ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ‘ದೇವೇಗೌಡರು ರಾಜಕಾರಣದಲ್ಲಿ ಹಲವು ನಾಯಕರನ್ನು ಬೆಳೆಸಿದ್ದಾರೆ. ಇಂದಿನ ಇಳಿವಯಸ್ಸಿನಲ್ಲಿ ಅವರಿಗೆ ನೋವಾಗದಂತೆ ನಡೆಯುವುದು ಎಲ್ಲರ ಕರ್ತವ್ಯ. ಡಿಸೆಂಬರ್ ನಂತರ ಅವರ ಗರಡಿಯಲ್ಲಿ ಬೆಳೆದ ಎಲ್ಲ ಮುಖಂಡರನ್ನೂ ಒಗ್ಗೂಡಿಸಲಾಗುವುದು. ಮುಂದಿನ ಚುನಾವಣೆಯ ನಂತರ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದಲ್ಲಿ ಕನ್ನಡಿಗರ ಸ್ವಾಭಿಮಾನಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.