ದೇಶದ ಪರಿಸ್ಥಿತಿ ಬಗ್ಗೆ ಬೇರೆ ದೇಶದವರು ಮಾತನಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶವನ್ನು ಯಾವುದೇ ಜಾತಿ–ಧರ್ಮದ ಆಧಾರದಲ್ಲಿ ಕಟ್ಟಿದ್ದಲ್ಲ. ಎಲ್ಲ ಜಾತಿ, ಧರ್ಮಗಳ ಜನರಿಗೆ ಸೇರಿದ್ದು ಇದು. ಆದರೆ, ಈಗ ನಾವು ಕವಲುದಾರಿಯಲ್ಲಿ ಬಂದು ನಿಂತಿದ್ದೇವೆ. ಈ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ದೇಶದ ಭವಿಷ್ಯದ ಬಗ್ಗೆ ಆಲೋಚಿಸಬೇಕು.