ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಾದಶ ರಾಶಿಗಳಿಗೆ ಕಂಕಣ ಸೂರ್ಯಗ್ರಹಣ–2019ರ ಫಲಗಳೇನು?

Last Updated 26 ಡಿಸೆಂಬರ್ 2019, 2:15 IST
ಅಕ್ಷರ ಗಾತ್ರ

ಶ್ರೀ ವಿಕಾರಿ ನಾಮ ಸಂವತ್ಸರದ ಮಾರ್ಗಶಿರ ಬಹುಳ ಅಮಾವಾಸ್ಯೆ 26-12-2019 ಗುರುವಾರ ಮೂಲಾ ನಕ್ಷತ್ರ, ಧನು, ವೃಶ್ಚಿಕ, ಮಕರ ಲಗ್ನಗಳಲ್ಲಿ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತಿದೆ.

ಈ ಗ್ರಹಣದ ಆಧಾರದಲ್ಲಿ ಮುಂದಿನ ಮೂರು ತಿಂಗಳಲ್ಲಿ ದ್ವಾದಶ ರಾಶಿಗಳ ಮೇಲೆ ಆಗಬಹುದಾದ ಪರಿಣಾಮಗಳ ಕುರಿತು ಇಲ್ಲಿ ವಿವರಿಸಲಾಲಾಗಿದೆ. ಗ್ರಹಣ ಸಂಭವಿಸುವ ಹದಿನೈದು ದಿನಗಳ ನಂತರ ಶುಕ್ರನೂ ಸೇರಿದಂತೆ ಕೆಲ ಗ್ರಹಗಳ ಸ್ಥಾನಪಲ್ಲಟವಾಗುತ್ತದೆ. ಅದನ್ನೂ ಗಮನದಲ್ಲಿಟ್ಟುಕೊಂಡು ಫಲಾಫಲಗಳನ್ನು ನಿರ್ಧಿರಿಸಲಾಗಿದೆ.

ಮೇಷ:ಗ್ರಹಣದ ನಂತರ ಬಹಳಷ್ಟು ಶುಭಫಲಗಳನ್ನು ಕಾಣಬಹುದು ಆರೋಗ್ಯದಲ್ಲಿ ಸುಧಾರಣೆ, ತೀರ್ಥಯಾತ್ರೆ, ದೇವತಾದರ್ಶನ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ಸಿಗಲಿದೆ. ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಲಿದೆ ಎಚ್ಚರವಹಿಸುವುದು ಬಹಳ ಉತ್ತಮ.
ಪರಿಹಾರ: ಹುರುಳಿ ದಾನ ಮಾಡುವುದು, ಶಿವಕವಚ ಮತ್ತು ದೇವಿ ಭುಜಂಗ ಸ್ತೋತ್ರ ಪಠಿಸುವುದು ಒಳಿತು.

ವೃಷಭ:ಮನೆಯಲ್ಲಿ ಅಶಾಂತಿಯ ವಾತಾವರಣ, ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸುತ್ತವೆ. ಜನವರಿ ನಂತರದಲ್ಲಿ ಭೂಮಿ ವಿಚಾರದಲ್ಲಿ ಹೆಚ್ಚಿನ ಲಾಭವನ್ನು ಕಾಣಬಹುದು. ಸದ್ಯ ವ್ಯಾಪಾರದಲ್ಲಿ ಎಚ್ಚರ ವಹಿಸುವುದು ಕ್ಷೇಮ.
ಪರಿಹಾರ: ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಲ್ಲದ ದೀಪ ಹಚ್ಚುವುದು, ದುರ್ಗಾ ಸಪ್ತಶತಿ ಪಾರಾಯಣ ಮಾಡುವುದು ಒಳ್ಳೆಯದು.

ಮಿಥುನ:ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರಲಿದೆ. ಕೆಲಸದಲ್ಲಿ ಅಡಚಣೆ ಉಂಟಾಗಿ ಸ್ಥಾನಪಲ್ಲಟವಾಗುವ ಸಂಭವವಿದೆ. ಭೋಗ ವಸ್ತುಗಳ ಖರೀದಿ, ಮನಸ್ಸಿಗೆ ನಾನಾ ರೀತಿಯ ಚಿಂತೆ, ಹಣಕಾಸಿನ ತೊಂದರೆ ಎದುರಾಗಲಿದೆ. ಸರ್ಕಾರದ ಮಟ್ಟದ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟಾಗುವ ಸಂದರ್ಭವಿದ್ದು ಅವುಗಳನ್ನು ಮುಂದೂಡಿದರೆ ಉತ್ತಮ. ಮುಂದಿನ ದಿನಗಳಲ್ಲಿ ಒಳ್ಳೆಯ ಫಲಗಳೂ ಉಂಟು.
ಪರಿಹಾರ: ಶೃಂಗೇರಿ ಜಗದ್ಗುರುಗಳ ಪಾದಪೂಜೆ, ದೇವಿ ದೇವಸ್ಥಾನದಲ್ಲಿ ಹಾಗಲಕಾಯಿ ದೀಪ ಹಚ್ಚುವುದು, ಕಾಳಹಸ್ತಿ ಕ್ಷೇತ್ರದ ದೇವರ ದರ್ಶನದಿಂದ ಹೆಚ್ಚಿನ ಲಾಭವನ್ನು ಕಾಣಬಹುದು.

ಕರ್ಕಾಟಕ:ಹಲವು ದಿನಗಳಿಂದ ನೀವು ಪ್ರಯತ್ನಿಸುತ್ತಿದ್ದ ಕೆಲಸಕಾರ್ಯಗಳು ನಿಮ್ಮ ಕೈಗೂಡಲಿವೆ. ಕೋರ್ಟ್ ಕೆಲಸ ಕಾರ್ಯಗಳಲ್ಲಿ ನಿಮಗೆ ಜಯ ಸಿಗಲಿದೆ. ಅವಿವಾಹಿತರಿಗೆ ವಿವಾಹ ಆಗುವ ಯೋಗವುಂಟು. ಆದರೆ, ಮದುವೆ ವಿಚಾರದಲ್ಲಿ ಹೆಚ್ಚಿನ ವಿಚಾರ ಮಾಡುವುದು ಉತ್ತಮ. ಹೊಸ ನಿವೇಶನ ಅಥವಾ ಆಸ್ತಿ ಖರೀದಿಯನ್ನು ಈ ಸಂದರ್ಭದಲ್ಲಿ ನೀವು ಮಾಡುವಿರಿ. ಸಾರ್ವಜನಿಕ ಬದುಕಿನಲ್ಲಿ ಗೌರವ ಪ್ರಾಪ್ತಿಯಾಗಲಿದೆ.
ಪರಿಹಾರ: ಶೃಂಗೇರಿ ಜಗದ್ಗುರುಗಳ ಪಾದಪೂಜೆ, ದತ್ತಾತ್ರೇಯ ಆರಾಧನೆ, ಅಪಸ್ಮಾರ ದಕ್ಷಿಣಾಮೂರ್ತಿ ಮಂತ್ರ ಜಪ ಮತ್ತು ಶಿವನಿಗೆ ಪಂಚಾಮೃತ ಅಭಿಷೇಕವನ್ನು ಮಾಡಿಸುವುದರಿಂದ ಹೆಚ್ಚಿನ ಲಾಭ ಕಾಣಬಹುದು.

ಸಿಂಹ:ನಿಮ್ಮ ಉದ್ಯೋಗದಲ್ಲಿ ಒಂದಷ್ಟು ಬದಲಾವಣೆ ಕಂಡರು ತಾತ್ಕಾಲಿಕವಾಗಿ ಯಾವುದು ಪ್ರಗತಿಯಾಗುವುದಿಲ್ಲ. ಮನೆಯಲ್ಲಿನ ಅಶಾಂತಿಯು ನಿಮ್ಮ ಮನಸ್ಸಿಗೆ ನಾನಾ ರೀತಿಯ ಚಿಂತೆಯನ್ನು ತಂದೊಡ್ಡೀತು. ಅದು ಕೆಲವೇ ದಿನಗಳಲ್ಲಿ ನಿವಾರಣೆಯಾಗುವ ಸೂಚನೆಗಳೂ ಉಂಟು. ಜನವರಿ ನಂತರದಲ್ಲಿ ಹೊಸ ಕೆಲಸ ಆರಂಭ ಮಾಡುವುದರಿಂದ ಹೆಚ್ಚಿನ ಲಾಭವನ್ನು ನೀವು ಕಾಣುವಿರಿ. ಕೋರ್ಟ್ ವ್ಯಾಜ್ಯಗಳಲ್ಲಿ ತಾತ್ಕಾಲಿಕವಾಗಿ ಹಿನ್ನಡೆಯಾಗಬಹುದು. ಮುಂದಿನ ದಿನಗಳಲ್ಲಿ ಸಿಹಿಸುದ್ದಿಗಳು ಬರಲಿವೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಜನವರಿ ನಂತರದಲ್ಲಿ ಹೊಸ ಕೆಲಸಗಳಿಂದ ಹೆಚ್ಚಿನ ಲಾಭವನ್ನು ಕಾಣುವಿರಿ. ಬಂಧುಮಿತ್ರರ ವಿಶ್ವಾಸವು ಮುಂದಿನ ದಿನಗಳಲ್ಲಿ ಬಹಳಷ್ಟು ಗಟ್ಟಿಯಾಗಿ, ಸಹೋದರ ಅಥವಾ ಸಹೋದರಿಯರಿಂದ ನಿಮಗೆ ಸಹಾಯಗಳು ಹರಿದುಬರಲಿವೆ.
ಪರಿಹಾರ: ಏಕವಾರ ರುದ್ರಾಭಿಷೇಕ, ಲಕ್ಷ್ಮೀಹಯಗ್ರೀವ ದೇವಸ್ಥಾನದ ದರ್ಶನ ಪಡೆಯುವುದು ಕ್ಷೇಮ.

ಕನ್ಯಾ:ತಂದೆ ಅಥವಾ ತಾಯಿಯ ಆರೋಗ್ಯದ ಬಗ್ಗೆ ಜಾಸ್ತಿ ಗಮನ ಕೊಡುವುದು ಉತ್ತಮ. ಆದ್ದರಿಂದ ನಿಮಗೆ ಮಾನಸಿಕ ಚಿಂತೆ ಕಾಡುತ್ತದೆ. ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಕಾಣಬಹುದು. ಐದು ತಿಂಗಳ ನಂತರ ಬಹಳಷ್ಟು ಶುಭಫಲಗಳನ್ನು ರಾಶಿಯವರು ನೋಡಬಹುದು
ಪರಿಹಾರ: ಮೃತ್ಯುಂಜಯ ಜಪ, ಶಿವಾರಾಧನೆ ಒಳ್ಳಯದು.

ತುಲಾ:ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆ ಕಾಣಿಸುತ್ತದೆ. ಅದರ ಬಗ್ಗೆ ಬಹಳಷ್ಟು ಗಮನ ಕೊಡುವುದು ಉತ್ತಮ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಲಾಭವನ್ನು ತಾವು ಕಾಣುತ್ತೀರಿ. ಭೂಮಿ ವಿಚಾರ ಮತ್ತು ಸಾರಿಗೆ ವ್ಯವಹಾರಗಳಲ್ಲಿ ಮತ್ತಷ್ಟು ಲಾಭವನ್ನು ತಾವುಗಳು ಗಳಿಸುವಿರಿ. ಮನೆ ಅಥವಾ ಜಾಗವನ್ನು ಖರೀದಿಸುವ ಫಲ ಕಾಣುತ್ತಿದ್ದು, ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ. ಹೊಸ ವ್ಯಾಪಾರಗಳನ್ನು ಪ್ರಾರಂಭಿಸಿದರೆ ಹೆಚ್ಚಿನ ಲಾಭಗಳನ್ನು ತಾವು ಕಾಣಲು ಸಾಧ್ಯವಿದೆ.
ಪರಿಹಾರ: ದುರ್ಗಾ ಸಪ್ತಶತಿ ಪಾರಾಯಣ, ಏಕವಾರ ರುದ್ರಾಭಿಷೇಕ ನಿಮಗೆ ಹೆಚ್ಚಿನ ಲಾಭವನ್ನು ತಂದು ಕೊಡಲಿದೆ

ವೃಶ್ಚಿಕ:ವಾಹನ ಸವಾರರು ಹೆಚ್ಚಿನ ಜಾಗ್ರತೆ ವಹಿಸುವುದು ಕ್ಷೇಮ. ಅನವಶ್ಯಕ ಖರ್ಚುಗಳು ಎದುರಾಗಲಿವೆ. ಬಂಧುಮಿತ್ರರು ಮನೆಯವರೊಡನೆ ವೈಮನಸ್ಯ ಮೂಡಬಹುದು. ಮೇಲಧಿಕಾರಿಗಳಿಂದ ತಾವು ಸಾಕಷ್ಟು ತೊಂದರೆಗಳನ್ನು ಅನುಭವಿಸುವಿರಿ.
ಪರಿಹಾರ: ಲಕ್ಷ್ಮೀನರಸಿಂಹನ ಆರಾಧನೆಯಿಂದಯಿಂದ ಕ್ಷೇಮ. ಕುಜಶಾಂತಿ ಮಾಡಿಸುವುದು ಒಳಿತು.

ಧನು:ಕೆಲಸದಲ್ಲಿ ನಾನಾ ರೀತಿಯ ಅಡಚಣೆಗಳು ತಮಗೆ ಎದುರಾಗಲಿವೆ. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಸಂಭವಿಸುವುದರಿಂದ ಕೆಲವು ಕೆಲಸಗಳನ್ನು ಮುಂದೂಡುವುದು ಸೂಕ್ತ. ಆರೋಗ್ಯದಲ್ಲಿ ಬಹಳಷ್ಟು ಗಮನ ವಹಿಸಬೇಕಾಗುತ್ತದೆ.
ಪರಿಹಾರ: ದತ್ತಾತ್ರೇಯರ ಆರಾಧನೆ, ರಾಘವೇಂದ್ರ ಸ್ವಾಮಿಗಳ ದರ್ಶನದಿಂದ ಹೆಚ್ಚಿನ ಶುಭಫಲಗಳನ್ನು ತಾವುಗಳು ಕಾಣುವಿರಿ.

ಮಕರ:ಮಕ್ಕಳಿಂದ ನಿಮಗೆ ಮಾನಸಿಕ ತೊಂದರೆ ಎದುರಾಗಲಿದೆ. ಕೆಲಸಕಾರ್ಯಗಳಲ್ಲಿ ಅಧಿಕ ಒತ್ತಡ ಉಂಟಾಗಬಹುದು. ಮಾನಸಿಕ ಚಿಂತೆ ಹೆಚ್ಚಬಹುದು. ವಾಹನ ಸವಾರರು ಬಹಳಷ್ಟು ಎಚ್ಚರಿಕೆ ವಹಿಸುವುದು ಒಳ್ಳೆಯದು. ದೂರ ಬಾರ ಪ್ರಯಾಣದಲ್ಲಿ ಹಣಕಾಸಿನ ಬಗ್ಗೆ ಹೆಚ್ಚಿನ ನಿಗಾ ಕೊಡುಬೇಕು. ಚೋರ ಭಯವು ನಿಮಗೆ ಕಾಡಲಿದೆ
ಪರಿಹಾರ: ಸಮುದ್ರ ಸ್ನಾನ ಮಾಡುವುದು, ಶಿವನ ದರ್ಶನ ಮಾಡುವುದರಿಂದ ಆರ್ಥಿಕ ಪರಿಸ್ಥಿತಿ ವೃದ್ಧಿಯಾಗುವುದು.

ಕುಂಭ:ಮನೆ ಅಥವಾ ಭೂಮಿ ಖರೀದಿ ಮಾಡುವಿರಿ. ಹೊಸ ಕೆಲಸಗಳು ಹುಡುಕಿ ಬರಲಿವೆ. ಉನ್ನತ ಸ್ಥಾನ ಅಧಿಕಾರ ಪ್ರಾಪ್ತಿಯಾಗಲಿದೆ. ವಿದೇಶ ಪ್ರಯಾಣದ ಯೋಗಫಲಗಳುಂಟು. ತಂದೆ ತಾಯಿಯ ಆಶೀರ್ವಾದದಿಂದ ನಿಮಗೆ ವಿವಾಹಾದಿ ಶುಭಕಾರ್ಯಗಳು ಜರುಗಲಿವೆ.
ಪರಿಹಾರ:ರಾಹು ಶಾಂತಿ ಮಾಡಿಕೊಳ್ಳಬೇಕು. ದುರ್ಗಾ ಸಪ್ತಶತಿ ಪಾರಾಯಣ, ಏಕವಾರ ರುದ್ರಾಭಿಷೇಕ, ದುರ್ಗಾ ದೀಪ ನಮಸ್ಕಾರಗಳು ಲಾಭ ತಂದು ಕೊಡುತ್ತವೆ.

ಮೀನ:ಸರ್ಕಾರಿ ಅಥವಾ ಇತ್ಯಾದಿ ಕೆಲಸಗಳಿಗೆ ನೀವು ಪ್ರಯತ್ನಪಟ್ಟಿದ್ದರೆ ನಿಮಗೆ ಶುಭ ಸುದ್ದಿಯುಂಟು. ಸರ್ಕಾರಿ ಕೆಲಸದಲ್ಲಿರುವವರು ಬಡ್ತಿ ಅಥವಾ ಉನ್ನತ ಅಧಿಕಾರಿಗಳನ್ನು ಪಡೆಯಲು ಅವಕಾಶಗಳಿವೆ. ಮಕ್ಕಳಿಂದ ಸಂತೋಷವನ್ನು ಕಾಣುವಿರಿ. ಸಮಾಜದಲ್ಲಿ ಸನ್ಮಾನಗಳು ಗೌರವಗಳು ನಿಮಗೆ ಪ್ರಾಪ್ತಿಯಾಗಲಿವೆ. ಹೊಸದಾಗಿ ಆಭರಣಗಳನ್ನು ಕೊಂಡುಕೊಳ್ಳುವ ಯೋಗವಿದೆ.
ಪರಿಹಾರ : ಶಿವನ ದರ್ಶನ ಸೂಕ್ತ.

ಇದು ಗೋಚಾರ ಫಲ ಮಾತ್ರವೇ ಆಗಿದ್ದು, ವ್ಯಕ್ತಿಯ ಲಗ್ನ, ದಶ ಬುಕ್ತಿಗಳು ಆಧಾರದಲ್ಲಿ ಫಲಾಫಲಗಳು ನಿರ್ಧರಿತವಾಗಿರುತ್ತವೆ.

***

– ಸುಬ್ರಹ್ಮಣ್ಯ, ಮೈಸೂರು

ಮೊಬೈಲ್‌: 7022036917

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT