<p>ವೈಕುಂಠ ಏಕಾದಶಿಯಂದು ಉಪವಾಸ ಆಚರಿಸಿ ನಾರಾಯಣನಿಗೆ ಪೂಜೆ ಸಲ್ಲಿಸುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷದ ಪ್ರಕಾರ, ಉಪವಾಸ ಆಚರಣೆ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು. </p><p>ಈ ದಿನ ಉಪವಾಸದ ಜೊತೆಗೆ ವಿಷ್ಣು ಸಹಸ್ರನಾಮ ಜಪಿಸುವುದು ಶುಭಕರವೆಂದು ಹೇಳಲಾಗುತ್ತದೆ. ಇದರಿಂದ ಮೋಕ್ಷ ಸಿಗಲಿದೆ ಎಂಬ ನಂಬಿಕೆ ಇದೆ. </p><p>ಈ ದಿನ ಹಗಲಿನಲ್ಲಿ ನಿದ್ದೆ ಮಾಡಲೇಬಾರದು. ಇದು ಆರೋಗ್ಯ ಸಮಸ್ಯೆ ಇರುವವರು ಹಾಗೂ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಉಳಿದವರು ಹಾಗೂ ಉಪವಾಸ ಆಚರಣೆಯಲ್ಲಿರುವಾಗ ನಿದ್ದೆ ಮಾಡಬಾರದು.</p>.ವೈಕುಂಠ ಏಕಾದಶಿ: ಈ 3 ರಾಶಿಯವರಿಗೆ ಭಾರಿ ಅದೃಷ್ಟ.ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?.<p>ಈ ದಿನ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಧಾನ, ಧರ್ಮ ಮಾಡುವುದು ಉತ್ತಮ. </p><p>ಇಂದು ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಕಾಲ ಕಳೆಯಬೇಕು. ವಾದ ವಿವಾದ ಹಾಗೂ ಜಗಳ ಮಾಡಿಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ಇದರಿಂದ ವೈವಾಹಿಕ ಜೀವನ ಇನ್ನಷ್ಟು ಗಟ್ಟಿಯಾಗುತ್ತದೆ. </p><p>ಉಪವಾಸ ಆಚರಿಸುವಾಗ ಗಂಡ–ಹೆಂಡತಿ ಯಾವುದೇ ಕಾರಣಕ್ಕೂ ಲೈಂಗಿಕ ಸಂಪರ್ಕ ಹೊಂದಬಾರದು ಎಂದು ಜ್ಯೋತಿಷ ಹೇಳುತ್ತದೆ. </p><p>ಈ ದಿನ ಅಪ್ಪಿತಪ್ಪಿಯೂ ತುಳಸಿ ಗಿಡ ಅಥವಾ ಎಲೆಯನ್ನು ಕೀಳಬಾರದು. </p><p>ರಾತ್ರಿ ಪೂರ್ತಿ ಜಾಗರಣೆ ಮಾಡಿ, ವಿಷ್ಣುವಿನ ನಾಮ ಜಪಿಸಬೇಕು. ಇದರಿಂದ ಇಷ್ಟಾರ್ಥಗಳು ಈಡೇರಲಿವೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ನೀರಿಗೆ ತುಳಸಿ ದಳ ಸೇರಿಸಿ ಆಗಾಗಾ ಕುಡಿಯುವುದು ಶುಭಕರ.</p><p>ಉಪವಾಸ ಆಚರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಸಿಗುತ್ತದೆ. ಅಲ್ಲದೆ ನೀರು ಹೊಟ್ಟೆಯನ್ನು ಶುದ್ಧಿ ಮಾಡುತ್ತದೆ</p><p>ಈ ದಿನ ಕಟ್ಟುನಿಟ್ಟಾದ ವ್ರತ ಆಚರಿಸಿದರೆ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಇಂದು ವಿಷ್ಟು ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೈಕುಂಠ ಏಕಾದಶಿಯಂದು ಉಪವಾಸ ಆಚರಿಸಿ ನಾರಾಯಣನಿಗೆ ಪೂಜೆ ಸಲ್ಲಿಸುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಜ್ಯೋತಿಷದ ಪ್ರಕಾರ, ಉಪವಾಸ ಆಚರಣೆ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಬಾರದು. </p><p>ಈ ದಿನ ಉಪವಾಸದ ಜೊತೆಗೆ ವಿಷ್ಣು ಸಹಸ್ರನಾಮ ಜಪಿಸುವುದು ಶುಭಕರವೆಂದು ಹೇಳಲಾಗುತ್ತದೆ. ಇದರಿಂದ ಮೋಕ್ಷ ಸಿಗಲಿದೆ ಎಂಬ ನಂಬಿಕೆ ಇದೆ. </p><p>ಈ ದಿನ ಹಗಲಿನಲ್ಲಿ ನಿದ್ದೆ ಮಾಡಲೇಬಾರದು. ಇದು ಆರೋಗ್ಯ ಸಮಸ್ಯೆ ಇರುವವರು ಹಾಗೂ ಮಕ್ಕಳಿಗೆ ಅನ್ವಯವಾಗುವುದಿಲ್ಲ. ಉಳಿದವರು ಹಾಗೂ ಉಪವಾಸ ಆಚರಣೆಯಲ್ಲಿರುವಾಗ ನಿದ್ದೆ ಮಾಡಬಾರದು.</p>.ವೈಕುಂಠ ಏಕಾದಶಿ: ಈ 3 ರಾಶಿಯವರಿಗೆ ಭಾರಿ ಅದೃಷ್ಟ.ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?.<p>ಈ ದಿನ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಬೇಕು. ಧಾನ, ಧರ್ಮ ಮಾಡುವುದು ಉತ್ತಮ. </p><p>ಇಂದು ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಕಾಲ ಕಳೆಯಬೇಕು. ವಾದ ವಿವಾದ ಹಾಗೂ ಜಗಳ ಮಾಡಿಕೊಳ್ಳುವುದನ್ನು ತಪ್ಪಿಸುವುದು ಉತ್ತಮ. ಇದರಿಂದ ವೈವಾಹಿಕ ಜೀವನ ಇನ್ನಷ್ಟು ಗಟ್ಟಿಯಾಗುತ್ತದೆ. </p><p>ಉಪವಾಸ ಆಚರಿಸುವಾಗ ಗಂಡ–ಹೆಂಡತಿ ಯಾವುದೇ ಕಾರಣಕ್ಕೂ ಲೈಂಗಿಕ ಸಂಪರ್ಕ ಹೊಂದಬಾರದು ಎಂದು ಜ್ಯೋತಿಷ ಹೇಳುತ್ತದೆ. </p><p>ಈ ದಿನ ಅಪ್ಪಿತಪ್ಪಿಯೂ ತುಳಸಿ ಗಿಡ ಅಥವಾ ಎಲೆಯನ್ನು ಕೀಳಬಾರದು. </p><p>ರಾತ್ರಿ ಪೂರ್ತಿ ಜಾಗರಣೆ ಮಾಡಿ, ವಿಷ್ಣುವಿನ ನಾಮ ಜಪಿಸಬೇಕು. ಇದರಿಂದ ಇಷ್ಟಾರ್ಥಗಳು ಈಡೇರಲಿವೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ. ನೀರಿಗೆ ತುಳಸಿ ದಳ ಸೇರಿಸಿ ಆಗಾಗಾ ಕುಡಿಯುವುದು ಶುಭಕರ.</p><p>ಉಪವಾಸ ಆಚರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಸಿಗುತ್ತದೆ. ಅಲ್ಲದೆ ನೀರು ಹೊಟ್ಟೆಯನ್ನು ಶುದ್ಧಿ ಮಾಡುತ್ತದೆ</p><p>ಈ ದಿನ ಕಟ್ಟುನಿಟ್ಟಾದ ವ್ರತ ಆಚರಿಸಿದರೆ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಇಂದು ವಿಷ್ಟು ದೇವಾಲಯಕ್ಕೆ ಭೇಟಿ ನೀಡಿದರೆ ಒಳ್ಳೆಯದಾಗಲಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>