<p>2026ರ ಹೊಸವರ್ಷ ಆರಂಭವಾಗಿದೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯ ಚೈತ್ರ ಮಾಸದ ಆರಂಭದೊಂದಿಗೆ ಹೊಸವರ್ಷ ಪ್ರಾರಂಭವಾಗುತ್ತದೆ. 2026ರಲ್ಲಿ ಬರುವ ಮೊದಲ ಹಿಂದೂ ಹಬ್ಬವಾದ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವೆಂದೂ ಕರೆಯುತ್ತಾರೆ. ಹಾಗಾದರೆ ಸಂಕ್ರಾತಿಯ ಹಬ್ಬದ ಸಂಪ್ರದಾಯ ಹಾಗೂ ಮಹತ್ವವೇನು ಎಂಬುದನ್ನು ತಿಳಿಯೋಣ. </p>.ದಿನ ಭವಿಷ್ಯ: ಜನವರಿ 7 ಬುಧವಾರ 2026– ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆ.<p><strong>ಆಚರಣೆ ಹಿನ್ನೆಲೆ</strong></p><p>ಮಕರ ಸಂಕ್ರಾತಿ ಕೇವಲ ಹಬ್ಬವಲ್ಲ, ಇದು ಪ್ರಕೃತಿಯ ಹಬ್ಬವಾಗಿದೆ. ಈ ಹಬ್ಬದಂದು ಪ್ರಕೃತಿಯಲ್ಲಿ ಬದಲಾವಣೆಯಾಗಲಿದೆ. ಅದರಲ್ಲಿಯೂ ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಿದ್ದಂತೆ ಸಂಕ್ರಾತಿ ಆರಂಭವಾಗುತ್ತದೆ. ಜನವರಿ 14ರಂದು ಸಂಕ್ರಾತಿಯನ್ನು ದೇಶದಾದ್ಯಂತ ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕ್ರಮಣ ಕಾಲವೆಂದೂ ಕರೆಯುತ್ತಾರೆ. </p><p>ಜ್ಯೋತಿಷ್ಯ ಶಾಸ್ತ್ರದ ಹೇಳುವಂತೆ, ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದು ಸುಗ್ಗಿಯ ಕಾಲವಾಗಿರುವುದರಿಂದ ರೈತರು ಬೆಳದ ಬೆಳೆಯನ್ನು ಕಟಾವು ಮಾಡಿ ಮನೆಯಲ್ಲಿ ತುಂಬಿರುತ್ತಾರೆ. ಈ ದಿನ ವಿಶೇಷವಾಗಿ ಎಳ್ಳು ಬೆಲ್ಲವನ್ನು ತಯಾರು ಮಾಡಿ ಇತರರಿಗೂ ಹಂಚಿ ಸೇವಿಸಲಾಗುತ್ತದೆ. </p><p><strong>ಹೀಗೆ ಆಚರಿಸಿ</strong></p><p>ಈ ದಿನ ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಬಾಗಿಲಿಗೆ ತೋರಣವನ್ನು ಕಟ್ಟಬೇಕು. ಬಳಿಕ ಮನೆಯ ಮುಂದೆ ರಂಗೋಲಿ ಬಿಡಬೇಕು. ದೇವರ ಮನೆಯನ್ನು ಸ್ವಚ್ಛಗೊಳಿಸಿ ಸಿರಿಧಾನ್ಯಗಳನ್ನಿಟ್ಟು ದೇವರಿಗೆ ಪೂಜೆ ಸಲ್ಲಿಸಿದರೆ ಶುಭವಾಗಲಿದೆ ಎಂಬ ನಂಬಿಕೆ ಇದೆ. </p><p>ಮನೆಯಲ್ಲಿರುವ ದನ ಕರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಬೇಕು. ಅವುಗಳಿಗೆ ಮೈ ತೊಳೆದು, ಕೊಂಬಿಗೆ ಎಣ್ಣೆ ಸವರಿ, ಅರಿಸಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ. ಅಲ್ಲದೇ ದನಕರುಗಳಿಗೆ ಈ ದಿನ ಕಿಚ್ಚು ಹಾಯಿಸುವ ಪದ್ದತಿಯೂ ಹಲವೆಡೆ ಇದೆ.</p><p><strong>ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕ್ರಾಂತಿ ಆರಂಭದ ಸಮಯ </strong></p><p>ಜನವರಿ 14ರಂದು ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. </p><p>ಈ ದಿನ ಮಧ್ಯಾಹ್ನ 3:31 ರಿಂದ, ಸಂಜೆ 5:45 ನಡುವೆ ಸೂರ್ಯ ಚಲಿಸಲಿದ್ದಾನೆ. ಈ ಅವಧಿ ಸುಮಾರು 2 ಗಂಟೆ 32 ನಿಮಿಷಗಳಾಗಿದೆ. ಈ ಅವಧಿಯಲ್ಲಿ ಯವುದೇ ಶುಭ ಕೆಲಸವನ್ನು ಆರಂಭ ಮಾಡಬಹುದು. ಸೂರ್ಯನಿಗೆ ನೈವೇದ್ಯ ಅರ್ಪಿಸಿ, ನಿಮ್ಮ ಇಷ್ಟ ದೇವರಿಗೆ ಪೂಜೆ ಸಲ್ಲಿಸುವುದು ಶುಭಕರ ಎಂದು ಜ್ಯೋತಿಷ ಹೇಳುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2026ರ ಹೊಸವರ್ಷ ಆರಂಭವಾಗಿದೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯ ಚೈತ್ರ ಮಾಸದ ಆರಂಭದೊಂದಿಗೆ ಹೊಸವರ್ಷ ಪ್ರಾರಂಭವಾಗುತ್ತದೆ. 2026ರಲ್ಲಿ ಬರುವ ಮೊದಲ ಹಿಂದೂ ಹಬ್ಬವಾದ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವೆಂದೂ ಕರೆಯುತ್ತಾರೆ. ಹಾಗಾದರೆ ಸಂಕ್ರಾತಿಯ ಹಬ್ಬದ ಸಂಪ್ರದಾಯ ಹಾಗೂ ಮಹತ್ವವೇನು ಎಂಬುದನ್ನು ತಿಳಿಯೋಣ. </p>.ದಿನ ಭವಿಷ್ಯ: ಜನವರಿ 7 ಬುಧವಾರ 2026– ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆ.<p><strong>ಆಚರಣೆ ಹಿನ್ನೆಲೆ</strong></p><p>ಮಕರ ಸಂಕ್ರಾತಿ ಕೇವಲ ಹಬ್ಬವಲ್ಲ, ಇದು ಪ್ರಕೃತಿಯ ಹಬ್ಬವಾಗಿದೆ. ಈ ಹಬ್ಬದಂದು ಪ್ರಕೃತಿಯಲ್ಲಿ ಬದಲಾವಣೆಯಾಗಲಿದೆ. ಅದರಲ್ಲಿಯೂ ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಿದ್ದಂತೆ ಸಂಕ್ರಾತಿ ಆರಂಭವಾಗುತ್ತದೆ. ಜನವರಿ 14ರಂದು ಸಂಕ್ರಾತಿಯನ್ನು ದೇಶದಾದ್ಯಂತ ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕ್ರಮಣ ಕಾಲವೆಂದೂ ಕರೆಯುತ್ತಾರೆ. </p><p>ಜ್ಯೋತಿಷ್ಯ ಶಾಸ್ತ್ರದ ಹೇಳುವಂತೆ, ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದು ಸುಗ್ಗಿಯ ಕಾಲವಾಗಿರುವುದರಿಂದ ರೈತರು ಬೆಳದ ಬೆಳೆಯನ್ನು ಕಟಾವು ಮಾಡಿ ಮನೆಯಲ್ಲಿ ತುಂಬಿರುತ್ತಾರೆ. ಈ ದಿನ ವಿಶೇಷವಾಗಿ ಎಳ್ಳು ಬೆಲ್ಲವನ್ನು ತಯಾರು ಮಾಡಿ ಇತರರಿಗೂ ಹಂಚಿ ಸೇವಿಸಲಾಗುತ್ತದೆ. </p><p><strong>ಹೀಗೆ ಆಚರಿಸಿ</strong></p><p>ಈ ದಿನ ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಬಾಗಿಲಿಗೆ ತೋರಣವನ್ನು ಕಟ್ಟಬೇಕು. ಬಳಿಕ ಮನೆಯ ಮುಂದೆ ರಂಗೋಲಿ ಬಿಡಬೇಕು. ದೇವರ ಮನೆಯನ್ನು ಸ್ವಚ್ಛಗೊಳಿಸಿ ಸಿರಿಧಾನ್ಯಗಳನ್ನಿಟ್ಟು ದೇವರಿಗೆ ಪೂಜೆ ಸಲ್ಲಿಸಿದರೆ ಶುಭವಾಗಲಿದೆ ಎಂಬ ನಂಬಿಕೆ ಇದೆ. </p><p>ಮನೆಯಲ್ಲಿರುವ ದನ ಕರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಬೇಕು. ಅವುಗಳಿಗೆ ಮೈ ತೊಳೆದು, ಕೊಂಬಿಗೆ ಎಣ್ಣೆ ಸವರಿ, ಅರಿಸಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ. ಅಲ್ಲದೇ ದನಕರುಗಳಿಗೆ ಈ ದಿನ ಕಿಚ್ಚು ಹಾಯಿಸುವ ಪದ್ದತಿಯೂ ಹಲವೆಡೆ ಇದೆ.</p><p><strong>ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕ್ರಾಂತಿ ಆರಂಭದ ಸಮಯ </strong></p><p>ಜನವರಿ 14ರಂದು ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. </p><p>ಈ ದಿನ ಮಧ್ಯಾಹ್ನ 3:31 ರಿಂದ, ಸಂಜೆ 5:45 ನಡುವೆ ಸೂರ್ಯ ಚಲಿಸಲಿದ್ದಾನೆ. ಈ ಅವಧಿ ಸುಮಾರು 2 ಗಂಟೆ 32 ನಿಮಿಷಗಳಾಗಿದೆ. ಈ ಅವಧಿಯಲ್ಲಿ ಯವುದೇ ಶುಭ ಕೆಲಸವನ್ನು ಆರಂಭ ಮಾಡಬಹುದು. ಸೂರ್ಯನಿಗೆ ನೈವೇದ್ಯ ಅರ್ಪಿಸಿ, ನಿಮ್ಮ ಇಷ್ಟ ದೇವರಿಗೆ ಪೂಜೆ ಸಲ್ಲಿಸುವುದು ಶುಭಕರ ಎಂದು ಜ್ಯೋತಿಷ ಹೇಳುತ್ತದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>