<p><em><strong>ಅಕ್ಕಮಹಾದೇವಿಯ ವಚನಗಳು ರಸಾರ್ದ್ರವಾಗಿರುತ್ತವೆ, ಉಪಮಾನಗಳಿಂದ, ಚಿತ್ರಕಲ್ಪನೆಗಳಿಂದ ಮನೋಹರವಾಗಿರುತ್ತವೆ, ಅವಳದ್ದು ಕವಿಯ ಹೃದಯ, ಕವಿಯ ಕಣ್ಣು ಎಂದು ಸಾರುವಂತಿರುತ್ತವೆ...</strong></em></p>.<p>ಮುತ್ತು ನೀರಲ್ಲಾಯಿತ್ತು</p>.<p>ವಾರಿಕಲ್ಲೂ ನೀರಲ್ಲಾಯಿತ್ತು</p>.<p>ಉಪ್ಪೂ ನೀರಲ್ಲಾಯಿತ್ತು</p>.<p>ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು</p>.<p>ಮುತ್ತು ಕರಗಿದುದನಾರೂ ಕಂಡವರಿಲ್ಲ</p>.<p>ಈ ಸಂಸಾರಿ ಮಾನವರು ಲಿಂಗವ ಮುಟ್ಟಿ ಭವಭಾರಿಗಳಾದರು</p>.<p>ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ</p>.<p>ಚೆನ್ನಮಲ್ಲಿಕಾರ್ಜುನಯ್ಯಾ</p>.<p>ತನ್ನ ಆದರ್ಶಕ್ಕಾಗಿ ಸಾಮಾಜಿಕ ವ್ವವಸ್ಥೆ ಮತ್ತು ರಾಜ ಪ್ರಭುತ್ವಗಳೆರಡನ್ನೂ ಏಕಕಾಲಕ್ಕೆ ಧಿಕ್ಕರಿಸಿ ನಿಂತ ಶ್ರೇಷ್ಠ ಅನುಭಾವಿ ಅಕ್ಕಮಹಾದೇವಿಯ ವಚನವಿದು.</p>.<p>ಭವಿಗಳನ್ನೂ ಭಕ್ತರನ್ನೂ ಖಚಿತ ವಿವರಣೆಯೊಂದಿಗೆ ಬೇರೆ ಮಾಡುವ ಪ್ರಯತ್ನವನ್ನು ಈ ವಚನ ಮಾಡುತ್ತದೆ. ತೀ.ನಂ ಶ್ರೀಕಂಠಯ್ಯನವರು ಹೇಳುತ್ತಾರೆ: ‘ಅಕ್ಕಮಹಾದೇವಿಯ ವಚನಗಳು ರಸಾರ್ದ್ರವಾಗಿರುತ್ತವೆ, ಉಪಮಾನಗಳಿಂದ, ಚಿತ್ರಕಲ್ಪನೆಗಳಿಂದ ಮನೋಹರವಾಗಿರುತ್ತವೆ, ಅವಳದ್ದು ಕವಿಯ ಹೃದಯ, ಕವಿಯ ಕಣ್ಣು ಎಂದು ಸಾರುವಂತಿರುತ್ತವೆ’. ಅವರ ಮಾತಿಗೆ ಪುರಾವೆಯಾಗಿ ಈ ವಚನವನ್ನು ಅವಲೋಕಿಸಬಹುದು.</p>.<p>ತನ್ನ ಮನದಿಂಗಿತವನ್ನು ಅಭಿವ್ಯಕ್ತಿಸಲು ಅಕ್ಕ ಮನೋಹರವಾದ ಉಪಮೆಗಳನ್ನು ಬಳಸಿಕೊಂಡಿದ್ದಾಳೆ. ಒಂದೇ ಮೂಲದಿಂದ ಆವಿರ್ಭವಿಸಿದ ಮೂರು ವಸ್ತುಗಳನ್ನು ಪರಸ್ಪರ ಹೋಲಿಸುತ್ತಾಳೆ. ವಾರಿಕಲ್ಲು ಅಂದರೆ ಆಲಿಕಲ್ಲು. ಉಪ್ಪು, ಆಲಿಕಲ್ಲು ಹಾಗೂ ಮುತ್ತು – ಈ ಮೂರಕ್ಕೂ ನೀರೇ ಮೂಲವಸ್ತು. ಅವುಗಳ ಪೈಕಿ ಉಪ್ಪು ನೀರಿನಲ್ಲಿ ಕರಗುತ್ತದೆ. ಆಲಿಕಲ್ಲೂ ಕೂಡ ಕರಗಿ ನೀರಾಗಿಬಿಡುತ್ತದೆ. ಆದರೆ ಅದೇ ಮೂಲವಸ್ತುವಿನಿಂದ ಹುಟ್ಟಿ ಬಂದಿರುವ ಮುತ್ತು ಮಾತ್ರ ಇವೆರಡವುಗಳಿಗಿಂತ ಭಿನ್ನವಾಗಿದೆ. ಮುತ್ತು ಎಂದೂ ಕರಗುವುದಿಲ್ಲ. ಅದು ಅತ್ಯಂತ ದೃಢವಾಗಿರುತ್ತದೆ. ಈ ಪ್ರಾಪಂಚಿಕರೂ ಕೂಡ ಒಂದೇ ಮನುಷ್ಯಮೂಲದಿಂದ ಬಂದವರೇ ಆಗಿದ್ದೇವೆ. ಆದರೆ ನಮ್ಮಲ್ಲಿ ಬಹುತೇಕ ಜನರು ಭವಿಗಳು ಅಂದರೆ ಸಾಮಾನ್ಯ ಜನರು, ಭವದ ರಾಗ-ದ್ವೇಷ-ಸುಖ-ದುಃಖ – ಇವನ್ನೆಲ್ಲ ತೀವೃವಾಗಿ ಅನುಭವಿಸುವ ಭೋಗಿಗಳು. ನಾವೆಷ್ಟು ಸುಖ-ಭೋಗದ ಲಾಲಸೆಗೆ ಬೀಳುತ್ತೇವೆಯೋ ಅಷ್ಟು ಬೇಗ ಕರಗಿ ಹೋಗುತ್ತೇವೆ.</p>.<p>ಭವಭಾರಿ ಅಂದರೆ ಲೌಕಿಕರು. ಕರಿಗೊಂಡೆ ಎಂದರೆ ಗಟ್ಟಿಯಾದೆ. ಚೆನ್ನಮಲ್ಲಿಕಾರ್ಜುನನ ಮೇಲೆ ಅಕ್ಕನ ಭಕ್ತಿಗೆ ಎಣೆಯೇ ಇಲ್ಲ. ಆಕೆಯ ಭಾವ ತೀವ್ರವಾದಂತೆಲ್ಲ ಆಕೆ ಇತರೆಲ್ಲ ದೇವರುಗಳಲ್ಲಿಯೂ ಆತನೇ ಶ್ರೇಷ್ಠ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಹಾಗಾಗಿ ಚೆನ್ನಮಲ್ಲಿಕಾರ್ಜುನನನ್ನು ಪೂಜಿಸಿ ತಾನು ಗಟ್ಟಿಯಾಗಿದ್ದೇನೆ, ದೃಢವಾಗಿದ್ದೇನೆ – ಅಂದರೆ ಮುತ್ತಿನಂತೆ ಘನವಾಗಿದ್ದೇನೆ ಎಂಬ ಮಾತನ್ನು ಅರುಹುತ್ತಾಳೆ. ಉಳಿದ ಪ್ರಾಪಂಚಿಕರು ಇನ್ನೂ ಲೋಕದ ಜಾತ್ರೆಯಲ್ಲಿಯೇ ತಲ್ಲೀನರಾಗಿದ್ದಾರೆ. ಆದ್ದರಿಂದ ಅವರ ಭಕ್ತಿಯು ದೃಢತೆಯನ್ನು ಪಡೆದುಕೊಂಡಿರುವುದಿಲ್ಲ. ಅವರ ಮನಸ್ಸಿನಲ್ಲಿ ಘನವಾದ ವೈರಾಗ್ಯ ಮೂಡಿರುವುದಿಲ್ಲ. ಆದ್ದರಿಂದ ಅವರು ಸುಖ-ದುಃಖಗಳನ್ನು ಮೀರಲಾರದೇ ಎಲ್ಲ ಬಗೆಯ ಪ್ರಾಪಂಚಿಕ ವ್ಯವಹಾರಗಳಲ್ಲಿ ಮಗ್ನರಾಗಿದ್ದಾರೆ. ಹಾಗಾಗಿಯೇ ಮುಕ್ತಿಯಿಂದ ಇನ್ನೂ ಸಾಕಷ್ಟು ದೂರದಲ್ಲಿದ್ದಾರೆ.</p>.<p>ಚೆನ್ನಮಲ್ಲಿಕಾರ್ಜುನನ್ನು ಮನಸ್ಸಿಗೆ ತಂದುಕೊಳ್ಳುವ ಮೂಲಕ ಅಕ್ಕ ವೈರಾಗ್ಯದ ಶಿಖರದ ಉತ್ತುಂಗ ಶೃಂಗವನ್ನು ಆರೋಹಿಸಿದ್ದಾಳೆ. ಅವಳ ಮನಸ್ಸೀಗ ಸದೃಢವಾಗಿದೆ. ಯಾವ ಲೌಕಿಕ ವ್ಯಾಮೋಹಕ್ಕೂ ಒಳಗಾಗದೇ ಗಟ್ಟಿಯಾಗಿ ಉಳಿಯುವಷ್ಟು ಪಕ್ವಗೊಂಡಿದೆ. ಈ ವಿಚಾರವನ್ನೇ ಅತ್ಯಂತ ಮಾರ್ಮಿಕವಾಗಿ ಎಲ್ಲರಿಗೂ ಅರ್ಥವಾಗುವ ಉಪಮಾನವನ್ನು ನೀಡುತ್ತ ವಿವರಿಸುವ ಅಕ್ಕನ ವಚನದ ಸೊಬಗನ್ನು ಸವಿಯುವುದೆಂದರೆ ಮೃದು ಮಣ್ಣಿನ ಮೇಲೆ ಮೊದಲ ಮಳೆಯಾದಾಗ ಉದುರಿದ ತಾಜಾ ಆಲಿಕಲ್ಲನ್ನು ನಾಲಿಗೆಯ ಮೇಲಿಟ್ಟುಕೊಂಡು ‘ಆಹಾ’ ಎನ್ನುತ್ತ ಚಪ್ಪರಿಸಿದಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಅಕ್ಕಮಹಾದೇವಿಯ ವಚನಗಳು ರಸಾರ್ದ್ರವಾಗಿರುತ್ತವೆ, ಉಪಮಾನಗಳಿಂದ, ಚಿತ್ರಕಲ್ಪನೆಗಳಿಂದ ಮನೋಹರವಾಗಿರುತ್ತವೆ, ಅವಳದ್ದು ಕವಿಯ ಹೃದಯ, ಕವಿಯ ಕಣ್ಣು ಎಂದು ಸಾರುವಂತಿರುತ್ತವೆ...</strong></em></p>.<p>ಮುತ್ತು ನೀರಲ್ಲಾಯಿತ್ತು</p>.<p>ವಾರಿಕಲ್ಲೂ ನೀರಲ್ಲಾಯಿತ್ತು</p>.<p>ಉಪ್ಪೂ ನೀರಲ್ಲಾಯಿತ್ತು</p>.<p>ಉಪ್ಪು ಕರಗಿತ್ತು, ವಾರಿಕಲ್ಲು ಕರಗಿತ್ತು</p>.<p>ಮುತ್ತು ಕರಗಿದುದನಾರೂ ಕಂಡವರಿಲ್ಲ</p>.<p>ಈ ಸಂಸಾರಿ ಮಾನವರು ಲಿಂಗವ ಮುಟ್ಟಿ ಭವಭಾರಿಗಳಾದರು</p>.<p>ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ</p>.<p>ಚೆನ್ನಮಲ್ಲಿಕಾರ್ಜುನಯ್ಯಾ</p>.<p>ತನ್ನ ಆದರ್ಶಕ್ಕಾಗಿ ಸಾಮಾಜಿಕ ವ್ವವಸ್ಥೆ ಮತ್ತು ರಾಜ ಪ್ರಭುತ್ವಗಳೆರಡನ್ನೂ ಏಕಕಾಲಕ್ಕೆ ಧಿಕ್ಕರಿಸಿ ನಿಂತ ಶ್ರೇಷ್ಠ ಅನುಭಾವಿ ಅಕ್ಕಮಹಾದೇವಿಯ ವಚನವಿದು.</p>.<p>ಭವಿಗಳನ್ನೂ ಭಕ್ತರನ್ನೂ ಖಚಿತ ವಿವರಣೆಯೊಂದಿಗೆ ಬೇರೆ ಮಾಡುವ ಪ್ರಯತ್ನವನ್ನು ಈ ವಚನ ಮಾಡುತ್ತದೆ. ತೀ.ನಂ ಶ್ರೀಕಂಠಯ್ಯನವರು ಹೇಳುತ್ತಾರೆ: ‘ಅಕ್ಕಮಹಾದೇವಿಯ ವಚನಗಳು ರಸಾರ್ದ್ರವಾಗಿರುತ್ತವೆ, ಉಪಮಾನಗಳಿಂದ, ಚಿತ್ರಕಲ್ಪನೆಗಳಿಂದ ಮನೋಹರವಾಗಿರುತ್ತವೆ, ಅವಳದ್ದು ಕವಿಯ ಹೃದಯ, ಕವಿಯ ಕಣ್ಣು ಎಂದು ಸಾರುವಂತಿರುತ್ತವೆ’. ಅವರ ಮಾತಿಗೆ ಪುರಾವೆಯಾಗಿ ಈ ವಚನವನ್ನು ಅವಲೋಕಿಸಬಹುದು.</p>.<p>ತನ್ನ ಮನದಿಂಗಿತವನ್ನು ಅಭಿವ್ಯಕ್ತಿಸಲು ಅಕ್ಕ ಮನೋಹರವಾದ ಉಪಮೆಗಳನ್ನು ಬಳಸಿಕೊಂಡಿದ್ದಾಳೆ. ಒಂದೇ ಮೂಲದಿಂದ ಆವಿರ್ಭವಿಸಿದ ಮೂರು ವಸ್ತುಗಳನ್ನು ಪರಸ್ಪರ ಹೋಲಿಸುತ್ತಾಳೆ. ವಾರಿಕಲ್ಲು ಅಂದರೆ ಆಲಿಕಲ್ಲು. ಉಪ್ಪು, ಆಲಿಕಲ್ಲು ಹಾಗೂ ಮುತ್ತು – ಈ ಮೂರಕ್ಕೂ ನೀರೇ ಮೂಲವಸ್ತು. ಅವುಗಳ ಪೈಕಿ ಉಪ್ಪು ನೀರಿನಲ್ಲಿ ಕರಗುತ್ತದೆ. ಆಲಿಕಲ್ಲೂ ಕೂಡ ಕರಗಿ ನೀರಾಗಿಬಿಡುತ್ತದೆ. ಆದರೆ ಅದೇ ಮೂಲವಸ್ತುವಿನಿಂದ ಹುಟ್ಟಿ ಬಂದಿರುವ ಮುತ್ತು ಮಾತ್ರ ಇವೆರಡವುಗಳಿಗಿಂತ ಭಿನ್ನವಾಗಿದೆ. ಮುತ್ತು ಎಂದೂ ಕರಗುವುದಿಲ್ಲ. ಅದು ಅತ್ಯಂತ ದೃಢವಾಗಿರುತ್ತದೆ. ಈ ಪ್ರಾಪಂಚಿಕರೂ ಕೂಡ ಒಂದೇ ಮನುಷ್ಯಮೂಲದಿಂದ ಬಂದವರೇ ಆಗಿದ್ದೇವೆ. ಆದರೆ ನಮ್ಮಲ್ಲಿ ಬಹುತೇಕ ಜನರು ಭವಿಗಳು ಅಂದರೆ ಸಾಮಾನ್ಯ ಜನರು, ಭವದ ರಾಗ-ದ್ವೇಷ-ಸುಖ-ದುಃಖ – ಇವನ್ನೆಲ್ಲ ತೀವೃವಾಗಿ ಅನುಭವಿಸುವ ಭೋಗಿಗಳು. ನಾವೆಷ್ಟು ಸುಖ-ಭೋಗದ ಲಾಲಸೆಗೆ ಬೀಳುತ್ತೇವೆಯೋ ಅಷ್ಟು ಬೇಗ ಕರಗಿ ಹೋಗುತ್ತೇವೆ.</p>.<p>ಭವಭಾರಿ ಅಂದರೆ ಲೌಕಿಕರು. ಕರಿಗೊಂಡೆ ಎಂದರೆ ಗಟ್ಟಿಯಾದೆ. ಚೆನ್ನಮಲ್ಲಿಕಾರ್ಜುನನ ಮೇಲೆ ಅಕ್ಕನ ಭಕ್ತಿಗೆ ಎಣೆಯೇ ಇಲ್ಲ. ಆಕೆಯ ಭಾವ ತೀವ್ರವಾದಂತೆಲ್ಲ ಆಕೆ ಇತರೆಲ್ಲ ದೇವರುಗಳಲ್ಲಿಯೂ ಆತನೇ ಶ್ರೇಷ್ಠ ಎಂಬ ತೀರ್ಮಾನಕ್ಕೆ ಬರುತ್ತಾಳೆ. ಹಾಗಾಗಿ ಚೆನ್ನಮಲ್ಲಿಕಾರ್ಜುನನನ್ನು ಪೂಜಿಸಿ ತಾನು ಗಟ್ಟಿಯಾಗಿದ್ದೇನೆ, ದೃಢವಾಗಿದ್ದೇನೆ – ಅಂದರೆ ಮುತ್ತಿನಂತೆ ಘನವಾಗಿದ್ದೇನೆ ಎಂಬ ಮಾತನ್ನು ಅರುಹುತ್ತಾಳೆ. ಉಳಿದ ಪ್ರಾಪಂಚಿಕರು ಇನ್ನೂ ಲೋಕದ ಜಾತ್ರೆಯಲ್ಲಿಯೇ ತಲ್ಲೀನರಾಗಿದ್ದಾರೆ. ಆದ್ದರಿಂದ ಅವರ ಭಕ್ತಿಯು ದೃಢತೆಯನ್ನು ಪಡೆದುಕೊಂಡಿರುವುದಿಲ್ಲ. ಅವರ ಮನಸ್ಸಿನಲ್ಲಿ ಘನವಾದ ವೈರಾಗ್ಯ ಮೂಡಿರುವುದಿಲ್ಲ. ಆದ್ದರಿಂದ ಅವರು ಸುಖ-ದುಃಖಗಳನ್ನು ಮೀರಲಾರದೇ ಎಲ್ಲ ಬಗೆಯ ಪ್ರಾಪಂಚಿಕ ವ್ಯವಹಾರಗಳಲ್ಲಿ ಮಗ್ನರಾಗಿದ್ದಾರೆ. ಹಾಗಾಗಿಯೇ ಮುಕ್ತಿಯಿಂದ ಇನ್ನೂ ಸಾಕಷ್ಟು ದೂರದಲ್ಲಿದ್ದಾರೆ.</p>.<p>ಚೆನ್ನಮಲ್ಲಿಕಾರ್ಜುನನ್ನು ಮನಸ್ಸಿಗೆ ತಂದುಕೊಳ್ಳುವ ಮೂಲಕ ಅಕ್ಕ ವೈರಾಗ್ಯದ ಶಿಖರದ ಉತ್ತುಂಗ ಶೃಂಗವನ್ನು ಆರೋಹಿಸಿದ್ದಾಳೆ. ಅವಳ ಮನಸ್ಸೀಗ ಸದೃಢವಾಗಿದೆ. ಯಾವ ಲೌಕಿಕ ವ್ಯಾಮೋಹಕ್ಕೂ ಒಳಗಾಗದೇ ಗಟ್ಟಿಯಾಗಿ ಉಳಿಯುವಷ್ಟು ಪಕ್ವಗೊಂಡಿದೆ. ಈ ವಿಚಾರವನ್ನೇ ಅತ್ಯಂತ ಮಾರ್ಮಿಕವಾಗಿ ಎಲ್ಲರಿಗೂ ಅರ್ಥವಾಗುವ ಉಪಮಾನವನ್ನು ನೀಡುತ್ತ ವಿವರಿಸುವ ಅಕ್ಕನ ವಚನದ ಸೊಬಗನ್ನು ಸವಿಯುವುದೆಂದರೆ ಮೃದು ಮಣ್ಣಿನ ಮೇಲೆ ಮೊದಲ ಮಳೆಯಾದಾಗ ಉದುರಿದ ತಾಜಾ ಆಲಿಕಲ್ಲನ್ನು ನಾಲಿಗೆಯ ಮೇಲಿಟ್ಟುಕೊಂಡು ‘ಆಹಾ’ ಎನ್ನುತ್ತ ಚಪ್ಪರಿಸಿದಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>