್ನು ಸಂವಹನಕ್ಕೆ ಬಳಸುತ್ತೇವೆ ಅಲ್ಲವೆ? ಎಂದರೆ ನಮ್ಮ ಭಾವನೆಗಳನ್ನು ಪ್ರಕಟಿಸಲು, ನಮ್ಮ ಬೇಕು–ಬೇಡಗಳನ್ನು ತಿಳಿಸಲು, ನಮ್ಮ ಮಾಹಿತಿ–ವಿದ್ಯೆಯನ್ನು ಹಂಚಿಕೊಳ್ಳಲು – ಹೀಗೆ ನಮ್ಮ ನಿತ್ಯದ ಬಹುಪಾಲು ಚಟುವಟಿಕೆಗಳು ಮಾತಿನಿಂದಲೇ ಕೂಡಿರುತ್ತವೆ. ಇದರ ಜೊತೆಗೆ ‘ಮಾತನ್ನು ಕೊಡುವುದು‘ ಎಂಬುದೊಂದಿದೆ. ಎಂದರೆ ಪ್ರತಿಜ್ಞೆಯನ್ನು ಮಾಡುವುದು, ವಾಗ್ದಾನವನ್ನು ನೀಡುವುದು, ಹೀಗೆ ಮಾಡಿಯೇ ತೀರುತ್ತೇನೆ – ಎಂದು ಪ್ರಮಾಣ ಮಾಡುವುದು, ಆಣೆಯನ್ನು ಮಾಡುವುದು. ಈ ವಿಷಯದಲ್ಲಿ ಸಜ್ಜನರ ಮತ್ತು ದುರ್ಜನರ ನಡೆವಳಿಕೆ ಹೇಗಿರುತ್ತದೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<p>ದುರ್ಜನ ಮಾತನ್ನು ಕೊಡುತ್ತಾನೆ; ಎಂದರೆ ಪ್ರಮಾಣಗಳನ್ನು ಮಾಡುತ್ತಾನೆ. ಸಹಾಯ ಮಾಡುತ್ತೇನೆ ಎಂದೋ, ಇಂಥ ಸಮಯಕ್ಕೆ ಬರುತ್ತೇನೆ ಎಂದೋ, ಸತ್ಯವನ್ನೇ ಹೇಳುತ್ತೇನೆ ಎಂದೋ, ಒಳ್ಳೆಯವನಾಗಿರುತ್ತೇನೆ ಎಂದೋ, ಮೋಸ ಮಾಡುವುದಿಲ್ಲ ಎಂದೋ – ಹೀಗೆ ಏನೇನೋ ವಿಷಯಗಳ ಬಗ್ಗೆ ಅವನು ಮಾತು ಕೊಡಬಹುದು; ಒಂದಲ್ಲ, ಹತ್ತಲ್ಲ, ನೂರು ಸಲ ಅವನು ಪ್ರಮಾಣ ಮಾಡಬಹುದು. ಆದರೆ ಅವನಿಗೆ ಮಾತಿನ ಬಗ್ಗೆ ಗೌರವ ಇರುವುದಿಲ್ಲ; ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಸಂಸ್ಕಾರವೂ ಇರುವುದಿಲ್ಲ. ಏಕೆಂದರೆ ಅವನ ಮಾತುಗಳು ನೀರಿನ ಮೇಲೆ ಬರೆದ ಬರಹಗಳಂತೆ, ಅಷ್ಟೆ!</p>.<p>ಆದರೆ ಸಜ್ಜನನಾದವನು ಹೀಗೆ ಪ್ರಮಾಣ ಮಾಡುವುದಿಲ್ಲ. ಅವನು ಸಾಧಾರಣವಾಗಿ ಆಡಿದ ಮಾತೇ ವೇದವಾಕ್ಯದಂತೆ ಗಟ್ಟಿಯಾಗಿರುತ್ತದೆ. ಅದು ಕಲ್ಲಿನಲ್ಲಿ ಕೆತ್ತಿದಂತೆ ಸ್ಥಿರವಾಗಿರುತ್ತದೆ. ಸಜ್ಜನ ತನ್ನ ಮಾತುಗಳನ್ನು ಎಂದೂ ಮರೆಯುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>