ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಮಾತನಾಡಿ, ‘ವಿವಿಧ ಧರ್ಮಗಳ, ಜನಾಂಗಗಳ, ಭಾಷೆಗಳ ಅಥವಾ ಪ್ರಾದೇಶಿಕ ಗುಂಪುಗಳ ಅಥವಾ ಜಾತಿಗಳ, ಸಮುದಾಯಗಳ ನಡುವೆ ವೈಷಮ್ಯ, ವೈರತ್ವ ಅಥವಾ ದ್ವೇಷದ ಭಾವನೆಗಳನ್ನು ಬೆಳೆಸುವ, ಸಾರ್ವಜನಿಕರ ಶಾಂತಿಗೆ ಭಂಗವುಂಟು ಮಾಡುವ ಕಾರ್ಯಕ್ರಮ ಪ್ರಸಾರವಾದಲ್ಲಿ ಅಂತಹ ಕಾರ್ಯಕ್ರಮಗಳ ಪ್ರಸರಣವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಿಸಬಹುದು. ಪ್ರಸಾರ ಮಾಡಿದ ಕೇಬಲ್ ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕೇಬಲ್ ಟೆಲಿವಿಷನ್ ರೆಗ್ಯೂಲೇಶನ್ ಆಕ್ಟ್ 1995ರಡಿ ರೂಪಿಸಲಾದ ನಿರ್ವಹಣಾ ಸಮಿತಿ ಸದಸ್ಯರಾದ ಎಸ್.ಬಿ.ಸಾವಳಸಂಗ, ವಿಜಯಲಕ್ಷ್ಮೀ ಬಾಳಿ, ಆರ್.ಪಿ.ಚವ್ಹಾಣ, ಎಸ್.ಎನ್.ಅತ್ತಾರ, ಪೀಟರ್ ಅಲೆಕ್ಸಾಂಡರ್, ಸಿಸ್ಟರ್ ಸೂಸಾನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್ ಇದ್ದರು.