<p><em><strong>ಕಾಲಲ್ಲಿ ಕಟ್ಟಿದ ಗುಂಡು</strong></em></p>.<p><em><strong>ಕೊರಳಲ್ಲಿ ಕಟ್ಟಿದ ಬೆಂಡು</strong></em></p>.<p><em><strong>ತೇಲಲಿಯದು ಗುಂಡು</strong></em></p>.<p><em><strong>ಮುಳಗಲೀಯದು ಬೆಂಡು</strong></em></p>.<p><em><strong>ಇಂತಪ್ಪ ಸಂಸಾರ ಶರಧಿಯ ದಾಂಟಿಸಿ</strong></em></p>.<p><em><strong>ಕಾಲಾಂತಕನೇ ಕಾಯೋ</strong></em></p>.<p><em><strong>ಕೂಡಲಸಂಗಮ ದೇವಾ...</strong></em></p>.<p>ಸಂಸಾರ ಎಂಬುದು ತುಂಬಾ ಜಂಜಡದಿಂದ ಕೂಡಿದೆ. ನಾವು ಏನನ್ನು ಬಯಸುತ್ತೇವೆಯೋ ಅದು ಸಿಗುವುದಿಲ್ಲ. ಯಾವುದನ್ನು ಬಯಸುವುದಿಲ್ಲವೋ ಅದು ಸಿಗುತ್ತದೆ. ಉದಾಹರಣೆಗೆ ಕಬ್ಬಿಣದ ಗುಂಡು ತುಂಬಾ ಭಾರವಾಗಿರುತ್ತದೆ. ಅದನ್ನು ನಿರಿನಲ್ಲಿ ತೇಲಿಸಲಾಗುವುದಿಲ್ಲ. ಅದೇ ರೀತಿ ಬೆಂಡನ್ನು ಮುಳುಗಿಸಲು ಆಗುವುದಿಲ್ಲ. ಸಂಸಾರ ಕೂಡ ಸಂಕಷ್ಟಗಳಿಂದ ಕೂಡಿರುತ್ತದೆ. ಭಕ್ತಿಯಿಂದ ಭಗವಂತನನ್ನು ಸ್ಮರಿಸಿದರೆ ಅದು ಸಸಾರ (ಸರಳ)ವಾಗುತ್ತದೆ. ಭಗವಂತನೇ ಎಲ್ಲದಕ್ಕೂ ಕಾರಣೀಕರ್ತನು. ಆತನೇ ಈ ಭವಸಂಸಾರದಿಂದ ಸಂರಕ್ಷಣೆ ಮಾಡಬೇಕು ಎಂದು ಬಸವಣ್ಣ ತಿಳಿಸುತ್ತಾರೆ. ಅವರ ಆಶಯದಂತೆ ನಡೆದುಕೊಂಡರೆ ಜೀವನ ಸುಗಮವಾಗಿ ನಡೆಯುತ್ತದೆ. ದೇವರ ನಾಮ ಸ್ಮರಣೆಯನ್ನು ಬಿಡಬಾರದು.</p>.<p>(ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಕಾಲಲ್ಲಿ ಕಟ್ಟಿದ ಗುಂಡು</strong></em></p>.<p><em><strong>ಕೊರಳಲ್ಲಿ ಕಟ್ಟಿದ ಬೆಂಡು</strong></em></p>.<p><em><strong>ತೇಲಲಿಯದು ಗುಂಡು</strong></em></p>.<p><em><strong>ಮುಳಗಲೀಯದು ಬೆಂಡು</strong></em></p>.<p><em><strong>ಇಂತಪ್ಪ ಸಂಸಾರ ಶರಧಿಯ ದಾಂಟಿಸಿ</strong></em></p>.<p><em><strong>ಕಾಲಾಂತಕನೇ ಕಾಯೋ</strong></em></p>.<p><em><strong>ಕೂಡಲಸಂಗಮ ದೇವಾ...</strong></em></p>.<p>ಸಂಸಾರ ಎಂಬುದು ತುಂಬಾ ಜಂಜಡದಿಂದ ಕೂಡಿದೆ. ನಾವು ಏನನ್ನು ಬಯಸುತ್ತೇವೆಯೋ ಅದು ಸಿಗುವುದಿಲ್ಲ. ಯಾವುದನ್ನು ಬಯಸುವುದಿಲ್ಲವೋ ಅದು ಸಿಗುತ್ತದೆ. ಉದಾಹರಣೆಗೆ ಕಬ್ಬಿಣದ ಗುಂಡು ತುಂಬಾ ಭಾರವಾಗಿರುತ್ತದೆ. ಅದನ್ನು ನಿರಿನಲ್ಲಿ ತೇಲಿಸಲಾಗುವುದಿಲ್ಲ. ಅದೇ ರೀತಿ ಬೆಂಡನ್ನು ಮುಳುಗಿಸಲು ಆಗುವುದಿಲ್ಲ. ಸಂಸಾರ ಕೂಡ ಸಂಕಷ್ಟಗಳಿಂದ ಕೂಡಿರುತ್ತದೆ. ಭಕ್ತಿಯಿಂದ ಭಗವಂತನನ್ನು ಸ್ಮರಿಸಿದರೆ ಅದು ಸಸಾರ (ಸರಳ)ವಾಗುತ್ತದೆ. ಭಗವಂತನೇ ಎಲ್ಲದಕ್ಕೂ ಕಾರಣೀಕರ್ತನು. ಆತನೇ ಈ ಭವಸಂಸಾರದಿಂದ ಸಂರಕ್ಷಣೆ ಮಾಡಬೇಕು ಎಂದು ಬಸವಣ್ಣ ತಿಳಿಸುತ್ತಾರೆ. ಅವರ ಆಶಯದಂತೆ ನಡೆದುಕೊಂಡರೆ ಜೀವನ ಸುಗಮವಾಗಿ ನಡೆಯುತ್ತದೆ. ದೇವರ ನಾಮ ಸ್ಮರಣೆಯನ್ನು ಬಿಡಬಾರದು.</p>.<p>(ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>