ಸರ್ವಾತ್ಮನಾದ ದೇವರು ತನ್ನಲ್ಲಿ ಇದ್ದಾನೆ ಎಂಬುದನ್ನು ಮರೆತು ಎಲ್ಲೆಲ್ಲೋ ಹುಡುಕಾಡುವುದೇ ಅಜ್ಞಾನ. ಮನುಷ್ಯನಿಗೆ ಸ್ಥೂಲ, ಸೂಕ್ಷ್ಮ, ಕಾರಣ ಎಂಬ ತನುತ್ರಯಗಳಿವೆ. ಇಂಥ ಶರೀರಕ್ಕೆ ಅಣವ ಮಲ, ಮಾಯಾ ಮಲ, ಕಾರ್ಮಿಕ ಮಲ ಎಂಬ ಮಲತ್ರಯ ಅಂಟಿಕೊಂಡಿರುತ್ತವೆ. ಲಿಂಗದೀಕ್ಷೆಯಿಂದ ಇವುಗಳು ದೂರವಾಗುವುದು. ವೇದಾ ದೀಕ್ಷೆ, ಮಂತ್ರ ದೀಕ್ಷೆ, ಕ್ರಿಯಾ ದೀಕ್ಷೆಯ ಮೂಲಕ ಗುರುವಿನಿಂದ ಭಕ್ತರು ಲಿಂಗವನ್ನು ಪಡೆದುಕೊಳ್ಳುತ್ತಾರೆ.