ಮಾನವನ ಜೀವನವು ಅರಿವಿನಿಂದ ಕೂಡಿದೆ. ಜ್ಞಾನವುಳ್ಳ ಮಾನವನು ಕತ್ತಲಲ್ಲಿಯೂ ಅರಿತುಕೊಂಡು ಬೆಳಕಿನಲ್ಲಿ ತಪ್ಪು ಮಾಡುವುದು ಅಪರಾದವೇ ಸರಿ. ತನ್ನ ಕಾಯಕದತ್ತ ಗುರಿಯಿರಬೇಕು. ಮಾಯಾ, ಮೋಹಗಳಿಂದ ಕೂಡಿದ ಸಂಸಾರವನ್ನು ಅರಿವಿನ ಜಾಣತನದಿಂದ ನಡೆಸಬೇಕು. ನಶ್ವರವಾದ ಶರೀರವನ್ನು ಅಶಾಶ್ವತವಾದ ಸಂಪತ್ತನ್ನು ನೆಚ್ಚಿ ಮಾನವ ಜನ್ಮವನ್ನು ಹಾನಿ ಮಾಡಿಕೊಳ್ಳಬಾರದು. ‘ಮಾನವ ಜನ್ಮ ದೊಡ್ಡದ ಹಾನಿ ಮಾಡಿಕೊಳ್ಳಲು ಬೇಡಿರೊ ಹುಚ್ಚಪ್ಪಗಳಿರಾ’ ಎಂದು ಪುರಂದರ ದಾಸರು ಹಾಡಿದ್ದಾರೆ.
ನಾನು ನನ್ನದೆಂಬ ಮಮಕಾರವನ್ನು ಬಿಟ್ಟು ದೇವರಲ್ಲಿ ದೃಡ ನಂಬಿಕೆಯಿಟ್ಟು ಮುಕ್ತನಾಗಬೇಕೆನ್ನುವ ಹಂಬಲವುಳ್ಳವನಾಗಬೇಕು. ಅಂದಾಗ ಮಾತ್ರ ಜೀವನ ಪಾವನವಾಗುವುದು.