<p><em><strong>ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಮ್ ।<br />ವೃಥಾ ದಾನಂ ಸಮರ್ಥೇಭ್ಯೋ ವೃಥಾ ದೀಪೋ ದಿವಾಪಿ ಚ ।।</strong></em></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸಮುದ್ರದಲ್ಲಿ ಮಳೆಯೂ, ಹೊಟ್ಟೆ ತುಂಬಿದವನಿಗೆ ಊಟವೂ ವ್ಯರ್ಥ; ಸಮರ್ಥರಿಗೆ ದಾನಮಾಡುವುದು ವ್ಯರ್ಥ; ಹಗಲು ಹೊತ್ತಿನಲ್ಲಿ ದೀಪ ವ್ಯರ್ಥ.’</p>.<p>ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ವವಿದೆ; ಯಾವ ವಸ್ತುವೂ ವ್ಯರ್ಥ ಅಲ್ಲ. ಆದರೆ ಕೆಲವೊಮ್ಮೆ ವ್ಯರ್ಥವೂ ಆಗಬಲ್ಲದು. ಇದು ಯಾವಾಗ? ಯಾವ ವಸ್ತು ಎಲ್ಲಿರಬಾರದೋ ಅಲ್ಲಿ ಅದು ಇದ್ದರೆ ಆಗ ಅದು ವ್ಯರ್ಥವೇ ಅಗುತ್ತದೆ. ಸುಭಾಷಿತ ಇಂಥದ್ದೇ ವಿಷಯವನ್ನು ಹೇಳುತ್ತಿರುವುದು.</p>.<p>ಮಳೆ ಬೇಕು. ಏಕೆಂದರೆ ನೀರು ಇಲ್ಲದೆ ನಮ್ಮ ಜೀವನವೇ ಇಲ್ಲ. ಆದರೆ ಮಳೆ ಎಲ್ಲಿ ಬರಬೇಕೋ ಅಲ್ಲೇ ಬೀಳಬೇಕು. ಮಳೆ ಸಮುದ್ರದಲ್ಲಿ ಬಿದ್ದರೆ ಏನು ಪ್ರಯೋಜನ? ಅದು ನೆಲದ ಮೇಲೆ ಬೀಳಬೇಕು; ಆಗಲೇ ಉಪಯೋಗ, ಸಾರ್ಥಕತೆ.</p>.<p>ಅನ್ನ ಎಲ್ಲರಿಗೂ ಬೇಕು, ದಿಟ; ಆದರೆ ಯಾವಾಗ ಬೇಕು? ಹಸಿದಿರುವಾಗ ಅನ್ನ ಬೇಕೇ ಹೊರತು ಹೊಟ್ಟೆ ತುಂಬಿರುವಾಗ ಬೇಡ. ಒಬ್ಬ ವ್ಯಕ್ತಿಗೆ ಹೊಟ್ಟೆ ತುಂಬಿ ತೃಪ್ತನಾಗಿರುವಾಗ ಎಂಥ ಪರಮಾನ್ನವನ್ನು ಅವನಿಗೆ ಬಡಿಸಿದರೂ ಅದನ್ನು ಅವನು ತಿನ್ನಲಾರ, ಬಡಿಸಿದ ಅನ್ನ ಆಗ ವ್ಯರ್ಥವೇ ಸರಿ.</p>.<p>ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೇ ವಿನಾ ಸುಖದಲ್ಲಿರುವವರಿಗೆ ಅಲ್ಲ. ಸುಭಾಷಿತ ಅದನ್ನೇ ಹೇಳುತ್ತಿರುವುದು. ದಾನವನ್ನು ಯೋಗ್ಯರಿಗೆ ಮಾಡಬೇಕು ಎಂದು ಶಾಸ್ತ್ರಗಳು ಕೂಡ ಹೇಳುತ್ತವೆ. ಯೋಗ್ಯರು ಎಂದರೆ ಗುಣದಿಂದಲೂ ಯೋಗ್ಯರಾಗಿರಬೇಕು; ಅವರಿಗೆ ದಾನದ ಆವಶ್ಯಕತೆಯೂ ಇರಬೇಕು. ಅಂಥವರಿಗೆ ಮಾತ್ರವೇ ನಮ್ಮ ದಾನ ಸಲ್ಲಬೇಕು. ಹೀಗಲ್ಲದೆ ಯಾರಿಗೋ ಒಬ್ಬರಿಗೆ ದಾನ ಕೊಟ್ಟರೆ ಆಯಿತು ಎಂದು ಹೊಟ್ಟೆ ತುಂಬಿರುವವರಿಗೂ ಕೊಟ್ಟರೆ ಅದು ವ್ಯರ್ಥದಾನವಾಗುತ್ತದೆ ಅಷ್ಟೆ.</p>.<p>ಬೆಳಗಿನ ಹೊತ್ತಿನಲ್ಲಿ ದೀಪದ ಆವಶ್ಯಕತೆ ಇರುವುದಿಲ್ಲ. ಸೂರ್ಯನ ಮುಂದೆ ಎಂಥ ದೀಪವಾದರೂ ಎಷ್ಟಾದರೂ ಬೆಳಕನ್ನು ಕೊಟ್ಟೀತು? ಹೀಗಾಗಿ ಸೂರ್ಯನ ಬೆಳಕಿನಲ್ಲಿ ದೀಪವನ್ನು ಬೆಳಗಲು ಸಿದ್ಧರಾದರೆ ಲೋಕ ನಮ್ಮನ್ನು ಹುಚ್ಚರು ಎಂದು ಕರೆಯುವುದು ಖಂಡಿತ.</p>.<p>ಹೀಗೆಯೇ ಮನೆಯಲ್ಲಿ ಯಾವ ವಸ್ತು ಎಲ್ಲಿರಬೇಕೋ ಅಲ್ಲಿದ್ದರೆ ಮಾತ್ರವೇ ಅದಕ್ಕೆ ಬೆಲೆ, ಮರ್ಯಾದೆ. ತರಕಾರಿ ಎಲ್ಲಿರಬೇಕೋ ಅಲ್ಲಿಯೇ ಇರಬೇಕು; ಒಲೆ ಎಲ್ಲಿರಬೇಕೋ ಅಲ್ಲಿಯೇ ಇರಬೇಕು; ಊಟವನ್ನು ಎಲ್ಲಿ ಮಾಡಬೇಕೋ ಅಲ್ಲಿಯೇ ಮಾಡಬೇಕು. ಹೀಗೆಯೇ ನಾವು ಎಲ್ಲೆಲ್ಲಿ ಹೇಗಿರಬೇಕೋ ಅಲ್ಲಲ್ಲಿ ಹಾಗೆಯೇ ಇರಬೇಕು. ಇಲ್ಲವಾದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಬೆಲೆಯೂ ಇರುವುದಿಲ್ಲ; ಮಾತ್ರವಲ್ಲ, ನಮ್ಮ ಜೀವನವೇ ವ್ಯರ್ಥವಾಗುವುದು ಖಂಡಿತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ವೃಥಾ ವೃಷ್ಟಿಃ ಸಮುದ್ರೇಷು ವೃಥಾ ತೃಪ್ತಸ್ಯ ಭೋಜನಮ್ ।<br />ವೃಥಾ ದಾನಂ ಸಮರ್ಥೇಭ್ಯೋ ವೃಥಾ ದೀಪೋ ದಿವಾಪಿ ಚ ।।</strong></em></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಸಮುದ್ರದಲ್ಲಿ ಮಳೆಯೂ, ಹೊಟ್ಟೆ ತುಂಬಿದವನಿಗೆ ಊಟವೂ ವ್ಯರ್ಥ; ಸಮರ್ಥರಿಗೆ ದಾನಮಾಡುವುದು ವ್ಯರ್ಥ; ಹಗಲು ಹೊತ್ತಿನಲ್ಲಿ ದೀಪ ವ್ಯರ್ಥ.’</p>.<p>ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವಿಗೂ ಅದರದ್ದೇ ಆದ ಮಹತ್ವವಿದೆ; ಯಾವ ವಸ್ತುವೂ ವ್ಯರ್ಥ ಅಲ್ಲ. ಆದರೆ ಕೆಲವೊಮ್ಮೆ ವ್ಯರ್ಥವೂ ಆಗಬಲ್ಲದು. ಇದು ಯಾವಾಗ? ಯಾವ ವಸ್ತು ಎಲ್ಲಿರಬಾರದೋ ಅಲ್ಲಿ ಅದು ಇದ್ದರೆ ಆಗ ಅದು ವ್ಯರ್ಥವೇ ಅಗುತ್ತದೆ. ಸುಭಾಷಿತ ಇಂಥದ್ದೇ ವಿಷಯವನ್ನು ಹೇಳುತ್ತಿರುವುದು.</p>.<p>ಮಳೆ ಬೇಕು. ಏಕೆಂದರೆ ನೀರು ಇಲ್ಲದೆ ನಮ್ಮ ಜೀವನವೇ ಇಲ್ಲ. ಆದರೆ ಮಳೆ ಎಲ್ಲಿ ಬರಬೇಕೋ ಅಲ್ಲೇ ಬೀಳಬೇಕು. ಮಳೆ ಸಮುದ್ರದಲ್ಲಿ ಬಿದ್ದರೆ ಏನು ಪ್ರಯೋಜನ? ಅದು ನೆಲದ ಮೇಲೆ ಬೀಳಬೇಕು; ಆಗಲೇ ಉಪಯೋಗ, ಸಾರ್ಥಕತೆ.</p>.<p>ಅನ್ನ ಎಲ್ಲರಿಗೂ ಬೇಕು, ದಿಟ; ಆದರೆ ಯಾವಾಗ ಬೇಕು? ಹಸಿದಿರುವಾಗ ಅನ್ನ ಬೇಕೇ ಹೊರತು ಹೊಟ್ಟೆ ತುಂಬಿರುವಾಗ ಬೇಡ. ಒಬ್ಬ ವ್ಯಕ್ತಿಗೆ ಹೊಟ್ಟೆ ತುಂಬಿ ತೃಪ್ತನಾಗಿರುವಾಗ ಎಂಥ ಪರಮಾನ್ನವನ್ನು ಅವನಿಗೆ ಬಡಿಸಿದರೂ ಅದನ್ನು ಅವನು ತಿನ್ನಲಾರ, ಬಡಿಸಿದ ಅನ್ನ ಆಗ ವ್ಯರ್ಥವೇ ಸರಿ.</p>.<p>ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೇ ವಿನಾ ಸುಖದಲ್ಲಿರುವವರಿಗೆ ಅಲ್ಲ. ಸುಭಾಷಿತ ಅದನ್ನೇ ಹೇಳುತ್ತಿರುವುದು. ದಾನವನ್ನು ಯೋಗ್ಯರಿಗೆ ಮಾಡಬೇಕು ಎಂದು ಶಾಸ್ತ್ರಗಳು ಕೂಡ ಹೇಳುತ್ತವೆ. ಯೋಗ್ಯರು ಎಂದರೆ ಗುಣದಿಂದಲೂ ಯೋಗ್ಯರಾಗಿರಬೇಕು; ಅವರಿಗೆ ದಾನದ ಆವಶ್ಯಕತೆಯೂ ಇರಬೇಕು. ಅಂಥವರಿಗೆ ಮಾತ್ರವೇ ನಮ್ಮ ದಾನ ಸಲ್ಲಬೇಕು. ಹೀಗಲ್ಲದೆ ಯಾರಿಗೋ ಒಬ್ಬರಿಗೆ ದಾನ ಕೊಟ್ಟರೆ ಆಯಿತು ಎಂದು ಹೊಟ್ಟೆ ತುಂಬಿರುವವರಿಗೂ ಕೊಟ್ಟರೆ ಅದು ವ್ಯರ್ಥದಾನವಾಗುತ್ತದೆ ಅಷ್ಟೆ.</p>.<p>ಬೆಳಗಿನ ಹೊತ್ತಿನಲ್ಲಿ ದೀಪದ ಆವಶ್ಯಕತೆ ಇರುವುದಿಲ್ಲ. ಸೂರ್ಯನ ಮುಂದೆ ಎಂಥ ದೀಪವಾದರೂ ಎಷ್ಟಾದರೂ ಬೆಳಕನ್ನು ಕೊಟ್ಟೀತು? ಹೀಗಾಗಿ ಸೂರ್ಯನ ಬೆಳಕಿನಲ್ಲಿ ದೀಪವನ್ನು ಬೆಳಗಲು ಸಿದ್ಧರಾದರೆ ಲೋಕ ನಮ್ಮನ್ನು ಹುಚ್ಚರು ಎಂದು ಕರೆಯುವುದು ಖಂಡಿತ.</p>.<p>ಹೀಗೆಯೇ ಮನೆಯಲ್ಲಿ ಯಾವ ವಸ್ತು ಎಲ್ಲಿರಬೇಕೋ ಅಲ್ಲಿದ್ದರೆ ಮಾತ್ರವೇ ಅದಕ್ಕೆ ಬೆಲೆ, ಮರ್ಯಾದೆ. ತರಕಾರಿ ಎಲ್ಲಿರಬೇಕೋ ಅಲ್ಲಿಯೇ ಇರಬೇಕು; ಒಲೆ ಎಲ್ಲಿರಬೇಕೋ ಅಲ್ಲಿಯೇ ಇರಬೇಕು; ಊಟವನ್ನು ಎಲ್ಲಿ ಮಾಡಬೇಕೋ ಅಲ್ಲಿಯೇ ಮಾಡಬೇಕು. ಹೀಗೆಯೇ ನಾವು ಎಲ್ಲೆಲ್ಲಿ ಹೇಗಿರಬೇಕೋ ಅಲ್ಲಲ್ಲಿ ಹಾಗೆಯೇ ಇರಬೇಕು. ಇಲ್ಲವಾದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಬೆಲೆಯೂ ಇರುವುದಿಲ್ಲ; ಮಾತ್ರವಲ್ಲ, ನಮ್ಮ ಜೀವನವೇ ವ್ಯರ್ಥವಾಗುವುದು ಖಂಡಿತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>