ತಾಪತ್ರಯಗಳನ್ನು ನಿವಾರಿಸುವುದರಲ್ಲಿ ಇಡೀ ಜೀವನ ಕಳೆದು ಹೋಗುತ್ತದೆ. ಅನುಭವಿಸುವುದಕ್ಕೆ ಸಮಯವೇ ಇರುವುದಿಲ್ಲ. ಈ ಮನೋಭಾವಕ್ಕೆ ಕಾರಣ ಕಷ್ಟಗಳ ಅಭಾವವೇ ಸುಖಃ ಎಂಬ ತಪ್ಪು ಕಲ್ಪನೆ. ಕಷ್ಟಗಳು ಏನೂ ಇಲ್ಲದಿದ್ದರೂ ನಾವು ಸುಖ:ವಾಗಿರುವುದಿಲ್ಲ. ಒಬ್ಬ ಬೌದ್ಧ ಸನ್ಯಾಸಿ ಹೇಳುತ್ತಾರೆ: ನಾವು ಹಲ್ಲು ನೋವಿನಿಂದ ನರಳುತ್ತಿರುವಾಗ ಹಲ್ಲು ನೋವು ಇಲ್ಲದಿದ್ದರೆ ಎಷ್ಟು ಚೆನ್ನಾಗಿರುತ್ತೆ ಎಂದು ಭಾವಿಸುತ್ತೇವೆ. ಆದರೆ, ಹಲ್ಲು ನೋವು ಇಲ್ಲದಿರುವಾಗಲೂ ನಾವೇನೂ ಸುಖ:ವಾಗಿರುವುದಿಲ್ಲ. ಆದ್ದರಿಂದ ಸುಖ: ನಮ್ಮ ಮನೋಭಾವವನ್ನು ಅವಲಂಬಿಸಿರುತ್ತದೆ. ನಾನು ಸುಖ:ವಾಗಿರಬೇಕೆಂದು ಬಯಸಿದರೆ ಕಷ್ಟಗಳ ನಡುವೆಯೂ ನಾನು ಸುಖ:ವಾಗಿರಬಹುದು. ಅವು ಕೇವಲ ಬಾಹ್ಯ ಘಟನೆಗಳು ಅಷ್ಟೇ. ಆದರೆ, ಸುಖ: ಆಂತರಿಕ ಸ್ಥಿತಿ. ನಾವು ಆಂತರಿಕ ಸ್ಥಿತಿಯಲ್ಲಿ ಸ್ಥಿರವಾಗಿ ನಿಂತಾಗ ಬಾಹ್ಯ ಘಟನೆಗಳಾವುವೂ ನಮ್ಮನ್ನು ವಿಚಲಿತಗೊಳಿಸಲಾರವು. ಇದೇ ನಿಜವಾದ ಸುಖ:ದ ಸ್ಥಿತಿ.