ಬದುಕಿರುವರೆಗೂ ಪರರಿಗೂ ಸಹಾಯ ಮಾಡುತ್ತ ಒಳ್ಳೆಯ ವ್ಯಕ್ತಿಯಾಗಿ ಜೀವನ ಮಾಡಬೇಕು. ನಮ್ಮ ಶರಣರು ಪರಹಿತವ ಮಾಡುತ್ತಾ ತಮ್ಮ ಜೀವನದುದ್ದಕ್ಕೂ ಪರಹಿತಕ್ಕಾಗಿಯೇ ಬದುಕಿ ಬಾಳಿ ಸಂತೋಷ ಪಟ್ಟಿದ್ದಾರೆ. ದೇವರು ಕರುಣಿಸಿರುವ ತನು ಮನ ಬುದ್ಧಿಯನ್ನು ಬೆಳೆಸಿಕೊಂಡು ಸತ್ಕಾರ್ಯ ಮಾಡಿ ಸಂತೋಷ ಪಡಬೇಕು. ಹಸಿದವರಿಗೆ ಅನ್ನ, ಒಂದಿಷ್ಟು ಒಳ್ಳೆಯ ಮಾತು ಸಾಕು. ನೆರೆ, ಹೊರೆಯವರ ಮನಸ್ಸನ್ನು ಹೂವಿನಂತೆ ಅರಳಿಸಿ ನಮ್ಮ ಸುತ್ತ ಮುತ್ತ ಸ್ವರ್ಗವನ್ನು ನಿರ್ಮಾಣ ಮಾಡಬಹುದು.
ಆದರೆ, ಸ್ವಾರ್ಥಭಾವದಿಂದ ಬದುಕುತ್ತಿರುವ ಮನುಷ್ಯನು ತಾನು ಗಳಿಸಿರುವ ಸಂಪತ್ತನ್ನು, ದವಸ ಧಾನ್ಯಗಳನ್ನು ತಾನೊಬ್ಬನೇ ಅನುಭವಿಸುತ್ತಿದ್ದಾನೆ. ಪರಹಿತ ಪರೋಪಕಾರಕ್ಕಾಗಿ ಬಳಸಬೇಕೆಂಬುದನ್ನು ಮರೆತು ವ್ಯರ್ಥ ಬದುಕು ಸಾಗಿಸುತ್ತಿದ್ದಾನೆ. ಯಾವಾಗ ಸ್ವಾರ್ಥ ಮರೆತು ಪರಹಿತಕ್ಕಾಗಿ ಬದುಕುತ್ತಾನೋ ಆಗ ಮಾತ್ರ ಅವನು ಆತ್ಮ ಸಂತೃಪ್ತಿ ಹೊಂದುತ್ತಾನೆ.