ಕಬ್ಬಿಣದಂತಹ ಈ ಮನಸ್ಸಿನಲ್ಲಿರುವ ತುಕ್ಕನ್ನು ಕರ್ಮಯೋಗ ಸಾಧನೆಯ ಮೂಲಕ ಉಜ್ಜಿ ಉಜ್ಜಿ ತೆಗೆಯಬೇಕು. ಮತ್ತೆ ಅದಕ್ಕೆ ತುಕ್ಕು ಹಿಡಿಯುದಂತೆ ನೋಡಿಕೊಳ್ಳಬೇಕು. ಧ್ಯಾನ, ಜಪ, ಪ್ರಾರ್ಥನೆ ಮುಂತಾದ ಆಧ್ಯಾತ್ಮಿಕ ಸಾಧನೆಗಳ ಮೂಲಕ ಅದನ್ನು ಉಕ್ಕಾಗಿ ಪರಿವರ್ತಿಸಬೇಕು. ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಅದನ್ನು ಸುಂದರ ಚಿನ್ನದ ಪಾತ್ರೆಯಾಗಿ ಮಾರ್ಪಡಿಸಬೇಕು. ಆಗ ಅದರಲ್ಲಿ ಭಗವದ್ಭಾವ ಕೆಡದೆ ಉಳಿಯುತ್ತದೆ.