ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭ. ನರಸಿಂಹಯ್ಯ ಮತ್ತು ವೆಂಕಟೇಶ್ ತಂಡದಿಂದ ಕರ್ನಾಟಕ ಸಂಗೀತ ನಾದಸ್ವರ, ದಾತಾರ್ ಇನ್ಸ್ಟಿಟ್ಯೂಟ್ ಆಫ್ ಪರ್ಫಾರ್ಮಿಂಗ್ ಆಟ್ರ್ಸ್ ಕಲಾವಿದರಿಂದ ಭರತನಾಟ್ಯ ಮತ್ತು ಮೋಹಿನಿಯಾಟ್ಟಂ, 'ನಾಟ್ಯಾಂತರಂಗ' ಕಲಾವಿದರಿಂದ ಭರತನಾಟ್ಯ ಕಥಕ್ ನೃತ್ಯ, 'ನರ್ತನಪ್ರಿಯ' ಕಲಾವಿದರಿಂದ ಭರತನಾಟ್ಯ, 'ನಂದಿ ತಾಳವಾದ್ಯ' ತಂಡದಿಂದ ಕರ್ನಾಟಕ ಸಂಗೀತ ತಾಳವಾದ್ಯ,'ಕರ್ನಾಟಕ ಕಲಾದರ್ಶಿನಿ' ಕಲಾವಿದರಿಂದ 'ದಕ್ಷ ಯಜ್ಞ ಗಿರಿಜಾ ಕಲ್ಯಾಣ' ಯಕ್ಷಗಾನ ಪ್ರಸಂಗ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.